ETV Bharat / entertainment

'ಸುಟ್ಟೋಗೋನಲ್ಲ ಸುಡೋವ್ನು': ಶ್ರೀನಗರ ಕಿಟ್ಟಿಯ ಗೌಳಿ ಟ್ರೇಲರ್ ರಿಲೀಸ್​​​

ಶ್ರೀಗರ ಕಿಟ್ಟಿ ನಟನೆಯ ಗೌಳಿ ಟ್ರೇಲರ್ ಬಿಡುಗಡೆ ಆಗಿದೆ.

author img

By

Published : Feb 17, 2023, 4:53 PM IST

Srinagara Kitty starrer gowli trailer
ಶ್ರೀಗರ ಕಿಟ್ಟಿಯ ಗೌಳಿ ಟ್ರೇಲರ್

ಶೀರ್ಷಿಕೆಯಿಂದಲೇ ಚಂದನವನದಲ್ಲಿ ಗಮನ ಸೆಳೆಯುತ್ತಿರುವ ಸಿನಿಮಾ 'ಗೌಳಿ'. ನಟ ಶ್ರೀನಗರ ಕಿಟ್ಟಿ ಮೊದಲ ಬಾರಿಗೆ ಉದ್ದ ತಲೆಕೂದಲು ಬಿಟ್ಟು ರಗಡ್ ಲುಕ್​ನಲ್ಲಿ ಕಾಣಿಸಿಕೊಂಡಿರುವ ಬಹುನೀರಿಕ್ಷಿತ ಚಿತ್ರ. ಯುವ ನಿರ್ದೇಶಕ ಸೂರ ನಿರ್ದೇಶನದಲ್ಲಿ ಮೂಡಿ ಬರುತ್ತಿರುವ ಗೌಳಿ ಶೂಟಿಂಗ್ ಮುಗಿಸಿ ಬಿಡುಗಡೆ ಹೊಸ್ತಿಲಲ್ಲಿದೆ. ಇತ್ತೀಚೆಗೆ ಚಿತ್ರದ ಟ್ರೇಲರ್​​ ಅನ್ನು 'ಸ್ಯಾಂಡಲ್​ವುಡ್ ಅಧ್ಯಕ್ಷ' ಶರಣ್ ಬಿಡುಗಡೆ ಮಾಡಿ ಚಿತ್ರತಂಡಕ್ಕೆ ಶುಭ ಹಾರೈಸಿದ್ದರು. ಆನಂದ್ ಆಡಿಯೋ ಯೂಟ್ಯೂಬ್ ಚಾನೆಲ್​​ನಲ್ಲಿ ಅನಾವರಣಗೊಂಡಿರುವ ಟ್ರೇಲರ್​​ ಪ್ರೇಕ್ಷಕರ ಪ್ರಶಂಸೆ ಗಳಿಸುತ್ತಿದೆ.

ಟ್ರೇಲರ್ ಬಿಡುಗಡೆ ಕಾರ್ಯಕ್ರಮಕ್ಕೆ ಮುಖ್ಯ ಅಥಿತಿಯಾಗಿ ಆಗಮಿಸಿದ್ದ ಶರಣ್ ಮಾತನಾಡಿ, ಅದ್ಭುತ ಮೇಕಿಂಗ್​​ ಅನ್ನು ಟ್ರೇಲರ್​ನಲ್ಲಿ ಕಂಡೆ. ಈ ರೀತಿಯ ಸಿನಿಮಾಗಳು ಕನ್ನಡದಲ್ಲಿ ಹೆಚ್ಚಾಗಿ ಬರುತ್ತಿದ್ದು, ರಾಷ್ಟ್ರಮಟ್ಟದಲ್ಲಿ ಸದ್ದು ಮಾಡುತ್ತಿವೆ. ಟ್ರೇಲರ್ ನೋಡುವಾಗ ಪ್ರತಿ ಫ್ರೇಮ್​​ನಲ್ಲೂ ನಿರ್ದೇಶಕರ ಕನಸು ಕಂಡೆ. ಅವರ ಕನಸಿಗೆ ತಂಡದ ಶ್ರಮ ಕೊಡ ಅಷ್ಟೇ ಇದೆ. ಶ್ರೀನಗರ ಕಿಟ್ಟಿ ಒಳ್ಳೆಯ ಕಲಾವಿದ. ಅಷ್ಟೇ ಅಲ್ಲ ಒಳ್ಳೆ ವ್ಯಕ್ತಿ ಕೂಡ. ಚಿತ್ರದಲ್ಲಿ ಡಿಗ್ಲಾಮ್ ಪಾತ್ರವನ್ನು ಅದ್ಭುತವಾಗಿ ಮಾಡಿದ್ದಾರೆ. ಈ ರೀತಿಯ ಸಿನಿಮಾಗಳು ಗೆದ್ದಾಗ ಇನ್ನಷ್ಟು ಚಿತ್ರಗಳು ಮೂಡಿ ಬರುತ್ತವೆ ಎಂದು ಹೇಳಿ ಮತ್ತೊಮ್ಮೆ ಟ್ರೇಲರ್ ಪ್ಲೇ ಮಾಡಿಸಿ ಖುಷಿಪಟ್ಟರು. ಗೌಳಿಗರ ಜನಾಂಗಕ್ಕೆ ಸಂಬಂಧಿಸಿದ ಕಥಾಹಂದರ ಒಳಗೊಂಡ ಸಿನಿಮಾದಲ್ಲಿ ಶಿರಸಿ ಸುತ್ತಮುತ್ತಲಿನ ಭಾಷೆ ಬಳಸಿರುವುದು ವಿಶೇಷ.

ನಟ ಶ್ರೀನಗರ ಕಿಟ್ಟಿ ಮಾತನಾಡಿ, ಕಾತುರದ ಕ್ಷಣ ರಿವೀಲ್ ಆಯ್ತು. ಇದು ಎಲ್ಲರ ಪ್ರಯತ್ನದ ಸಿನಿಮಾ. ಈ 'ಗೌಳಿ' ಜೊತೆಗೆ ತಂತ್ರಜ್ಞರೆಲ್ಲ ಬದುಕಿದ್ದಾರೆ. ನಾನು ಎರಡು ಸಿನಿಮಾ ನಿರ್ಮಾಣ ಮಾಡಿದ್ದರೂ ಸಿನಿಮಾಗಳ ರಿಲೀಸ್ ಶ್ರಮ ಏನೆಂದು ಗೊತ್ತಿರಲಿಲ್ಲ ಹಾಗೂ ವ್ಯವಹಾರದ ಬಗ್ಗೆ ತಿಳಿದಿರಲಿಲ್ಲ. ಈ ಚಿತ್ರದಿಂದ ಎಲ್ಲವೂ ಅರಿವಿಗೆ ಬಂತು. ಯುವ ನಿರ್ದೇಶಕ ಸೂರ ಬಂದು ಈ ಕಥೆ ಹೇಳಿದಾಗ ಮೈ ಜುಮ್ ಎನಿಸಿತ್ತು ಎಂದು ಹೇಳಿದರು. ಇನ್ನೂ ಟ್ರೇಲರ್​ನಲ್ಲಿ ಶ್ರೀನಗರ ಕಿಟ್ಟಿ ಸುಟ್ಟು ಹೋಗೋನಲ್ಲ ಸುಡೋವ್ನು ಎನ್ನುವ ಖಡಕ್ ಡೈಲಾಗ್ ಸಖತ್​ ಪಂಚಿಂಗ್ ಆಗಿದೆ.

ಇದನ್ನೂ ಓದಿ: ಶೆಹಜಾದಾ ಸಿನಿಮಾ ಬಿಡುಗಡೆ: ಬಾಲಿವುಡ್​ ಸಕ್ಸಸ್ ಮುಂದುವರಿಯುತ್ತಾ?!

ಈ ಸಂದರ್ಭದಲ್ಲಿ ಮಾತನಾಡಿದ ಚಿತ್ರದ ನಾಯಕಿ ಪಾವನ ಗೌಡ, ನಾನು ಗಿರಿಜಾ ಎಂಬ ಪಾತ್ರ ಮಾಡಿದ್ದು, ಬಹಳ ವರ್ಷಗಳ ಕನಸು ಈಡೇರಿದೆ. ಈ ಕನಸು ಈಡೇರಲು 10 ವರ್ಷ ಕಾಯಬೇಕಾಯ್ತು. ಮಾಸ್ ಸಿನಿಮಾಗಳನ್ನು ಗಂಡಸರಷ್ಟೇ ಎಂಜಾಯ್ ಮಾಡಲ್ಲ. ನಾವು ಹುಡುಗಿಯರು ಸಹ ಎಂಜಾಯ್ ಮಾಡುತ್ತೇವೆ. ಈ ಚಿತ್ರದಲ್ಲಿ ನಿರ್ದೇಶಕರು, ಕಿಟ್ಟಿ ಸರ್ ಸೇರಿದಂತೆ ತಂಡದ ಎಲ್ಲರ ಪರಿಶ್ರಮ ಬಹಳಾನೇ ಇದೆ. ಚಿತ್ರದಲ್ಲಿರುವ ಪ್ರತಿ ಪಾತ್ರ ಹಾಗೂ ಕೆಲಸ ಮಾಡುವ ಡಿಪಾರ್ಟ್​ಮೆಂಟ್ ಗೆದ್ದರೆ ಸಿನಿಮಾ ಗೆಲ್ಲುತ್ತದೆ. ಈ ಕ್ಷಣ ನಾನು ತುಂಬಾ ಖುಷಿಯಿಂದ ಇದ್ದೇನೆ ಎಂದರು.

ಇದನ್ನೂ ಓದಿ: 'ನಮಾಮಿ' ಹಾಡಿನಲ್ಲಿ ಶ್ರೀಯಾ ಶರಣ್ ಮಿಂಚು: ಸ್ಯಾಂಡಲ್​ವುಡ್​ನಲ್ಲಿ ಮತ್ತೊಂದು ಗೆಲುವಿನ ಮುನ್ನುಡಿ

ಶರತ್ ಲೋಹಿತಾಶ್ವ, ರಂಗಾಯಣ ರಘು, ಕಾಕ್ರೋಚ್ ಸುಧೀ, ಯಶ್ ಶೆಟ್ಟಿ ಹಾಗೂ ರುದ್ರೇಶ್, ಬೇಬಿ ನಮನ ಸೇರಿದಂತೆ ಸಾಕಷ್ಟು ಕಲಾವಿದರ ದಂಡು ಚಿತ್ರದಲ್ಲಿದೆ. ಚಿತ್ರಕ್ಕಾಗಿ ರಿಸರ್ಚ್ ಮಾಡಿ ಕಥೆ ಬರೆದು ನಿರ್ದೇಶನ ಮಾಡಿದ್ದಾರೆ ಹೊಸ ಪ್ರತಿಭೆ ಸೂರ. ಗೌಳಿ ಇವರ ನಿರ್ದೇಶನದ ಮೊದಲ ಸಿನಿಮಾ. ರಘು ಸಿಂಗಮ್ ಚಿತ್ರದ ನಿರ್ಮಾಪಕರು. ಇವರಿಗೂ ಸಿನಿಮಾ ನಿರ್ಮಾಣ ಮೊದಲ ಪ್ರಯತ್ನ. ಉಮೇಶ್ ಆರ್.ವಿ ಅವರ ಸಂಕಲನವಿರುವ ಚಿತ್ರಕ್ಕೆ ಸಂದೀಪ್ ಛಾಯಾಗ್ರಹಣ, ಶಶಾಂಕ ಶೇಷಗಿರಿ ಸಂಗೀತ ನಿರ್ದೇಶನವಿದೆ. ಫೆಬ್ರವರಿ 24ರಂದು ರಾಜ್ಯಾದ್ಯಂತ ಅದ್ಧೂರಿಯಾಗಿ ಚಿತ್ರ ಬಿಡುಗಡೆಯಾಗುತ್ತಿದೆ.

ಶೀರ್ಷಿಕೆಯಿಂದಲೇ ಚಂದನವನದಲ್ಲಿ ಗಮನ ಸೆಳೆಯುತ್ತಿರುವ ಸಿನಿಮಾ 'ಗೌಳಿ'. ನಟ ಶ್ರೀನಗರ ಕಿಟ್ಟಿ ಮೊದಲ ಬಾರಿಗೆ ಉದ್ದ ತಲೆಕೂದಲು ಬಿಟ್ಟು ರಗಡ್ ಲುಕ್​ನಲ್ಲಿ ಕಾಣಿಸಿಕೊಂಡಿರುವ ಬಹುನೀರಿಕ್ಷಿತ ಚಿತ್ರ. ಯುವ ನಿರ್ದೇಶಕ ಸೂರ ನಿರ್ದೇಶನದಲ್ಲಿ ಮೂಡಿ ಬರುತ್ತಿರುವ ಗೌಳಿ ಶೂಟಿಂಗ್ ಮುಗಿಸಿ ಬಿಡುಗಡೆ ಹೊಸ್ತಿಲಲ್ಲಿದೆ. ಇತ್ತೀಚೆಗೆ ಚಿತ್ರದ ಟ್ರೇಲರ್​​ ಅನ್ನು 'ಸ್ಯಾಂಡಲ್​ವುಡ್ ಅಧ್ಯಕ್ಷ' ಶರಣ್ ಬಿಡುಗಡೆ ಮಾಡಿ ಚಿತ್ರತಂಡಕ್ಕೆ ಶುಭ ಹಾರೈಸಿದ್ದರು. ಆನಂದ್ ಆಡಿಯೋ ಯೂಟ್ಯೂಬ್ ಚಾನೆಲ್​​ನಲ್ಲಿ ಅನಾವರಣಗೊಂಡಿರುವ ಟ್ರೇಲರ್​​ ಪ್ರೇಕ್ಷಕರ ಪ್ರಶಂಸೆ ಗಳಿಸುತ್ತಿದೆ.

ಟ್ರೇಲರ್ ಬಿಡುಗಡೆ ಕಾರ್ಯಕ್ರಮಕ್ಕೆ ಮುಖ್ಯ ಅಥಿತಿಯಾಗಿ ಆಗಮಿಸಿದ್ದ ಶರಣ್ ಮಾತನಾಡಿ, ಅದ್ಭುತ ಮೇಕಿಂಗ್​​ ಅನ್ನು ಟ್ರೇಲರ್​ನಲ್ಲಿ ಕಂಡೆ. ಈ ರೀತಿಯ ಸಿನಿಮಾಗಳು ಕನ್ನಡದಲ್ಲಿ ಹೆಚ್ಚಾಗಿ ಬರುತ್ತಿದ್ದು, ರಾಷ್ಟ್ರಮಟ್ಟದಲ್ಲಿ ಸದ್ದು ಮಾಡುತ್ತಿವೆ. ಟ್ರೇಲರ್ ನೋಡುವಾಗ ಪ್ರತಿ ಫ್ರೇಮ್​​ನಲ್ಲೂ ನಿರ್ದೇಶಕರ ಕನಸು ಕಂಡೆ. ಅವರ ಕನಸಿಗೆ ತಂಡದ ಶ್ರಮ ಕೊಡ ಅಷ್ಟೇ ಇದೆ. ಶ್ರೀನಗರ ಕಿಟ್ಟಿ ಒಳ್ಳೆಯ ಕಲಾವಿದ. ಅಷ್ಟೇ ಅಲ್ಲ ಒಳ್ಳೆ ವ್ಯಕ್ತಿ ಕೂಡ. ಚಿತ್ರದಲ್ಲಿ ಡಿಗ್ಲಾಮ್ ಪಾತ್ರವನ್ನು ಅದ್ಭುತವಾಗಿ ಮಾಡಿದ್ದಾರೆ. ಈ ರೀತಿಯ ಸಿನಿಮಾಗಳು ಗೆದ್ದಾಗ ಇನ್ನಷ್ಟು ಚಿತ್ರಗಳು ಮೂಡಿ ಬರುತ್ತವೆ ಎಂದು ಹೇಳಿ ಮತ್ತೊಮ್ಮೆ ಟ್ರೇಲರ್ ಪ್ಲೇ ಮಾಡಿಸಿ ಖುಷಿಪಟ್ಟರು. ಗೌಳಿಗರ ಜನಾಂಗಕ್ಕೆ ಸಂಬಂಧಿಸಿದ ಕಥಾಹಂದರ ಒಳಗೊಂಡ ಸಿನಿಮಾದಲ್ಲಿ ಶಿರಸಿ ಸುತ್ತಮುತ್ತಲಿನ ಭಾಷೆ ಬಳಸಿರುವುದು ವಿಶೇಷ.

ನಟ ಶ್ರೀನಗರ ಕಿಟ್ಟಿ ಮಾತನಾಡಿ, ಕಾತುರದ ಕ್ಷಣ ರಿವೀಲ್ ಆಯ್ತು. ಇದು ಎಲ್ಲರ ಪ್ರಯತ್ನದ ಸಿನಿಮಾ. ಈ 'ಗೌಳಿ' ಜೊತೆಗೆ ತಂತ್ರಜ್ಞರೆಲ್ಲ ಬದುಕಿದ್ದಾರೆ. ನಾನು ಎರಡು ಸಿನಿಮಾ ನಿರ್ಮಾಣ ಮಾಡಿದ್ದರೂ ಸಿನಿಮಾಗಳ ರಿಲೀಸ್ ಶ್ರಮ ಏನೆಂದು ಗೊತ್ತಿರಲಿಲ್ಲ ಹಾಗೂ ವ್ಯವಹಾರದ ಬಗ್ಗೆ ತಿಳಿದಿರಲಿಲ್ಲ. ಈ ಚಿತ್ರದಿಂದ ಎಲ್ಲವೂ ಅರಿವಿಗೆ ಬಂತು. ಯುವ ನಿರ್ದೇಶಕ ಸೂರ ಬಂದು ಈ ಕಥೆ ಹೇಳಿದಾಗ ಮೈ ಜುಮ್ ಎನಿಸಿತ್ತು ಎಂದು ಹೇಳಿದರು. ಇನ್ನೂ ಟ್ರೇಲರ್​ನಲ್ಲಿ ಶ್ರೀನಗರ ಕಿಟ್ಟಿ ಸುಟ್ಟು ಹೋಗೋನಲ್ಲ ಸುಡೋವ್ನು ಎನ್ನುವ ಖಡಕ್ ಡೈಲಾಗ್ ಸಖತ್​ ಪಂಚಿಂಗ್ ಆಗಿದೆ.

ಇದನ್ನೂ ಓದಿ: ಶೆಹಜಾದಾ ಸಿನಿಮಾ ಬಿಡುಗಡೆ: ಬಾಲಿವುಡ್​ ಸಕ್ಸಸ್ ಮುಂದುವರಿಯುತ್ತಾ?!

ಈ ಸಂದರ್ಭದಲ್ಲಿ ಮಾತನಾಡಿದ ಚಿತ್ರದ ನಾಯಕಿ ಪಾವನ ಗೌಡ, ನಾನು ಗಿರಿಜಾ ಎಂಬ ಪಾತ್ರ ಮಾಡಿದ್ದು, ಬಹಳ ವರ್ಷಗಳ ಕನಸು ಈಡೇರಿದೆ. ಈ ಕನಸು ಈಡೇರಲು 10 ವರ್ಷ ಕಾಯಬೇಕಾಯ್ತು. ಮಾಸ್ ಸಿನಿಮಾಗಳನ್ನು ಗಂಡಸರಷ್ಟೇ ಎಂಜಾಯ್ ಮಾಡಲ್ಲ. ನಾವು ಹುಡುಗಿಯರು ಸಹ ಎಂಜಾಯ್ ಮಾಡುತ್ತೇವೆ. ಈ ಚಿತ್ರದಲ್ಲಿ ನಿರ್ದೇಶಕರು, ಕಿಟ್ಟಿ ಸರ್ ಸೇರಿದಂತೆ ತಂಡದ ಎಲ್ಲರ ಪರಿಶ್ರಮ ಬಹಳಾನೇ ಇದೆ. ಚಿತ್ರದಲ್ಲಿರುವ ಪ್ರತಿ ಪಾತ್ರ ಹಾಗೂ ಕೆಲಸ ಮಾಡುವ ಡಿಪಾರ್ಟ್​ಮೆಂಟ್ ಗೆದ್ದರೆ ಸಿನಿಮಾ ಗೆಲ್ಲುತ್ತದೆ. ಈ ಕ್ಷಣ ನಾನು ತುಂಬಾ ಖುಷಿಯಿಂದ ಇದ್ದೇನೆ ಎಂದರು.

ಇದನ್ನೂ ಓದಿ: 'ನಮಾಮಿ' ಹಾಡಿನಲ್ಲಿ ಶ್ರೀಯಾ ಶರಣ್ ಮಿಂಚು: ಸ್ಯಾಂಡಲ್​ವುಡ್​ನಲ್ಲಿ ಮತ್ತೊಂದು ಗೆಲುವಿನ ಮುನ್ನುಡಿ

ಶರತ್ ಲೋಹಿತಾಶ್ವ, ರಂಗಾಯಣ ರಘು, ಕಾಕ್ರೋಚ್ ಸುಧೀ, ಯಶ್ ಶೆಟ್ಟಿ ಹಾಗೂ ರುದ್ರೇಶ್, ಬೇಬಿ ನಮನ ಸೇರಿದಂತೆ ಸಾಕಷ್ಟು ಕಲಾವಿದರ ದಂಡು ಚಿತ್ರದಲ್ಲಿದೆ. ಚಿತ್ರಕ್ಕಾಗಿ ರಿಸರ್ಚ್ ಮಾಡಿ ಕಥೆ ಬರೆದು ನಿರ್ದೇಶನ ಮಾಡಿದ್ದಾರೆ ಹೊಸ ಪ್ರತಿಭೆ ಸೂರ. ಗೌಳಿ ಇವರ ನಿರ್ದೇಶನದ ಮೊದಲ ಸಿನಿಮಾ. ರಘು ಸಿಂಗಮ್ ಚಿತ್ರದ ನಿರ್ಮಾಪಕರು. ಇವರಿಗೂ ಸಿನಿಮಾ ನಿರ್ಮಾಣ ಮೊದಲ ಪ್ರಯತ್ನ. ಉಮೇಶ್ ಆರ್.ವಿ ಅವರ ಸಂಕಲನವಿರುವ ಚಿತ್ರಕ್ಕೆ ಸಂದೀಪ್ ಛಾಯಾಗ್ರಹಣ, ಶಶಾಂಕ ಶೇಷಗಿರಿ ಸಂಗೀತ ನಿರ್ದೇಶನವಿದೆ. ಫೆಬ್ರವರಿ 24ರಂದು ರಾಜ್ಯಾದ್ಯಂತ ಅದ್ಧೂರಿಯಾಗಿ ಚಿತ್ರ ಬಿಡುಗಡೆಯಾಗುತ್ತಿದೆ.

ETV Bharat Logo

Copyright © 2024 Ushodaya Enterprises Pvt. Ltd., All Rights Reserved.