ETV Bharat / entertainment

''ಮತ್ತೊಂದು ಕೇರಳ ಸ್ಟೋರಿ'': ಮಸೀದಿಯಲ್ಲಿ ಹಿಂದೂ ವಿವಾಹ, ವಿಡಿಯೋ ಹಂಚಿಕೊಂಡ ಸಂಗೀತ ಮಾಂತ್ರಿಕ​ ರೆಹಮಾನ್

author img

By

Published : May 4, 2023, 12:52 PM IST

Updated : May 4, 2023, 1:18 PM IST

ಮಸೀದಿಯೊಂದರಲ್ಲಿ ಹಿಂದೂ ಸಂಪ್ರದಾಯಗಳೊಂದಿಗೆ ಮದುವೆ ನಡೆದಿದೆ. ಮಾನವೀಯತೆ ಬಗ್ಗೆ ಮಾತನಾಡುತ್ತಾ ಎ.ಆರ್​ ರೆಹಮಾನ್​​ ಈ ವಿಡಿಯೋ ಶೇರ್ ಮಾಡಿದ್ದಾರೆ.

AR Rahman
ಸಂಗೀತ ಮಾಂತ್ರಿಕ​ ರೆಹಮಾನ್

'ದಿ ಕೇರಳ ಸ್ಟೋರಿ' ಸಿನಿಮಾ ವಿರುದ್ಧ ವಿವಾದ ಸೃಷ್ಟಿಯಾಗಿದೆ. ಹಲವೆಡೆ ಆಕ್ರೋಶ ವ್ಯಕ್ತವಾಗುತ್ತಿದೆ. ಸಿನಿಮಾ ಬಿಡುಗಡೆ ಮಾಡದಂತೆ ಹಲವರು ಪಟ್ಟು ಹಿಡಿದಿದ್ದಾರೆ. ಸತ್ಯಾಂಶ ಅನಾವರಣಗೊಳಿಸಲಿರುವ ಸಿನಿಮಾ ತೆರೆ ಕಾಣಲೇಬೇಕೆಂಬ ಹಠ ಮತ್ತೊಂದಿಷ್ಟು ಮಂದಿಯದ್ದು.

ವಿವಾದದ ನಡುವೆಯೇ ಕೇರಳದ ಮಸೀದಿಯೊಂದರಲ್ಲಿ ಹಿಂದೂ ಸಂಪ್ರದಾಯಗಳೊಂದಿಗೆ ನಡೆದಿರುವ ಮದುವೆ ವಿಡಿಯೋ ವೈರಲ್​ ಆಗುತ್ತಿದೆ. ಆಸ್ಕರ್ ವಿಜೇತ ಸಂಗೀತಗಾರ ಎ.ಆರ್​ ರೆಹಮಾನ್​​ ತಮ್ಮ ಟ್ವಿಟರ್​ ಖಾತೆಯಲ್ಲಿ ಹಂಚಿಕೊಂಡು ಮಾನವೀಯತೆ ಬಗ್ಗೆ ಮಾತನಾಡಿದ್ದಾರೆ.

ರೆಹಮಾನ್ ಟ್ವೀಟ್: ತಮ್ಮ ಟ್ವಿಟ್ಟರ್ ಖಾತೆಯಲ್ಲಿ ವಿಡಿಯೋ ಶೇರ್ ಮಾಡಿರುವ ಸಂಗೀತ ಮಾಂತ್ರಿಕ, ''ಮಾನವೀಯತೆಯ ಮೇಲಿನ ಪ್ರೀತಿಯು ಬೇಷರತ್ತು ಮತ್ತು ಗುಣಪಡಿಸುವಂತಿರಬೇಕು" ಎಂದು ತಿಳಿಸಿದ್ದಾರೆ. ನಿನ್ನೆ ಈ ಮದುವೆಯ ವಿಡಿಯೋವನ್ನು ಟ್ವಿಟರ್ ಬಳಕೆದಾರರು ಹಂಚಿಕೊಂಡಿದ್ದರು. "ಇಲ್ಲಿ ಮತ್ತೊಂದು ಕೇರಳ ಕಥೆ" ಎಂಬ ಶೀರ್ಷಿಕೆ ಕೊಟ್ಟಿದ್ದರು. ಇದನ್ನೇ ಗಾಯಕ ರೆಹಮಾನ್​ ಹಂಚಿಕೊಂಡು ಮಾನವೀಯತೆ ಬಗ್ಗೆ ಮಾತನಾಡಿದ್ದಾರೆ.

2020ರ ಘಟನೆ: 2020ರಲ್ಲಿ ಮಸೀದಿಯೊಳಗೆ ನಡೆದ ಅಂಜು ಮತ್ತು ಶರತ್ ಜೋಡಿಯ ಹಿಂದೂ ವಿವಾಹದ ಪೋಸ್ಟ್ ಅನ್ನು ಎ.ಆರ್ ರೆಹಮಾನ್ ಹಂಚಿಕೊಂಡಿದ್ದಾರೆ. ಮದುವೆಯನ್ನು ಹಿಂದೂ ಸಂಪ್ರದಾಯದಂತೆ ನಡೆಸಲಾಗಿತ್ತು. ಮದುವೆಗೆ ಹಣದ ಕೊರತೆಯಿಂದಾಗಿ ವಧುವಿನ ತಾಯಿ ಮಸೀದಿ ಸಮಿತಿಯನ್ನು ಸಂಪರ್ಕಿಸಿದ ನಂತರ ಹಿಂದೂ ಪಾದ್ರಿಯೊಬ್ಬರು ಮಸೀದಿಯಲ್ಲಿ ವಿವಾಹವನ್ನು ನೆರವೇರಿಸಿದರು. ಕುಟುಂಬದ ಮುಖ್ಯಸ್ಥನನ್ನು ಕಳೆದುಕೊಂಡ ಕುಟುಂಬಕ್ಕೆ ಸಂಪನ್ಮೂಲಗಳ ಕೊರತೆಯಿತ್ತು. ಆ ಸಮಯದಲ್ಲಿ ಕೇರಳ ಮುಖ್ಯಮಂತ್ರಿ ಪಿಣರಾಯಿ ವಿಜಯನ್ ಅವರು ಈ ವಿವಾಹವನ್ನು "ಕೇರಳದ ಒಗ್ಗಟ್ಟಿನ ಉದಾಹರಣೆ" ಎಂದು ಕರೆದಿದ್ದರು. "ನವವಿವಾಹಿತರು, ಕುಟುಂಬಗಳು, ಮಸೀದಿ ಅಧಿಕಾರಿಗಳು ಮತ್ತು ಜನರಿಗೆ ಅಭಿನಂದನೆಗಳು" ಎಂದು ಅವರು ಟ್ವೀಟ್ ಮಾಡಿದ್ದರು.

ಇದನ್ನೂ ಓದಿ: 'ದಿ ಕೇರಳ ಸ್ಟೋರಿ' ಬಿಡುಗಡೆಯಾದ್ರೆ ಪ್ರತಿಭಟನೆ ಎದುರಿಸಬೇಕಾಗುತ್ತದೆ: ಗುಪ್ತಚರ ಇಲಾಖೆ

ಸುದೀಪ್ತೋ ಸೇನ್ ನಿರ್ದೇಶನದ 'ದಿ ಕೇರಳ ಸ್ಟೋರಿ' ಸದ್ಯ ಪರ ವಿರೋಧ ಚರ್ಚೆಯ ವಿಷಯವಾಗಿದೆ. ವಿಪುಲ್ ಅಮೃತಲಾಲ್ ಶಾ ನಿರ್ಮಾಣದ ಈ ಚಿತ್ರದಲ್ಲಿ ಅದಾ ಶರ್ಮಾ, ಯೋಗಿತಾ ಬಿಹಾನಿ, ಸೋನಿಯಾ ಬಲಾನಿ, ಸಿದ್ಧಿ ಇದ್ನಾನಿ ಸೇರಿದಂತೆ ಹಲವರು ನಟಿಸಿದ್ದಾರೆ. ಸದ್ಯ ಅನಾವರಣಗೊಂಡಿರುವ ಟ್ರೇಲರ್​ನಲ್ಲಿ ಮತಾಂತರದ ವಿಷಯವನ್ನು ತೋರಿಸಲಾಗಿದೆ. ಇಡೀ ಸಿನಿಮಾ ಕಥೆ ಮಂತಾಂತರದ ಸುತ್ತ ಸುತ್ತುತ್ತದೆ. ಹಾಗಾಗಿ ಧರ್ಮಗಳ ನಡುವೆ ವಿಷ ಬೀಜ ಬಿತ್ತುವ ಕೆಲಸ ನಡೆಸಲಾಗುತ್ತಿದೆ ಎಂದು ಹಲವರು ಆರೋಪಿಸಿ ತಮ್ಮ ಆಕ್ರೋಶ ಹೊರಹಾಕಿದ್ದಾರೆ.

ಇದನ್ನೂ ಓದಿ: ಒಟ್ಟಿಗೆ ಸ್ಟೇಡಿಯಂನಲ್ಲಿ ಐಪಿಎಲ್ ಪಂದ್ಯ ವೀಕ್ಷಿಸಿದ ಪರಿ - ರಾಘವ್: ನಟಿಯನ್ನ ಅತ್ತಿಗೆ ಎಂದು ಕರೆದ ವೀಕ್ಷಕರು

ವಿದ್ಯಾಭ್ಯಾಸಕ್ಕಾಗಿ ಯುವತಿಯರು ಹಾಸ್ಟೆಲ್​ನಲ್ಲಿ ತಂಗುತ್ತಾರೆ. ಒಂದೇ ಕೋಣೆಯಲ್ಲಿ ಹಿಂದೂ, ಕ್ರಿಶ್ಚಿಯನ್ ಮತ್ತು ಮುಸ್ಲಿಂ ವಿದ್ಯಾರ್ಥಿಗಳು ವಾಸ್ತವ್ಯ ಹೂಡುತ್ತಾರೆ. ಅವರನ್ನು ಮತಾಂತರಗೊಳಿಸಿ ಐಸಿಸ್‌ಗೆ ಸೇರಲು ಸಿರಿಯಾ ಮತ್ತು ಇರಾಕ್‌ಗೆ ಕಳ್ಳಸಾಗಣೆ ಮಾಡುವ ಕಥೆಯನ್ನು ಈ ಚಿತ್ರ ಆಧರಿಸಿದೆ. ನಾಳೆ ಹಿಂದಿ, ತಮಿಳು, ತೆಲುಗು ಮತ್ತು ಮಲಯಾಳಂ ಭಾಷೆಗಳಲ್ಲಿ ದಿ ಕೇರಳ ಸ್ಟೋರಿ ಬಿಡುಗಡೆಯಾಗಲಿದೆ. ಆದ್ರೆ ಈ ಸಿನಿಮಾ ತೆರೆ ಕಾಣೋದು ಬೇಡ ಎಂದು ಹಲವೆಡೆ ಪ್ರತಿಭಟನೆ ನಡೆಯುತ್ತಿದೆ.

'ದಿ ಕೇರಳ ಸ್ಟೋರಿ' ಸಿನಿಮಾ ವಿರುದ್ಧ ವಿವಾದ ಸೃಷ್ಟಿಯಾಗಿದೆ. ಹಲವೆಡೆ ಆಕ್ರೋಶ ವ್ಯಕ್ತವಾಗುತ್ತಿದೆ. ಸಿನಿಮಾ ಬಿಡುಗಡೆ ಮಾಡದಂತೆ ಹಲವರು ಪಟ್ಟು ಹಿಡಿದಿದ್ದಾರೆ. ಸತ್ಯಾಂಶ ಅನಾವರಣಗೊಳಿಸಲಿರುವ ಸಿನಿಮಾ ತೆರೆ ಕಾಣಲೇಬೇಕೆಂಬ ಹಠ ಮತ್ತೊಂದಿಷ್ಟು ಮಂದಿಯದ್ದು.

ವಿವಾದದ ನಡುವೆಯೇ ಕೇರಳದ ಮಸೀದಿಯೊಂದರಲ್ಲಿ ಹಿಂದೂ ಸಂಪ್ರದಾಯಗಳೊಂದಿಗೆ ನಡೆದಿರುವ ಮದುವೆ ವಿಡಿಯೋ ವೈರಲ್​ ಆಗುತ್ತಿದೆ. ಆಸ್ಕರ್ ವಿಜೇತ ಸಂಗೀತಗಾರ ಎ.ಆರ್​ ರೆಹಮಾನ್​​ ತಮ್ಮ ಟ್ವಿಟರ್​ ಖಾತೆಯಲ್ಲಿ ಹಂಚಿಕೊಂಡು ಮಾನವೀಯತೆ ಬಗ್ಗೆ ಮಾತನಾಡಿದ್ದಾರೆ.

ರೆಹಮಾನ್ ಟ್ವೀಟ್: ತಮ್ಮ ಟ್ವಿಟ್ಟರ್ ಖಾತೆಯಲ್ಲಿ ವಿಡಿಯೋ ಶೇರ್ ಮಾಡಿರುವ ಸಂಗೀತ ಮಾಂತ್ರಿಕ, ''ಮಾನವೀಯತೆಯ ಮೇಲಿನ ಪ್ರೀತಿಯು ಬೇಷರತ್ತು ಮತ್ತು ಗುಣಪಡಿಸುವಂತಿರಬೇಕು" ಎಂದು ತಿಳಿಸಿದ್ದಾರೆ. ನಿನ್ನೆ ಈ ಮದುವೆಯ ವಿಡಿಯೋವನ್ನು ಟ್ವಿಟರ್ ಬಳಕೆದಾರರು ಹಂಚಿಕೊಂಡಿದ್ದರು. "ಇಲ್ಲಿ ಮತ್ತೊಂದು ಕೇರಳ ಕಥೆ" ಎಂಬ ಶೀರ್ಷಿಕೆ ಕೊಟ್ಟಿದ್ದರು. ಇದನ್ನೇ ಗಾಯಕ ರೆಹಮಾನ್​ ಹಂಚಿಕೊಂಡು ಮಾನವೀಯತೆ ಬಗ್ಗೆ ಮಾತನಾಡಿದ್ದಾರೆ.

2020ರ ಘಟನೆ: 2020ರಲ್ಲಿ ಮಸೀದಿಯೊಳಗೆ ನಡೆದ ಅಂಜು ಮತ್ತು ಶರತ್ ಜೋಡಿಯ ಹಿಂದೂ ವಿವಾಹದ ಪೋಸ್ಟ್ ಅನ್ನು ಎ.ಆರ್ ರೆಹಮಾನ್ ಹಂಚಿಕೊಂಡಿದ್ದಾರೆ. ಮದುವೆಯನ್ನು ಹಿಂದೂ ಸಂಪ್ರದಾಯದಂತೆ ನಡೆಸಲಾಗಿತ್ತು. ಮದುವೆಗೆ ಹಣದ ಕೊರತೆಯಿಂದಾಗಿ ವಧುವಿನ ತಾಯಿ ಮಸೀದಿ ಸಮಿತಿಯನ್ನು ಸಂಪರ್ಕಿಸಿದ ನಂತರ ಹಿಂದೂ ಪಾದ್ರಿಯೊಬ್ಬರು ಮಸೀದಿಯಲ್ಲಿ ವಿವಾಹವನ್ನು ನೆರವೇರಿಸಿದರು. ಕುಟುಂಬದ ಮುಖ್ಯಸ್ಥನನ್ನು ಕಳೆದುಕೊಂಡ ಕುಟುಂಬಕ್ಕೆ ಸಂಪನ್ಮೂಲಗಳ ಕೊರತೆಯಿತ್ತು. ಆ ಸಮಯದಲ್ಲಿ ಕೇರಳ ಮುಖ್ಯಮಂತ್ರಿ ಪಿಣರಾಯಿ ವಿಜಯನ್ ಅವರು ಈ ವಿವಾಹವನ್ನು "ಕೇರಳದ ಒಗ್ಗಟ್ಟಿನ ಉದಾಹರಣೆ" ಎಂದು ಕರೆದಿದ್ದರು. "ನವವಿವಾಹಿತರು, ಕುಟುಂಬಗಳು, ಮಸೀದಿ ಅಧಿಕಾರಿಗಳು ಮತ್ತು ಜನರಿಗೆ ಅಭಿನಂದನೆಗಳು" ಎಂದು ಅವರು ಟ್ವೀಟ್ ಮಾಡಿದ್ದರು.

ಇದನ್ನೂ ಓದಿ: 'ದಿ ಕೇರಳ ಸ್ಟೋರಿ' ಬಿಡುಗಡೆಯಾದ್ರೆ ಪ್ರತಿಭಟನೆ ಎದುರಿಸಬೇಕಾಗುತ್ತದೆ: ಗುಪ್ತಚರ ಇಲಾಖೆ

ಸುದೀಪ್ತೋ ಸೇನ್ ನಿರ್ದೇಶನದ 'ದಿ ಕೇರಳ ಸ್ಟೋರಿ' ಸದ್ಯ ಪರ ವಿರೋಧ ಚರ್ಚೆಯ ವಿಷಯವಾಗಿದೆ. ವಿಪುಲ್ ಅಮೃತಲಾಲ್ ಶಾ ನಿರ್ಮಾಣದ ಈ ಚಿತ್ರದಲ್ಲಿ ಅದಾ ಶರ್ಮಾ, ಯೋಗಿತಾ ಬಿಹಾನಿ, ಸೋನಿಯಾ ಬಲಾನಿ, ಸಿದ್ಧಿ ಇದ್ನಾನಿ ಸೇರಿದಂತೆ ಹಲವರು ನಟಿಸಿದ್ದಾರೆ. ಸದ್ಯ ಅನಾವರಣಗೊಂಡಿರುವ ಟ್ರೇಲರ್​ನಲ್ಲಿ ಮತಾಂತರದ ವಿಷಯವನ್ನು ತೋರಿಸಲಾಗಿದೆ. ಇಡೀ ಸಿನಿಮಾ ಕಥೆ ಮಂತಾಂತರದ ಸುತ್ತ ಸುತ್ತುತ್ತದೆ. ಹಾಗಾಗಿ ಧರ್ಮಗಳ ನಡುವೆ ವಿಷ ಬೀಜ ಬಿತ್ತುವ ಕೆಲಸ ನಡೆಸಲಾಗುತ್ತಿದೆ ಎಂದು ಹಲವರು ಆರೋಪಿಸಿ ತಮ್ಮ ಆಕ್ರೋಶ ಹೊರಹಾಕಿದ್ದಾರೆ.

ಇದನ್ನೂ ಓದಿ: ಒಟ್ಟಿಗೆ ಸ್ಟೇಡಿಯಂನಲ್ಲಿ ಐಪಿಎಲ್ ಪಂದ್ಯ ವೀಕ್ಷಿಸಿದ ಪರಿ - ರಾಘವ್: ನಟಿಯನ್ನ ಅತ್ತಿಗೆ ಎಂದು ಕರೆದ ವೀಕ್ಷಕರು

ವಿದ್ಯಾಭ್ಯಾಸಕ್ಕಾಗಿ ಯುವತಿಯರು ಹಾಸ್ಟೆಲ್​ನಲ್ಲಿ ತಂಗುತ್ತಾರೆ. ಒಂದೇ ಕೋಣೆಯಲ್ಲಿ ಹಿಂದೂ, ಕ್ರಿಶ್ಚಿಯನ್ ಮತ್ತು ಮುಸ್ಲಿಂ ವಿದ್ಯಾರ್ಥಿಗಳು ವಾಸ್ತವ್ಯ ಹೂಡುತ್ತಾರೆ. ಅವರನ್ನು ಮತಾಂತರಗೊಳಿಸಿ ಐಸಿಸ್‌ಗೆ ಸೇರಲು ಸಿರಿಯಾ ಮತ್ತು ಇರಾಕ್‌ಗೆ ಕಳ್ಳಸಾಗಣೆ ಮಾಡುವ ಕಥೆಯನ್ನು ಈ ಚಿತ್ರ ಆಧರಿಸಿದೆ. ನಾಳೆ ಹಿಂದಿ, ತಮಿಳು, ತೆಲುಗು ಮತ್ತು ಮಲಯಾಳಂ ಭಾಷೆಗಳಲ್ಲಿ ದಿ ಕೇರಳ ಸ್ಟೋರಿ ಬಿಡುಗಡೆಯಾಗಲಿದೆ. ಆದ್ರೆ ಈ ಸಿನಿಮಾ ತೆರೆ ಕಾಣೋದು ಬೇಡ ಎಂದು ಹಲವೆಡೆ ಪ್ರತಿಭಟನೆ ನಡೆಯುತ್ತಿದೆ.

Last Updated : May 4, 2023, 1:18 PM IST
ETV Bharat Logo

Copyright © 2024 Ushodaya Enterprises Pvt. Ltd., All Rights Reserved.