ETV Bharat / elections

ಗಣಿನಾಡು ಬಳ್ಳಾರಿಯ ರಣಾಂಗಣ.. ಮತ್ತೊಮ್ಮೆ ಗೆಲುವಿನ ನಿರೀಕ್ಷೆಯಲ್ಲಿ ಉಗ್ರಪ್ಪ - undefined

ಗಣಿಧೂಳಿನಿಂದಲೇ ಹೆಚ್ಚು ಖ್ಯಾತಿ ಪಡೆದಿರುವ ಬಳ್ಳಾರಿಯ ಲೋಕಸಭಾ ಕೇತ್ರದಲ್ಲಿ ಮತ್ತೊಮ್ಮೆ ಗೆಲ್ಲುವ ನಿರೀಕ್ಷೆಯಲ್ಲಿದ್ದಾರೆ ಕಾಂಗ್ರೆಸ್​ ಅಭ್ಯರ್ಥಿ ಉಗ್ರಪ್ಪ. ಇವರ ಓಟಕ್ಕೆ ಬ್ರೇಕ್​ ಹಾಕಲು ಬಿಜೆಪಿಯ ದೇವೇಂದ್ರಪ್ಪ ಕೂಡ ಸಿದ್ಧವಾಗಿದ್ದು ಬಿಜೆಪಿ ಹಾಗೂ ಕಾಂಗ್ರೆಸ್​-ಜೆಡಿಎಸ್​ ಮೈತ್ರಿ ಅಭ್ಯರ್ಥಿ ನಡುವೆ ನೇರ ಸ್ಪರ್ಧೆಯಿದೆ.

ಬಳ್ಳಾರಿ ಗೆಲುವಿನ ನಿರೀಕ್ಷೆಯಲ್ಲಿ ಉಗ್ರಪ್ಪ
author img

By

Published : Apr 23, 2019, 5:04 AM IST

ಬಳ್ಳಾರಿ: ಇತರ ಚಟುವಟಿಕೆಗಳಿಗಿಂತ ಗಣಿಧೂಳಿನಿಂದಲೇ ಹೆಚ್ಚು ಖ್ಯಾತಿ ಪಡೆದಿರುವ ಬಳ್ಳಾರಿಯ ಲೋಕಸಭಾ ಚುನಾವಣೆ ರಂಗೇರಿದ್ದು ಇಂದು ಮತದಾನ ನಡೆಯುತ್ತಿದೆ., ಕೇತ್ರವು 8 ವಿಧಾನಸಭಾ ಕ್ಷೇತ್ರಗಳನ್ನು ಹೊಂದಿದೆ. ಅವುಗಳೆಂದರೆ ಬಳ್ಳಾರಿ, ಬಳ್ಳಾರಿ ಗ್ರಾಮಾಂತರ, ಹೊಸಪೇಟೆ(ವಿಜಯನಗರ ಕ್ಷೇತ್ರ), ಹಡಗಲಿ​, ಹಗರಿ ಬೊಮ್ಮನಹಳ್ಳಿ, ಕೂಡ್ಲಿಗಿ, ಸಂಡೂರು ಹಾಗೂ ಕಂಪ್ಲಿ. ಇವುಗಳಲ್ಲಿ ಎರಡು ಕ್ಷೇತ್ರಗಳಲ್ಲಿ ಬಿಜೆಪಿ ಶಾಸಕರಿದ್ದರೆ, ಉಳಿದ ಆರು ಕ್ಷೇತ್ರಗಳಲ್ಲಿ ಕಾಂಗ್ರೆಸ್​ ಶಾಸಕರಿದ್ದು, ಕಾಂಗ್ರೆಸ್​ನ ಭದ್ರಕೋಟೆಯೆನಿಸಿದೆ. ಜೊತೆಗೆ ಕಳೆದ ಲೋಕಸಭಾ ಉಪಚುನಾವಣೆಯಲ್ಲಿ ಇಲ್ಲಿ ಕಾಂಗ್ರೆಸ್​ ಭರ್ಜರಿಯಾಗಿ ಜಯಭೇರಿ ಬಾರಿಸಿದ್ದು, ಈ ಬಾರಿ ಕುತೂಹಲಕ್ಕೆ ಕಾರಣವಾಗಿದೆ.

ಕ್ಷೇತ್ರದಲ್ಲಿರುವ ಘಟಾನುಘಟಿಗಳು:

ಬಳ್ಳಾರಿ ಲೋಕಸಭಾ ಕ್ಷೇತ್ರದ ಬಿಜೆಪಿ‌ ಅಭ್ಯರ್ಥಿ ವೈ. ದೇವೇಂದ್ರಪ್ಪ. ಮೂಲತಃ ರೈತ ಕುಟುಂಬದಿಂದ ಬಂದ ದೇವೇಂದ್ರಪ್ಪನವರು ಮೂಲ ಕಾಂಗ್ರೆಸ್ಸಿಗರು. ಜಿಲ್ಲೆಯ ಹರಪನಹಳ್ಳಿ ತಾಲೂಕಿನ ಅರಸೀಕೆರೆ ನಿವಾಸಿ. ಜಗಳೂರು ವಿಧಾನಸಭಾ ಕ್ಷೇತ್ರದ ಕಾಂಗ್ರೆಸ್ ಅಭ್ಯರ್ಥಿಯಾಗಿ ದೇವೇಂದ್ರಪ್ಪ ಸ್ಪರ್ಧೆ ಮಾಡಿದ್ದರು. ಮಾಜಿ ಸಚಿವ ರಮೇಶ್​ ಜಾರಕಿಹೊಳಿಯವರ ಸಂಬಂಧಿಕರೂ ಹೌದು. ಮೊನ್ನೆ ತಾನೆ ಹರಪನಹಳ್ಳಿ ತಾಲೂಕನ್ನು ಬಳ್ಳಾರಿ ಜಿಲ್ಲೆಗೆ ಸೇರ್ಪಡೆ ಮಾಡಲಾಗಿದ್ದು, ಈ ಜಿಲ್ಲೆಗೆ ಅವರು ಚಿರಪರಿಚಿತರು ಎಂದೇ ಹೇಳಲಾಗುತ್ತಿದೆ.‌ ಈ ಹಿಂದೆ ಜಿಲ್ಲಾ ಪಂಚಾಯಿತಿ ಉಪಾಧ್ಯಕ್ಷರಾಗಿಯೂ ಕಾರ್ಯನಿರ್ವಹಿಸಿದ್ದಾರೆ.

ಬಿಜೆಪಿ ಅಭ್ಯರ್ಥಿ ವೈ. ದೇವೇಂದ್ರಪ್ಪ ಅವರಿಗೆ ನೇರ ಸ್ಪರ್ಧೆಯೊಡ್ಡುತ್ತಿರುವವರು ಹಾಲಿ ಲೋಕಸಭಾ ಸದಸ್ಯರೂ ಆಗಿರುವ ಕಾಂಗ್ರೆಸ್​ನ ಉಗ್ರಪ್ಪ. ಕಳೆದ ಲೋಕಸಭಾ ಉಪಚುನಾವಣೆಯಲ್ಲಿ ಸರಿ ಸುಮಾರು 2.43 ಲಕ್ಷ ಮತಗಳ ಅಂತರಿಂದ ಗೆಲುವು ಸಾಧಿಸಿದ್ದರು. ಕೇವಲ ಐದು ತಿಂಗಳಕಾಲ ಸಂಸದರಾಗಿ ಕರ್ತವ್ಯ ನಿರ್ವಹಿಸಿದ ಅನುಭವವಿದ್ದು, ಮೂಲತಃ ಬೆಂಗಳೂರು ದಕ್ಷಿಣ ಭಾಗದವರು. ವೃತ್ತಿಯಲ್ಲಿ ವಕೀಲರಾಗಿದ್ದವರು. ಬಿಎಸ್​ಸಿ ಹಾಗೂ ಎಲ್​ಎಲ್​ಬಿ ಪದವೀಧರರಾಗಿದ್ದಾರೆ. ಜೊತೆಗೆ ಈ ಹಿಂದೆ ವಿಧಾನ ಪರಿಷತ್ ಸದಸ್ಯರಾಗಿದ್ದ ಅನುಭವವನ್ನು ಹೊಂದಿದ್ದಾರೆ. ಇನ್ನುಳಿದಂತೆ ಎಸ್​ಯುಸಿಐಸಿ ಪಕ್ಷದ ಎ. ದೇವದಾಸ, ಬಿಎಸ್​ಪಿ. ಅಭ್ಯರ್ಥಿ ಕೆ. ಗೂಳಪ್ಪ ಸೇರಿದಂತೆ ಇತರೆ ಹನ್ನೊಂದು ಮಂದಿ ಅಭ್ಯರ್ಥಿಗಳು ಕಣದಲ್ಲಿದ್ದಾರೆ.

ಕ್ಷೇತ್ರದ ಚಿತ್ರಣ:

ಬಳ್ಳಾರಿ ಲೋಕಸಭಾ ಕ್ಷೇತ್ರದಲ್ಲಿ ಅಂದಾಜು 17,51,911 ಮತದಾರರಿದ್ದಾರೆ. ಆ ಪೈಕಿ 8,71,191 (ಪುರುಷರು), 8,80,488 (ಮಹಿಳೆಯರು) ಹಾಗೂ 232 (ಇತರರು) ಇದ್ದಾರೆ. ಜಿಲ್ಲೆಯ ಹರಪನಹಳ್ಳಿ ಹಾಗೂ ಸಿರುಗುಪ್ಪ ತಾಲೂಕುಗಳು ದಾವಣಗೆರೆ ಮತ್ತು ಕೊಪ್ಪಳ ಲೋಕಸಭಾ ಕ್ಷೇತ್ರಗಳ ವ್ಯಾಪ್ತಿಗೆ ಒಳಪಡುವುದರಿಂದ ಜಿಲ್ಲೆಯ ಏಳು ವಿಧಾನಸಭಾ ಕ್ಷೇತ್ರಗಳಲ್ಲಿ ಅಂದಾಜು 541 ಸೂಕ್ಷ್ಮ, 1688 ಸಾಧಾರಣ ಸೇರಿದಂತೆ ಒಟ್ಟು 2408 ಮತಗಟ್ಟೆಗಳನ್ನು ಸ್ಥಾಪಿಸಲಾಗಿದೆ. 236 ವಲ್​ನರಬಲ್ ಮತಗಟ್ಟೆಗಳು, 140 ವೆಬ್ ಕ್ಯಾಸ್ಟಿಂಗ್ ಮತಗಟ್ಟೆಗಳು, 121 ಶಾಡೋ ಝೋನ್, 19 ಸಖಿ ಮತ್ತು ಕೇವಲ ಒಂದೇ ಒಂದು ಮಾತ್ರ ಪಿಡಬ್ಲ್ಯುಡಿ ಮತಗಟ್ಟೆಗಳನ್ನ ಸ್ಥಾಪಿಸಲಾಗಿದೆ. ಅಲ್ಲದೆ, 2687 ಪಿಆರ್​ಒ, 2667 ಎಪಿಆರ್​ಒ, ಪ್ರತಿಯೊಂದು ಮತಗಟ್ಟೆಗೆ ಇಬ್ಬರಂತೆ ಮೈಕ್ರೋ ಅಬ್ಸವರ್​ಗಳು, ಸಖಿ ಮತಗಟ್ಟೆಗಳಿಗೆ 76 ಮಂದಿ ಸಿಬ್ಬಂದಿಯನ್ನ ನಿಯೋಜಿಸಲಾಗಿದೆ.
ತಲಾ 2313 ಸಿಯು, 2313 ಬಿಯು ಹಾಗೂ‌ 2509 ವಿವಿ ಪ್ಯಾಟ್ ಯಂತ್ರೋಪಕರಣಗಳನ್ನ ಬಳಕೆ ಮಾಡಲಾಗುತ್ತದೆ.

ಸಕಲ ಸಿದ್ಧತೆ:

ಶಾಂತಿಯುತ ಮತದಾನ ನಡೆಸುವ ಸಲುವಾಗಿಯೇ ಅಂದಾಜು 2160 ಪೊಲೀಸರು ಹಾಗೂ 1200ಕ್ಕೂ ಅಧಿಕ ಗೃಹರಕ್ಷಕ ದಳ ಸಿಬ್ಬಂದಿ ಮತ್ತು ಸಿಎಸ್​ಆರ್​ಪಿ ತುಕಡಿಗಳನ್ನ ನಿಯೋಜಿಸಲಾಗಿದೆ. ಸರಿ ಸುಮಾರು 425 ಕೆಎಸ್​ಆರ್​ಟಿಸಿ ಬಸ್​ಗಳು, 109 ಮಿನಿ ಬಸ್​ಗಳು, 83 ಕ್ಯಾಬ್, ಟಾಟಾ ಸುಮೋ ಹಾಗೂ ಜೀಪ್ ಗಳನ್ನ ಚುನಾವಣೆಗಾಗಿ ಬಳಸಿಕೊಳ್ಳಲಾಗುತ್ತಿದೆ.

ಬಳ್ಳಾರಿ: ಇತರ ಚಟುವಟಿಕೆಗಳಿಗಿಂತ ಗಣಿಧೂಳಿನಿಂದಲೇ ಹೆಚ್ಚು ಖ್ಯಾತಿ ಪಡೆದಿರುವ ಬಳ್ಳಾರಿಯ ಲೋಕಸಭಾ ಚುನಾವಣೆ ರಂಗೇರಿದ್ದು ಇಂದು ಮತದಾನ ನಡೆಯುತ್ತಿದೆ., ಕೇತ್ರವು 8 ವಿಧಾನಸಭಾ ಕ್ಷೇತ್ರಗಳನ್ನು ಹೊಂದಿದೆ. ಅವುಗಳೆಂದರೆ ಬಳ್ಳಾರಿ, ಬಳ್ಳಾರಿ ಗ್ರಾಮಾಂತರ, ಹೊಸಪೇಟೆ(ವಿಜಯನಗರ ಕ್ಷೇತ್ರ), ಹಡಗಲಿ​, ಹಗರಿ ಬೊಮ್ಮನಹಳ್ಳಿ, ಕೂಡ್ಲಿಗಿ, ಸಂಡೂರು ಹಾಗೂ ಕಂಪ್ಲಿ. ಇವುಗಳಲ್ಲಿ ಎರಡು ಕ್ಷೇತ್ರಗಳಲ್ಲಿ ಬಿಜೆಪಿ ಶಾಸಕರಿದ್ದರೆ, ಉಳಿದ ಆರು ಕ್ಷೇತ್ರಗಳಲ್ಲಿ ಕಾಂಗ್ರೆಸ್​ ಶಾಸಕರಿದ್ದು, ಕಾಂಗ್ರೆಸ್​ನ ಭದ್ರಕೋಟೆಯೆನಿಸಿದೆ. ಜೊತೆಗೆ ಕಳೆದ ಲೋಕಸಭಾ ಉಪಚುನಾವಣೆಯಲ್ಲಿ ಇಲ್ಲಿ ಕಾಂಗ್ರೆಸ್​ ಭರ್ಜರಿಯಾಗಿ ಜಯಭೇರಿ ಬಾರಿಸಿದ್ದು, ಈ ಬಾರಿ ಕುತೂಹಲಕ್ಕೆ ಕಾರಣವಾಗಿದೆ.

ಕ್ಷೇತ್ರದಲ್ಲಿರುವ ಘಟಾನುಘಟಿಗಳು:

ಬಳ್ಳಾರಿ ಲೋಕಸಭಾ ಕ್ಷೇತ್ರದ ಬಿಜೆಪಿ‌ ಅಭ್ಯರ್ಥಿ ವೈ. ದೇವೇಂದ್ರಪ್ಪ. ಮೂಲತಃ ರೈತ ಕುಟುಂಬದಿಂದ ಬಂದ ದೇವೇಂದ್ರಪ್ಪನವರು ಮೂಲ ಕಾಂಗ್ರೆಸ್ಸಿಗರು. ಜಿಲ್ಲೆಯ ಹರಪನಹಳ್ಳಿ ತಾಲೂಕಿನ ಅರಸೀಕೆರೆ ನಿವಾಸಿ. ಜಗಳೂರು ವಿಧಾನಸಭಾ ಕ್ಷೇತ್ರದ ಕಾಂಗ್ರೆಸ್ ಅಭ್ಯರ್ಥಿಯಾಗಿ ದೇವೇಂದ್ರಪ್ಪ ಸ್ಪರ್ಧೆ ಮಾಡಿದ್ದರು. ಮಾಜಿ ಸಚಿವ ರಮೇಶ್​ ಜಾರಕಿಹೊಳಿಯವರ ಸಂಬಂಧಿಕರೂ ಹೌದು. ಮೊನ್ನೆ ತಾನೆ ಹರಪನಹಳ್ಳಿ ತಾಲೂಕನ್ನು ಬಳ್ಳಾರಿ ಜಿಲ್ಲೆಗೆ ಸೇರ್ಪಡೆ ಮಾಡಲಾಗಿದ್ದು, ಈ ಜಿಲ್ಲೆಗೆ ಅವರು ಚಿರಪರಿಚಿತರು ಎಂದೇ ಹೇಳಲಾಗುತ್ತಿದೆ.‌ ಈ ಹಿಂದೆ ಜಿಲ್ಲಾ ಪಂಚಾಯಿತಿ ಉಪಾಧ್ಯಕ್ಷರಾಗಿಯೂ ಕಾರ್ಯನಿರ್ವಹಿಸಿದ್ದಾರೆ.

ಬಿಜೆಪಿ ಅಭ್ಯರ್ಥಿ ವೈ. ದೇವೇಂದ್ರಪ್ಪ ಅವರಿಗೆ ನೇರ ಸ್ಪರ್ಧೆಯೊಡ್ಡುತ್ತಿರುವವರು ಹಾಲಿ ಲೋಕಸಭಾ ಸದಸ್ಯರೂ ಆಗಿರುವ ಕಾಂಗ್ರೆಸ್​ನ ಉಗ್ರಪ್ಪ. ಕಳೆದ ಲೋಕಸಭಾ ಉಪಚುನಾವಣೆಯಲ್ಲಿ ಸರಿ ಸುಮಾರು 2.43 ಲಕ್ಷ ಮತಗಳ ಅಂತರಿಂದ ಗೆಲುವು ಸಾಧಿಸಿದ್ದರು. ಕೇವಲ ಐದು ತಿಂಗಳಕಾಲ ಸಂಸದರಾಗಿ ಕರ್ತವ್ಯ ನಿರ್ವಹಿಸಿದ ಅನುಭವವಿದ್ದು, ಮೂಲತಃ ಬೆಂಗಳೂರು ದಕ್ಷಿಣ ಭಾಗದವರು. ವೃತ್ತಿಯಲ್ಲಿ ವಕೀಲರಾಗಿದ್ದವರು. ಬಿಎಸ್​ಸಿ ಹಾಗೂ ಎಲ್​ಎಲ್​ಬಿ ಪದವೀಧರರಾಗಿದ್ದಾರೆ. ಜೊತೆಗೆ ಈ ಹಿಂದೆ ವಿಧಾನ ಪರಿಷತ್ ಸದಸ್ಯರಾಗಿದ್ದ ಅನುಭವವನ್ನು ಹೊಂದಿದ್ದಾರೆ. ಇನ್ನುಳಿದಂತೆ ಎಸ್​ಯುಸಿಐಸಿ ಪಕ್ಷದ ಎ. ದೇವದಾಸ, ಬಿಎಸ್​ಪಿ. ಅಭ್ಯರ್ಥಿ ಕೆ. ಗೂಳಪ್ಪ ಸೇರಿದಂತೆ ಇತರೆ ಹನ್ನೊಂದು ಮಂದಿ ಅಭ್ಯರ್ಥಿಗಳು ಕಣದಲ್ಲಿದ್ದಾರೆ.

ಕ್ಷೇತ್ರದ ಚಿತ್ರಣ:

ಬಳ್ಳಾರಿ ಲೋಕಸಭಾ ಕ್ಷೇತ್ರದಲ್ಲಿ ಅಂದಾಜು 17,51,911 ಮತದಾರರಿದ್ದಾರೆ. ಆ ಪೈಕಿ 8,71,191 (ಪುರುಷರು), 8,80,488 (ಮಹಿಳೆಯರು) ಹಾಗೂ 232 (ಇತರರು) ಇದ್ದಾರೆ. ಜಿಲ್ಲೆಯ ಹರಪನಹಳ್ಳಿ ಹಾಗೂ ಸಿರುಗುಪ್ಪ ತಾಲೂಕುಗಳು ದಾವಣಗೆರೆ ಮತ್ತು ಕೊಪ್ಪಳ ಲೋಕಸಭಾ ಕ್ಷೇತ್ರಗಳ ವ್ಯಾಪ್ತಿಗೆ ಒಳಪಡುವುದರಿಂದ ಜಿಲ್ಲೆಯ ಏಳು ವಿಧಾನಸಭಾ ಕ್ಷೇತ್ರಗಳಲ್ಲಿ ಅಂದಾಜು 541 ಸೂಕ್ಷ್ಮ, 1688 ಸಾಧಾರಣ ಸೇರಿದಂತೆ ಒಟ್ಟು 2408 ಮತಗಟ್ಟೆಗಳನ್ನು ಸ್ಥಾಪಿಸಲಾಗಿದೆ. 236 ವಲ್​ನರಬಲ್ ಮತಗಟ್ಟೆಗಳು, 140 ವೆಬ್ ಕ್ಯಾಸ್ಟಿಂಗ್ ಮತಗಟ್ಟೆಗಳು, 121 ಶಾಡೋ ಝೋನ್, 19 ಸಖಿ ಮತ್ತು ಕೇವಲ ಒಂದೇ ಒಂದು ಮಾತ್ರ ಪಿಡಬ್ಲ್ಯುಡಿ ಮತಗಟ್ಟೆಗಳನ್ನ ಸ್ಥಾಪಿಸಲಾಗಿದೆ. ಅಲ್ಲದೆ, 2687 ಪಿಆರ್​ಒ, 2667 ಎಪಿಆರ್​ಒ, ಪ್ರತಿಯೊಂದು ಮತಗಟ್ಟೆಗೆ ಇಬ್ಬರಂತೆ ಮೈಕ್ರೋ ಅಬ್ಸವರ್​ಗಳು, ಸಖಿ ಮತಗಟ್ಟೆಗಳಿಗೆ 76 ಮಂದಿ ಸಿಬ್ಬಂದಿಯನ್ನ ನಿಯೋಜಿಸಲಾಗಿದೆ.
ತಲಾ 2313 ಸಿಯು, 2313 ಬಿಯು ಹಾಗೂ‌ 2509 ವಿವಿ ಪ್ಯಾಟ್ ಯಂತ್ರೋಪಕರಣಗಳನ್ನ ಬಳಕೆ ಮಾಡಲಾಗುತ್ತದೆ.

ಸಕಲ ಸಿದ್ಧತೆ:

ಶಾಂತಿಯುತ ಮತದಾನ ನಡೆಸುವ ಸಲುವಾಗಿಯೇ ಅಂದಾಜು 2160 ಪೊಲೀಸರು ಹಾಗೂ 1200ಕ್ಕೂ ಅಧಿಕ ಗೃಹರಕ್ಷಕ ದಳ ಸಿಬ್ಬಂದಿ ಮತ್ತು ಸಿಎಸ್​ಆರ್​ಪಿ ತುಕಡಿಗಳನ್ನ ನಿಯೋಜಿಸಲಾಗಿದೆ. ಸರಿ ಸುಮಾರು 425 ಕೆಎಸ್​ಆರ್​ಟಿಸಿ ಬಸ್​ಗಳು, 109 ಮಿನಿ ಬಸ್​ಗಳು, 83 ಕ್ಯಾಬ್, ಟಾಟಾ ಸುಮೋ ಹಾಗೂ ಜೀಪ್ ಗಳನ್ನ ಚುನಾವಣೆಗಾಗಿ ಬಳಸಿಕೊಳ್ಳಲಾಗುತ್ತಿದೆ.

Intro:ನಾಳೆಯ ಮತದಾನಕ್ಕೆ ಸಕಲ ಸಿದ್ಧತೆ...
2160 ಪೊಲೀಸ್ ಸಿಬ್ಬಂದಿ, 1200 ಗೃಹರಕ್ಷಕ ದಳದ ಸಿಬ್ಬಂದಿ ನಿಯೋಜನೆ!
ಬಳ್ಳಾರಿ: ಲೋಕಸಭಾ ಸಾರ್ವತ್ರಿಕ ಚುನಾವಣೆ ಹಿನ್ನಲೆಯಲ್ಲಿ ಬಳ್ಳಾರಿ ಲೋಕಸಭಾ ಕ್ಷೇತ್ರಕ್ಕೆ ನಾಳೆಯ ದಿನ ಬೆಳಿಗ್ಗೆ ಏಳರಿಂದ ಸಂಜೆ ಆರುಗಂಟೆಯವರೆಗೆ ಮತದಾನ ಪ್ರಕ್ರಿಯೆ ನಡೆಯಲಿದೆ. ಶಾಂತಿಯುತ ಮತದಾನ ನಡೆಸುವ ಸಲುವಾಗಿಯೇ ಅಂದಾಜು 2160 ಪೊಲೀಸರು ಹಾಗೂ 1200ಕ್ಕೂ ಅಧಿಕ ಗೃಹರಕ್ಷಕ ದಳ
ಸಿಬ್ಬಂದಿ ಮತ್ತು ಸಿಎಸ್ ಆರ್ ಪಿ ತುಕಡಿಗಳನ್ನ ನಿಯೋಜಿಸ ಲಾಗಿದೆ.
ಜಿಲ್ಲೆಯ ಹರಪನಹಳ್ಳಿ ಹಾಗೂ ಸಿರುಗುಪ್ಪ ತಾಲೂಕುಗಳು ದಾವಣಗೆರೆ ಮತ್ತು ಕೊಪ್ಪಳ ಲೋಕಸಭಾ ಕ್ಷೇತ್ರಗಳ ವ್ಯಾಪ್ತಿಗೆ ಒಳಪಡುವುದರಿಂದ ಜಿಲ್ಲೆಯ ಏಳು ವಿಧಾನಸಭಾ ಕ್ಷೇತ್ರಗಳಲ್ಲಿ ಅಂದಾಜು 541 ಸೂಕ್ಷ್ಮ, 1688 ಸಾಧಾರಣ ಸೇರಿದಂತೆ ಒಟ್ಟು 2408 ಮತಗಟ್ಟೆಗಳನ್ನ ಸ್ಥಾಪಿಸಲಾಗಿದೆ. 236 ವಲ್ ನರಬಲ್ ಮತಗಟ್ಟೆಗಳು, 140 ವೆಬ್ ಕ್ಯಾಸ್ಟಿಂಗ್ ಮತಗಟ್ಟೆಗಳು, 1?21 ಶಾಡೋ ಜೋನ್, 19 ಸಖಿ ಮತ್ತು ಕೇವಲ ಒಂದೇ ಒಂದು ಮಾತ್ರ ಪಿಡಬ್ಲ್ಯುಡಿ ಮತಗಟ್ಟೆಗಳನ್ನ ಸ್ಥಾಪಿಸಲಾಗಿದೆ.
ಅಲ್ಲದೇ, 2687 ಪಿಆರ್ ಒ, 2667 ಎಪಿಆರ್ ಒ, ಪ್ರತಿ ಯೊಂದು ಮತಗಟ್ಟೆಗೆ ಇಬ್ಬರಂತೆ ಸರಿಸುಮಾರು 5553,
435 ಮೈಕ್ರೋ ಅಬ್ಸವರ್ ಗಳು, ಸಖಿ ಮತಗಟ್ಟೆಗಳಿಗೆ 76 ಮಂದಿ ಸಿಬ್ಬಂದಿಯನ್ನ ನಿಯೋಜಿಸಲಾಗಿದೆ.
ತಲಾ 2313 ಸಿಯು, 2313 ಬಿಯು ಹಾಗೂ‌ 2509 ವಿವಿ ಪ್ಯಾಟ್ ಯಂತ್ರೋಪಕರಣಗಳನ್ನ ಬಳಕೆ ಮಾಡಲಾಗುತ್ತದೆ. ದುರಸ್ಥಿಯಾದಲ್ಲಿ ಅಗತ್ಯ ಯಂತ್ರೋಪಕರಣಗಳನ್ನ ಒಂದೆಡೆ ಸಂಗ್ರಹಿಸಿಡಲಾಗಿದೆ. ಅಗತ್ಯಬಿದ್ದರೆ ಉಪಯೋಗಿಸಿಕೊಳ್ಳ
ಲಾಗುವುದು ಎಂದು ಜಿಲ್ಲಾ ಚುನಾವಣಾಧಿಕಾರಿ ಡಾ.ವಿ.ರಾಮ ಪ್ರಸಾತ್ ಮನೋಹರ ತಿಳಿಸಿದ್ದಾರೆ.
ಸರಿಸುಮಾರು 425 ಕೆಎಸ್ ಆರ್ ಟಿಸಿ ಬಸ್ಸುಗಳು, 109
ಮಿನಿ ಬಸ್ ಗಳು, 83 ಕ್ಯಾಬ್, ಟಾಟಾ ಸುಮೋ ಹಾಗೂ ಜೀಪ್ ಗಳನ್ನ ಚುನಾವಣೆಗಾಗಿ ಬಳಸಿಕೊಳ್ಳಲಾಗುತ್ತಿದೆ.
ಸರಿಸುಮಾರು ಹತ್ತು ಸಾವಿರಕ್ಕೂ ಹೆಚ್ಚುಮಂದಿ ಸಿಬ್ಬಂದಿಯನ್ನ ಈ ಚುನಾವಣಾ ಕರ್ತವ್ಯಕ್ಕೆ ನಿಯೋಜಿಸಲಾಗಿದೆ ಎಂದರು.



Body:17 ಲಕ್ಷ ಮತದಾರರು: ಬಳ್ಳಾರಿ ಲೋಕಸಭಾ ಕ್ಷೇತ್ರದಲ್ಲಿ ಅಂದಾಜು 1751911 ಮತದಾರರಿದ್ದಾರೆ. ಆ ಪೈಕಿ 8,71,191 (ಪುರುಷರು) 8,80,488 (ಮಹಿಳೆಯರು), 232 (ಇತರರು) ಇದ್ದಾರೆ. ಕಾಂಗ್ರೆಸ್ ಅಭ್ಯರ್ಥಿ ವಿ.ಎಸ್.ಉಗ್ರಪ್ಪ, ಬಿಜೆಪಿ ಅಭ್ಯರ್ಥಿ ವೈ.ದೇವೇಂದ್ರಪ್ಪ, ಎಸ್ ಯುಸಿಐಸಿ ಪಕ್ಷದ ಎ.ದೇವದಾಸ, ಬಿಎಸ್ ಪಿ ಅಭ್ಯರ್ಥಿ ಕೆ.ಗೂಳಪ್ಪ ಸೇರಿದಂತೆ ಇತರೆ ಹನ್ನೊಂದು ಮಂದಿ ಅಭ್ಯರ್ಥಿಗಳು ಕಣದಲ್ಲಿದ್ದಾರೆ ಎಂದರು.
ಮತಗಟ್ಟೆಗಳತ್ತ‌ ಪ್ರಯಾಣ: ನಗರದ ಸಂತ ಜಾನರ ಶಾಲೆಯ ಆವರಣದಲ್ಲಿಂದು ಲೋಕಸಭಾ ಚುನಾವಣಾ ನಿಮಿತ್ತ ನಾಳೆಯ ದಿನ ನಡೆಯುವ ಮತದಾನದ ನಿಮಿತ್ತ ಇವಿಎಂ ಹಾಗೂ ವಿವಿಪ್ಯಾಟ್ ಮತ್ತು ಬ್ಯಾಲೆಟ್ ಬಾಕ್ಸ್ ವಿತರಣೆ ಕಾರ್ಯ ನಡೆಯಿತು. ಈ ಯಂತ್ರೋಪಕರಣಗಳನ್ನ ಸ್ವೀಕರಿಸಿದ ಸಿಬ್ಬಂದಿ ತಮ್ಮ ಮತಗಟ್ಟೆಗಳತ್ತ ಬಸ್ ಗಳಲ್ಲಿ ಪ್ರಯಾಣ ಬೆಳೆಸಿದರು.
ಡಿಸಿ ಭೇಟಿ: ಇಲ್ಲಿನ ಪೋರ್ಟ್ ಏರಿಯಾದಲ್ಲಿರುವ ಸಂತ ಜಾನರ ಶಾಲೆಯ ಆವರಣದಲ್ಲಿಂದು ಬಳ್ಳಾರಿ ನಗರ ಕ್ಷೇತ್ರದ ಮಸ್ಟರಿಂಗ್ ಕೇಂದ್ರಕ್ಕೆ ಜಿಲ್ಲಾಧಿಕಾರಿ ಡಾ.ವಿ.ರಾಮಪ್ರಸಾತ್ ಮನೋಹರ ಭೇಟಿ ನೀಡಿ, ಮಸ್ಟರಿಂಗ್ ಕಾರ್ಯದ ಪರಿಶೀಲನೆ ನಡೆಸಿದರು. ಪಾಲಿಕೆ ಆಯುಕ್ತೆ ತುಷಾರಮಣಿ, ವಾರ್ತಾ ಮತ್ತು ಸಾರ್ವಜನಿಕ ಸಂಪರ್ಕ ಇಲಾಖೆ ಹಿರಿಯ ಸಹಾಯಕ ನಿರ್ದೇಶಕ ಬಿ.ಕೆ.ರಾಮಲಿಂಗಪ್ಪ ಇದ್ದರು.

ವರದಿ: ವೀರೇಶ ಕಟ್ಟೆಮ್ಯಾಗಳ, ಬಳ್ಳಾರಿ.




Conclusion:ಪವರ್ ಡೈರೆಕ್ಟರ್ ನಲ್ಲಿ ವಿಡಿಯೊ ಕಳಿಸಿರುವೆ. ಗಮನಿಸಿರಿ.
R_KN_BEL_01_220419_CURTON_RISE_NEWS

For All Latest Updates

TAGGED:

ETV Bharat Logo

Copyright © 2025 Ushodaya Enterprises Pvt. Ltd., All Rights Reserved.