ETV Bharat / entertainment

ಸಿಧು ಮೂಸೆವಾಲಾ ಅವರ 'ಮೇರಾ ನಾಮ್' ಹಾಡು ಏಪ್ರಿಲ್​ 7ರಂದು ಬಿಡುಗಡೆ - ಈಟಿವಿ ಭಾರತ ಕನ್ನಡ

ಖ್ಯಾತ ಪಂಜಾಬಿ ಗಾಯಕ ದಿವಂಗತ ಸಿಧು ಮೂಸೆವಾಲಾ ಅವರ 'ಮೇರಾ ನಾಮ್' ಎಂಬ ಹೊಸ ಹಾಡು ಏಪ್ರಿಲ್​ 7 ರಂದು ಬಿಡುಗಡೆಯಾಗಲಿದೆ.​

Sidhu Moosewala
ಸಿಧು ಮೂಸೆವಾಲಾ
author img

By

Published : Apr 4, 2023, 12:40 PM IST

ಖ್ಯಾತ ಪಂಜಾಬಿ ಗಾಯಕ ದಿವಂಗತ ಸಿಧು ಮೂಸೆವಾಲಾ ಅಭಿಮಾನಿಗಳಿಗೆ ಸಂತಸದ ಸಿಹಿ ಸುದ್ದಿಯೊಂದು ಹೊರಬಿದ್ದಿದೆ. ಸಿಧು ಅವರ 'ಮೇರಾ ನಾಮ್' ಎಂಬ ಹೊಸ ಹಾಡು ಏಪ್ರಿಲ್​ 7 ರಂದು ಬಿಡುಗಡೆಯಾಗಲಿದೆ.​ ಅದರ ಪೋಸ್ಟರ್​ ಇದೀಗ ರಿಲೀಸ್​ ಆಗಿದೆ. ಈ ಹಾಡನ್ನು ಬರ್ನಾ ಬಾಯ್​ ಮತ್ತು ಸ್ಟೀಲ್​ ಬ್ಯಾಂಗಲ್ಸ್​ ಹಾಡಿದ್ದಾರೆ. ಸಿಧು ತಂದೆ ಬಲ್ಕೌರ್​ ಸಿಂಗ್​ ಮತ್ತು ತಾಯಿ ಹಾಡಿನ ಪೋಸ್ಟರ್​ ಹಾಗೂ ಬಿಡುಗಡೆ ದಿನಾಂಕವನ್ನು ಸೋಷಿಯಲ್​ ಮೀಡಿಯಾದಲ್ಲಿ ಹಂಚಿಕೊಂಡಿದ್ದಾರೆ.

ಕಳೆದ ಕೆಲವು ತಿಂಗಳಿನಿಂದ ಸಿಧು ಮೂಸೆವಾಲಾ ಅವರ ಯಾವುದೇ ಹೊಸ ಹಾಡುಗಳು ಬಿಡುಗಡೆಗೊಂಡಿರಲಿಲ್ಲ. ಹೀಗಾಗಿ ಸಿಧು ಅಭಿಮಾನಿಗಳು ಅವರ ಹಾಡಿಗಾಗಿ ಕಾಯುತ್ತಿದ್ದರು. ಅದರಂತೆ ಕೊನೆಗೂ ಹಾಡು ಬಿಡುಗಡೆಯ ಡೇಟ್​ ಅನೌನ್ಸ್​ ಆಗಿದೆ. ಸಿಧು ನಿಧನದ ನಂತರ ರಿಲೀಸ್​ ಆಗುತ್ತಿರುವ ಅವರ ಮೂರನೆಯ ಸಾಂಗ್​ ಇದಾಗಿದೆ. ಅವರ ಎರಡು ಹಾಡುಗಳು ಎಸ್​ವೈಎಲ್​ ಮತ್ತು ವಾರ್​ ಈ ಹಿಂದೆ ಬಿಡುಗಡೆಯಾಗಿದೆ.

ಅಭಿಮಾನಿಗಳ ಖುಷಿಗಾಗಿ ಸಿಧು ಅಗಲಿಕೆ ನಂತರದ ಮೂರನೇ ಹಾಡು 'ಮೇರಾ ನಾಮ್​' ಅನ್ನು ಅವರ ಪೋಷಕರೇ ಏಪ್ರಿಲ್​ 7 ರಂದು ಬಿಡುಗಡೆಗೊಳಿಸಲಿದ್ದಾರೆ. ಸ್ಟೀಲ್​ ಬ್ಯಾಂಗಲ್ಸ್​ ಅವರು 2022ರ ನವೆಂಬರ್​ ನಲ್ಲಿ ಯುಕೆಗೆ ಭೇಟಿ ನೀಡಿದ್ದಾಗ ಸಿಧು ಅವರ ಪೋಷಕರನ್ನು ಭೇಟಿಯಾಗಿದ್ದರು. ಬಳಿಕ ಸಿಧು ಪೋಷಕರು ಮತ್ತು ಬರ್ನಾ ಬಾಯ್​ ಜೊತೆಗಿನ ಫೋಟೋವನ್ನು ಶೇರ್​ ಮಾಡಿಕೊಂಡಿದ್ದರು. ಆಗಲೇ ಈ ಹೊಸ ಹಾಡಿನ ಬಗ್ಗೆ ಅವರು ಸುಳಿವು ನೀಡಿದ್ದರು.

ಸಿಧು ಅಗಲಿಕೆಯ ನಂತರ ಬಿಡುಗಡೆಯಾದ ಹಾಡುಗಳಿವು.. ಸಿಧು ಮೂಸೆವಾಲಾ ನಿಧನದ ನಂತರ ಅವರ ಎರಡು ಹಾಡುಗಳು ಬಿಡುಗಡೆಗೊಂಡಿವೆ. ಎಸ್​ವೈಎಲ್​ ಮತ್ತು ವಾರ್​ ಎಂಬ ಎರಡು ಸಾಂಗ್ಸ್​ ಈಗಾಗಲೇ ರಿಲೀಸ್​ ಆಗಿವೆ. ಆದರೆ, ಬಿಡುಗಡೆಯಾದ ಕೆಲವೇ ದಿನಗಳಲ್ಲಿ ಎಸ್​ವೈಎಲ್​ ಹಾಡನ್ನು ಯೂಟ್ಯೂಬ್​ನಿಂದ ತೆಗೆದುಹಾಕಲಾಗಿದೆ. ವಾರ್​ ಯೂಟ್ಯೂಬ್​ನಲ್ಲಿ ಮಿಲಿಯನ್​ಗಿಂತಲೂ ಹೆಚ್ಚು ವೀಕ್ಷಣೆಗಳನ್ನು ಪಡೆದುಕೊಂಡಿದೆ.

ಇದನ್ನೂ ಓದಿ: ಇನ್‌ಸ್ಟಾಗ್ರಾಮ್‌ಗೆ ಎಂಟ್ರಿ ಕೊಟ್ಟ ದಳಪತಿ ವಿಜಯ್: ಒಂದೇ ದಿನ 4 ಮಿಲಿಯನ್​ಗೂ ಹೆಚ್ಚು ಫಾಲೋವರ್ಸ್‌!

ಗುಂಡಿಕ್ಕಿ ಸಿಧು ಹತ್ಯೆ: ಸಿಧು ಮೂಸೆವಾಲಾ ಹತ್ಯೆ ಪ್ರಕರಣ ಇಡೀ ದೇಶದ ಗಮನ ಸೆಳೆದಿತ್ತು. 2022ರ ಮೇ 29 ರಂದು ಮಾನ್ಸಾ ಜಿಲ್ಲೆಯ ಜವಾಹರ್ಕೆ ಗ್ರಾಮದಲ್ಲಿ ಅಪರಿಚಿತ ದುಷ್ಕರ್ಮಿಗಳು ಕಾಂಗ್ರೆಸ್​ ನಾಯಕರೂ ಆಗಿದ್ದ ಸಿಧು ಮೂಸೆವಾಲಾ ಅವರನ್ನು ಗುಂಡಿಕ್ಕಿ ಕೊಂದಿದ್ದರು. ಸಿಧು ತಮ್ಮ ಕಾರಿನಲ್ಲಿ ಹೋಗುತ್ತಿದ್ದಾಗ ದುಷ್ಕರ್ಮಿಗಳು ಮನಬಂದಂತೆ ಗುಂಡು ಹಾರಿಸಿದ್ದು, ಗಾಯಕ ಸ್ಥಳದಲ್ಲೇ ಕೊನೆಯುಸಿರೆಳೆದಿದ್ದರು. ಪಂಜಾಬ್ ಪೊಲೀಸರು ಮೂಸೆವಾಲಾ ಸೇರಿದಂತೆ 424 ಜನ ಪ್ರಮುಖ ಪೊಲೀಸ್​ ಭದ್ರತೆ ಹಿಂತೆಗೆದುಕೊಂಡ ಎರಡು ದಿನಗಳ ನಂತರ ಈ ಕೊಲೆ ನಡೆದಿತ್ತು. ಅದಾದ ನಂತರ ಅವರ ತಂದೆ ಬಲ್ಕೌರ್ ಸಿಂಗ್ ಅವರಿಗೂ ಕೊಲೆ ಬೆದರಿಕೆ ಬಂದಿತ್ತು.

ಇದನ್ನೂ ಓದಿ: ವೀಕೆಂಡ್​​ನಲ್ಲಿ ಉತ್ತಮ ಕಲೆಕ್ಷನ್​ ಮಾಡಿದ 'ಭೋಲಾ': 50 ಕೋಟಿ ದಾಟುವ ನಿರೀಕ್ಷೆ

ಖ್ಯಾತ ಪಂಜಾಬಿ ಗಾಯಕ ದಿವಂಗತ ಸಿಧು ಮೂಸೆವಾಲಾ ಅಭಿಮಾನಿಗಳಿಗೆ ಸಂತಸದ ಸಿಹಿ ಸುದ್ದಿಯೊಂದು ಹೊರಬಿದ್ದಿದೆ. ಸಿಧು ಅವರ 'ಮೇರಾ ನಾಮ್' ಎಂಬ ಹೊಸ ಹಾಡು ಏಪ್ರಿಲ್​ 7 ರಂದು ಬಿಡುಗಡೆಯಾಗಲಿದೆ.​ ಅದರ ಪೋಸ್ಟರ್​ ಇದೀಗ ರಿಲೀಸ್​ ಆಗಿದೆ. ಈ ಹಾಡನ್ನು ಬರ್ನಾ ಬಾಯ್​ ಮತ್ತು ಸ್ಟೀಲ್​ ಬ್ಯಾಂಗಲ್ಸ್​ ಹಾಡಿದ್ದಾರೆ. ಸಿಧು ತಂದೆ ಬಲ್ಕೌರ್​ ಸಿಂಗ್​ ಮತ್ತು ತಾಯಿ ಹಾಡಿನ ಪೋಸ್ಟರ್​ ಹಾಗೂ ಬಿಡುಗಡೆ ದಿನಾಂಕವನ್ನು ಸೋಷಿಯಲ್​ ಮೀಡಿಯಾದಲ್ಲಿ ಹಂಚಿಕೊಂಡಿದ್ದಾರೆ.

ಕಳೆದ ಕೆಲವು ತಿಂಗಳಿನಿಂದ ಸಿಧು ಮೂಸೆವಾಲಾ ಅವರ ಯಾವುದೇ ಹೊಸ ಹಾಡುಗಳು ಬಿಡುಗಡೆಗೊಂಡಿರಲಿಲ್ಲ. ಹೀಗಾಗಿ ಸಿಧು ಅಭಿಮಾನಿಗಳು ಅವರ ಹಾಡಿಗಾಗಿ ಕಾಯುತ್ತಿದ್ದರು. ಅದರಂತೆ ಕೊನೆಗೂ ಹಾಡು ಬಿಡುಗಡೆಯ ಡೇಟ್​ ಅನೌನ್ಸ್​ ಆಗಿದೆ. ಸಿಧು ನಿಧನದ ನಂತರ ರಿಲೀಸ್​ ಆಗುತ್ತಿರುವ ಅವರ ಮೂರನೆಯ ಸಾಂಗ್​ ಇದಾಗಿದೆ. ಅವರ ಎರಡು ಹಾಡುಗಳು ಎಸ್​ವೈಎಲ್​ ಮತ್ತು ವಾರ್​ ಈ ಹಿಂದೆ ಬಿಡುಗಡೆಯಾಗಿದೆ.

ಅಭಿಮಾನಿಗಳ ಖುಷಿಗಾಗಿ ಸಿಧು ಅಗಲಿಕೆ ನಂತರದ ಮೂರನೇ ಹಾಡು 'ಮೇರಾ ನಾಮ್​' ಅನ್ನು ಅವರ ಪೋಷಕರೇ ಏಪ್ರಿಲ್​ 7 ರಂದು ಬಿಡುಗಡೆಗೊಳಿಸಲಿದ್ದಾರೆ. ಸ್ಟೀಲ್​ ಬ್ಯಾಂಗಲ್ಸ್​ ಅವರು 2022ರ ನವೆಂಬರ್​ ನಲ್ಲಿ ಯುಕೆಗೆ ಭೇಟಿ ನೀಡಿದ್ದಾಗ ಸಿಧು ಅವರ ಪೋಷಕರನ್ನು ಭೇಟಿಯಾಗಿದ್ದರು. ಬಳಿಕ ಸಿಧು ಪೋಷಕರು ಮತ್ತು ಬರ್ನಾ ಬಾಯ್​ ಜೊತೆಗಿನ ಫೋಟೋವನ್ನು ಶೇರ್​ ಮಾಡಿಕೊಂಡಿದ್ದರು. ಆಗಲೇ ಈ ಹೊಸ ಹಾಡಿನ ಬಗ್ಗೆ ಅವರು ಸುಳಿವು ನೀಡಿದ್ದರು.

ಸಿಧು ಅಗಲಿಕೆಯ ನಂತರ ಬಿಡುಗಡೆಯಾದ ಹಾಡುಗಳಿವು.. ಸಿಧು ಮೂಸೆವಾಲಾ ನಿಧನದ ನಂತರ ಅವರ ಎರಡು ಹಾಡುಗಳು ಬಿಡುಗಡೆಗೊಂಡಿವೆ. ಎಸ್​ವೈಎಲ್​ ಮತ್ತು ವಾರ್​ ಎಂಬ ಎರಡು ಸಾಂಗ್ಸ್​ ಈಗಾಗಲೇ ರಿಲೀಸ್​ ಆಗಿವೆ. ಆದರೆ, ಬಿಡುಗಡೆಯಾದ ಕೆಲವೇ ದಿನಗಳಲ್ಲಿ ಎಸ್​ವೈಎಲ್​ ಹಾಡನ್ನು ಯೂಟ್ಯೂಬ್​ನಿಂದ ತೆಗೆದುಹಾಕಲಾಗಿದೆ. ವಾರ್​ ಯೂಟ್ಯೂಬ್​ನಲ್ಲಿ ಮಿಲಿಯನ್​ಗಿಂತಲೂ ಹೆಚ್ಚು ವೀಕ್ಷಣೆಗಳನ್ನು ಪಡೆದುಕೊಂಡಿದೆ.

ಇದನ್ನೂ ಓದಿ: ಇನ್‌ಸ್ಟಾಗ್ರಾಮ್‌ಗೆ ಎಂಟ್ರಿ ಕೊಟ್ಟ ದಳಪತಿ ವಿಜಯ್: ಒಂದೇ ದಿನ 4 ಮಿಲಿಯನ್​ಗೂ ಹೆಚ್ಚು ಫಾಲೋವರ್ಸ್‌!

ಗುಂಡಿಕ್ಕಿ ಸಿಧು ಹತ್ಯೆ: ಸಿಧು ಮೂಸೆವಾಲಾ ಹತ್ಯೆ ಪ್ರಕರಣ ಇಡೀ ದೇಶದ ಗಮನ ಸೆಳೆದಿತ್ತು. 2022ರ ಮೇ 29 ರಂದು ಮಾನ್ಸಾ ಜಿಲ್ಲೆಯ ಜವಾಹರ್ಕೆ ಗ್ರಾಮದಲ್ಲಿ ಅಪರಿಚಿತ ದುಷ್ಕರ್ಮಿಗಳು ಕಾಂಗ್ರೆಸ್​ ನಾಯಕರೂ ಆಗಿದ್ದ ಸಿಧು ಮೂಸೆವಾಲಾ ಅವರನ್ನು ಗುಂಡಿಕ್ಕಿ ಕೊಂದಿದ್ದರು. ಸಿಧು ತಮ್ಮ ಕಾರಿನಲ್ಲಿ ಹೋಗುತ್ತಿದ್ದಾಗ ದುಷ್ಕರ್ಮಿಗಳು ಮನಬಂದಂತೆ ಗುಂಡು ಹಾರಿಸಿದ್ದು, ಗಾಯಕ ಸ್ಥಳದಲ್ಲೇ ಕೊನೆಯುಸಿರೆಳೆದಿದ್ದರು. ಪಂಜಾಬ್ ಪೊಲೀಸರು ಮೂಸೆವಾಲಾ ಸೇರಿದಂತೆ 424 ಜನ ಪ್ರಮುಖ ಪೊಲೀಸ್​ ಭದ್ರತೆ ಹಿಂತೆಗೆದುಕೊಂಡ ಎರಡು ದಿನಗಳ ನಂತರ ಈ ಕೊಲೆ ನಡೆದಿತ್ತು. ಅದಾದ ನಂತರ ಅವರ ತಂದೆ ಬಲ್ಕೌರ್ ಸಿಂಗ್ ಅವರಿಗೂ ಕೊಲೆ ಬೆದರಿಕೆ ಬಂದಿತ್ತು.

ಇದನ್ನೂ ಓದಿ: ವೀಕೆಂಡ್​​ನಲ್ಲಿ ಉತ್ತಮ ಕಲೆಕ್ಷನ್​ ಮಾಡಿದ 'ಭೋಲಾ': 50 ಕೋಟಿ ದಾಟುವ ನಿರೀಕ್ಷೆ

ETV Bharat Logo

Copyright © 2025 Ushodaya Enterprises Pvt. Ltd., All Rights Reserved.