ETV Bharat / entertainment

ಹಿಂದಿ ಭಾಷೆಗೆ ಡಬ್​ ಆಗಲಿದೆ ಬಾಲಯ್ಯ ನಟನೆಯ ಬ್ಲಾಕ್​ಬಸ್ಟರ್​ 'ಭಗವಂತ ಕೇಸರಿ'

Bhagavanth Kesari to be dubbed in Hindi: ನಂದಮೂರಿ ಬಾಲಕೃಷ್ಣ ನಟನೆಯ 'ಭಗವಂತ ಕೇಸರಿ' ಸಿನಿಮಾ ಹಿಂದಿಗೂ ಡಬ್​ ಆಗಲಿದೆ.

author img

By ETV Bharat Karnataka Team

Published : Nov 10, 2023, 4:02 PM IST

Balakrishna starrer Bhagavanth kesari to be dubbed in hindi
ಹಿಂದಿ ಭಾಷೆಗೆ ಡಬ್​ ಆಗಲಿದೆ ಬಾಲಯ್ಯ ನಟನೆಯ ಬ್ಲಾಕ್​ಬಸ್ಟರ್​ 'ಭಗವಂತ ಕೇಸರಿ'

ತೆಲುಗು ಚಿತ್ರರಂಗದ ಖ್ಯಾತ ನಟ ನಂದಮೂರಿ ಬಾಲಕೃಷ್ಣ 'ಭಗವಂತ ಕೇಸರಿ' ಚಿತ್ರದ ಯಶಸ್ಸಿನ ಖುಷಿಯಲ್ಲಿದ್ದಾರೆ. ದಸರಾ ಉಡುಗೊರೆಯಾಗಿ ಮೂಡಿಬಂದ ಈ ಸಿನಿಮಾ ನಿರೀಕ್ಷೆಗೂ ಮೀರಿ ಯಶಸ್ಸು ಕಾಣುತ್ತಿದೆ. ಎಲ್ಲೆಲ್ಲೂ ಬಾಲಯ್ಯ ಹವಾನೇ ಇದೆ. ಸಾಮಾಜಿಕ ಸಂದೇಶದ ಜೊತೆಗೆ ಸಾಹಸ ಅಂಶಗಳಿರುವ ಈ ಚಿತ್ರದಲ್ಲಿ ಶ್ರೀಲೀಲಾ ಮತ್ತು ಕಾಜಲ್​ ತಮ್ಮದೇ ಶೈಲಿಯಲ್ಲಿ ನಟಿಸಿದ್ದು, ಪ್ರೇಕ್ಷಕರಿಂದ ಮೆಚ್ಚುಗೆ ಪಡೆದಿದ್ದಾರೆ.

ಅದರಲ್ಲೂ ಬಾಲಯ್ಯ ಸಿನಿಮಾದಲ್ಲಿ ತೆಲಂಗಾಣ ಆಡುಭಾಷೆಯಲ್ಲಿ ಮಾತನಾಡಿದ್ದಾರೆ. ಯಾವುದೇ ದೋಷವಿಲ್ಲದೇ, ಸರಾಗವಾಗಿ ಮಾತನಾಡಿ ಎಲ್ಲರನ್ನೂ ಬೆರಗುಗೊಳಿಸಿದ್ದಾರೆ. ಇತ್ತೀಚೆಗೆ 'ಭಗವಂತ ಕೇಸರಿ' ಸಿನಿಮಾದ ಸಕ್ಸಸ್​ ಮೀಟ್​ ನಡೆಯಿತು. ಇಡೀ ಚಿತ್ರತಂಡ ಪಾಲ್ಗೊಂಡು ಸದ್ದು ಮಾಡಿತು. ಬಾಲಯ್ಯ ಚಿತ್ರದ ಬಗ್ಗೆ ಇಂಟ್ರಸ್ಟಿಂಗ್​ ವಿಚಾರವನ್ನು ಹಂಚಿಕೊಂಡರು. ಶೀಘ್ರದಲ್ಲೇ ಈ ಸಿನಿಮಾ ಹಿಂದಿಗೆ ಡಬ್​ ಆಗಲಿದೆ ಎಂದು ತಿಳಿಸಿದರು. ಇದನ್ನು ಕೇಳಿದ ಅಭಿಮಾನಿಗಳು ಖುಷಿಯಲ್ಲಿದ್ದಾರೆ. ಬಾಲಯ್ಯ ಅವರ ಧ್ವನಿಯನ್ನು ಹಿಂದಿಯಲ್ಲಿ ಕೇಳಲು ಆಸಕ್ತರಾಗಿದ್ದಾರೆ.

"ನನ್ನ ತಂದೆ ಮತ್ತು ನಾನು ಹೊಸ ಪ್ರಯೋಗಗಳನ್ನು ಮಾಡಲು ಇಷ್ಟಪಡುತ್ತೇವೆ. ಅದಕ್ಕಾಗಿ ನನ್ನ ಪಾತ್ರವನ್ನು ನಾನು ಹಿಂದಿಯಲ್ಲೂ ಡಬ್​ ಮಾಡಿದ್ದೇನೆ. ನಾನು ಹಿಂದಿಗೆ ಡಬ್​ ಮಾಡುತ್ತಿರುವುದು ಇದೇ ಮೊದಲು. ಈ ಚಿತ್ರದ ಮೂಲಕ ನನ್ನ ಹಿಂದಿ ಭಾಷೆಯ ಹಿಡಿತವನ್ನು ನೀವು ಶೀಘ್ರದಲ್ಲೇ ನೋಡುತ್ತೀರಿ. ಈ ಚಿತ್ರ ತೆಲುಗು ಜನರ ಶಕ್ತಿಯನ್ನು ಸಾಬೀತುಪಡಿಸುತ್ತದೆ" ಎಂದು ಬಾಲಕೃಷ್ಣ ಸಕ್ಸಸ್​ ಮೀಟ್​ನಲ್ಲಿ ಹೇಳಿದರು.

ಇದನ್ನೂ ಓದಿ: 'ಭಗವಂತ ಕೇಸರಿ' ರಿಲೀಸ್​​: ಬಾಲಯ್ಯ ನಟನೆಯ ಸಿನಿಮಾ ವಿಮರ್ಶೆ ಇಲ್ಲಿದೆ

ಚಿತ್ರದಲ್ಲಿ ಬಾಲಯ್ಯ ಅವರ ಡೈಲಾಗ್ಸ್, ಆ್ಯಕ್ಷನ್ ಸೀನ್ಸ್, ಎಮೋಷನಲ್ ದೃಶ್ಯಗಳು ಸಿನಿಪ್ರಿಯರ ಮನ ಗೆದ್ದಿವೆ. ಚಿಕ್ಕವಯಸ್ಸಿನಲ್ಲೇ ಗುಡ್ ಟಚ್ ಮತ್ತು ಬ್ಯಾಡ್ ಟಚ್ ಕಲಿಸಿಕೊಡುವ ಸಂದೇಶವನ್ನು ಈ ಸಿನಿಮಾ ಹೊಂದಿದ್ದು, ಫ್ಯಾಮಿಲಿ ಆಡಿಯನ್ಸ್ ಸಿನಿಮಾಗೆ ಕನೆಕ್ಟ್ ಆಗಿದ್ದಾರೆ. ಮುಖ್ಯವಾಗಿ ಬಾಲಯ್ಯ ಮತ್ತು ಶ್ರೀಲೀಲಾ ನಟನೆಗೆ ಫ್ಯಾನ್ಸ್ ಮೆಚ್ಚುಗೆ ಸೂಚಿಸಿದ್ದಾರೆ. ತೆರೆ ಮೇಲೆ ಅಪ್ಪ-ಮಗಳ ಪಾತ್ರಕ್ಕೆ ಜೀವ ತುಂಬಿದ್ದಾರೆ.

ನಿರ್ದೇಶಕ ಅನಿಲ್ ರವಿಪುಡಿ ಆಕ್ಷನ್​ ಕಟ್​ ಹೇಳಿದ್ದಾರೆ. ಚಿತ್ರವನ್ನು ಶೈನ್ ಸ್ಕ್ರೀನ್ಸ್ ಬ್ಯಾನರ್ ಅಡಿಯಲ್ಲಿ ಸಾಹು ಗರಪಾಟಿ ಮತ್ತು ಹರೀಶ್ ಪೆದ್ದಿ ನಿರ್ಮಾಣ ಮಾಡಿದ್ದಾರೆ. ಚಿತ್ರವು ಅಕ್ಟೋಬರ್​ 19ರಂದು ತೆರೆ ಕಂಡಿದೆ. ಈಗಲೂ ತೆಲಂಗಾಣ ರಾಜ್ಯಗಳಲ್ಲಿ ಸಿನಿಮಾ ಓಡುತ್ತಿದೆ. ಪ್ರೇಕ್ಷಕರು ಸಿನಿಮಾವನ್ನು ವೀಕ್ಷಿಸಿ ಮೆಚ್ಚುಗೆ ವ್ಯಕ್ತಪಡಿಸುತ್ತಿದ್ದಾರೆ. ಡಿಸೆಂಬರ್​ ವೇಳೆಗೆ ಓಟಿಟಿಯಲ್ಲಿ 'ಭಗವಂತ ಕೇಸರಿ' ಲಭ್ಯ ಆಗಲಿದೆ ಎಂಬ ಮಾಹಿತಿ ಇದೆ.

ಇದನ್ನೂ ಓದಿ: ಬಾಲಯ್ಯ ನಟನೆಯ 'ಭಗವಂತ ಕೇಸರಿ'ಗೆ ಭರ್ಜರಿ ಗೆಲುವು; ಮೊದಲ ದಿನದ ಕಲೆಕ್ಷನ್​ ಇಷ್ಟಂತೆ!

ತೆಲುಗು ಚಿತ್ರರಂಗದ ಖ್ಯಾತ ನಟ ನಂದಮೂರಿ ಬಾಲಕೃಷ್ಣ 'ಭಗವಂತ ಕೇಸರಿ' ಚಿತ್ರದ ಯಶಸ್ಸಿನ ಖುಷಿಯಲ್ಲಿದ್ದಾರೆ. ದಸರಾ ಉಡುಗೊರೆಯಾಗಿ ಮೂಡಿಬಂದ ಈ ಸಿನಿಮಾ ನಿರೀಕ್ಷೆಗೂ ಮೀರಿ ಯಶಸ್ಸು ಕಾಣುತ್ತಿದೆ. ಎಲ್ಲೆಲ್ಲೂ ಬಾಲಯ್ಯ ಹವಾನೇ ಇದೆ. ಸಾಮಾಜಿಕ ಸಂದೇಶದ ಜೊತೆಗೆ ಸಾಹಸ ಅಂಶಗಳಿರುವ ಈ ಚಿತ್ರದಲ್ಲಿ ಶ್ರೀಲೀಲಾ ಮತ್ತು ಕಾಜಲ್​ ತಮ್ಮದೇ ಶೈಲಿಯಲ್ಲಿ ನಟಿಸಿದ್ದು, ಪ್ರೇಕ್ಷಕರಿಂದ ಮೆಚ್ಚುಗೆ ಪಡೆದಿದ್ದಾರೆ.

ಅದರಲ್ಲೂ ಬಾಲಯ್ಯ ಸಿನಿಮಾದಲ್ಲಿ ತೆಲಂಗಾಣ ಆಡುಭಾಷೆಯಲ್ಲಿ ಮಾತನಾಡಿದ್ದಾರೆ. ಯಾವುದೇ ದೋಷವಿಲ್ಲದೇ, ಸರಾಗವಾಗಿ ಮಾತನಾಡಿ ಎಲ್ಲರನ್ನೂ ಬೆರಗುಗೊಳಿಸಿದ್ದಾರೆ. ಇತ್ತೀಚೆಗೆ 'ಭಗವಂತ ಕೇಸರಿ' ಸಿನಿಮಾದ ಸಕ್ಸಸ್​ ಮೀಟ್​ ನಡೆಯಿತು. ಇಡೀ ಚಿತ್ರತಂಡ ಪಾಲ್ಗೊಂಡು ಸದ್ದು ಮಾಡಿತು. ಬಾಲಯ್ಯ ಚಿತ್ರದ ಬಗ್ಗೆ ಇಂಟ್ರಸ್ಟಿಂಗ್​ ವಿಚಾರವನ್ನು ಹಂಚಿಕೊಂಡರು. ಶೀಘ್ರದಲ್ಲೇ ಈ ಸಿನಿಮಾ ಹಿಂದಿಗೆ ಡಬ್​ ಆಗಲಿದೆ ಎಂದು ತಿಳಿಸಿದರು. ಇದನ್ನು ಕೇಳಿದ ಅಭಿಮಾನಿಗಳು ಖುಷಿಯಲ್ಲಿದ್ದಾರೆ. ಬಾಲಯ್ಯ ಅವರ ಧ್ವನಿಯನ್ನು ಹಿಂದಿಯಲ್ಲಿ ಕೇಳಲು ಆಸಕ್ತರಾಗಿದ್ದಾರೆ.

"ನನ್ನ ತಂದೆ ಮತ್ತು ನಾನು ಹೊಸ ಪ್ರಯೋಗಗಳನ್ನು ಮಾಡಲು ಇಷ್ಟಪಡುತ್ತೇವೆ. ಅದಕ್ಕಾಗಿ ನನ್ನ ಪಾತ್ರವನ್ನು ನಾನು ಹಿಂದಿಯಲ್ಲೂ ಡಬ್​ ಮಾಡಿದ್ದೇನೆ. ನಾನು ಹಿಂದಿಗೆ ಡಬ್​ ಮಾಡುತ್ತಿರುವುದು ಇದೇ ಮೊದಲು. ಈ ಚಿತ್ರದ ಮೂಲಕ ನನ್ನ ಹಿಂದಿ ಭಾಷೆಯ ಹಿಡಿತವನ್ನು ನೀವು ಶೀಘ್ರದಲ್ಲೇ ನೋಡುತ್ತೀರಿ. ಈ ಚಿತ್ರ ತೆಲುಗು ಜನರ ಶಕ್ತಿಯನ್ನು ಸಾಬೀತುಪಡಿಸುತ್ತದೆ" ಎಂದು ಬಾಲಕೃಷ್ಣ ಸಕ್ಸಸ್​ ಮೀಟ್​ನಲ್ಲಿ ಹೇಳಿದರು.

ಇದನ್ನೂ ಓದಿ: 'ಭಗವಂತ ಕೇಸರಿ' ರಿಲೀಸ್​​: ಬಾಲಯ್ಯ ನಟನೆಯ ಸಿನಿಮಾ ವಿಮರ್ಶೆ ಇಲ್ಲಿದೆ

ಚಿತ್ರದಲ್ಲಿ ಬಾಲಯ್ಯ ಅವರ ಡೈಲಾಗ್ಸ್, ಆ್ಯಕ್ಷನ್ ಸೀನ್ಸ್, ಎಮೋಷನಲ್ ದೃಶ್ಯಗಳು ಸಿನಿಪ್ರಿಯರ ಮನ ಗೆದ್ದಿವೆ. ಚಿಕ್ಕವಯಸ್ಸಿನಲ್ಲೇ ಗುಡ್ ಟಚ್ ಮತ್ತು ಬ್ಯಾಡ್ ಟಚ್ ಕಲಿಸಿಕೊಡುವ ಸಂದೇಶವನ್ನು ಈ ಸಿನಿಮಾ ಹೊಂದಿದ್ದು, ಫ್ಯಾಮಿಲಿ ಆಡಿಯನ್ಸ್ ಸಿನಿಮಾಗೆ ಕನೆಕ್ಟ್ ಆಗಿದ್ದಾರೆ. ಮುಖ್ಯವಾಗಿ ಬಾಲಯ್ಯ ಮತ್ತು ಶ್ರೀಲೀಲಾ ನಟನೆಗೆ ಫ್ಯಾನ್ಸ್ ಮೆಚ್ಚುಗೆ ಸೂಚಿಸಿದ್ದಾರೆ. ತೆರೆ ಮೇಲೆ ಅಪ್ಪ-ಮಗಳ ಪಾತ್ರಕ್ಕೆ ಜೀವ ತುಂಬಿದ್ದಾರೆ.

ನಿರ್ದೇಶಕ ಅನಿಲ್ ರವಿಪುಡಿ ಆಕ್ಷನ್​ ಕಟ್​ ಹೇಳಿದ್ದಾರೆ. ಚಿತ್ರವನ್ನು ಶೈನ್ ಸ್ಕ್ರೀನ್ಸ್ ಬ್ಯಾನರ್ ಅಡಿಯಲ್ಲಿ ಸಾಹು ಗರಪಾಟಿ ಮತ್ತು ಹರೀಶ್ ಪೆದ್ದಿ ನಿರ್ಮಾಣ ಮಾಡಿದ್ದಾರೆ. ಚಿತ್ರವು ಅಕ್ಟೋಬರ್​ 19ರಂದು ತೆರೆ ಕಂಡಿದೆ. ಈಗಲೂ ತೆಲಂಗಾಣ ರಾಜ್ಯಗಳಲ್ಲಿ ಸಿನಿಮಾ ಓಡುತ್ತಿದೆ. ಪ್ರೇಕ್ಷಕರು ಸಿನಿಮಾವನ್ನು ವೀಕ್ಷಿಸಿ ಮೆಚ್ಚುಗೆ ವ್ಯಕ್ತಪಡಿಸುತ್ತಿದ್ದಾರೆ. ಡಿಸೆಂಬರ್​ ವೇಳೆಗೆ ಓಟಿಟಿಯಲ್ಲಿ 'ಭಗವಂತ ಕೇಸರಿ' ಲಭ್ಯ ಆಗಲಿದೆ ಎಂಬ ಮಾಹಿತಿ ಇದೆ.

ಇದನ್ನೂ ಓದಿ: ಬಾಲಯ್ಯ ನಟನೆಯ 'ಭಗವಂತ ಕೇಸರಿ'ಗೆ ಭರ್ಜರಿ ಗೆಲುವು; ಮೊದಲ ದಿನದ ಕಲೆಕ್ಷನ್​ ಇಷ್ಟಂತೆ!

ETV Bharat Logo

Copyright © 2024 Ushodaya Enterprises Pvt. Ltd., All Rights Reserved.