ETV Bharat / entertainment

ಅಭಿನಯದ ಜೊತೆಗೆ ನಿರ್ದೇಶಕಿಯಾಗಲು ಹೊರಟ ಅಪೂರ್ವ ಸಿನಿಮಾದ ಚೆಲುವೆ

author img

By ETV Bharat Karnataka Team

Published : Nov 27, 2023, 8:51 PM IST

O Nanna Chethana film Song release: ಅಪೂರ್ವ ನಿರ್ದೇಶಕಿಯಾಗಿ ಬಡ್ತಿ ಪಡೆದಿರುವ ಮೊದಲ ಸಿನಿಮಾ 'ಓ ನನ್ನ ಚೇತನ'ಗೆ ಅಂತಾರಾಷ್ಟ್ರೀಯ ಮನ್ನಣೆ ದೊರೆತಿದೆ.

Actress Apoorva is now director along with acting
ಅಭಿನಯದ ಜೊತೆಗೆ ನಿರ್ದೇಶಕಿಯಾಗಲು ಹೊರಟ ಅಪೂರ್ವ ಸಿನಿಮಾದ ಚೆಲುವೆ

ಈ ಸಿನಿಮಾ ಎಂಬ ಕ್ರಿಯೇಟಿವ್ ಜಗತ್ತಿನಲ್ಲಿ ಯಾರು ಏನು ಬೇಕಾದರೂ ಆಗಬಹುದು. ಅದೇ ರೀತಿ ನಟಿಯೊಬ್ಬರು ಇಲ್ಲಿ ನಿರ್ದೇಶಕಿಯಾಗಲು ತಯಾರಾಗಿದ್ದಾರೆ. ಕ್ರೇಜಿಸ್ಟಾರ್ ರವಿಚಂದ್ರನ್‌ ನಟಿಸಿ, ನಿರ್ದೇಶಿಸಿದ್ದ ಸಿನಿಮಾ ಅಪೂರ್ವ. ಆ ಸಿನಿಮಾದಲ್ಲಿ ನಾಯಕಿಯಾಗಿ ಕಾಣಿಸಿಕೊಂಡವರು ನಟಿ ಅಪೂರ್ವ. ಆ ಹೆಸರಿನಿಂದಲೇ ಸ್ಯಾಂಡಲ್​ವುಡ್​ನಲ್ಲಿ ಅಪೂರ್ವ ಫೇಮಸ್ ಆದರು. ಬಳಿಕ ವಿಕ್ಟರಿ 2, ಕೃಷ್ಣ ಟಾಕೀಸ್ ಹಲವು ಸಿನಿಮಾಗಳಲ್ಲಿ ನಟಿಸಿರುವ ಅಪೂರ್ವ ಇದೀಗ ನಿರ್ದೇಶಕಿಯಾಗಿದ್ದಾರೆ.

  • " class="align-text-top noRightClick twitterSection" data="">

ಹೌದು, 'ಓ ನನ್ನ ಚೇತನ' ಚಿತ್ರದ ಮೂಲಕ ಅಪೂರ್ವ ಅವರು ನಿರ್ದೇಶಕಿಯಾಗಿ ಬಡ್ತಿ ಪಡೆದುಕೊಂಡಿದ್ದಾರೆ. ಅಲ್ಲದೆ, ಅವರ ನಿರ್ದೇಶನದ ಮೊದಲ ಸಿನಿಮಾಕ್ಕೆ ಅಂತಾರಾಷ್ಟ್ರೀಯ ಮನ್ನಣೆ ಸಿಕ್ಕಿದೆ. ಇದೀಗ ಓ ನನ್ನ ಚೇತನ ಚಿತ್ರದ ಮೊದಲ ಹಾಡು ಸೋಮವಾರ ರಿಲೀಸ್ ಆಗಿದೆ. ಅಷ್ಟೇ ಅಲ್ಲ ಅಪೂರ್ವ ತಮ್ಮ ಹೆಸರಿನ ಮುಂದೆ ಆಶಾದೇವಿ ಅಂತಾನೂ ಸೇರಿಕೊಂಡಿದ್ದಾರೆ. ಒಂದು ಫೋನ್ ಸುತ್ತಾ ಸುತ್ತೋ ಹಳ್ಳಿ ಸೊಗಡಿನ ಸಿನಿಮಾ. ಅಲೆಮಾರಿ ಖ್ಯಾತಿಯ ಹರಿ ಸಂತು ಈ ಚಿತ್ರಕ್ಕೆ ಕಥೆ, ಚಿತ್ರಕಥೆ ಮತ್ತು ಸಂಭಾಷಣೆ ಬರೆದಿದ್ದಾರೆ. ಪ್ರದೀಪ್ ವರ್ಮಾ ಸಂಗೀತ ಸಂಯೋಜಿಸಿದ್ದಾರೆ. ಹರಿ ಸಂತು ಸಾಹಿತ್ಯವಿರುವ ಅಂಜು ಹಾಡು ಇವತ್ತು ಎ2 ಯೂಟ್ಯೂಬ್ ಚಾನೆಲ್​ನಲ್ಲಿ ಬಿಡುಗಡೆಯಾಗಿದೆ.

ಮಾಧುರ್ಯ ಭರಿತವಾಗಿರುವ ಈ ಹಾಡಿಗೆ ಅಶ್ವಿನ್ ಶರ್ಮಾ ಧ್ವನಿಯಾಗಿದ್ದಾರೆ. ಗುರುಪ್ರಶಾಂತ್ ಛಾಯಾಗ್ರಹಣ, ಕೆ.ಎಂ ಪ್ರಕಾಶ್ ಸಂಕಲನ ಚಿತ್ರಕ್ಕಿದೆ. ಚಿತ್ರದ ಮುಖ್ಯಭೂಮಿಕೆಯಲ್ಲಿ ಮಾಸ್ಟರ್ ಪ್ರತೀಕ್, ಮಾಸ್ಟರ್ ಪ್ರೀತಮ್, ಬೇಬಿ ದಾನೇಶ್ವರಿ, ಬೇಬಿ ಡಿಂಪನಾ, ಬೇಬಿ ಮೋನಿಕಾ ನಟಿಸಿದ್ದಾರೆ. ಸಂದೇಶ ಸಾರೋದ್ರ ಜೊತೆಗೆ ಔಟ್ ಅಂಡ್ ಔಟ್ ಎಂಟರ್​ಟೈನ್ಮೆಂಟ್ ಪ್ಯಾಕೇಜ್ ಆಗಿ ಬರುತ್ತಿರುವ ಓ ನನ್ನ ಚೇತನ ಯಾವುದೇ ಕಮರ್ಷಿಯಲ್ ಎಂಟರ್​ಟೈನ್​ಮೆಂಟ್​ಗೆ ಕಡಿಮೆ ಇಲ್ಲದ ಹಾಗೇ ಮೂಡಿ ಬಂದಿದೆ ಅನ್ನೋದು ಚಿತ್ರತಂಡದ ಮಾತು.

ಇದೀಗ ರಿಲೀಸ್ ಆಗಿರೋ ಅಂಜು ಹಾಡೇ ಅದಕ್ಕೆ ಉದಾಹರಣೆ. ಈ ಚಿತ್ರಕ್ಕೆ ಅನುಭವವುಳ್ಳ ಬ್ರ್ಯಾಂಡ್ ತಂತ್ರಜ್ಞರೇ ಕೆಲಸ ಮಾಡಿರೋದು ವಿಶೇಷ. ಎಸ್ ಅಂಡ್​ ಎಸ್ ಬ್ಯಾನರ್ ಅಡಿಯಲ್ಲಿ ದೀಪಕ್ ವಿ. ಎಸ್ ಮಹೇಶ್, ವಿ. ಪ್ರಶಾಂತ್, ಹರೀಶ್ ಕುಮಾರ್, ಸಾಯಿ ಅಶೋಕ್ ಕುಮಾರ್, ಡಾ. ನಾರಾಯಣ್ ಹೊಸ್ಮನೆ ಈ ಚಿತ್ರಕ್ಕೆ ಬಂಡವಾಳ ಹೂಡಿದ್ದಾರೆ. ಈ ಚಿತ್ರದ ಹಾಡನ್ನು ನೋಡಿದ ಮೇಲೆ ಈ ಸಿನಿಮಾದ ಮೇಲೆ ನಿರೀಕ್ಷೆಯೂ ದೊಡ್ಡಾಗಿದೆ.

ಇದನ್ನೂ ಓದಿ: ಆನೆಗುಡ್ಡೆ ಶ್ರೀ ವಿನಾಯಕ ದೇವಸ್ಥಾನದಲ್ಲಿ ಕಾಂತಾರ 2 ಚಿತ್ರದ ಫಸ್ಟ್ ಲುಕ್ ರಿಲೀಸ್

ಈ ಸಿನಿಮಾ ಎಂಬ ಕ್ರಿಯೇಟಿವ್ ಜಗತ್ತಿನಲ್ಲಿ ಯಾರು ಏನು ಬೇಕಾದರೂ ಆಗಬಹುದು. ಅದೇ ರೀತಿ ನಟಿಯೊಬ್ಬರು ಇಲ್ಲಿ ನಿರ್ದೇಶಕಿಯಾಗಲು ತಯಾರಾಗಿದ್ದಾರೆ. ಕ್ರೇಜಿಸ್ಟಾರ್ ರವಿಚಂದ್ರನ್‌ ನಟಿಸಿ, ನಿರ್ದೇಶಿಸಿದ್ದ ಸಿನಿಮಾ ಅಪೂರ್ವ. ಆ ಸಿನಿಮಾದಲ್ಲಿ ನಾಯಕಿಯಾಗಿ ಕಾಣಿಸಿಕೊಂಡವರು ನಟಿ ಅಪೂರ್ವ. ಆ ಹೆಸರಿನಿಂದಲೇ ಸ್ಯಾಂಡಲ್​ವುಡ್​ನಲ್ಲಿ ಅಪೂರ್ವ ಫೇಮಸ್ ಆದರು. ಬಳಿಕ ವಿಕ್ಟರಿ 2, ಕೃಷ್ಣ ಟಾಕೀಸ್ ಹಲವು ಸಿನಿಮಾಗಳಲ್ಲಿ ನಟಿಸಿರುವ ಅಪೂರ್ವ ಇದೀಗ ನಿರ್ದೇಶಕಿಯಾಗಿದ್ದಾರೆ.

  • " class="align-text-top noRightClick twitterSection" data="">

ಹೌದು, 'ಓ ನನ್ನ ಚೇತನ' ಚಿತ್ರದ ಮೂಲಕ ಅಪೂರ್ವ ಅವರು ನಿರ್ದೇಶಕಿಯಾಗಿ ಬಡ್ತಿ ಪಡೆದುಕೊಂಡಿದ್ದಾರೆ. ಅಲ್ಲದೆ, ಅವರ ನಿರ್ದೇಶನದ ಮೊದಲ ಸಿನಿಮಾಕ್ಕೆ ಅಂತಾರಾಷ್ಟ್ರೀಯ ಮನ್ನಣೆ ಸಿಕ್ಕಿದೆ. ಇದೀಗ ಓ ನನ್ನ ಚೇತನ ಚಿತ್ರದ ಮೊದಲ ಹಾಡು ಸೋಮವಾರ ರಿಲೀಸ್ ಆಗಿದೆ. ಅಷ್ಟೇ ಅಲ್ಲ ಅಪೂರ್ವ ತಮ್ಮ ಹೆಸರಿನ ಮುಂದೆ ಆಶಾದೇವಿ ಅಂತಾನೂ ಸೇರಿಕೊಂಡಿದ್ದಾರೆ. ಒಂದು ಫೋನ್ ಸುತ್ತಾ ಸುತ್ತೋ ಹಳ್ಳಿ ಸೊಗಡಿನ ಸಿನಿಮಾ. ಅಲೆಮಾರಿ ಖ್ಯಾತಿಯ ಹರಿ ಸಂತು ಈ ಚಿತ್ರಕ್ಕೆ ಕಥೆ, ಚಿತ್ರಕಥೆ ಮತ್ತು ಸಂಭಾಷಣೆ ಬರೆದಿದ್ದಾರೆ. ಪ್ರದೀಪ್ ವರ್ಮಾ ಸಂಗೀತ ಸಂಯೋಜಿಸಿದ್ದಾರೆ. ಹರಿ ಸಂತು ಸಾಹಿತ್ಯವಿರುವ ಅಂಜು ಹಾಡು ಇವತ್ತು ಎ2 ಯೂಟ್ಯೂಬ್ ಚಾನೆಲ್​ನಲ್ಲಿ ಬಿಡುಗಡೆಯಾಗಿದೆ.

ಮಾಧುರ್ಯ ಭರಿತವಾಗಿರುವ ಈ ಹಾಡಿಗೆ ಅಶ್ವಿನ್ ಶರ್ಮಾ ಧ್ವನಿಯಾಗಿದ್ದಾರೆ. ಗುರುಪ್ರಶಾಂತ್ ಛಾಯಾಗ್ರಹಣ, ಕೆ.ಎಂ ಪ್ರಕಾಶ್ ಸಂಕಲನ ಚಿತ್ರಕ್ಕಿದೆ. ಚಿತ್ರದ ಮುಖ್ಯಭೂಮಿಕೆಯಲ್ಲಿ ಮಾಸ್ಟರ್ ಪ್ರತೀಕ್, ಮಾಸ್ಟರ್ ಪ್ರೀತಮ್, ಬೇಬಿ ದಾನೇಶ್ವರಿ, ಬೇಬಿ ಡಿಂಪನಾ, ಬೇಬಿ ಮೋನಿಕಾ ನಟಿಸಿದ್ದಾರೆ. ಸಂದೇಶ ಸಾರೋದ್ರ ಜೊತೆಗೆ ಔಟ್ ಅಂಡ್ ಔಟ್ ಎಂಟರ್​ಟೈನ್ಮೆಂಟ್ ಪ್ಯಾಕೇಜ್ ಆಗಿ ಬರುತ್ತಿರುವ ಓ ನನ್ನ ಚೇತನ ಯಾವುದೇ ಕಮರ್ಷಿಯಲ್ ಎಂಟರ್​ಟೈನ್​ಮೆಂಟ್​ಗೆ ಕಡಿಮೆ ಇಲ್ಲದ ಹಾಗೇ ಮೂಡಿ ಬಂದಿದೆ ಅನ್ನೋದು ಚಿತ್ರತಂಡದ ಮಾತು.

ಇದೀಗ ರಿಲೀಸ್ ಆಗಿರೋ ಅಂಜು ಹಾಡೇ ಅದಕ್ಕೆ ಉದಾಹರಣೆ. ಈ ಚಿತ್ರಕ್ಕೆ ಅನುಭವವುಳ್ಳ ಬ್ರ್ಯಾಂಡ್ ತಂತ್ರಜ್ಞರೇ ಕೆಲಸ ಮಾಡಿರೋದು ವಿಶೇಷ. ಎಸ್ ಅಂಡ್​ ಎಸ್ ಬ್ಯಾನರ್ ಅಡಿಯಲ್ಲಿ ದೀಪಕ್ ವಿ. ಎಸ್ ಮಹೇಶ್, ವಿ. ಪ್ರಶಾಂತ್, ಹರೀಶ್ ಕುಮಾರ್, ಸಾಯಿ ಅಶೋಕ್ ಕುಮಾರ್, ಡಾ. ನಾರಾಯಣ್ ಹೊಸ್ಮನೆ ಈ ಚಿತ್ರಕ್ಕೆ ಬಂಡವಾಳ ಹೂಡಿದ್ದಾರೆ. ಈ ಚಿತ್ರದ ಹಾಡನ್ನು ನೋಡಿದ ಮೇಲೆ ಈ ಸಿನಿಮಾದ ಮೇಲೆ ನಿರೀಕ್ಷೆಯೂ ದೊಡ್ಡಾಗಿದೆ.

ಇದನ್ನೂ ಓದಿ: ಆನೆಗುಡ್ಡೆ ಶ್ರೀ ವಿನಾಯಕ ದೇವಸ್ಥಾನದಲ್ಲಿ ಕಾಂತಾರ 2 ಚಿತ್ರದ ಫಸ್ಟ್ ಲುಕ್ ರಿಲೀಸ್

ETV Bharat Logo

Copyright © 2024 Ushodaya Enterprises Pvt. Ltd., All Rights Reserved.