ETV Bharat / entertainment

ವೀಕೆಂಡ್​ ಮನರಂಜನೆಗೆ ಬರ್ತಿದೆ ಮತ್ತೆರಡು ರಿಯಾಲಿಟಿ ಶೋಗಳು..!​

author img

By

Published : May 5, 2023, 6:22 PM IST

ನಾಳೆಯಿಂದ ಕನ್ನಡಿಗರನ್ನು ಮನರಂಜಿಸಲು ಡ್ಯಾನ್ಸ್​ ಕರ್ನಾಟಕ ಡ್ಯಾನ್ಸ್​ ಸೀಸನ್​ 7 ಮತ್ತು ಛೋಟಾ ಚಾಂಪಿಯನ್ ರಿಯಾಲಿಟಿ ಶೋಗಳು ಪ್ರಾರಂಭಗೊಳ್ಳಲಿದೆ.

show
ಡ್ಯಾನ್ಸ್​ ಕರ್ನಾಟಕ ಡ್ಯಾನ್ಸ್​ ಸೀಸನ್​ 7 ಮತ್ತು ಛೋಟಾ ಚಾಂಪಿಯನ್

ಜೀ ಕನ್ನಡ ವಾಹಿನಿ ಪ್ರೇಕ್ಷಕರಿಗೆ ಮನರಂಜನೆ ನೀಡುವುದರಲ್ಲಿ ನಂ 1 ಸ್ಥಾನದಲ್ಲಿದೆ. ವಾರದ ಐದು ದಿನ ಧಾರಾವಾಹಿ ಮನರಂಜನೆಯಾದರೆ ಉಳಿದೆರಡು ದಿನ ರಿಯಾಲಿಟಿ ಶೋಗಳು ಜನರ ಮನ ಗೆಲ್ಲುತ್ತವೆ. ಈಗಾಗಲೇ ಪಾರು, ಹಿಟ್ಲರ್​ ಕಲ್ಯಾಣ, ಪುಟ್ಟಕ್ಕನ ಮಕ್ಕಳು, ಗಟ್ಟಿಮೇಳ, ಶ್ರೀರಸ್ತು ಶುಭಮಸ್ತು, ಸತ್ಯ, ಭೂಮಿಗೆ ಬಂದ ಭಗವಂತ, ಜೊತೆ ಜೊತೆಯಲಿ ಧಾರಾವಾಹಿ ಸೂಪರ್​ ಹಿಟ್​ ಆಗಿವೆ.

ವೀಕೆಂಡ್​ ದಿನಗಳಲ್ಲಿ ಇಷ್ಟು ದಿನ ಸರಿಗಮಪ ಲಿಟಲ್​ ಚಾಂಪ್ಸ್​ ಮತ್ತು ಸೂಪರ್​ ಕ್ವೀನ್​ ರಿಯಾಲಿಟಿ ಶೋ ಮನರಂಜನೆ ನೀಡುತ್ತಿದ್ದವು. ಈ ಎರಡು ಕಾರ್ಯಕ್ರಮಗಳು ಎರಡು ವಾರದ ಹಿಂದೆಯಷ್ಟೇ ಮುಕ್ತಾಯಗೊಂಡಿದೆ. ಬಳಿಕ ಕನ್ನಡದ ಜನಪ್ರಿಯ ನಟ ರಮೇಶ್​ ಅರವಿಂದ್​ ನಡೆಸಿಕೊಡುವ ವೀಕೆಂಡ್​ ವಿತ್​ ರಮೇಶ್​ ಸೀಸನ್​ 5 ಪ್ರಾರಂಭಗೊಂಡಿದೆ. ಸಿನಿಮಾ ಸೇರಿದಂತೆ ವಿವಿಧ ಕ್ಷೇತ್ರದ ಸಾಧಕರನ್ನು ಕರೆತಂದು ಕೆಂಪು ಕುರ್ಚಿಯಲ್ಲಿ ಕೂರಿಸಿ ಅವರ ಜೀವನಗಾಥೆಯನ್ನು ಜನತೆಗೆ ತಲುಪಿಸುವ ಕೆಲಸ ಆಗುತ್ತಿದೆ.

ಈಗಾಗಲೇ 9 ಸಾಧಕರ ಕಥೆ ಈ ಕಾರ್ಯಕ್ರಮದಲ್ಲಿ ಅನಾವರಣಗೊಂಡಿದೆ. ಸ್ಯಾಂಡಲ್​​ವುಡ್​ ಮೋಹಕ ತಾರೆ ರಮ್ಯಾ (ನಟಿ) ಪ್ರಭುದೇವ (ನಟ, ನೃತ್ಯ ನಿರ್ದೇಶಕ). ಡಾ. ಸಿ.ಎನ್​ ಮಂಜುನಾಥ್ (ಜಯದೇವ ಸಂಸ್ಥೆಯ ನಿರ್ದೇಶಕ), ದತ್ತಣ್ಣ (ಹಿರಿಯ ಕಲಾವಿದ), ಡಾಲಿ ಧನಂಜಯ್ (ಬಹುಬೇಡಿಕೆ ನಟ​​), ಅವಿನಾಶ್ (ಹಿರಿಯ ನಟ)​, ಮಂಡ್ಯ ರಮೇಶ್ (ಹಿರಿಯ ನಟ), ಸಿಹಿಕಹಿ ಚಂದ್ರು (ನಟ, ನಿರೂಪಕ), ಡಾ. ಗುರುರಾಜ ಕರಜಗಿ (ಶಿಕ್ಷಣ ತಜ್ಞ) ಆಗಮಿಸಿದ್ದರು. ಈ ವಾರ ನೆನಪಿರಲಿ ಪ್ರೇಮ್ (ನಟ)​ ಸಾಧಕರ ಕುರ್ಚಿಯನ್ನು ಅಲಂಕರಿಸಲಿದ್ದಾರೆ.

ಇದನ್ನೂ ಓದಿ: ರಂಗೇರಿದ ‌ಚುನಾವಣಾ ಕಣ: ಮಂಕಾದ ಕನ್ನಡ ಚಿತ್ರರಂಗ, ತೆರೆಕಾಣದ ಸಿನಿಮಾಗಳು

ಇದು ಮಾತ್ರವಲ್ಲದೇ ಜನರಿಗೆ ಇನ್ನಷ್ಟು ಮನರಂಜನೆ ನೀಡಲು ಜೀ ಕನ್ನಡ ವಾಹಿನಿ ವಾರಾಂತ್ಯದಲ್ಲಿ ಮತ್ತೆರಡು ರಿಯಾಲಿಟಿ ಶೋಗಳನ್ನು ನಾಳೆಯಿಂದ ಪ್ರಾರಂಭಿಸುತ್ತಿದೆ. ಡ್ಯಾನ್ಸ್​ ಕರ್ನಾಟಕ ಡ್ಯಾನ್ಸ್​ ಸೀಸನ್​ 7 ಮತ್ತು ಛೋಟಾ ಚಾಂಪಿಯನ್ ಕಾರ್ಯಕ್ರಮ ಮೇ 6 ರಿಂದ ಶುರುವಾಗಲಿದೆ. ಈ ರಿಯಾಲಿಟಿ ಶೋಗಾಗಿ ಕಾಯುತ್ತಿದ್ದ ಜನರು ಫುಲ್​ ಖುಷಿಯಲ್ಲಿದ್ದಾರೆ.

ಡ್ಯಾನ್ಸ್​ ಕರ್ನಾಟಕ ಡ್ಯಾನ್ಸ್​ ಸೀಸನ್​ 7: ಜೀ ಕನ್ನಡ ವಾಹಿನಿಯ ಡ್ಯಾನ್ಸ್​ ಕರ್ನಾಟಕ ಡ್ಯಾನ್ಸ್​ ಕಾರ್ಯಕ್ರಮ ಈಗಾಗಲೇ ಕನ್ನಡಿಗರ ಮನ ಗೆದ್ದಿದೆ. 6 ಸೀಸನ್​ಗಳನ್ನು ಪೂರೈಸಿರುವ ಫೇಮಸ್​ ರಿಯಾಲಿಟಿ ಶೋ ಇದೀಗ ಮತ್ತೆ ನಿಮ್ಮನ್ನು ಕುಣಿಸಲು ಬರುತ್ತಿದೆ. ಶನಿವಾರ ಮತ್ತು ಭಾನುವಾರ ರಾತ್ರಿ 7.30 ರಿಂದ ಶೋ ಪ್ರಸಾರವಾಗಲಿದೆ. ಕಾರ್ಯಕ್ರಮದ ತೀರ್ಪುಗಾರರಾಗಿ ಕರುನಾಡ ಚಕ್ರವರ್ತಿ ಡಾ.ಶಿವ ರಾಜ್​ಕುಮಾರ್​, ಡ್ಯಾನ್ಸ್​ ಮಾಸ್ಟರ್​ ಚಿನ್ನಿ ಪ್ರಕಾಶ್​, ಕ್ರೇಜಿ ಕ್ವೀನ್​ ರಕ್ಷಿತಾ, ಖ್ಯಾತ ಸಂಗೀತ ನಿರ್ದೇಶಕ ಅರ್ಜುನ್​ ಜನ್ಯ ಇದ್ದಾರೆ. ನಿರೂಪಣೆಯನ್ನು ಅನುಶ್ರೀ ಮಾಡಲಿದ್ದಾರೆ.

ಛೋಟಾ ಚಾಂಪಿಯನ್: ಪುಣಾಣಿಗಳ ಲೋಕ ಛೋಟಾ ಚಾಂಪಿಯನ್​ ಕೂಡ ನಾಳೆಯಿಂದ ನಿಮ್ಮನ್ನು ರಂಜಿಸಲಿದೆ. 6 ವರ್ಷದೊಳಗಿನ ಪುಟಾಣಿ ಮಕ್ಕಳು ಈ ಕಾರ್ಯಕ್ರಮದ ಮೂಲಕ ಪ್ರೇಕ್ಷಕರಿಗೆ ಕಚಗುಳಿ ನೀಡಲಿದ್ದಾರೆ. ಶನಿವಾರ ಮತ್ತು ಭಾನುವಾರ ಸಂಜೆ 6 ರಿಂದ 7.30 ರ ತನಕ ಕಾರ್ಯಕ್ರಮ ಪ್ರಸಾರವಾಗಲಿದೆ. ಈ ಶೋನ ತೀರ್ಪುಗಾರರಾಗಿ ಡಿಂಪಲ್​ ಕ್ವೀನ್​ ರಚಿತಾ ರಾಮ್​ ಮತ್ತು ಚಿನ್ನಾರಿ ಮುತ್ತ ವಿಜಯ ರಾಘವೇಂದ್ರ ಇರಲಿದ್ದಾರೆ. ನಿರೂಪಣೆಯನ್ನು ಕುರಿ ಪ್ರತಾಪ್​ ಮತ್ತು ಶ್ವೇತಾ ಚೆಂಗಪ್ಪ ನಿರ್ವಹಿಸಲಿದ್ದಾರೆ.

ಇದನ್ನೂ ಓದಿ: ‘ದಿ ಕೇರಳ ಸ್ಟೋರಿ’ ಬಿಡುಗಡೆ ತಡೆಗೆ ಕೇರಳ ಹೈಕೋರ್ಟ್​ ನಕಾರ

ಜೀ ಕನ್ನಡ ವಾಹಿನಿ ಪ್ರೇಕ್ಷಕರಿಗೆ ಮನರಂಜನೆ ನೀಡುವುದರಲ್ಲಿ ನಂ 1 ಸ್ಥಾನದಲ್ಲಿದೆ. ವಾರದ ಐದು ದಿನ ಧಾರಾವಾಹಿ ಮನರಂಜನೆಯಾದರೆ ಉಳಿದೆರಡು ದಿನ ರಿಯಾಲಿಟಿ ಶೋಗಳು ಜನರ ಮನ ಗೆಲ್ಲುತ್ತವೆ. ಈಗಾಗಲೇ ಪಾರು, ಹಿಟ್ಲರ್​ ಕಲ್ಯಾಣ, ಪುಟ್ಟಕ್ಕನ ಮಕ್ಕಳು, ಗಟ್ಟಿಮೇಳ, ಶ್ರೀರಸ್ತು ಶುಭಮಸ್ತು, ಸತ್ಯ, ಭೂಮಿಗೆ ಬಂದ ಭಗವಂತ, ಜೊತೆ ಜೊತೆಯಲಿ ಧಾರಾವಾಹಿ ಸೂಪರ್​ ಹಿಟ್​ ಆಗಿವೆ.

ವೀಕೆಂಡ್​ ದಿನಗಳಲ್ಲಿ ಇಷ್ಟು ದಿನ ಸರಿಗಮಪ ಲಿಟಲ್​ ಚಾಂಪ್ಸ್​ ಮತ್ತು ಸೂಪರ್​ ಕ್ವೀನ್​ ರಿಯಾಲಿಟಿ ಶೋ ಮನರಂಜನೆ ನೀಡುತ್ತಿದ್ದವು. ಈ ಎರಡು ಕಾರ್ಯಕ್ರಮಗಳು ಎರಡು ವಾರದ ಹಿಂದೆಯಷ್ಟೇ ಮುಕ್ತಾಯಗೊಂಡಿದೆ. ಬಳಿಕ ಕನ್ನಡದ ಜನಪ್ರಿಯ ನಟ ರಮೇಶ್​ ಅರವಿಂದ್​ ನಡೆಸಿಕೊಡುವ ವೀಕೆಂಡ್​ ವಿತ್​ ರಮೇಶ್​ ಸೀಸನ್​ 5 ಪ್ರಾರಂಭಗೊಂಡಿದೆ. ಸಿನಿಮಾ ಸೇರಿದಂತೆ ವಿವಿಧ ಕ್ಷೇತ್ರದ ಸಾಧಕರನ್ನು ಕರೆತಂದು ಕೆಂಪು ಕುರ್ಚಿಯಲ್ಲಿ ಕೂರಿಸಿ ಅವರ ಜೀವನಗಾಥೆಯನ್ನು ಜನತೆಗೆ ತಲುಪಿಸುವ ಕೆಲಸ ಆಗುತ್ತಿದೆ.

ಈಗಾಗಲೇ 9 ಸಾಧಕರ ಕಥೆ ಈ ಕಾರ್ಯಕ್ರಮದಲ್ಲಿ ಅನಾವರಣಗೊಂಡಿದೆ. ಸ್ಯಾಂಡಲ್​​ವುಡ್​ ಮೋಹಕ ತಾರೆ ರಮ್ಯಾ (ನಟಿ) ಪ್ರಭುದೇವ (ನಟ, ನೃತ್ಯ ನಿರ್ದೇಶಕ). ಡಾ. ಸಿ.ಎನ್​ ಮಂಜುನಾಥ್ (ಜಯದೇವ ಸಂಸ್ಥೆಯ ನಿರ್ದೇಶಕ), ದತ್ತಣ್ಣ (ಹಿರಿಯ ಕಲಾವಿದ), ಡಾಲಿ ಧನಂಜಯ್ (ಬಹುಬೇಡಿಕೆ ನಟ​​), ಅವಿನಾಶ್ (ಹಿರಿಯ ನಟ)​, ಮಂಡ್ಯ ರಮೇಶ್ (ಹಿರಿಯ ನಟ), ಸಿಹಿಕಹಿ ಚಂದ್ರು (ನಟ, ನಿರೂಪಕ), ಡಾ. ಗುರುರಾಜ ಕರಜಗಿ (ಶಿಕ್ಷಣ ತಜ್ಞ) ಆಗಮಿಸಿದ್ದರು. ಈ ವಾರ ನೆನಪಿರಲಿ ಪ್ರೇಮ್ (ನಟ)​ ಸಾಧಕರ ಕುರ್ಚಿಯನ್ನು ಅಲಂಕರಿಸಲಿದ್ದಾರೆ.

ಇದನ್ನೂ ಓದಿ: ರಂಗೇರಿದ ‌ಚುನಾವಣಾ ಕಣ: ಮಂಕಾದ ಕನ್ನಡ ಚಿತ್ರರಂಗ, ತೆರೆಕಾಣದ ಸಿನಿಮಾಗಳು

ಇದು ಮಾತ್ರವಲ್ಲದೇ ಜನರಿಗೆ ಇನ್ನಷ್ಟು ಮನರಂಜನೆ ನೀಡಲು ಜೀ ಕನ್ನಡ ವಾಹಿನಿ ವಾರಾಂತ್ಯದಲ್ಲಿ ಮತ್ತೆರಡು ರಿಯಾಲಿಟಿ ಶೋಗಳನ್ನು ನಾಳೆಯಿಂದ ಪ್ರಾರಂಭಿಸುತ್ತಿದೆ. ಡ್ಯಾನ್ಸ್​ ಕರ್ನಾಟಕ ಡ್ಯಾನ್ಸ್​ ಸೀಸನ್​ 7 ಮತ್ತು ಛೋಟಾ ಚಾಂಪಿಯನ್ ಕಾರ್ಯಕ್ರಮ ಮೇ 6 ರಿಂದ ಶುರುವಾಗಲಿದೆ. ಈ ರಿಯಾಲಿಟಿ ಶೋಗಾಗಿ ಕಾಯುತ್ತಿದ್ದ ಜನರು ಫುಲ್​ ಖುಷಿಯಲ್ಲಿದ್ದಾರೆ.

ಡ್ಯಾನ್ಸ್​ ಕರ್ನಾಟಕ ಡ್ಯಾನ್ಸ್​ ಸೀಸನ್​ 7: ಜೀ ಕನ್ನಡ ವಾಹಿನಿಯ ಡ್ಯಾನ್ಸ್​ ಕರ್ನಾಟಕ ಡ್ಯಾನ್ಸ್​ ಕಾರ್ಯಕ್ರಮ ಈಗಾಗಲೇ ಕನ್ನಡಿಗರ ಮನ ಗೆದ್ದಿದೆ. 6 ಸೀಸನ್​ಗಳನ್ನು ಪೂರೈಸಿರುವ ಫೇಮಸ್​ ರಿಯಾಲಿಟಿ ಶೋ ಇದೀಗ ಮತ್ತೆ ನಿಮ್ಮನ್ನು ಕುಣಿಸಲು ಬರುತ್ತಿದೆ. ಶನಿವಾರ ಮತ್ತು ಭಾನುವಾರ ರಾತ್ರಿ 7.30 ರಿಂದ ಶೋ ಪ್ರಸಾರವಾಗಲಿದೆ. ಕಾರ್ಯಕ್ರಮದ ತೀರ್ಪುಗಾರರಾಗಿ ಕರುನಾಡ ಚಕ್ರವರ್ತಿ ಡಾ.ಶಿವ ರಾಜ್​ಕುಮಾರ್​, ಡ್ಯಾನ್ಸ್​ ಮಾಸ್ಟರ್​ ಚಿನ್ನಿ ಪ್ರಕಾಶ್​, ಕ್ರೇಜಿ ಕ್ವೀನ್​ ರಕ್ಷಿತಾ, ಖ್ಯಾತ ಸಂಗೀತ ನಿರ್ದೇಶಕ ಅರ್ಜುನ್​ ಜನ್ಯ ಇದ್ದಾರೆ. ನಿರೂಪಣೆಯನ್ನು ಅನುಶ್ರೀ ಮಾಡಲಿದ್ದಾರೆ.

ಛೋಟಾ ಚಾಂಪಿಯನ್: ಪುಣಾಣಿಗಳ ಲೋಕ ಛೋಟಾ ಚಾಂಪಿಯನ್​ ಕೂಡ ನಾಳೆಯಿಂದ ನಿಮ್ಮನ್ನು ರಂಜಿಸಲಿದೆ. 6 ವರ್ಷದೊಳಗಿನ ಪುಟಾಣಿ ಮಕ್ಕಳು ಈ ಕಾರ್ಯಕ್ರಮದ ಮೂಲಕ ಪ್ರೇಕ್ಷಕರಿಗೆ ಕಚಗುಳಿ ನೀಡಲಿದ್ದಾರೆ. ಶನಿವಾರ ಮತ್ತು ಭಾನುವಾರ ಸಂಜೆ 6 ರಿಂದ 7.30 ರ ತನಕ ಕಾರ್ಯಕ್ರಮ ಪ್ರಸಾರವಾಗಲಿದೆ. ಈ ಶೋನ ತೀರ್ಪುಗಾರರಾಗಿ ಡಿಂಪಲ್​ ಕ್ವೀನ್​ ರಚಿತಾ ರಾಮ್​ ಮತ್ತು ಚಿನ್ನಾರಿ ಮುತ್ತ ವಿಜಯ ರಾಘವೇಂದ್ರ ಇರಲಿದ್ದಾರೆ. ನಿರೂಪಣೆಯನ್ನು ಕುರಿ ಪ್ರತಾಪ್​ ಮತ್ತು ಶ್ವೇತಾ ಚೆಂಗಪ್ಪ ನಿರ್ವಹಿಸಲಿದ್ದಾರೆ.

ಇದನ್ನೂ ಓದಿ: ‘ದಿ ಕೇರಳ ಸ್ಟೋರಿ’ ಬಿಡುಗಡೆ ತಡೆಗೆ ಕೇರಳ ಹೈಕೋರ್ಟ್​ ನಕಾರ

ETV Bharat Logo

Copyright © 2024 Ushodaya Enterprises Pvt. Ltd., All Rights Reserved.