ETV Bharat / entertainment

ಸಿಧು ಮೂಸೆವಾಲಾರ 'ಮೇರಾ ನಾಮ್' ಹಾಡು ಬಿಡುಗಡೆ! - etv bharat kannada

ಖ್ಯಾತ ಪಂಜಾಬಿ ಗಾಯಕ ದಿವಂಗತ ಸಿಧು ಮೂಸೆವಾಲಾ ಅವರ 'ಮೇರಾ ನಾಮ್' ಹಾಡು ಬಿಡುಗಡೆಯಾಗಿದೆ.

Sidhu Moosewala
ಸಿಧು ಮೂಸೆವಾಲಾ
author img

By

Published : Apr 7, 2023, 1:23 PM IST

ಖ್ಯಾತ ಪಂಜಾಬಿ ಗಾಯಕ ದಿವಂಗತ ಸಿಧು ಮೂಸೆವಾಲಾ ಅಭಿಮಾನಿಗಳಿಗೆ ಸಂತಸದ ಸಿಹಿ ಸುದ್ದಿಯೊಂದಿದೆ. ಸಿಧು ಅವರ 'ಮೇರಾ ನಾಮ್' ಎಂಬ ಹೊಸ ಹಾಡು ಇಂದು ಬಿಡುಗಡೆಯಾಗಿದೆ.​ ಈ ಹೊಸ ಹಾಡನ್ನು ಸಿಧು ಅವರ ಇನ್​ಸ್ಟಾಗ್ರಾಮ್​ ಖಾತೆಯಲ್ಲಿ ಹಂಚಿಕೊಳ್ಳಲಾಗಿದೆ. ಜೊತೆಗೆ ಯೂಟ್ಯೂಬ್​ನಲ್ಲೂ ಮೇರಾ ನಾಮ್​ ಹಾಡು ಲಭ್ಯವಿದೆ. ಈ ಹಾಡನ್ನು ಬರ್ನಾ ಬಾಯ್​ ಮತ್ತು ಸ್ಟೀಲ್​ ಬ್ಯಾಂಗಲ್ಸ್​ ಹಾಡಿದ್ದಾರೆ.

ಕಳೆದ ಕೆಲವು ತಿಂಗಳಿನಿಂದ ಸಿಧು ಮೂಸೆವಾಲಾ ಅವರ ಯಾವುದೇ ಹೊಸ ಹಾಡುಗಳು ಬಿಡುಗಡೆಗೊಂಡಿರಲಿಲ್ಲ. ಹೀಗಾಗಿ ಸಿಧು ಅಭಿಮಾನಿಗಳು ಅವರ ಹಾಡಿಗಾಗಿ ಕಾಯುತ್ತಿದ್ದರು. ಅದರಂತೆ ಕೊನೆಗೂ 'ಮೇರಾ ನಾಮ್​' ಹಾಡು ಬಿಡುಗಡೆಯಾಗಿದ್ದು, 11 ನಿಮಿಷದಲ್ಲಿ 11 ಲಕ್ಷ ಮಂದಿ ವೀಕ್ಷಿಸಿದ್ದಾರೆ.​ ಸಿಧು ನಿಧನದ ನಂತರ ರಿಲೀಸ್​ ಆಗುತ್ತಿರುವ ಅವರ ಮೂರನೆಯ ಸಾಂಗ್​ ಇದಾಗಿದೆ. ಅವರ ಎರಡು ಹಾಡುಗಳು ಎಸ್​ವೈಎಲ್​ ಮತ್ತು ವಾರ್​ ಈ ಹಿಂದೆ ಬಿಡುಗಡೆಯಾಗಿದೆ.

'ಮೇರಾ ನಾಮ್​' ರಿಲೀಸ್​ ಆದ ಕೂಡಲೇ ಅತೀ ಹೆಚ್ಚಿನ ಜನರು ಈ ಹಾಡನ್ನು ವೀಕ್ಷಿಸಿದ್ದಾರೆ. 'ಮೇರಾ ನಾಮ್​ ಮೇರಾ ನಾಮ್​' ಎಂದು ಈ ಹಾಡಿನ ಲಿರಿಕ್ಸ್​ ಪ್ರಾರಂಭವಾಗುತ್ತದೆ. ಹಾಡಿನಲ್ಲಿ ಗಾಯಕನ ಜನಪ್ರಿಯತೆಯನ್ನು ಕಟ್ಟಿಕೊಡಲಾಗಿದೆ. ಅಭಿಮಾನಿಗಳು ಹಾಡು ಕೇಳಿ ಭಾವುಕರಾಗಿದ್ದು, ಕಮೆಂಟ್​ ಮೂಲಕ ತಮ್ಮ ಅಭಿಪ್ರಾಯವನ್ನು ತಿಳಿಸುತ್ತಿದ್ದಾರೆ.

ಗಾಯಕ ಸ್ಟೀಲ್​ ಬ್ಯಾಂಗಲ್ಸ್​ ಅವರು ನವೆಂಬರ್​ 2022 ರಲ್ಲಿ ಯುಕೆಗೆ ಭೇಟಿ ನೀಡಿದಾಗ ಸಿಧು ಅವರ ಫೋಷಕರನ್ನು ಭೇಟಿಯಾಗಿದ್ದರು. ಬಳಿಕ ಸಿಧು ಪೋಷಕರು ಮತ್ತು ಬರ್ನಾ ಬಾಯ್​ ಜೊತೆಗಿನ ಫೋಟೋವನ್ನು ಶೇರ್​ ಮಾಡಿದ್ದರು. ಆಗಲೇ ಈ ಹೊಸ ಹಾಡಿನ ಬಗ್ಗೆ ಅವರು ಸುಳಿವು ನೀಡಿದ್ದರು.

ಸಿಧು ಅಗಲಿಕೆಯ ನಂತರ ಬಿಡುಗೆಯಾದ ಹಾಡುಗಳಿವು.. ಸಿಧು ಮೂಸೆವಾಲಾ ನಿಧನದ ನಂತರ ಅವರ ಎರಡು ಹಾಡುಗಳು ಬಿಡುಗಡೆಗೊಂಡಿವೆ. ಎಸ್​ವೈಎಲ್​ ಮತ್ತು ವಾರ್​ ಎಂಬ ಎರಡು ಸಾಂಗ್ಸ್​ ಈಗಾಗಲೇ ರಿಲೀಸ್​ ಆಗಿದೆ. ಆದರೆ ಬಿಡುಗಡೆಯಾದ ಕೆಲವೇ ದಿನಗಳಲ್ಲಿ ಎಸ್​ವೈಎಲ್​ ಹಾಡನ್ನು ಯೂಟ್ಯೂಬ್​ನಿಂದ ತೆಗೆದುಹಾಕಲಾಗಿದೆ. ವಾರ್​ ಯೂಟ್ಯೂಬ್​ನಲ್ಲಿ ಮಿಲಿಯನ್​ಗಿಂತಲೂ ಹೆಚ್ಚು ವೀಕ್ಷಣೆಗಳನ್ನು ಪಡೆದುಕೊಂಡಿದೆ.

ಗುಂಡಿಕ್ಕಿ ಸಿಧು ಹತ್ಯೆ: ಸಿಧು ಮೂಸೆವಾಲಾ ಹತ್ಯೆ ಪ್ರಕರಣ ಇಡೀ ದೇಶದ ಗಮನ ಸೆಳೆದಿತ್ತು. 2022ರ ಮೇ 29 ರಂದು ಮಾನ್ಸಾ ಜಿಲ್ಲೆಯ ಜವಾಹರ್ಕೆ ಗ್ರಾಮದಲ್ಲಿ ಅಪರಿಚಿತ ದುಷ್ಕರ್ಮಿಗಳು ಕಾಂಗ್ರೆಸ್​ ನಾಯಕರೂ ಆಗಿದ್ದ ಸಿಧು ಮೂಸೆವಾಲಾ ಅವರನ್ನು ಗುಂಡಿಕ್ಕಿ ಕೊಂದಿದ್ದರು. ಸಿಧು ತಮ್ಮ ಕಾರಿನಲ್ಲಿ ಹೋಗುತ್ತಿದ್ದಾಗ ದುಷ್ಕರ್ಮಿಗಳು ಮನಬಂದಂತೆ ಗುಂಡು ಹಾರಿಸಿದ್ದು, ಗಾಯಕ ಸ್ಥಳದಲ್ಲೇ ಕೊನೆಯುಸಿರೆಳೆದಿದ್ದರು. ಪಂಜಾಬ್ ಪೊಲೀಸರು ಮೂಸೆವಾಲಾ ಸೇರಿದಂತೆ 424 ಜನ ಪ್ರಮುಖ ಪೊಲೀಸ್​ ಭದ್ರತೆ ಹಿಂತೆಗೆದುಕೊಂಡ ಎರಡು ದಿನಗಳ ನಂತರ ಈ ಕೊಲೆ ನಡೆದಿತ್ತು. ಅದಾದ ನಂತರ ಅವರ ತಂದೆ ಬಲ್ಕೌರ್ ಸಿಂಗ್ ಅವರಿಗೂ ಕೊಲೆ ಬೆದರಿಕೆ ಬಂದಿತ್ತು.

ಇದನ್ನೂ ಓದಿ: 'ನಾನು ನಿಮ್ಮನ್ನು ಪ್ರೀತಿಸುತ್ತೇನೆ, ನೀವು ನನ್ನನ್ನು ಪ್ರೀತಿಸುತ್ತೀರಿ ಎಂದು ನನಗೆ ತಿಳಿದಿದೆ'

ಖ್ಯಾತ ಪಂಜಾಬಿ ಗಾಯಕ ದಿವಂಗತ ಸಿಧು ಮೂಸೆವಾಲಾ ಅಭಿಮಾನಿಗಳಿಗೆ ಸಂತಸದ ಸಿಹಿ ಸುದ್ದಿಯೊಂದಿದೆ. ಸಿಧು ಅವರ 'ಮೇರಾ ನಾಮ್' ಎಂಬ ಹೊಸ ಹಾಡು ಇಂದು ಬಿಡುಗಡೆಯಾಗಿದೆ.​ ಈ ಹೊಸ ಹಾಡನ್ನು ಸಿಧು ಅವರ ಇನ್​ಸ್ಟಾಗ್ರಾಮ್​ ಖಾತೆಯಲ್ಲಿ ಹಂಚಿಕೊಳ್ಳಲಾಗಿದೆ. ಜೊತೆಗೆ ಯೂಟ್ಯೂಬ್​ನಲ್ಲೂ ಮೇರಾ ನಾಮ್​ ಹಾಡು ಲಭ್ಯವಿದೆ. ಈ ಹಾಡನ್ನು ಬರ್ನಾ ಬಾಯ್​ ಮತ್ತು ಸ್ಟೀಲ್​ ಬ್ಯಾಂಗಲ್ಸ್​ ಹಾಡಿದ್ದಾರೆ.

ಕಳೆದ ಕೆಲವು ತಿಂಗಳಿನಿಂದ ಸಿಧು ಮೂಸೆವಾಲಾ ಅವರ ಯಾವುದೇ ಹೊಸ ಹಾಡುಗಳು ಬಿಡುಗಡೆಗೊಂಡಿರಲಿಲ್ಲ. ಹೀಗಾಗಿ ಸಿಧು ಅಭಿಮಾನಿಗಳು ಅವರ ಹಾಡಿಗಾಗಿ ಕಾಯುತ್ತಿದ್ದರು. ಅದರಂತೆ ಕೊನೆಗೂ 'ಮೇರಾ ನಾಮ್​' ಹಾಡು ಬಿಡುಗಡೆಯಾಗಿದ್ದು, 11 ನಿಮಿಷದಲ್ಲಿ 11 ಲಕ್ಷ ಮಂದಿ ವೀಕ್ಷಿಸಿದ್ದಾರೆ.​ ಸಿಧು ನಿಧನದ ನಂತರ ರಿಲೀಸ್​ ಆಗುತ್ತಿರುವ ಅವರ ಮೂರನೆಯ ಸಾಂಗ್​ ಇದಾಗಿದೆ. ಅವರ ಎರಡು ಹಾಡುಗಳು ಎಸ್​ವೈಎಲ್​ ಮತ್ತು ವಾರ್​ ಈ ಹಿಂದೆ ಬಿಡುಗಡೆಯಾಗಿದೆ.

'ಮೇರಾ ನಾಮ್​' ರಿಲೀಸ್​ ಆದ ಕೂಡಲೇ ಅತೀ ಹೆಚ್ಚಿನ ಜನರು ಈ ಹಾಡನ್ನು ವೀಕ್ಷಿಸಿದ್ದಾರೆ. 'ಮೇರಾ ನಾಮ್​ ಮೇರಾ ನಾಮ್​' ಎಂದು ಈ ಹಾಡಿನ ಲಿರಿಕ್ಸ್​ ಪ್ರಾರಂಭವಾಗುತ್ತದೆ. ಹಾಡಿನಲ್ಲಿ ಗಾಯಕನ ಜನಪ್ರಿಯತೆಯನ್ನು ಕಟ್ಟಿಕೊಡಲಾಗಿದೆ. ಅಭಿಮಾನಿಗಳು ಹಾಡು ಕೇಳಿ ಭಾವುಕರಾಗಿದ್ದು, ಕಮೆಂಟ್​ ಮೂಲಕ ತಮ್ಮ ಅಭಿಪ್ರಾಯವನ್ನು ತಿಳಿಸುತ್ತಿದ್ದಾರೆ.

ಗಾಯಕ ಸ್ಟೀಲ್​ ಬ್ಯಾಂಗಲ್ಸ್​ ಅವರು ನವೆಂಬರ್​ 2022 ರಲ್ಲಿ ಯುಕೆಗೆ ಭೇಟಿ ನೀಡಿದಾಗ ಸಿಧು ಅವರ ಫೋಷಕರನ್ನು ಭೇಟಿಯಾಗಿದ್ದರು. ಬಳಿಕ ಸಿಧು ಪೋಷಕರು ಮತ್ತು ಬರ್ನಾ ಬಾಯ್​ ಜೊತೆಗಿನ ಫೋಟೋವನ್ನು ಶೇರ್​ ಮಾಡಿದ್ದರು. ಆಗಲೇ ಈ ಹೊಸ ಹಾಡಿನ ಬಗ್ಗೆ ಅವರು ಸುಳಿವು ನೀಡಿದ್ದರು.

ಸಿಧು ಅಗಲಿಕೆಯ ನಂತರ ಬಿಡುಗೆಯಾದ ಹಾಡುಗಳಿವು.. ಸಿಧು ಮೂಸೆವಾಲಾ ನಿಧನದ ನಂತರ ಅವರ ಎರಡು ಹಾಡುಗಳು ಬಿಡುಗಡೆಗೊಂಡಿವೆ. ಎಸ್​ವೈಎಲ್​ ಮತ್ತು ವಾರ್​ ಎಂಬ ಎರಡು ಸಾಂಗ್ಸ್​ ಈಗಾಗಲೇ ರಿಲೀಸ್​ ಆಗಿದೆ. ಆದರೆ ಬಿಡುಗಡೆಯಾದ ಕೆಲವೇ ದಿನಗಳಲ್ಲಿ ಎಸ್​ವೈಎಲ್​ ಹಾಡನ್ನು ಯೂಟ್ಯೂಬ್​ನಿಂದ ತೆಗೆದುಹಾಕಲಾಗಿದೆ. ವಾರ್​ ಯೂಟ್ಯೂಬ್​ನಲ್ಲಿ ಮಿಲಿಯನ್​ಗಿಂತಲೂ ಹೆಚ್ಚು ವೀಕ್ಷಣೆಗಳನ್ನು ಪಡೆದುಕೊಂಡಿದೆ.

ಗುಂಡಿಕ್ಕಿ ಸಿಧು ಹತ್ಯೆ: ಸಿಧು ಮೂಸೆವಾಲಾ ಹತ್ಯೆ ಪ್ರಕರಣ ಇಡೀ ದೇಶದ ಗಮನ ಸೆಳೆದಿತ್ತು. 2022ರ ಮೇ 29 ರಂದು ಮಾನ್ಸಾ ಜಿಲ್ಲೆಯ ಜವಾಹರ್ಕೆ ಗ್ರಾಮದಲ್ಲಿ ಅಪರಿಚಿತ ದುಷ್ಕರ್ಮಿಗಳು ಕಾಂಗ್ರೆಸ್​ ನಾಯಕರೂ ಆಗಿದ್ದ ಸಿಧು ಮೂಸೆವಾಲಾ ಅವರನ್ನು ಗುಂಡಿಕ್ಕಿ ಕೊಂದಿದ್ದರು. ಸಿಧು ತಮ್ಮ ಕಾರಿನಲ್ಲಿ ಹೋಗುತ್ತಿದ್ದಾಗ ದುಷ್ಕರ್ಮಿಗಳು ಮನಬಂದಂತೆ ಗುಂಡು ಹಾರಿಸಿದ್ದು, ಗಾಯಕ ಸ್ಥಳದಲ್ಲೇ ಕೊನೆಯುಸಿರೆಳೆದಿದ್ದರು. ಪಂಜಾಬ್ ಪೊಲೀಸರು ಮೂಸೆವಾಲಾ ಸೇರಿದಂತೆ 424 ಜನ ಪ್ರಮುಖ ಪೊಲೀಸ್​ ಭದ್ರತೆ ಹಿಂತೆಗೆದುಕೊಂಡ ಎರಡು ದಿನಗಳ ನಂತರ ಈ ಕೊಲೆ ನಡೆದಿತ್ತು. ಅದಾದ ನಂತರ ಅವರ ತಂದೆ ಬಲ್ಕೌರ್ ಸಿಂಗ್ ಅವರಿಗೂ ಕೊಲೆ ಬೆದರಿಕೆ ಬಂದಿತ್ತು.

ಇದನ್ನೂ ಓದಿ: 'ನಾನು ನಿಮ್ಮನ್ನು ಪ್ರೀತಿಸುತ್ತೇನೆ, ನೀವು ನನ್ನನ್ನು ಪ್ರೀತಿಸುತ್ತೀರಿ ಎಂದು ನನಗೆ ತಿಳಿದಿದೆ'

ETV Bharat Logo

Copyright © 2025 Ushodaya Enterprises Pvt. Ltd., All Rights Reserved.