ETV Bharat / entertainment

ಬಿಗ್‌ಬಾಸ್‌ ಕನ್ನಡ: ಇತಿಹಾಸ ಸೃಷ್ಟಿಸಲು ಜೈಲಿಗೆ ಹೋದ ತುಕಾಲಿ!

author img

By ETV Bharat Karnataka Team

Published : Jan 12, 2024, 7:15 PM IST

ಬಿಗ್‌ಬಾಸ್‌ ಮನೆಯ ಹಲವು ಸದಸ್ಯರು ಕಳಪೆಯನ್ನು ನಾನು ತುಕಾಲಿ ಸಂತೋಷ್‌ ಅವರಿಗೆ ಕೊಡುತ್ತೇನೆ ಎಂದು ವೋಟ್​ ಮಾಡಿದ್ದರಿಂದ ತುಕಾಲಿ ಸಂತೋಷ್‌ ನನ್ನು ಜೈಲಿಗೆ ಹಾಕಲಾಗಿದೆ.

biggboss-kannada-tukali-santhosh-entered-jail-as-worst-performer-of-the-week
ಬಿಗ್‌ಬಾಸ್‌ ಕನ್ನಡ: ಇತಿಹಾಸ ಸೃಷ್ಟಿಸಲು ಜೈಲಿಗೆ ಹೋದ ತುಕಾಲಿ!

ಬಿಗ್‌ಬಾಸ್‌ ಕನ್ನಡದ 10ನೇ ಆವೃತ್ತಿಯ ಫಿನಾಲೆಗೆ ಕ್ಷಣಗಣನೆಯಲ್ಲಿ ಆರಂಭವಾಗಿದೆ. ಈ ನಡುವೆ ಆಟ ರೋಚಕ ತಿರುವು ಪಡೆದಿದೆ. ಎಂದಿನಂತೆ ಈ ವಾರವೂ ವಾರದ ಉತ್ತಮ ಮತ್ತು ಕಳಪೆ ಪಟ್ಟಕ್ಕಾಗಿ ವೋಟಿಂಗ್‌ ಕೂಡ ನಡೆದಿದೆ. ‘ಕಳಪೆ ಅನ್ನು ನಾನು ತುಕಾಲಿ ಸಂತೋಷ್‌ ಅವರಿಗೆ ಕೊಡುತ್ತೇನೆ’ ಎಂದು ಪ್ರತಾಪ್ ಹೇಳಿದ್ದಾರೆ. ಅವರ ಹಾಗೆಯೇ ಮನೆಯ ಹಲವು ಸದಸ್ಯರು ತುಕಾಲಿ ಅವರ ಹೆಸರನ್ನೇ ಹೇಳಿರುವುದರಿಂದ ತುಕಾಲಿ ಅವರಿಗೆ ಜೈಲುಡುಗೆಯ ಉಡುಗೊರೆ ಸಿಕ್ಕಿದೆ. ಆದರೆ, ವೋಟಿಂಗ್ ನಂತರದಲ್ಲಿ ವರ್ತೂರು ಮತ್ತು ಪ್ರತಾಪ್ ಅವರ ನಡುವೆ ಮಾತಿನ ಚಕಮಕಿ ನಡೆದಿದೆ. ‘ಇಂಥ ವೇದಿಕೆ ಸಿಕ್ಕಾಗ ಪ್ರೂವ್ ಮಾಡಿಕೊಳ್ಳಬೇಕು’ ಎಂದಿರುವ ವರ್ತೂರು, ‘ನಿನ್ನನ್ನು ಯಾರೂ ನಂಬುವುದಿಲ್ಲ’ ಎಂದೂ ಪ್ರತಾಪ್‌ಗೆ ತಿವಿದಿದ್ದಾರೆ.

ಅಷ್ಟೇ ಅಲ್ಲ, ‘ಇಲ್ಲಿಂದ ಹೊರಗೆ ಹೋದ ಮೇಲೆ ಇತಿಹಾಸವೇ ಸೃಷ್ಟಿಯಾಗೋದು’ ಎಂದೂ ವರ್ತೂರು ಹೇಳಿದ್ದಾರೆ. ಹಾಗಾದರೆ, ವರ್ತೂರು ಈ ಮಾತು ಹೇಳಿದ್ದು ಬಿಗ್‌ಬಾಸ್ ಶೋ ಬಗ್ಗೆಯಾ ಅಥವಾ ಜೈಲುಪಾಲಾದ ತುಕಾಲಿ ಸಂತೋಷ್ ಬಗ್ಗೆಯಾ? ಎಂಬ ಪ್ರಶ್ನೆ ಉದ್ಭವಿಸಿದೆ. ಈ ನಡುವೆ, ಈ ವಾರದ ಉತ್ತಮ ಪಟ್ಟ ಯಾರಿಗೆ ಸಿಕ್ಕಿದೆ? ಯಾರು ಫಿನಾಲೆಗೆ ಟಿಕೆಟ್ ಪಡೆದುಕೊಂಡಿದ್ದಾರೆ? ಮುಂದಿನ ವಾರದ ಕ್ಯಾಪ್ಟನ್ ಯಾರಾಗಿರುತ್ತಾರೆ? ಈ ಎಲ್ಲ ಪ್ರಶ್ನೆಗಳಿಗೆ ಇವತ್ತಿನ ಬಿಗ್‌ಬಾಸ್‌ ಎಪಿಸೋಡ್‌ನಲ್ಲಿ ಉತ್ತರ ಸಿಗಲಿದೆ.

biggboss kannada tukali santhosh entered jail as worst performer of the week
ಬಿಗ್‌ಬಾಸ್‌ ಸ್ಪರ್ಧಿ ಪ್ರತಾಪ್

ಆರೋಗ್ಯದಲ್ಲಿ​ ಏರುಪೇರು, ಚಿಕಿತ್ಸೆ ಪಡೆದು ಪುನಃ ಬಿಗ್‌ಬಾಸ್‌ ಮನೆ ಮರಳಿದ್ದ ಪ್ರತಾಪ್: ಇತ್ತೀಚಿಗೆ, ಬಿಗ್‌ಬಾಸ್‌ ಮನೆಯ ಸದಸ್ಯ ಪ್ರತಾಪ್ ಆರೋಗ್ಯದಲ್ಲಿ​ ಏರುಪೇರಾಗಿತ್ತು. ಅವರನ್ನು ಆಸ್ಪತ್ರೆಗೆ ದಾಖಲು ಮಾಡಲಾಗಿತ್ತು. ಆರೋಗ್ಯ ಸಮಸ್ಯೆ ಕಂಡು ಬಂದಿದ್ದರಿಂದ ಆರ್ ಆರ್​ ನಗರದ ಖಾಸಗಿ ಆಸ್ಪತ್ರೆಯಲ್ಲಿ ಪ್ರತಾಪ್ ಚಿಕಿತ್ಸೆ ಪಡೆದಿದ್ದರು. ಊಟದಲ್ಲಿ ವ್ಯತ್ಯಾಸ ಆಗಿ ಪ್ರತಾಪ್ ಆಸ್ಪತ್ರೆಗೆ ಸೇರುವಂತಾಗಿತ್ತು. ಚಿಕಿತ್ಸೆ ಬಳಿಕ ಡ್ರೋನ್ ಪ್ರತಾಪ್ ಬಿಗ್ ಬಾಸ್ ಮನೆಗೆ ಪುನಃ ವಾಪಸ್​​ ಆಗಿದ್ದರು.

biggboss kannada tukali santhosh entered jail as worst performer of the week
ಕಳಪೆ ಪಟ್ಟ ಪಡೆದ ತುಕಾಲಿ ಸಂತೋಷ್‌

ದೊಡ್ಮನೆಯಲ್ಲಿ ಉತ್ತಮ ಆಟ ಆಡುತ್ತಿರುವ ಡ್ರೋನ್ ಪ್ರತಾಪ್, ಕರುನಾಡಿನ ಜನಮನ ಗೆದ್ದಿರುವ ಸ್ಪರ್ಧಿಗಳಲ್ಲಿ ಒಬ್ಬರು. ಇತ್ತೀಚೆಗೆ ಅವರ ತಂದೆ ಬಿಗ್‌ಬಾಸ್‌ ಮನೆಗೆ ಹೋಗಿದ್ದಲ್ಲದೇ ಮಗನನ್ನು ಅಪ್ಪಿಕೊಂಡು ಸಾಂತ್ವನ ಹೇಳಿದ್ದರು. ಅವರ ತಾಯಿ ಕೂಡ ಆಗಮಿಸಿದ್ದರು. ಬಿಗ್​ ಬಾಸ್ ಬಹುಭಾಷೆಗಳಲ್ಲಿ ಪ್ರಸಾರ ಆಗುತ್ತದೆ.​ ಕನ್ನಡದಲ್ಲಿ ಅಭಿನಯ ಚಕ್ರವರ್ತಿ ಸುದೀಪ್​​ ನಡೆಸಿಕೊಡುತ್ತಾರೆ. ಈಗಾಗಲೇ 9 ಸೀಸನ್​ಗಳನ್ನು ಯಶಸ್ವಿಯಾಗಿ ನಡೆಸಿಕೊಟ್ಟಿರುವ ತಂಡ, 10ನೇ ಸೀಸನ್​ನ ಫಿನಾಲೆಗೆ ತಯಾರಿ ನಡೆಸುತ್ತಿದೆ.

ಇದನ್ನೂ ಓದಿ: ಕುಟುಂಬದವರಿಂದ ದೂರವಿರಬೇಕಾ ಪ್ರತಾಪ್​​! ತನಿಷಾ-ಕಾರ್ತಿಕ್​​ ನಡುವೆ ಬಿರುಕು?

ಬಿಗ್‌ಬಾಸ್‌ ಕನ್ನಡದ 10ನೇ ಆವೃತ್ತಿಯ ಫಿನಾಲೆಗೆ ಕ್ಷಣಗಣನೆಯಲ್ಲಿ ಆರಂಭವಾಗಿದೆ. ಈ ನಡುವೆ ಆಟ ರೋಚಕ ತಿರುವು ಪಡೆದಿದೆ. ಎಂದಿನಂತೆ ಈ ವಾರವೂ ವಾರದ ಉತ್ತಮ ಮತ್ತು ಕಳಪೆ ಪಟ್ಟಕ್ಕಾಗಿ ವೋಟಿಂಗ್‌ ಕೂಡ ನಡೆದಿದೆ. ‘ಕಳಪೆ ಅನ್ನು ನಾನು ತುಕಾಲಿ ಸಂತೋಷ್‌ ಅವರಿಗೆ ಕೊಡುತ್ತೇನೆ’ ಎಂದು ಪ್ರತಾಪ್ ಹೇಳಿದ್ದಾರೆ. ಅವರ ಹಾಗೆಯೇ ಮನೆಯ ಹಲವು ಸದಸ್ಯರು ತುಕಾಲಿ ಅವರ ಹೆಸರನ್ನೇ ಹೇಳಿರುವುದರಿಂದ ತುಕಾಲಿ ಅವರಿಗೆ ಜೈಲುಡುಗೆಯ ಉಡುಗೊರೆ ಸಿಕ್ಕಿದೆ. ಆದರೆ, ವೋಟಿಂಗ್ ನಂತರದಲ್ಲಿ ವರ್ತೂರು ಮತ್ತು ಪ್ರತಾಪ್ ಅವರ ನಡುವೆ ಮಾತಿನ ಚಕಮಕಿ ನಡೆದಿದೆ. ‘ಇಂಥ ವೇದಿಕೆ ಸಿಕ್ಕಾಗ ಪ್ರೂವ್ ಮಾಡಿಕೊಳ್ಳಬೇಕು’ ಎಂದಿರುವ ವರ್ತೂರು, ‘ನಿನ್ನನ್ನು ಯಾರೂ ನಂಬುವುದಿಲ್ಲ’ ಎಂದೂ ಪ್ರತಾಪ್‌ಗೆ ತಿವಿದಿದ್ದಾರೆ.

ಅಷ್ಟೇ ಅಲ್ಲ, ‘ಇಲ್ಲಿಂದ ಹೊರಗೆ ಹೋದ ಮೇಲೆ ಇತಿಹಾಸವೇ ಸೃಷ್ಟಿಯಾಗೋದು’ ಎಂದೂ ವರ್ತೂರು ಹೇಳಿದ್ದಾರೆ. ಹಾಗಾದರೆ, ವರ್ತೂರು ಈ ಮಾತು ಹೇಳಿದ್ದು ಬಿಗ್‌ಬಾಸ್ ಶೋ ಬಗ್ಗೆಯಾ ಅಥವಾ ಜೈಲುಪಾಲಾದ ತುಕಾಲಿ ಸಂತೋಷ್ ಬಗ್ಗೆಯಾ? ಎಂಬ ಪ್ರಶ್ನೆ ಉದ್ಭವಿಸಿದೆ. ಈ ನಡುವೆ, ಈ ವಾರದ ಉತ್ತಮ ಪಟ್ಟ ಯಾರಿಗೆ ಸಿಕ್ಕಿದೆ? ಯಾರು ಫಿನಾಲೆಗೆ ಟಿಕೆಟ್ ಪಡೆದುಕೊಂಡಿದ್ದಾರೆ? ಮುಂದಿನ ವಾರದ ಕ್ಯಾಪ್ಟನ್ ಯಾರಾಗಿರುತ್ತಾರೆ? ಈ ಎಲ್ಲ ಪ್ರಶ್ನೆಗಳಿಗೆ ಇವತ್ತಿನ ಬಿಗ್‌ಬಾಸ್‌ ಎಪಿಸೋಡ್‌ನಲ್ಲಿ ಉತ್ತರ ಸಿಗಲಿದೆ.

biggboss kannada tukali santhosh entered jail as worst performer of the week
ಬಿಗ್‌ಬಾಸ್‌ ಸ್ಪರ್ಧಿ ಪ್ರತಾಪ್

ಆರೋಗ್ಯದಲ್ಲಿ​ ಏರುಪೇರು, ಚಿಕಿತ್ಸೆ ಪಡೆದು ಪುನಃ ಬಿಗ್‌ಬಾಸ್‌ ಮನೆ ಮರಳಿದ್ದ ಪ್ರತಾಪ್: ಇತ್ತೀಚಿಗೆ, ಬಿಗ್‌ಬಾಸ್‌ ಮನೆಯ ಸದಸ್ಯ ಪ್ರತಾಪ್ ಆರೋಗ್ಯದಲ್ಲಿ​ ಏರುಪೇರಾಗಿತ್ತು. ಅವರನ್ನು ಆಸ್ಪತ್ರೆಗೆ ದಾಖಲು ಮಾಡಲಾಗಿತ್ತು. ಆರೋಗ್ಯ ಸಮಸ್ಯೆ ಕಂಡು ಬಂದಿದ್ದರಿಂದ ಆರ್ ಆರ್​ ನಗರದ ಖಾಸಗಿ ಆಸ್ಪತ್ರೆಯಲ್ಲಿ ಪ್ರತಾಪ್ ಚಿಕಿತ್ಸೆ ಪಡೆದಿದ್ದರು. ಊಟದಲ್ಲಿ ವ್ಯತ್ಯಾಸ ಆಗಿ ಪ್ರತಾಪ್ ಆಸ್ಪತ್ರೆಗೆ ಸೇರುವಂತಾಗಿತ್ತು. ಚಿಕಿತ್ಸೆ ಬಳಿಕ ಡ್ರೋನ್ ಪ್ರತಾಪ್ ಬಿಗ್ ಬಾಸ್ ಮನೆಗೆ ಪುನಃ ವಾಪಸ್​​ ಆಗಿದ್ದರು.

biggboss kannada tukali santhosh entered jail as worst performer of the week
ಕಳಪೆ ಪಟ್ಟ ಪಡೆದ ತುಕಾಲಿ ಸಂತೋಷ್‌

ದೊಡ್ಮನೆಯಲ್ಲಿ ಉತ್ತಮ ಆಟ ಆಡುತ್ತಿರುವ ಡ್ರೋನ್ ಪ್ರತಾಪ್, ಕರುನಾಡಿನ ಜನಮನ ಗೆದ್ದಿರುವ ಸ್ಪರ್ಧಿಗಳಲ್ಲಿ ಒಬ್ಬರು. ಇತ್ತೀಚೆಗೆ ಅವರ ತಂದೆ ಬಿಗ್‌ಬಾಸ್‌ ಮನೆಗೆ ಹೋಗಿದ್ದಲ್ಲದೇ ಮಗನನ್ನು ಅಪ್ಪಿಕೊಂಡು ಸಾಂತ್ವನ ಹೇಳಿದ್ದರು. ಅವರ ತಾಯಿ ಕೂಡ ಆಗಮಿಸಿದ್ದರು. ಬಿಗ್​ ಬಾಸ್ ಬಹುಭಾಷೆಗಳಲ್ಲಿ ಪ್ರಸಾರ ಆಗುತ್ತದೆ.​ ಕನ್ನಡದಲ್ಲಿ ಅಭಿನಯ ಚಕ್ರವರ್ತಿ ಸುದೀಪ್​​ ನಡೆಸಿಕೊಡುತ್ತಾರೆ. ಈಗಾಗಲೇ 9 ಸೀಸನ್​ಗಳನ್ನು ಯಶಸ್ವಿಯಾಗಿ ನಡೆಸಿಕೊಟ್ಟಿರುವ ತಂಡ, 10ನೇ ಸೀಸನ್​ನ ಫಿನಾಲೆಗೆ ತಯಾರಿ ನಡೆಸುತ್ತಿದೆ.

ಇದನ್ನೂ ಓದಿ: ಕುಟುಂಬದವರಿಂದ ದೂರವಿರಬೇಕಾ ಪ್ರತಾಪ್​​! ತನಿಷಾ-ಕಾರ್ತಿಕ್​​ ನಡುವೆ ಬಿರುಕು?

ETV Bharat Logo

Copyright © 2024 Ushodaya Enterprises Pvt. Ltd., All Rights Reserved.