ETV Bharat / entertainment

ಅದ್ಧೂರಿಯಾಗಿ ಸೆಟ್ಟೇರಿದ 'ತಾಂಡೇಲ್': ನಾಗ ಚೈತನ್ಯ-ಸಾಯಿ ಪಲ್ಲವಿ ಕಾಂಬೋದಲ್ಲಿ ಮತ್ತೊಂದು ಸಿನಿಮಾ

author img

By ETV Bharat Karnataka Team

Published : Dec 9, 2023, 4:57 PM IST

Thandel Muhurtham Ceremony: ಮೀನುಗಾರರ ಜೀವನವನ್ನು ಆಧರಿಸಿದ ನೈಜ ಘಟನಾಧಾರಿತ 'ತಾಂಡೇಲ್' ಸಿನಿಮಾ ಇಂದು ಅದ್ಧೂರಿಯಾಗಿ ಸೆಟ್ಟೇರಿದೆ.

Naga Chaitanya sai pallavi starrer thandel goes on floors
ಅದ್ಧೂರಿಯಾಗಿ ಸೆಟ್ಟೇರಿದ 'ತಾಂಡೇಲ್': ನಾಗ ಚೈತನ್ಯ-ಸಾಯಿ ಪಲ್ಲವಿ ಕಾಂಬೋದಲ್ಲಿ ಮತ್ತೊಂದು ಸಿನಿಮಾ

ಟಾಲಿವುಡ್​ ಸ್ಟಾರ್​ ನಟ ನಾಗ ಚೈತನ್ಯ ವೃತ್ತಿಜೀವನದ ಅತ್ಯಂತ ದುಬಾರಿ ಪ್ರಾಜೆಕ್ಟ್​ ಎಂದೇ ಪರಿಗಣಿಸಲ್ಪಟ್ಟಿರುವ ಸಿನಿಮಾ 'ತಾಂಡೇಲ್'. ಸಹಜ ಸುಂದರಿ ಸಾಯಿ ಪಲ್ಲವಿ ನಾಯಕಿಯಾಗಿ ನಟಿಸುತ್ತಿದ್ದಾರೆ. ಇವರಿಬ್ಬರ ಕಾಂಬೋದಲ್ಲಿ ಮೂಡಿಬರಲಿರುವ ಈ ಚಿತ್ರದ ಮೇಲೆ ಅಭಿಮಾನಿಗಳ ನಿರೀಕ್ಷೆ ಮುಗಿಲೆತ್ತರದಲ್ಲಿದೆ. ಮೀನುಗಾರರ ಜೀವನವನ್ನು ಆಧರಿಸಿದ ನೈಜ ಘಟನೆ ಆಧಾರಿತ ಈ ಚಿತ್ರ ಶನಿವಾರದಂದು ಪೂಜಾ ಕಾರ್ಯಕ್ರಮದೊಂದಿಗೆ ಅದ್ಧೂರಿಯಾಗಿ ಸೆಟ್ಟೇರಿದೆ.

ಹೈದರಾಬಾದ್​ನ ಅನ್ನಪೂರ್ಣ ಸ್ಟುಡಿಯೋದಲ್ಲಿ ನಡೆದ ಸಮಾರಂಭದಲ್ಲಿ ನಾಗಾರ್ಜುನ, ವೆಂಕಟೇಶ್​, ಸಾಯಿ ಪಲ್ಲವಿ, ಅಲ್ಲು ಅರವಿಂದ್​ ಸೇರಿದಂತೆ ಚಿತ್ರತಂಡ ಭಾಗವಹಿಸಿತ್ತು. ಪ್ರಸ್ತುತ ಈ ಕಾರ್ಯಕ್ರಮಕ್ಕೆ ಸಂಬಂಧಿಸಿದ ಫೋಟೋಗಳು ಮತ್ತು ವಿಡಿಯೋಗಳು ಸೋಷಿಯಲ್​ ಮೀಡಿಯಾದಲ್ಲಿ ಟ್ರೆಂಡಿಂಗ್​ ಆಗಿವೆ. ಮತ್ತೊಂದೆಡೆ, ಸಿನಿಮಾಗೆ ಸ್ಮಾಲ್​ ಬ್ರೇಕ್​ ಕೊಟ್ಟಿದ್ದ ಸಾಯಿ ಪಲ್ಲವಿ ಸುಮಾರು ಎರಡು ವರ್ಷಗಳ ನಂತರ ರೀ ಎಂಟ್ರಿ ಆಗಿದ್ದಾರೆ. ಈ ಹಿಂದೆ 'ಲವ್​ ಸ್ಟೋರಿ' ಸಿನಿಮಾದಲ್ಲಿ ಅವರು ನಾಗ ಚೈತನ್ಯ ಜೊತೆ ನಟಿಸಿದ್ದರು. ಈ ಚಿತ್ರವು ಉತ್ತಮ ಟಾಕ್​ ಪಡೆಯುವುದರ ಜೊತೆಗೆ ಬಾಕ್ಸ್​ ಆಫೀಸ್​ನಲ್ಲಿ ಹೆಚ್ಚು ಕಲೆಕ್ಷನ್​ ಮಾಡಿತ್ತು. ಇದೀಗ 'ತಾಂಡೇಲ್'ನಲ್ಲಿ ಈ ಜೋಡಿ ತೆರೆ ಹಂಚಿಕೊಳ್ಳಲಿದ್ದಾರೆ.

'ಕಾರ್ತಿಕೇಯ 2' ನಂತಹ ಬ್ಲಾಕ್​ ಬಸ್ಟರ್​ ಹಿಟ್​ ಪ್ಯಾನ್​ ಇಂಡಿಯಾ ಸಿನಿಮಾವನ್ನು ನೀಡಿರುವ ಚಂದೂ ಮೊಂಡೇಟಿ ಅವರು ಈ ಸಿನಿಮಾಗೆ ಆ್ಯಕ್ಷನ್​ ಕಟ್​ ಹೇಳಲಿದ್ದಾರೆ. ಈವರೆಗೆ ಚಿತ್ರಕ್ಕೆ NC23 ಎಂದು ತಾತ್ಕಾಲಿಕ ಟೈಟಲ್​ ಇಡಲಾಗಿತ್ತು. ನವೆಂಬರ್​ 23ರಂದು ನಾಗ ಚೈತನ್ಯ ಹುಟ್ಟುಹಬ್ಬದಂದು 'ತಾಂಡೇಲ್' ಎಂದು ಶೀರ್ಷಿಕೆ ಇಡಲಾಯಿತು. ತೆಲುಗಿನ ಖ್ಯಾತ ನಿರ್ಮಾಪಕ ಅಲ್ಲು ಅರವಿಂದ್​ ಈ ಸಿನಿಮಾವನ್ನು ಪ್ರಸ್ತುತಪಡಿಸಲಿದ್ದಾರೆ. ಬನ್ನಿ ವಾಸ್ ಗೀತಾ ಆರ್ಟ್ಸ್​ ಬ್ಯಾನರ್​ ಅಡಿ ಚಿತ್ರವನ್ನು ನಿರ್ಮಾಣ ಮಾಡುತ್ತಿದ್ದಾರೆ. ರಾಷ್ಟ್ರ ಪ್ರಶಸ್ತಿ ವಿಜೇತ ಟಾಲಿವುಡ್ ಸಂಗೀತ ನಿರ್ದೇಶಕ ದೇವಿ ಶ್ರೀ ಪ್ರಸಾದ್ ಈ ಚಿತ್ರಕ್ಕೆ ಸಂಗೀತ ಸಂಯೋಜನೆ ಮಾಡುತ್ತಿದ್ದಾರೆ.

ನಾಗ ಚೈತನ್ಯ ಮತ್ತು ಚಂದು ಮೊಂಡೇಟಿ ಕಾಂಬೋದಲ್ಲಿ ಮೂಡಿ ಬರುತ್ತಿರುವ ಮೂರನೇ ಸಿನಿಮಾ ಇದಾಗಿದೆ. ಇದಕ್ಕೂ ಮುನ್ನ 'ಪ್ರೇಮಂ' ಮತ್ತು 'ಸವ್ಯಸಾಚಿ' ಚಿತ್ರಗಳು ತೆರೆ ಕಂಡಿದ್ದವು. ಅದರಲ್ಲಿ 'ಪ್ರೇಮಂ' ಬ್ಲಾಕ್​ಬಸ್ಟರ್​ ಆಗುವುದರ ಜೊತೆಗೆ 'ಸವ್ಯಸಾಚಿ' ಮಿಶ್ರ ಪ್ರತಿಕ್ರಿಯೆಯನ್ನು ಪಡೆದುಕೊಂಡಿತು. 'ತಾಂಡೇಲ್​' ಮೀನುಗಾರರ ಜೀವನವನ್ನು ಆಧರಿಸಿದ ನೈಜ ಘಟನಾಧಾರಿತ ಚಿತ್ರ. ಚಿತ್ರದಲ್ಲಿ ನಾಗ ಚೈತನ್ಯ ಹೊಸ ಲುಕ್​ನಲ್ಲಿ ಕಾಣಿಸಿಕೊಳ್ಳಲಿದ್ದಾರೆ. ಅದಕ್ಕೆ ತಕ್ಕಂತೆ ತಮ್ಮನ್ನು ಬದಲಾಯಿಸಿಕೊಳ್ಳುತ್ತಿದ್ದಾರೆ. ಗಡ್ಡ, ಕೂದಲು ಬಿಟ್ಟಿದ್ದಾರೆ. ಒಟ್ಟಿನಲ್ಲಿ ಈ ಸಿನಿಮಾ ಮೇಲೆ ಅಭಿಮಾನಿಗಳಿಗೆ ನಿರೀಕ್ಷೆ ಹೆಚ್ಚಿದೆ.

ಇದನ್ನೂ ಓದಿ: ಯೂಟ್ಯೂಬ್​ ಚಾನೆಲ್​ ಪ್ರಾರಂಭಿಸಿದ ನಟ ನಾಗ ಚೈತನ್ಯ; ಮೊದಲ ವಿಡಿಯೋದಲ್ಲೇನಿದೆ?

ಟಾಲಿವುಡ್​ ಸ್ಟಾರ್​ ನಟ ನಾಗ ಚೈತನ್ಯ ವೃತ್ತಿಜೀವನದ ಅತ್ಯಂತ ದುಬಾರಿ ಪ್ರಾಜೆಕ್ಟ್​ ಎಂದೇ ಪರಿಗಣಿಸಲ್ಪಟ್ಟಿರುವ ಸಿನಿಮಾ 'ತಾಂಡೇಲ್'. ಸಹಜ ಸುಂದರಿ ಸಾಯಿ ಪಲ್ಲವಿ ನಾಯಕಿಯಾಗಿ ನಟಿಸುತ್ತಿದ್ದಾರೆ. ಇವರಿಬ್ಬರ ಕಾಂಬೋದಲ್ಲಿ ಮೂಡಿಬರಲಿರುವ ಈ ಚಿತ್ರದ ಮೇಲೆ ಅಭಿಮಾನಿಗಳ ನಿರೀಕ್ಷೆ ಮುಗಿಲೆತ್ತರದಲ್ಲಿದೆ. ಮೀನುಗಾರರ ಜೀವನವನ್ನು ಆಧರಿಸಿದ ನೈಜ ಘಟನೆ ಆಧಾರಿತ ಈ ಚಿತ್ರ ಶನಿವಾರದಂದು ಪೂಜಾ ಕಾರ್ಯಕ್ರಮದೊಂದಿಗೆ ಅದ್ಧೂರಿಯಾಗಿ ಸೆಟ್ಟೇರಿದೆ.

ಹೈದರಾಬಾದ್​ನ ಅನ್ನಪೂರ್ಣ ಸ್ಟುಡಿಯೋದಲ್ಲಿ ನಡೆದ ಸಮಾರಂಭದಲ್ಲಿ ನಾಗಾರ್ಜುನ, ವೆಂಕಟೇಶ್​, ಸಾಯಿ ಪಲ್ಲವಿ, ಅಲ್ಲು ಅರವಿಂದ್​ ಸೇರಿದಂತೆ ಚಿತ್ರತಂಡ ಭಾಗವಹಿಸಿತ್ತು. ಪ್ರಸ್ತುತ ಈ ಕಾರ್ಯಕ್ರಮಕ್ಕೆ ಸಂಬಂಧಿಸಿದ ಫೋಟೋಗಳು ಮತ್ತು ವಿಡಿಯೋಗಳು ಸೋಷಿಯಲ್​ ಮೀಡಿಯಾದಲ್ಲಿ ಟ್ರೆಂಡಿಂಗ್​ ಆಗಿವೆ. ಮತ್ತೊಂದೆಡೆ, ಸಿನಿಮಾಗೆ ಸ್ಮಾಲ್​ ಬ್ರೇಕ್​ ಕೊಟ್ಟಿದ್ದ ಸಾಯಿ ಪಲ್ಲವಿ ಸುಮಾರು ಎರಡು ವರ್ಷಗಳ ನಂತರ ರೀ ಎಂಟ್ರಿ ಆಗಿದ್ದಾರೆ. ಈ ಹಿಂದೆ 'ಲವ್​ ಸ್ಟೋರಿ' ಸಿನಿಮಾದಲ್ಲಿ ಅವರು ನಾಗ ಚೈತನ್ಯ ಜೊತೆ ನಟಿಸಿದ್ದರು. ಈ ಚಿತ್ರವು ಉತ್ತಮ ಟಾಕ್​ ಪಡೆಯುವುದರ ಜೊತೆಗೆ ಬಾಕ್ಸ್​ ಆಫೀಸ್​ನಲ್ಲಿ ಹೆಚ್ಚು ಕಲೆಕ್ಷನ್​ ಮಾಡಿತ್ತು. ಇದೀಗ 'ತಾಂಡೇಲ್'ನಲ್ಲಿ ಈ ಜೋಡಿ ತೆರೆ ಹಂಚಿಕೊಳ್ಳಲಿದ್ದಾರೆ.

'ಕಾರ್ತಿಕೇಯ 2' ನಂತಹ ಬ್ಲಾಕ್​ ಬಸ್ಟರ್​ ಹಿಟ್​ ಪ್ಯಾನ್​ ಇಂಡಿಯಾ ಸಿನಿಮಾವನ್ನು ನೀಡಿರುವ ಚಂದೂ ಮೊಂಡೇಟಿ ಅವರು ಈ ಸಿನಿಮಾಗೆ ಆ್ಯಕ್ಷನ್​ ಕಟ್​ ಹೇಳಲಿದ್ದಾರೆ. ಈವರೆಗೆ ಚಿತ್ರಕ್ಕೆ NC23 ಎಂದು ತಾತ್ಕಾಲಿಕ ಟೈಟಲ್​ ಇಡಲಾಗಿತ್ತು. ನವೆಂಬರ್​ 23ರಂದು ನಾಗ ಚೈತನ್ಯ ಹುಟ್ಟುಹಬ್ಬದಂದು 'ತಾಂಡೇಲ್' ಎಂದು ಶೀರ್ಷಿಕೆ ಇಡಲಾಯಿತು. ತೆಲುಗಿನ ಖ್ಯಾತ ನಿರ್ಮಾಪಕ ಅಲ್ಲು ಅರವಿಂದ್​ ಈ ಸಿನಿಮಾವನ್ನು ಪ್ರಸ್ತುತಪಡಿಸಲಿದ್ದಾರೆ. ಬನ್ನಿ ವಾಸ್ ಗೀತಾ ಆರ್ಟ್ಸ್​ ಬ್ಯಾನರ್​ ಅಡಿ ಚಿತ್ರವನ್ನು ನಿರ್ಮಾಣ ಮಾಡುತ್ತಿದ್ದಾರೆ. ರಾಷ್ಟ್ರ ಪ್ರಶಸ್ತಿ ವಿಜೇತ ಟಾಲಿವುಡ್ ಸಂಗೀತ ನಿರ್ದೇಶಕ ದೇವಿ ಶ್ರೀ ಪ್ರಸಾದ್ ಈ ಚಿತ್ರಕ್ಕೆ ಸಂಗೀತ ಸಂಯೋಜನೆ ಮಾಡುತ್ತಿದ್ದಾರೆ.

ನಾಗ ಚೈತನ್ಯ ಮತ್ತು ಚಂದು ಮೊಂಡೇಟಿ ಕಾಂಬೋದಲ್ಲಿ ಮೂಡಿ ಬರುತ್ತಿರುವ ಮೂರನೇ ಸಿನಿಮಾ ಇದಾಗಿದೆ. ಇದಕ್ಕೂ ಮುನ್ನ 'ಪ್ರೇಮಂ' ಮತ್ತು 'ಸವ್ಯಸಾಚಿ' ಚಿತ್ರಗಳು ತೆರೆ ಕಂಡಿದ್ದವು. ಅದರಲ್ಲಿ 'ಪ್ರೇಮಂ' ಬ್ಲಾಕ್​ಬಸ್ಟರ್​ ಆಗುವುದರ ಜೊತೆಗೆ 'ಸವ್ಯಸಾಚಿ' ಮಿಶ್ರ ಪ್ರತಿಕ್ರಿಯೆಯನ್ನು ಪಡೆದುಕೊಂಡಿತು. 'ತಾಂಡೇಲ್​' ಮೀನುಗಾರರ ಜೀವನವನ್ನು ಆಧರಿಸಿದ ನೈಜ ಘಟನಾಧಾರಿತ ಚಿತ್ರ. ಚಿತ್ರದಲ್ಲಿ ನಾಗ ಚೈತನ್ಯ ಹೊಸ ಲುಕ್​ನಲ್ಲಿ ಕಾಣಿಸಿಕೊಳ್ಳಲಿದ್ದಾರೆ. ಅದಕ್ಕೆ ತಕ್ಕಂತೆ ತಮ್ಮನ್ನು ಬದಲಾಯಿಸಿಕೊಳ್ಳುತ್ತಿದ್ದಾರೆ. ಗಡ್ಡ, ಕೂದಲು ಬಿಟ್ಟಿದ್ದಾರೆ. ಒಟ್ಟಿನಲ್ಲಿ ಈ ಸಿನಿಮಾ ಮೇಲೆ ಅಭಿಮಾನಿಗಳಿಗೆ ನಿರೀಕ್ಷೆ ಹೆಚ್ಚಿದೆ.

ಇದನ್ನೂ ಓದಿ: ಯೂಟ್ಯೂಬ್​ ಚಾನೆಲ್​ ಪ್ರಾರಂಭಿಸಿದ ನಟ ನಾಗ ಚೈತನ್ಯ; ಮೊದಲ ವಿಡಿಯೋದಲ್ಲೇನಿದೆ?

ETV Bharat Logo

Copyright © 2024 Ushodaya Enterprises Pvt. Ltd., All Rights Reserved.