ETV Bharat / entertainment

ಮಂಗಳಮುಖಿಯರು ಚಪ್ಪಾಳೆ ತಟ್ಟುವುದೇಕೆ?: ಸುಶ್ಮಿತಾ ಸೇನ್ ಸಾಮಾಜಿಕ ಸಂದೇಶ- ವಿಡಿಯೋ

author img

By

Published : Mar 31, 2023, 12:30 PM IST

ಇಂದು ಅಂತಾರಾಷ್ಟ್ರೀಯ ತೃತೀಯಲಿಂಗಿಗಳ ದಿನ. ಬಾಲಿವುಡ್​ ತಾರೆ ಸುಶ್ಮಿತಾ ಸೇನ್ ಸಾಮಾಜಿಕ ಸಂದೇಶವುಳ್ಳ ವಿಡಿಯೋ ಪೋಸ್ಟ್ ಮಾಡಿದ್ದಾರೆ.

International Transgender Day
ಅಂತಾರಾಷ್ಟ್ರೀಯ ತೃತೀಯಲಿಂಗಿಗಳ ದಿನ

ಹಿಂದಿ ಚಿತ್ರರಂಗದ ಜನಪ್ರಿಯ ನಟಿ, ಮಾಜಿ ವಿಶ್ವಸುಂದರಿ ಸುಶ್ಮಿತಾ ಸೇನ್ ಕಳೆದ ಕೆಲವು ದಿನಗಳಿಂದ ಸುದ್ದಿಯಲ್ಲಿದ್ದಾರೆ. ಅನಾರೋಗ್ಯದಿಂದ ಚೇತರಿಸಿಕೊಂಡಿರುವ ಅವರು ತಮ್ಮ ಮುಂದಿನ ಸಿನಿಮಾಗಳಲ್ಲಿ ಸದ್ಯ ಬ್ಯುಸಿಯಾಗಿದ್ದಾರೆ. ಇಂದು ಅಂತಾರಾಷ್ಟ್ರೀಯ ತೃತೀಯಲಿಂಗಿಗಳ (ಮಂಗಳಮುಖಿಯರು) ದಿನವಾಗಿದ್ದು (international transgender day of visibility) ತಮ್ಮ ಮುಂದಿನ ವೆಬ್ ಸೀರಿಸ್​​ 'ತಾಲಿ'ಗೆ ಸಂಬಂಧಿಸಿದ ವಿಡಿಯೋ ಹಂಚಿಕೊಂಡಿದ್ದಾರೆ. ಈ ಮೂಲಕ ತೃತೀಯಲಿಂಗಿಗಳಿಗೆ ಸಾಮಾಜಿಕ ಸಂದೇಶವೊಂದನ್ನು ನೀಡಿದ್ದಾರೆ.

ಪ್ರತಿ ವರ್ಷ ಮಾರ್ಚ್ 31ರಂದು ಅಂತಾರಾಷ್ಟ್ರೀಯ ತೃತೀಯಲಿಂಗಿಗಳ ದಿನಾಚರಿಸಲಾಗುತ್ತದೆ. ಈ ದಿನದಂದು, ತೃತೀಯಲಿಂಗಿಗಳ ಹಕ್ಕು ಮತ್ತು ಅವರು ಎದುರಿಸುತ್ತಿರುವ ಸವಾಲು, ತಾರತಮ್ಯದ ಬಗ್ಗೆ ವಿಶ್ಯಾದ್ಯಂತ ಚರ್ಚಿಸಲಾಗುತ್ತದೆ. ಅದರಂತೆ, ಸುಶ್ಮಿತಾ ಸೇನ್ ಸಮಾಜಕ್ಕೆ ವಿಡಿಯೋ ಸಂದೇಶ ಕೊಟ್ಟಿದ್ದಾರೆ.

ತೃತೀಯಲಿಂಗಿಗಳು ಚಪ್ಪಾಳೆ ಹೊಡೆಯುವುದೇಕೆ?: ತೃತೀಯಲಿಂಗಿಗಳು ಸಾಮಾನ್ಯವಾಗಿ ಚಪ್ಪಾಳೆ ಹೊಡೆಯುತ್ತಾ ಬಂದು ತಮ್ಮ ಪರಿಚಯ ಮಾಡಿಕೊಳ್ಳುತ್ತಾರೆ. ವೆಬ್ ಸೀರಿಸ್​ನ ಶೀರ್ಷಿಕೆಯೇ ಹೇಳುವಂತೆ ನಟಿ ತಾಲಿ/ಚಪ್ಪಾಳೆ ಬಗ್ಗೆ ಸುಶ್ಮಿತಾ ಮಾತನಾಡಿದ್ದಾರೆ. ಅವರಿಂದು ಶೇರ್ ಮಾಡಿರುವ ವಿಡಿಯೋದಲ್ಲಿ ತೃತೀಯಲಿಂಗಿಗಳು ಏಕೆ ಚಪ್ಪಾಳೆ ಹೊಡೆಯುತ್ತಾರೆ ಎಂಬ ಬಗ್ಗೆ ಮಾತನಾಡಿದ್ದಾರೆ. ಮುಂಬೈ ಮೂಲದ ತೃತೀಯಲಿಂಗಿ ಕಾರ್ಯಕರ್ತೆ ಶ್ರೀಗೌರಿ ಸಾವಂತ್ ಅವರೊಂದಿಗೆ ಮಾಜಿ ವಿಶ್ವಸುಂದರಿ ಕಾಣಿಸಿಕೊಂಡಿದ್ದಾರೆ.

ಚಪ್ಪಾಳೆ ತಟ್ಟುತ್ತಾ ವಿಡಿಯೋ ಆರಂಭವಾಗಿದ್ದು, ಏಕೆ ಚಪ್ಪಾಳೆ ಹೊಡೆಯುತ್ತಾರೆ? ನಿಮ್ಮಿಂದ ಹಣ ಕೇಳಲು? ನಿಮ್ಮ ಗಮನ ಸೆಳೆಯಲು? ನಿಮ್ಮ ಕೋಪ ಹೊರಹಾಕಲು? ಚಪ್ಪಾಳೆ ತಟ್ಟುವುದು ಕೇವಲ ಇದಕ್ಕೇನಾ ಎಂದು ತೃತೀಯಲಿಂಗಿ ಕಾರ್ಯಕರ್ತೆ ಶ್ರೀಗೌರಿ ಸಾವಂತ್ ಮತ್ತು ಸುಶ್ಮಿತಾ ಸೇನ್ ಚರ್ಚಿಸುತ್ತಾರೆ.

ಇಲ್ಲ, ಕೈಗಳು ಮಾತ್ರವಲ್ಲ, ಎರಡು ಹೃದಯಗಳು ಸೇರಲು ಈ ಚಪ್ಪಾಳೆ ತಟ್ಟಲಾಗುತ್ತದೆ. ಈ ವಿಶ್ವ ತೃತೀಯಲಿಂಗಿಗಳ ದಿನದಂದು ಪರಸ್ಪರ ಹೃದಯಗಳು ಸೇರಲು ಚಪ್ಪಾಳೆ ತಟ್ಟೋಣ. ಜಗತ್ತಿಗೆ ಅಗತ್ಯವಿರುವ ಪ್ರೀತಿ, ಶಾಂತಿ, ಸಂತೋಷ ಚಪ್ಪಾಳೆ ಮೂಲಕ ಲಭ್ಯವಾಗಲಿ. ನನ್ನ ಈ ಚಪ್ಪಾಳೆಯು ಚಪ್ಪಾಳೆ ಹೊಡೆಯುವವರಿಗಾಗಿ ಎಂದು ಸುಶ್ಮಿತಾ ಸಾಮಾಜಿಕ ಸಂದೇಶ ಸಾರಿದ್ದಾರೆ.

ಇದನ್ನೂ ಓದಿ: ಫೇಸ್ ಮಾಸ್ಕ್ ಹಾಕಿ ಹೊರಬಂದ ನಟಿ: ರಾಜ್​ ಕುಂದ್ರಾ ಸಹೋದರಿಯೆಂದ ಟ್ರೋಲಿಗರು!

ಹೊಸ ವೆಬ್ ಸೀರಿಸ್​​ 'ತಾಲಿ'ಯಲ್ಲಿ ಸುಶ್ಮಿತಾ ಸೇನ್ ಅವರು ತೃತೀಯ ಲಿಂಗಿ ಕಾರ್ಯಕರ್ತೆ (transgender activist) ಪಾತ್ರಕ್ಕೆ ಜೀವ ತುಂಬಿದ್ದಾರೆ. ಅರ್ಜುನ್ ಸಿಂಗ್ ಬರನ್ ಮತ್ತು ಕಾರ್ತಿಕ್ ಡಿ ನಿಶಾಂದರ್ ರಚನೆಯ ತಾಲಿ ಸೀರಿಸ್‌ನಲ್ಲಿ ತೃತೀಯಲಿಂಗಿ ಕಾರ್ಯಕರ್ತೆ ಶ್ರೀಗೌರಿ ಸಾವಂತ್ ಪಾತ್ರದಲ್ಲಿ ಮಾಜಿ ವಿಶ್ವಸುಂದರಿ ಕಾಣಿಸಿಕೊಳ್ಳಲಿದ್ದಾರೆ. ಮರಾಠಿ ಚಿತ್ರ ನಿರ್ಮಾಪಕ ರವಿ ಜಾಧವ್ ನಿರ್ದೇಶನದಲ್ಲಿ ತಾಲಿ ತಯಾರಾಗಿದೆ. ಇತ್ತೀಚೆಗಷ್ಟೇ ಸೀರಿಸ್​ನ ಶೂಟಿಂಗ್​​, ಡಬ್ಬಿಂಗ್​ ಕೆಲಸ ಮುಗಿಸಿದ್ದಾರೆ ಸುಶ್ಮಿತಾ ಸೇನ್.

ಇದನ್ನೂ ಓದಿ: ಪ್ರಧಾನಿ ಮೋದಿ ಭೇಟಿಯಾದ ಆಸ್ಕರ್ ವಿಜೇತ "ದಿ ಎಲಿಫೆಂಟ್ ವಿಸ್ಪರರ್ಸ್" ತಂಡ

ಹುಡುಗನಾಗಿ (ಗಣೇಶ್) ಹುಟ್ಟಿ ಪುಣೆಯಲ್ಲಿ ಬೆಳೆದ ಶ್ರೀಗೌರಿ ಸಾವಂತ್ (ಹುಡುಗಿಯಾಗಿ ಪರಿವರ್ತನೆ) 2013ರಲ್ಲಿ ಸಲ್ಲಿಸಲಾದ ರಾಷ್ಟ್ರೀಯ ಕಾನೂನು ಸೇವೆಗಳ ಪ್ರಾಧಿಕಾರದ (NALSA) ಅರ್ಜಿದಾರರಲ್ಲಿ ಒಬ್ಬರಾಗಿದ್ದರು. ಸುಪ್ರೀಂ ಕೋರ್ಟ್ 2014ರಲ್ಲಿ ತೃತೀಯಲಿಂಗಿಗಳನ್ನು ಮೂರನೇ ಲಿಂಗ ಎಂದು ಪರಿಗಣಿಸಿ ಅಂತಿಮ ತೀರ್ಪು ಕೊಟ್ಟಿತ್ತು. ಶ್ರೀಗೌರಿ ಸಾವಂತ್ ಕುರಿತಾಗಿದೆ ಈ ತಾಲಿ ಸೀರಿಸ್​.

ಹಿಂದಿ ಚಿತ್ರರಂಗದ ಜನಪ್ರಿಯ ನಟಿ, ಮಾಜಿ ವಿಶ್ವಸುಂದರಿ ಸುಶ್ಮಿತಾ ಸೇನ್ ಕಳೆದ ಕೆಲವು ದಿನಗಳಿಂದ ಸುದ್ದಿಯಲ್ಲಿದ್ದಾರೆ. ಅನಾರೋಗ್ಯದಿಂದ ಚೇತರಿಸಿಕೊಂಡಿರುವ ಅವರು ತಮ್ಮ ಮುಂದಿನ ಸಿನಿಮಾಗಳಲ್ಲಿ ಸದ್ಯ ಬ್ಯುಸಿಯಾಗಿದ್ದಾರೆ. ಇಂದು ಅಂತಾರಾಷ್ಟ್ರೀಯ ತೃತೀಯಲಿಂಗಿಗಳ (ಮಂಗಳಮುಖಿಯರು) ದಿನವಾಗಿದ್ದು (international transgender day of visibility) ತಮ್ಮ ಮುಂದಿನ ವೆಬ್ ಸೀರಿಸ್​​ 'ತಾಲಿ'ಗೆ ಸಂಬಂಧಿಸಿದ ವಿಡಿಯೋ ಹಂಚಿಕೊಂಡಿದ್ದಾರೆ. ಈ ಮೂಲಕ ತೃತೀಯಲಿಂಗಿಗಳಿಗೆ ಸಾಮಾಜಿಕ ಸಂದೇಶವೊಂದನ್ನು ನೀಡಿದ್ದಾರೆ.

ಪ್ರತಿ ವರ್ಷ ಮಾರ್ಚ್ 31ರಂದು ಅಂತಾರಾಷ್ಟ್ರೀಯ ತೃತೀಯಲಿಂಗಿಗಳ ದಿನಾಚರಿಸಲಾಗುತ್ತದೆ. ಈ ದಿನದಂದು, ತೃತೀಯಲಿಂಗಿಗಳ ಹಕ್ಕು ಮತ್ತು ಅವರು ಎದುರಿಸುತ್ತಿರುವ ಸವಾಲು, ತಾರತಮ್ಯದ ಬಗ್ಗೆ ವಿಶ್ಯಾದ್ಯಂತ ಚರ್ಚಿಸಲಾಗುತ್ತದೆ. ಅದರಂತೆ, ಸುಶ್ಮಿತಾ ಸೇನ್ ಸಮಾಜಕ್ಕೆ ವಿಡಿಯೋ ಸಂದೇಶ ಕೊಟ್ಟಿದ್ದಾರೆ.

ತೃತೀಯಲಿಂಗಿಗಳು ಚಪ್ಪಾಳೆ ಹೊಡೆಯುವುದೇಕೆ?: ತೃತೀಯಲಿಂಗಿಗಳು ಸಾಮಾನ್ಯವಾಗಿ ಚಪ್ಪಾಳೆ ಹೊಡೆಯುತ್ತಾ ಬಂದು ತಮ್ಮ ಪರಿಚಯ ಮಾಡಿಕೊಳ್ಳುತ್ತಾರೆ. ವೆಬ್ ಸೀರಿಸ್​ನ ಶೀರ್ಷಿಕೆಯೇ ಹೇಳುವಂತೆ ನಟಿ ತಾಲಿ/ಚಪ್ಪಾಳೆ ಬಗ್ಗೆ ಸುಶ್ಮಿತಾ ಮಾತನಾಡಿದ್ದಾರೆ. ಅವರಿಂದು ಶೇರ್ ಮಾಡಿರುವ ವಿಡಿಯೋದಲ್ಲಿ ತೃತೀಯಲಿಂಗಿಗಳು ಏಕೆ ಚಪ್ಪಾಳೆ ಹೊಡೆಯುತ್ತಾರೆ ಎಂಬ ಬಗ್ಗೆ ಮಾತನಾಡಿದ್ದಾರೆ. ಮುಂಬೈ ಮೂಲದ ತೃತೀಯಲಿಂಗಿ ಕಾರ್ಯಕರ್ತೆ ಶ್ರೀಗೌರಿ ಸಾವಂತ್ ಅವರೊಂದಿಗೆ ಮಾಜಿ ವಿಶ್ವಸುಂದರಿ ಕಾಣಿಸಿಕೊಂಡಿದ್ದಾರೆ.

ಚಪ್ಪಾಳೆ ತಟ್ಟುತ್ತಾ ವಿಡಿಯೋ ಆರಂಭವಾಗಿದ್ದು, ಏಕೆ ಚಪ್ಪಾಳೆ ಹೊಡೆಯುತ್ತಾರೆ? ನಿಮ್ಮಿಂದ ಹಣ ಕೇಳಲು? ನಿಮ್ಮ ಗಮನ ಸೆಳೆಯಲು? ನಿಮ್ಮ ಕೋಪ ಹೊರಹಾಕಲು? ಚಪ್ಪಾಳೆ ತಟ್ಟುವುದು ಕೇವಲ ಇದಕ್ಕೇನಾ ಎಂದು ತೃತೀಯಲಿಂಗಿ ಕಾರ್ಯಕರ್ತೆ ಶ್ರೀಗೌರಿ ಸಾವಂತ್ ಮತ್ತು ಸುಶ್ಮಿತಾ ಸೇನ್ ಚರ್ಚಿಸುತ್ತಾರೆ.

ಇಲ್ಲ, ಕೈಗಳು ಮಾತ್ರವಲ್ಲ, ಎರಡು ಹೃದಯಗಳು ಸೇರಲು ಈ ಚಪ್ಪಾಳೆ ತಟ್ಟಲಾಗುತ್ತದೆ. ಈ ವಿಶ್ವ ತೃತೀಯಲಿಂಗಿಗಳ ದಿನದಂದು ಪರಸ್ಪರ ಹೃದಯಗಳು ಸೇರಲು ಚಪ್ಪಾಳೆ ತಟ್ಟೋಣ. ಜಗತ್ತಿಗೆ ಅಗತ್ಯವಿರುವ ಪ್ರೀತಿ, ಶಾಂತಿ, ಸಂತೋಷ ಚಪ್ಪಾಳೆ ಮೂಲಕ ಲಭ್ಯವಾಗಲಿ. ನನ್ನ ಈ ಚಪ್ಪಾಳೆಯು ಚಪ್ಪಾಳೆ ಹೊಡೆಯುವವರಿಗಾಗಿ ಎಂದು ಸುಶ್ಮಿತಾ ಸಾಮಾಜಿಕ ಸಂದೇಶ ಸಾರಿದ್ದಾರೆ.

ಇದನ್ನೂ ಓದಿ: ಫೇಸ್ ಮಾಸ್ಕ್ ಹಾಕಿ ಹೊರಬಂದ ನಟಿ: ರಾಜ್​ ಕುಂದ್ರಾ ಸಹೋದರಿಯೆಂದ ಟ್ರೋಲಿಗರು!

ಹೊಸ ವೆಬ್ ಸೀರಿಸ್​​ 'ತಾಲಿ'ಯಲ್ಲಿ ಸುಶ್ಮಿತಾ ಸೇನ್ ಅವರು ತೃತೀಯ ಲಿಂಗಿ ಕಾರ್ಯಕರ್ತೆ (transgender activist) ಪಾತ್ರಕ್ಕೆ ಜೀವ ತುಂಬಿದ್ದಾರೆ. ಅರ್ಜುನ್ ಸಿಂಗ್ ಬರನ್ ಮತ್ತು ಕಾರ್ತಿಕ್ ಡಿ ನಿಶಾಂದರ್ ರಚನೆಯ ತಾಲಿ ಸೀರಿಸ್‌ನಲ್ಲಿ ತೃತೀಯಲಿಂಗಿ ಕಾರ್ಯಕರ್ತೆ ಶ್ರೀಗೌರಿ ಸಾವಂತ್ ಪಾತ್ರದಲ್ಲಿ ಮಾಜಿ ವಿಶ್ವಸುಂದರಿ ಕಾಣಿಸಿಕೊಳ್ಳಲಿದ್ದಾರೆ. ಮರಾಠಿ ಚಿತ್ರ ನಿರ್ಮಾಪಕ ರವಿ ಜಾಧವ್ ನಿರ್ದೇಶನದಲ್ಲಿ ತಾಲಿ ತಯಾರಾಗಿದೆ. ಇತ್ತೀಚೆಗಷ್ಟೇ ಸೀರಿಸ್​ನ ಶೂಟಿಂಗ್​​, ಡಬ್ಬಿಂಗ್​ ಕೆಲಸ ಮುಗಿಸಿದ್ದಾರೆ ಸುಶ್ಮಿತಾ ಸೇನ್.

ಇದನ್ನೂ ಓದಿ: ಪ್ರಧಾನಿ ಮೋದಿ ಭೇಟಿಯಾದ ಆಸ್ಕರ್ ವಿಜೇತ "ದಿ ಎಲಿಫೆಂಟ್ ವಿಸ್ಪರರ್ಸ್" ತಂಡ

ಹುಡುಗನಾಗಿ (ಗಣೇಶ್) ಹುಟ್ಟಿ ಪುಣೆಯಲ್ಲಿ ಬೆಳೆದ ಶ್ರೀಗೌರಿ ಸಾವಂತ್ (ಹುಡುಗಿಯಾಗಿ ಪರಿವರ್ತನೆ) 2013ರಲ್ಲಿ ಸಲ್ಲಿಸಲಾದ ರಾಷ್ಟ್ರೀಯ ಕಾನೂನು ಸೇವೆಗಳ ಪ್ರಾಧಿಕಾರದ (NALSA) ಅರ್ಜಿದಾರರಲ್ಲಿ ಒಬ್ಬರಾಗಿದ್ದರು. ಸುಪ್ರೀಂ ಕೋರ್ಟ್ 2014ರಲ್ಲಿ ತೃತೀಯಲಿಂಗಿಗಳನ್ನು ಮೂರನೇ ಲಿಂಗ ಎಂದು ಪರಿಗಣಿಸಿ ಅಂತಿಮ ತೀರ್ಪು ಕೊಟ್ಟಿತ್ತು. ಶ್ರೀಗೌರಿ ಸಾವಂತ್ ಕುರಿತಾಗಿದೆ ಈ ತಾಲಿ ಸೀರಿಸ್​.

ETV Bharat Logo

Copyright © 2024 Ushodaya Enterprises Pvt. Ltd., All Rights Reserved.