ETV Bharat / entertainment

ಇಂದಿನಿಂದ ತುಳುಭಾಷೆಯಲ್ಲಿ 'ಕಾಂತಾರ' ಪ್ರದರ್ಶನ: ರಿಷಬ್ ಶೆಟ್ಟಿ ಹೇಳಿದ್ದೇನು?

author img

By

Published : Dec 2, 2022, 10:09 AM IST

ಈಗಾಗಲೇ ಬಹು ಭಾಷೆಯಲ್ಲಿ ತೆರೆಕಂಡು 50ಕ್ಕೂ ಹೆಚ್ಚು ದಿನಗಳನ್ನು ಪೂರೈಸಿ 400 ಕೋಟಿ ರೂ.ಗೂ ಅಧಿಕ ಗಳಿಕೆ ಮಾಡಿದ ಕನ್ನಡ ಸಿನಿಮಾ 'ಕಾಂತಾರ' ಇಂದು ತುಳುವಿನಲ್ಲೂ ಬಿಡುಗಡೆಯಾಗಿದೆ.

Etv Bharat
ಪ್ಯಾನ್​ ಕರ್ನಾಟಕವಾಗಿ ತೆರೆ ಕಂಡ ಕಾಂತಾರ

ಕರಾವಳಿ ಜನರ ಶ್ರೇಷ್ಠ ನಂಬಿಕೆ ಭೂತಾರಾಧನೆಯನ್ನೇ ಕಥೆಯಾಗಿಸಿ 'ಕಾಂತಾರ' ಸಿನಿಮಾ ಮಾಡಿದ ನಟ, ನಿರ್ದೇಶಕ ರಿಷಬ್​ ಶೆಟ್ಟಿ ಈಗ ಕಡಲ ತೀರದ ಬಹುಜನರ ಭಾಷೆ ತುಳುವಿನಲ್ಲಿಯೂ ಚಿತ್ರ ತೆರೆಗೆ ತಂದಿದ್ದಾರೆ. ಈ ಮೂಲಕ ರಿಷಬ್​ ಶೆಟ್ಟಿ ಅವರ ಮೊದಲ ತುಳು ಸಿನಿಮಾ ಕೂಡಾ ಇದಾಗಿದೆ.

ಅಂದಾಜು 400 ಕೋಟಿ ರೂ ಗಳಿಸಿ ದೇಶ-ವಿದೇಶದಲ್ಲೂ ಕಾಂತಾರ ಸಂಚಲನ ಸೃಷ್ಟಿಸಿದೆ. ಸ್ಥಳೀಯ ವಸ್ತು, ವಿಷಯಾಧರಿಸಿ​ ಚಿತ್ರ ಮಾಡಿದರೆ ಜನರು ಮೆಚ್ಚಿಕೊಳ್ಳುತ್ತಾರೆ ಎಂಬ ನಂಬಿಕೆ ಹುಟ್ಟಿದೆ. ಈ ಹಿನ್ನೆಲೆಯಲ್ಲಿ ಕೊರಗಜ್ಜ, ಕರಗ ಹೀಗೆ ದೇಸಿ ಆಚರಣೆಗಳ ಮೇಲೆ ಸಿನಿಮಾ ನಿರ್ಮಾಣಕ್ಕೂ ಕಾಂತಾರ ದೊಡ್ಡ ಪ್ರೇರಣೆ ನೀಡಿದೆ.

ಎಲ್ಲೆಲ್ಲಿ ತುಳು ಕಾಂತಾರ ನೋಡಬಹುದು?: ದಕ್ಷಿಣ ಕನ್ನಡ, ಉಡುಪಿ, ಉತ್ತರ ಕನ್ನಡ, ಬೆಂಗಳೂರು, ಮೈಸೂರು ಮತ್ತು ಚಿಕ್ಕಮಗಳೂರಿನ ಥಿಯೇಟರುಗಳಲ್ಲಿ ತುಳು ಕಾಂತಾರ ಸಿನಿಮಾ ಪ್ರದರ್ಶನ ಕಾಣುತ್ತಿದೆ.

ಓಟಿಟಿಯಲ್ಲಿ ಕಾಂತಾರ ಬಿಡುಗಡೆಯಾದರೂ ಥಿಯೇಟರ್​ ಕ್ರೇಜ್​ ಹಾಗೆಯೇ ಇದೆ. ಬಿಡುಗಡೆಯಾದ ಎಲ್ಲಾ ಭಾಷೆಗಳಲ್ಲೂ ಐವತ್ತು ದಿನಗಳನ್ನು ಪೂರೈಸಿ ಮುನ್ನುಗ್ಗುತ್ತಿದೆ. ಕನ್ನಡದಲ್ಲಿ ಬಿಡುಗಡೆ ಮಾಡಿದಾಗ ತುಳುನಾಡಿನವರು ತಮ್ಮ ಭಾಷೆಯಲ್ಲೂ ಸಿನಿಮಾ ಮಾಡಿ ಎಂದು ಬೇಡಿಕೆ ಇಟ್ಟಿದ್ದರು. ಹೀಗಾಗಿ ತುಳುವಿನಲ್ಲೂ ಸಿನಿಮಾ ಬಿಡುಗಡೆ ಮಾಡಿದ್ದೇವೆ ಎಂದು ರಿಷಬ್​ ಹೇಳಿದ್ದಾರೆ.

ಚಿತ್ರವನ್ನು ದೈವಾರಾಧಕರು, ದೈವ ನರ್ತಕರು, ದೈವಕ್ಕೆ ಸೇವೆ ನೀಡಿರುವ ಕುಟುಂಬದವರಿಗೆ ಹಾಗೂ ಪುನೀತ್​ ರಾಜ್​ಕುಮಾರ್​ ಅವರಿಗೆ ಅರ್ಪಿಸುತ್ತಿದ್ದೇವೆ. ಸಿನಿಮಾ ನೋಡಿ, ಬೇರೆ ಬೇರೆ ರೀತಿ ವಿಡಿಯೋ ಅಥವಾ ಅಣಕು ಪ್ರದರ್ಶನ ಮಾಡಿ, ದೈವಾರಾಧಕರು ಹಾಗೂ ಭಕ್ತರ ನಂಬಿಕೆಗೆ ಧಕ್ಕೆ ತರುವ ಕೆಲಸ ಮಾಡಬಾರದೆಂದು ಇದೇ ಸಂದರ್ಭದಲ್ಲಿ ಅವರು ಮನವಿ ಮಾಡಿದ್ದಾರೆ.

  • ದೈವದ ಆಶೀರ್ವಾದ, ಅಭಿಮಾನಿಗಳ ಹಾರೈಕೆಯಿಂದ ಅಭೂತಪೂರ್ವ ಯಶಸ್ಸು ಕಂಡಿರುವ ದಂತಕಥೆ, ಕಾಂತಾರದ ತುಳು ಅವತರಣಿಕೆ ಡಿಸೆಂಬರ್‌ 02, 2022ರಂದು ನಿಮ್ಮ ಹತ್ತಿರದ ಚಿತ್ರಮಂದಿರಗಳಲ್ಲಿ ಬಿಡುಗಡೆಯಾಗಲಿದೆ.

    ತುಳುನಾಡ ಆಚರಣೆ, ನಂಬಿಕೆಗೆ ಧಕ್ಕೆ ಬಾರದಂತೆ ಈ ಸಿನಿಮಾವನ್ನು ಮಾಡಿದ್ದೇವೆ. ನಿಮ್ಮೆಲ್ಲರ ಬೆಂಬಲಕ್ಕೆ ಹೊಂಬಾಳೆ ಚಿತ್ರತಂಡ ಆಭಾರಿಯಾಗಿದೆ. pic.twitter.com/Gtl4RZjI9I

    — Hombale Films (@hombalefilms) December 1, 2022 " class="align-text-top noRightClick twitterSection" data=" ">

'ಇದು ದೈವ ಕೊಟ್ಟ ಗೆಲುವು': ದೈವ ಹೆಚ್ಚಾ ಸಿನಿಮಾ ಹೆಚ್ಚಾ ಎಂದು ಕೇಳಿದವರಿದ್ದಾರೆ. ಅವರಿಗೆ ನಾನು ಹೇಳುವುದು ಒಂದೇ ದೈವವೇ ಹೆಚ್ಚು. ನಾನು ಈ ಗೆಲುವನ್ನು ದೈವವೇ ಕೊಟ್ಟಿದೆ ಎಂದು ನಂಬಿಕೊಂಡವನು. ಹೀಗಾಗಿ ದೇವರ ಅಣಕು ಮಾಡಿ ಆರಾಧಕರಿಗೆ ನೋವುಂಟುಮಾಡಬೇಡಿ ಅನ್ನೋದು ರಿಷಬ್ ಶೆಟ್ಟಿ ಮನವಿ.

ಇದನ್ನೂ ಓದಿ: 'ಕನ್ನಡ ಚಿತ್ರರಂಗವೇ ನನ್ನ ಕರ್ಮಭೂಮಿ' - ರಿಷಬ್ ಶೆಟ್ಟಿ

ಕರಾವಳಿ ಜನರ ಶ್ರೇಷ್ಠ ನಂಬಿಕೆ ಭೂತಾರಾಧನೆಯನ್ನೇ ಕಥೆಯಾಗಿಸಿ 'ಕಾಂತಾರ' ಸಿನಿಮಾ ಮಾಡಿದ ನಟ, ನಿರ್ದೇಶಕ ರಿಷಬ್​ ಶೆಟ್ಟಿ ಈಗ ಕಡಲ ತೀರದ ಬಹುಜನರ ಭಾಷೆ ತುಳುವಿನಲ್ಲಿಯೂ ಚಿತ್ರ ತೆರೆಗೆ ತಂದಿದ್ದಾರೆ. ಈ ಮೂಲಕ ರಿಷಬ್​ ಶೆಟ್ಟಿ ಅವರ ಮೊದಲ ತುಳು ಸಿನಿಮಾ ಕೂಡಾ ಇದಾಗಿದೆ.

ಅಂದಾಜು 400 ಕೋಟಿ ರೂ ಗಳಿಸಿ ದೇಶ-ವಿದೇಶದಲ್ಲೂ ಕಾಂತಾರ ಸಂಚಲನ ಸೃಷ್ಟಿಸಿದೆ. ಸ್ಥಳೀಯ ವಸ್ತು, ವಿಷಯಾಧರಿಸಿ​ ಚಿತ್ರ ಮಾಡಿದರೆ ಜನರು ಮೆಚ್ಚಿಕೊಳ್ಳುತ್ತಾರೆ ಎಂಬ ನಂಬಿಕೆ ಹುಟ್ಟಿದೆ. ಈ ಹಿನ್ನೆಲೆಯಲ್ಲಿ ಕೊರಗಜ್ಜ, ಕರಗ ಹೀಗೆ ದೇಸಿ ಆಚರಣೆಗಳ ಮೇಲೆ ಸಿನಿಮಾ ನಿರ್ಮಾಣಕ್ಕೂ ಕಾಂತಾರ ದೊಡ್ಡ ಪ್ರೇರಣೆ ನೀಡಿದೆ.

ಎಲ್ಲೆಲ್ಲಿ ತುಳು ಕಾಂತಾರ ನೋಡಬಹುದು?: ದಕ್ಷಿಣ ಕನ್ನಡ, ಉಡುಪಿ, ಉತ್ತರ ಕನ್ನಡ, ಬೆಂಗಳೂರು, ಮೈಸೂರು ಮತ್ತು ಚಿಕ್ಕಮಗಳೂರಿನ ಥಿಯೇಟರುಗಳಲ್ಲಿ ತುಳು ಕಾಂತಾರ ಸಿನಿಮಾ ಪ್ರದರ್ಶನ ಕಾಣುತ್ತಿದೆ.

ಓಟಿಟಿಯಲ್ಲಿ ಕಾಂತಾರ ಬಿಡುಗಡೆಯಾದರೂ ಥಿಯೇಟರ್​ ಕ್ರೇಜ್​ ಹಾಗೆಯೇ ಇದೆ. ಬಿಡುಗಡೆಯಾದ ಎಲ್ಲಾ ಭಾಷೆಗಳಲ್ಲೂ ಐವತ್ತು ದಿನಗಳನ್ನು ಪೂರೈಸಿ ಮುನ್ನುಗ್ಗುತ್ತಿದೆ. ಕನ್ನಡದಲ್ಲಿ ಬಿಡುಗಡೆ ಮಾಡಿದಾಗ ತುಳುನಾಡಿನವರು ತಮ್ಮ ಭಾಷೆಯಲ್ಲೂ ಸಿನಿಮಾ ಮಾಡಿ ಎಂದು ಬೇಡಿಕೆ ಇಟ್ಟಿದ್ದರು. ಹೀಗಾಗಿ ತುಳುವಿನಲ್ಲೂ ಸಿನಿಮಾ ಬಿಡುಗಡೆ ಮಾಡಿದ್ದೇವೆ ಎಂದು ರಿಷಬ್​ ಹೇಳಿದ್ದಾರೆ.

ಚಿತ್ರವನ್ನು ದೈವಾರಾಧಕರು, ದೈವ ನರ್ತಕರು, ದೈವಕ್ಕೆ ಸೇವೆ ನೀಡಿರುವ ಕುಟುಂಬದವರಿಗೆ ಹಾಗೂ ಪುನೀತ್​ ರಾಜ್​ಕುಮಾರ್​ ಅವರಿಗೆ ಅರ್ಪಿಸುತ್ತಿದ್ದೇವೆ. ಸಿನಿಮಾ ನೋಡಿ, ಬೇರೆ ಬೇರೆ ರೀತಿ ವಿಡಿಯೋ ಅಥವಾ ಅಣಕು ಪ್ರದರ್ಶನ ಮಾಡಿ, ದೈವಾರಾಧಕರು ಹಾಗೂ ಭಕ್ತರ ನಂಬಿಕೆಗೆ ಧಕ್ಕೆ ತರುವ ಕೆಲಸ ಮಾಡಬಾರದೆಂದು ಇದೇ ಸಂದರ್ಭದಲ್ಲಿ ಅವರು ಮನವಿ ಮಾಡಿದ್ದಾರೆ.

  • ದೈವದ ಆಶೀರ್ವಾದ, ಅಭಿಮಾನಿಗಳ ಹಾರೈಕೆಯಿಂದ ಅಭೂತಪೂರ್ವ ಯಶಸ್ಸು ಕಂಡಿರುವ ದಂತಕಥೆ, ಕಾಂತಾರದ ತುಳು ಅವತರಣಿಕೆ ಡಿಸೆಂಬರ್‌ 02, 2022ರಂದು ನಿಮ್ಮ ಹತ್ತಿರದ ಚಿತ್ರಮಂದಿರಗಳಲ್ಲಿ ಬಿಡುಗಡೆಯಾಗಲಿದೆ.

    ತುಳುನಾಡ ಆಚರಣೆ, ನಂಬಿಕೆಗೆ ಧಕ್ಕೆ ಬಾರದಂತೆ ಈ ಸಿನಿಮಾವನ್ನು ಮಾಡಿದ್ದೇವೆ. ನಿಮ್ಮೆಲ್ಲರ ಬೆಂಬಲಕ್ಕೆ ಹೊಂಬಾಳೆ ಚಿತ್ರತಂಡ ಆಭಾರಿಯಾಗಿದೆ. pic.twitter.com/Gtl4RZjI9I

    — Hombale Films (@hombalefilms) December 1, 2022 " class="align-text-top noRightClick twitterSection" data=" ">

'ಇದು ದೈವ ಕೊಟ್ಟ ಗೆಲುವು': ದೈವ ಹೆಚ್ಚಾ ಸಿನಿಮಾ ಹೆಚ್ಚಾ ಎಂದು ಕೇಳಿದವರಿದ್ದಾರೆ. ಅವರಿಗೆ ನಾನು ಹೇಳುವುದು ಒಂದೇ ದೈವವೇ ಹೆಚ್ಚು. ನಾನು ಈ ಗೆಲುವನ್ನು ದೈವವೇ ಕೊಟ್ಟಿದೆ ಎಂದು ನಂಬಿಕೊಂಡವನು. ಹೀಗಾಗಿ ದೇವರ ಅಣಕು ಮಾಡಿ ಆರಾಧಕರಿಗೆ ನೋವುಂಟುಮಾಡಬೇಡಿ ಅನ್ನೋದು ರಿಷಬ್ ಶೆಟ್ಟಿ ಮನವಿ.

ಇದನ್ನೂ ಓದಿ: 'ಕನ್ನಡ ಚಿತ್ರರಂಗವೇ ನನ್ನ ಕರ್ಮಭೂಮಿ' - ರಿಷಬ್ ಶೆಟ್ಟಿ

ETV Bharat Logo

Copyright © 2024 Ushodaya Enterprises Pvt. Ltd., All Rights Reserved.