ETV Bharat / entertainment

'ಟ್ರೆಂಡಿಂಗಲ್​ ಬರ್ಬೇಕಂದ್ರೆ ಏನ್​ ಮಾಡ್ಬೇಕು': ಉತ್ತರಕ್ಕಾಗಿ 'ಸೂತ್ರಧಾರಿ' ಹೊಸ ಹಾಡು ಕೇಳಿ.. - ಈಟಿವಿ ಭಾರತ ಕನ್ನಡ

Sutradhari movie song released: 'ಸೂತ್ರಧಾರಿ' ಚಿತ್ರಕ್ಕಾಗಿ ವಿಜಯ್​ ಈಶ್ವರ್​ ಬರೆದಿರುವ 'ಟ್ರೆಂಡಿಂಗಲ್​ ಬರ್ಬೇಕಂದ್ರೆ ಏನ್​ ಮಾಡ್ಬೇಕು' ಎಂಬ ಹಾಡು ಇತ್ತೀಚೆಗೆ ಬಿಡುಗಡೆಯಾಗಿದೆ.

sutradhari
ಸೂತ್ರಧಾರಿ
author img

By ETV Bharat Karnataka Team

Published : Aug 28, 2023, 12:59 PM IST

ಕನ್ನಡ ಚಿತ್ರರಂಗದಲ್ಲಿ ಶೀರ್ಷಿಕೆಯಿಂದಲೇ ಒಂದಲ್ಲ ಒಂದು ವಿಚಾರವಾಗಿ ಟಾಕ್​ ಆಗುತ್ತಿರುವ ಚಿತ್ರ ಎಂದರೆ ಅದು 'ಸೂತ್ರಧಾರಿ'. ಗಾಯಕ, ಸಂಗೀತ ನಿರ್ದೇಶಕ ಚಂದನ್ ಶೆಟ್ಟಿ ನಾಯಕನಾಗಿ ನಟಿಸುತ್ತಿರುವ ಬಹುನಿರೀಕ್ಷಿತ ಚಿತ್ರವಿದು. ಈಗಾಗಲೇ ಈ ಚಿತ್ರದ ಡ್ಯಾಶ್ ಸಾಂಗ್ ಬಿಡುಗಡೆಯಾಗಿದ್ದು, ಹದಿನೇಳು ಮಿಲಿಯನ್​ ವೀಕ್ಷಣೆಯಾಗುವ ಮೂಲಕ ರಾಜ್ಯದ ಜನರ ಮನ ಗೆದ್ದಿದೆ. ಇದೀಗ 'ಸೂತ್ರಧಾರಿ' ಚಿತ್ರಕ್ಕಾಗಿ ವಿಜಯ್​ ಈಶ್ವರ್​ ಬರೆದಿರುವ 'ಟ್ರೆಂಡಿಂಗಲ್​ ಬರ್ಬೇಕಂದ್ರೆ ಏನ್​ ಮಾಡ್ಬೇಕು' ಎಂಬ ಹಾಡು ಇತ್ತೀಚೆಗೆ ಬಿಡುಗಡೆಯಾಗಿದೆ.

sutradhari
ಚಂದನ್ ಶೆಟ್ಟಿ ಮತ್ತು ಅಪೂರ್ವ

ಚಂದನ್​ ಶೆಟ್ಟಿ ಈ ಹಾಡಿಗೆ ಸಂಗೀತ ನೀಡುವುದರ ಜೊತೆಗೆ ಧ್ವನಿಯಾಗಿದ್ದಾರೆ. ಮೋಹನ್​ ಮಾಸ್ಟರ್​ ನೃತ್ಯ ನಿರ್ದೇಶಿಸಿರುವ ಈ ಹಾಡಿಗೆ ಚಂದನ್​ ಶೆಟ್ಟಿ ಹಾಗೂ ಅಪೂರ್ವ ಹೆಜ್ಜೆ ಹಾಕಿದ್ದಾರೆ. 'ಟ್ರೆಂಡಿಂಗಲ್​ ಬರ್ಬೇಕಂದ್ರೆ ಏನ್​ ಮಾಡ್ಬೇಕು' ಈ ಹಾಡು ಬಿಡುಗಡೆ ಸಮಾರಂಭ ಇತ್ತೀಚೆಗೆ ನಡೆಯಿತು. ಇಡೀ ಚಿತ್ರತಂಡ ಈ ಕಾರ್ಯಕ್ರಮದಲ್ಲಿ ಭಾಗಿಯಾಗಿತ್ತು.

sutradhari
'ಸೂತ್ರಧಾರಿ' ಚಿತ್ರತಂಡ

ಈ ವೇಳೆ, ಮೊದಲು ಮಾತು ಶುರು ಮಾಡಿದ ನಟ ಹಾಗೂ ಸಂಗೀತ ನಿರ್ದೇಶಕ ಚಂದನ್ ಶೆಟ್ಟಿ, "ಸೂತ್ರಧಾರಿ ಸಿನಿಮಾದ 'ಡ್ಯಾಶ್' ಹಾಡು ಭರ್ಜರಿ ಹಿಟ್ ಆಗಿರುವ ಹಿನ್ನೆಲೆಯಲ್ಲಿ ಅದನ್ನು ಮೀರಿಸುವ ಮತ್ತೊಂದು ಹಾಡು ಕೊಡುವ ಜವಾಬ್ದಾರಿ ನನಗಿತ್ತು. ಇದೀಗ ವಿಜಯ್ ಈಶ್ವರ್ ಬರೆದಿರುವ 'ಟ್ರೆಂಡಿಂಗಲ್​ ಬರ್ಬೇಕಂದ್ರೆ ಏನ್​ ಮಾಡ್ಬೇಕು' ಹಾಡನ್ನು ಬಿಡುಗಡೆ ಮಾಡಿದ್ದೇವೆ. ಈ ಹಾಡು ಕೂಡ ನೋಡುಗರ, ಕೇಳುಗರ ಮನ ಗೆಲ್ಲುತ್ತದೆ" ಎಂದು ವಿಶ್ವಾಸ ವ್ಯಕ್ತಪಡಿಸಿದರು.

sutradhari
'ಸೂತ್ರಧಾರಿ' ಚಿತ್ರತಂಡ

ಇದನ್ನೂ ಓದಿ: 'ಸೂತ್ರಧಾರಿ' ಜಪ ಮಾಡುತ್ತಿರುವ ಚಂದನ್ ಶೆಟ್ಟಿ: ಶೀಘ್ರದಲ್ಲೇ ಟ್ರೇಲರ್ ಬಿಡುಗಡೆ

ಬಳಿಕ ನಿರ್ಮಾಪಕ ನವರಸನ್​ ಮಾತನಾಡಿ, "ಕಳೆದ ಡಿಸೆಂಬರ್​ ತಿಂಗಳಲ್ಲಿ ಬಿಡುಗಡೆಯಾದ ನಮ್ಮ ಚಿತ್ರದ 'ಡ್ಯಾಶ್' ಸಾಂಗ್ ಭರ್ಜರಿ ಯಶಸ್ಸು ಕಂಡಿದೆ. ಈಗ ಈ ಹಾಡು ಬಿಡುಗಡೆಯಾಗಿದೆ. ಹಾಡು ಬಿಡುಗಡೆಯಾದ ಕೆಲವೇ ಗಂಟೆಗಳಲ್ಲಿ ಒಂದು ಮಿಲಿಯನ್ ವೀಕ್ಷಣೆಯಾಗಿದೆ. ಇಂತಹ ಜನಪ್ರಿಯ ಹಾಡು ಬರೆದುಕೊಟ್ಟ ವಿಜಯ್​ ಈಶ್ವರ್​ ಅವರಿಗೆ, ಸಂಗೀತ ನೀಡಿ, ಹಾಡಿ ಅಭಿನಯಿಸಿರುವ ಚಂದನ್​ ಶೆಟ್ಟಿ ಸೇರಿದಂತೆ ಇಡೀ ಚಿತ್ರತಂಡಕ್ಕೆ ಧನ್ಯವಾದ ತಿಳಿಸುತ್ತೇನೆ. ಇನ್ನೊಂದು ಹಾಡು ಮುಗಿದರೆ, ಚಿತ್ರೀಕರಣ ಮುಕ್ತಾಯವಾಗುತ್ತದೆ. ಸದ್ಯದಲ್ಲೇ ಚಿತ್ರವನ್ನು ತೆರೆಗೆ ತರುತ್ತೇನೆ" ಎಂದರು.

ಈ ಕಾರ್ಯಕ್ರಮಕ್ಕೆ ಮುಖ್ಯ ಅತಿಥಿಗಳಾಗಿ ಆಗಮಿಸಿದ್ದ ನಿವೇದಿತಾ ಚಂದನ್​ ಶೆಟ್ಟಿ, ನಿರ್ಮಾಪಕರಾದ ಸಂಜಯ್​ ಗೌಡ, ಚೇತನ್​ ಗೌಡ, ರಾಜೇಶ್​, ಗೋವಿಂದರಾಜು ಮತ್ತು ನಿರ್ದೇಶಕ ಮಹೇಶ್​ ಕುಮಾರ್​ 'ಸೂತ್ರಧಾರಿ' ಚಿತ್ರ ಯಶಸ್ವಿಯಾಗಲಿ ಎಂದು ಶುಭ ಹಾರೈಸಿದರು. ಈ ಚಿತ್ರವನ್ನು ಕಿರಣ್​ ಕುಮಾರ್​ ನಿರ್ದೇಶನ ಮಾಡಿದ್ದಾರೆ. ಚಂದನ್​ ಶೆಟ್ಟಿ ಜೊತೆ ನಾಯಕಿ ಅಪೂರ್ವ, ನಟರಾದ ಪ್ರಶಾಂತ್​ ನಟನ, ಗಿರೀಶ್​, ಗಣೇಶ್​, ನಾರಾಯಣ್​ ಮುಂತಾದವರು ಅಭಿನಯಿಸಿದ್ದಾರೆ.

ಇದನ್ನೂ ಓದಿ: 'ವಿದ್ಯಾರ್ಥಿ ವಿದ್ಯಾರ್ಥಿನಿಯರೇ'.. ಕಾಲೇಜು ಕೇಂದ್ರಿತ ಕಥೆಯಲ್ಲಿ ಚಂದನ್ ಶೆಟ್ಟಿ ನಟನೆ - ಶೀರ್ಷಿಕೆ ಅನಾವರಣಗೊಳಿಸಿದ ವಿದ್ಯಾರ್ಥಿಗಳು

ಕನ್ನಡ ಚಿತ್ರರಂಗದಲ್ಲಿ ಶೀರ್ಷಿಕೆಯಿಂದಲೇ ಒಂದಲ್ಲ ಒಂದು ವಿಚಾರವಾಗಿ ಟಾಕ್​ ಆಗುತ್ತಿರುವ ಚಿತ್ರ ಎಂದರೆ ಅದು 'ಸೂತ್ರಧಾರಿ'. ಗಾಯಕ, ಸಂಗೀತ ನಿರ್ದೇಶಕ ಚಂದನ್ ಶೆಟ್ಟಿ ನಾಯಕನಾಗಿ ನಟಿಸುತ್ತಿರುವ ಬಹುನಿರೀಕ್ಷಿತ ಚಿತ್ರವಿದು. ಈಗಾಗಲೇ ಈ ಚಿತ್ರದ ಡ್ಯಾಶ್ ಸಾಂಗ್ ಬಿಡುಗಡೆಯಾಗಿದ್ದು, ಹದಿನೇಳು ಮಿಲಿಯನ್​ ವೀಕ್ಷಣೆಯಾಗುವ ಮೂಲಕ ರಾಜ್ಯದ ಜನರ ಮನ ಗೆದ್ದಿದೆ. ಇದೀಗ 'ಸೂತ್ರಧಾರಿ' ಚಿತ್ರಕ್ಕಾಗಿ ವಿಜಯ್​ ಈಶ್ವರ್​ ಬರೆದಿರುವ 'ಟ್ರೆಂಡಿಂಗಲ್​ ಬರ್ಬೇಕಂದ್ರೆ ಏನ್​ ಮಾಡ್ಬೇಕು' ಎಂಬ ಹಾಡು ಇತ್ತೀಚೆಗೆ ಬಿಡುಗಡೆಯಾಗಿದೆ.

sutradhari
ಚಂದನ್ ಶೆಟ್ಟಿ ಮತ್ತು ಅಪೂರ್ವ

ಚಂದನ್​ ಶೆಟ್ಟಿ ಈ ಹಾಡಿಗೆ ಸಂಗೀತ ನೀಡುವುದರ ಜೊತೆಗೆ ಧ್ವನಿಯಾಗಿದ್ದಾರೆ. ಮೋಹನ್​ ಮಾಸ್ಟರ್​ ನೃತ್ಯ ನಿರ್ದೇಶಿಸಿರುವ ಈ ಹಾಡಿಗೆ ಚಂದನ್​ ಶೆಟ್ಟಿ ಹಾಗೂ ಅಪೂರ್ವ ಹೆಜ್ಜೆ ಹಾಕಿದ್ದಾರೆ. 'ಟ್ರೆಂಡಿಂಗಲ್​ ಬರ್ಬೇಕಂದ್ರೆ ಏನ್​ ಮಾಡ್ಬೇಕು' ಈ ಹಾಡು ಬಿಡುಗಡೆ ಸಮಾರಂಭ ಇತ್ತೀಚೆಗೆ ನಡೆಯಿತು. ಇಡೀ ಚಿತ್ರತಂಡ ಈ ಕಾರ್ಯಕ್ರಮದಲ್ಲಿ ಭಾಗಿಯಾಗಿತ್ತು.

sutradhari
'ಸೂತ್ರಧಾರಿ' ಚಿತ್ರತಂಡ

ಈ ವೇಳೆ, ಮೊದಲು ಮಾತು ಶುರು ಮಾಡಿದ ನಟ ಹಾಗೂ ಸಂಗೀತ ನಿರ್ದೇಶಕ ಚಂದನ್ ಶೆಟ್ಟಿ, "ಸೂತ್ರಧಾರಿ ಸಿನಿಮಾದ 'ಡ್ಯಾಶ್' ಹಾಡು ಭರ್ಜರಿ ಹಿಟ್ ಆಗಿರುವ ಹಿನ್ನೆಲೆಯಲ್ಲಿ ಅದನ್ನು ಮೀರಿಸುವ ಮತ್ತೊಂದು ಹಾಡು ಕೊಡುವ ಜವಾಬ್ದಾರಿ ನನಗಿತ್ತು. ಇದೀಗ ವಿಜಯ್ ಈಶ್ವರ್ ಬರೆದಿರುವ 'ಟ್ರೆಂಡಿಂಗಲ್​ ಬರ್ಬೇಕಂದ್ರೆ ಏನ್​ ಮಾಡ್ಬೇಕು' ಹಾಡನ್ನು ಬಿಡುಗಡೆ ಮಾಡಿದ್ದೇವೆ. ಈ ಹಾಡು ಕೂಡ ನೋಡುಗರ, ಕೇಳುಗರ ಮನ ಗೆಲ್ಲುತ್ತದೆ" ಎಂದು ವಿಶ್ವಾಸ ವ್ಯಕ್ತಪಡಿಸಿದರು.

sutradhari
'ಸೂತ್ರಧಾರಿ' ಚಿತ್ರತಂಡ

ಇದನ್ನೂ ಓದಿ: 'ಸೂತ್ರಧಾರಿ' ಜಪ ಮಾಡುತ್ತಿರುವ ಚಂದನ್ ಶೆಟ್ಟಿ: ಶೀಘ್ರದಲ್ಲೇ ಟ್ರೇಲರ್ ಬಿಡುಗಡೆ

ಬಳಿಕ ನಿರ್ಮಾಪಕ ನವರಸನ್​ ಮಾತನಾಡಿ, "ಕಳೆದ ಡಿಸೆಂಬರ್​ ತಿಂಗಳಲ್ಲಿ ಬಿಡುಗಡೆಯಾದ ನಮ್ಮ ಚಿತ್ರದ 'ಡ್ಯಾಶ್' ಸಾಂಗ್ ಭರ್ಜರಿ ಯಶಸ್ಸು ಕಂಡಿದೆ. ಈಗ ಈ ಹಾಡು ಬಿಡುಗಡೆಯಾಗಿದೆ. ಹಾಡು ಬಿಡುಗಡೆಯಾದ ಕೆಲವೇ ಗಂಟೆಗಳಲ್ಲಿ ಒಂದು ಮಿಲಿಯನ್ ವೀಕ್ಷಣೆಯಾಗಿದೆ. ಇಂತಹ ಜನಪ್ರಿಯ ಹಾಡು ಬರೆದುಕೊಟ್ಟ ವಿಜಯ್​ ಈಶ್ವರ್​ ಅವರಿಗೆ, ಸಂಗೀತ ನೀಡಿ, ಹಾಡಿ ಅಭಿನಯಿಸಿರುವ ಚಂದನ್​ ಶೆಟ್ಟಿ ಸೇರಿದಂತೆ ಇಡೀ ಚಿತ್ರತಂಡಕ್ಕೆ ಧನ್ಯವಾದ ತಿಳಿಸುತ್ತೇನೆ. ಇನ್ನೊಂದು ಹಾಡು ಮುಗಿದರೆ, ಚಿತ್ರೀಕರಣ ಮುಕ್ತಾಯವಾಗುತ್ತದೆ. ಸದ್ಯದಲ್ಲೇ ಚಿತ್ರವನ್ನು ತೆರೆಗೆ ತರುತ್ತೇನೆ" ಎಂದರು.

ಈ ಕಾರ್ಯಕ್ರಮಕ್ಕೆ ಮುಖ್ಯ ಅತಿಥಿಗಳಾಗಿ ಆಗಮಿಸಿದ್ದ ನಿವೇದಿತಾ ಚಂದನ್​ ಶೆಟ್ಟಿ, ನಿರ್ಮಾಪಕರಾದ ಸಂಜಯ್​ ಗೌಡ, ಚೇತನ್​ ಗೌಡ, ರಾಜೇಶ್​, ಗೋವಿಂದರಾಜು ಮತ್ತು ನಿರ್ದೇಶಕ ಮಹೇಶ್​ ಕುಮಾರ್​ 'ಸೂತ್ರಧಾರಿ' ಚಿತ್ರ ಯಶಸ್ವಿಯಾಗಲಿ ಎಂದು ಶುಭ ಹಾರೈಸಿದರು. ಈ ಚಿತ್ರವನ್ನು ಕಿರಣ್​ ಕುಮಾರ್​ ನಿರ್ದೇಶನ ಮಾಡಿದ್ದಾರೆ. ಚಂದನ್​ ಶೆಟ್ಟಿ ಜೊತೆ ನಾಯಕಿ ಅಪೂರ್ವ, ನಟರಾದ ಪ್ರಶಾಂತ್​ ನಟನ, ಗಿರೀಶ್​, ಗಣೇಶ್​, ನಾರಾಯಣ್​ ಮುಂತಾದವರು ಅಭಿನಯಿಸಿದ್ದಾರೆ.

ಇದನ್ನೂ ಓದಿ: 'ವಿದ್ಯಾರ್ಥಿ ವಿದ್ಯಾರ್ಥಿನಿಯರೇ'.. ಕಾಲೇಜು ಕೇಂದ್ರಿತ ಕಥೆಯಲ್ಲಿ ಚಂದನ್ ಶೆಟ್ಟಿ ನಟನೆ - ಶೀರ್ಷಿಕೆ ಅನಾವರಣಗೊಳಿಸಿದ ವಿದ್ಯಾರ್ಥಿಗಳು

ETV Bharat Logo

Copyright © 2025 Ushodaya Enterprises Pvt. Ltd., All Rights Reserved.