ETV Bharat / crime

ವಿರೋಧದ ನಡುವೆ ಮಗಳ ಮದುವೆಗೆ ಕೋಪ: 22 ವರ್ಷದ ಬಳಿಕೆ ಆಕೆಯ ಮಗಳಿಂದ ಸೇಡು ತೀರಿಸಿಕೊಂಡ ಕುಟುಂಬ - ಮಂಗಳೂರು ಕ್ರೈಮ್‌ ನ್ಯೂಸ್‌

ತಮ್ಮ ಮಗಳು ಬೇರೆ ಕೋಮಿನ ಯುವಕನನ್ನು ಮದುವೆಯಾಗಿದ್ದಕ್ಕೆ ಕುಟುಂಬವೊಂದು ಎರಡು ದಶಕಗಳ ಬಳಿಕ ಸೇಡು ತೀರಿಸಿಕೊಂಡ ಘಟನೆ ಬೆಳಕಿಗೆ ಬಂದಿದೆ.

Family revenge through daughter in mangalore , Dakshina kannada
2 ದಶಕಗಳ ಹಿಂದೆ ಅನ್ಯಕೋಮಿನ ಯುವಕನೊಂದಿಗೆ ಮದುವೆಯಾಗಿದ್ದಕ್ಕೆ ಸಿಟ್ಟು; ಪುತ್ರಿಯ ಮೂಲಕ ಸೇಡು ತೀರಿಸಿಕೊಂಡ ಕುಟುಂಬ!
author img

By

Published : Sep 9, 2021, 4:37 PM IST

Updated : Sep 9, 2021, 4:54 PM IST

ಮಂಗಳೂರು: 22 ವರ್ಷದ ಹಿಂದೆ ಅನ್ಯಕೋಮಿನ ಯುವಕನನ್ನು ಮದುವೆಯಾಗಿದ್ದ ಯುವತಿಯ ಕುಟುಂಬದವರು ಆಕೆಯ ಮಗಳ ಮೂಲಕ ಸೇಡು ತೀರಿಸಿಕೊಂಡಿದ್ದಾರೆ.

ಇತ್ತೀಚೆಗೆ ಬರ್ಕೆ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ 21 ವರ್ಷದ ಯುವತಿಯೊಬ್ಬಳು ನಿಶ್ಚಿತಾರ್ಥವಾದ ಬಳಿಕ ಚಿನ್ನಾಭರಣದೊಂದಿಗೆ ನಾಪತ್ತೆಯಾದ ಪ್ರಕರಣ ವರದಿಯಾಗಿತ್ತು. ಈ ಮದುವೆ ನಿಶ್ಚಯಿಸಲಾಗಿದ್ದ ಯುವಕನ ಕಡೆಯವರು ನೀಡಿದ ಚಿನ್ನಾಭರಣ ಮತ್ತು 90 ಸಾವಿರ ನಗದನ್ನು ಯುವಕನೊಬ್ಬನ ಖಾತೆಗೆ ವರ್ಗಾಯಿಸಿ ಯುವತಿ ಪರಾರಿಯಾಗಿದ್ದಳು. ಈ ಬಗ್ಗೆ ಬರ್ಕೆ ಠಾಣೆಯಲ್ಲಿ ಯುವತಿಯ ತಾಯಿ ದೂರು ನೀಡಿದ್ದರು. ಈ ಸಂದರ್ಭದಲ್ಲಿ ಪ್ರಕರಣವನ್ನು ವಿಶ್ವ ಹಿಂದೂ ಪರಿಷತ್ ಲವ್ ಜಿಹಾದ್ ಎಂದು ಆರೋಪಿಸಿತ್ತು.

ಆದರೆ, ಈ ನಾಪತ್ತೆ ಪ್ರಕರಣದ ಹಿಂದೆ ಕುಟುಂಬವೊಂದು ಸೇಡು ತೀರಿಸಿಕೊಂಡಿರುವುದು ಬೆಳಕಿಗೆ ಬಂದಿದೆ. ನಾಪತ್ತೆಯಾದ ಯುವತಿಯ ತಾಯಿ ಅನ್ಯಕೋಮಿನ ಯುವಕನನ್ನು ಪ್ರೀತಿಸಿ ಮದುವೆಯಾಗಿದ್ದರು. ಇದರಿಂದ ಯುವತಿಯ ಮನೆಯವರು ಅವಮಾನಕ್ಕೊಳಗಾಗಿ ಸೇಡು ತೀರಿಸಲು ಕಾಯುತ್ತಿದ್ದರು. ಈ ಮಹಿಳೆಯ ಪುತ್ರಿಗೆ ನಿಶ್ಚಿತಾರ್ಥವಾದ ಬೆನ್ನಲ್ಲೇ ಕುಟುಂಬ ಆಕೆಯ ಮೂಲಕ ಸೇಡು ತೀರಿಸಲು ನಿರ್ಧರಿಸಿತ್ತು. ಆಕೆಯನ್ನು ಮನೆಬಿಟ್ಟು ಬರುವಂತೆ ಸೂಚಿಸಿದ ಮಹಿಳೆಯ ಹೆತ್ತವರು, ಗದಗದಲ್ಲಿರುವ ಮಹಿಳೆಯ ಅಕ್ಕನ ಮಗನಿಗೆ ಕೊಟ್ಟು ಮದುವೆ ಮಾಡಿಸಿದ್ದಾರೆ. ಗದಗದಲ್ಲಿ ರಿಜಿಸ್ಟರ್ ಮದುವೆ ಆಗಿರುವ ಬಗ್ಗೆ ಪೊಲೀಸ್ ಮೂಲಗಳಿಂದ ಮಾಹಿತಿ ತಿಳಿದುಬಂದಿದೆ.

ಹಿಂದೂ ಯುವಕನನ್ನು ಪ್ರೀತಿಸಿ ಮದುವೆಯಾದ ತಮ್ಮ ಮನೆ ಮಗಳನ್ನು ಗದಗದ ಮುಸ್ಲಿಂ ಕುಟುಂಬ ಆಕೆಯ ಮಗಳ ಮೂಲಕ ಮತ್ತೆ ತಮ್ಮ ಕುಟುಂಬಕ್ಕೆ ಸೇರಿಸಿ ಸೇಡು ತೀರಿಸಿಕೊಂಡಿದೆ.

ಮಂಗಳೂರು: 22 ವರ್ಷದ ಹಿಂದೆ ಅನ್ಯಕೋಮಿನ ಯುವಕನನ್ನು ಮದುವೆಯಾಗಿದ್ದ ಯುವತಿಯ ಕುಟುಂಬದವರು ಆಕೆಯ ಮಗಳ ಮೂಲಕ ಸೇಡು ತೀರಿಸಿಕೊಂಡಿದ್ದಾರೆ.

ಇತ್ತೀಚೆಗೆ ಬರ್ಕೆ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ 21 ವರ್ಷದ ಯುವತಿಯೊಬ್ಬಳು ನಿಶ್ಚಿತಾರ್ಥವಾದ ಬಳಿಕ ಚಿನ್ನಾಭರಣದೊಂದಿಗೆ ನಾಪತ್ತೆಯಾದ ಪ್ರಕರಣ ವರದಿಯಾಗಿತ್ತು. ಈ ಮದುವೆ ನಿಶ್ಚಯಿಸಲಾಗಿದ್ದ ಯುವಕನ ಕಡೆಯವರು ನೀಡಿದ ಚಿನ್ನಾಭರಣ ಮತ್ತು 90 ಸಾವಿರ ನಗದನ್ನು ಯುವಕನೊಬ್ಬನ ಖಾತೆಗೆ ವರ್ಗಾಯಿಸಿ ಯುವತಿ ಪರಾರಿಯಾಗಿದ್ದಳು. ಈ ಬಗ್ಗೆ ಬರ್ಕೆ ಠಾಣೆಯಲ್ಲಿ ಯುವತಿಯ ತಾಯಿ ದೂರು ನೀಡಿದ್ದರು. ಈ ಸಂದರ್ಭದಲ್ಲಿ ಪ್ರಕರಣವನ್ನು ವಿಶ್ವ ಹಿಂದೂ ಪರಿಷತ್ ಲವ್ ಜಿಹಾದ್ ಎಂದು ಆರೋಪಿಸಿತ್ತು.

ಆದರೆ, ಈ ನಾಪತ್ತೆ ಪ್ರಕರಣದ ಹಿಂದೆ ಕುಟುಂಬವೊಂದು ಸೇಡು ತೀರಿಸಿಕೊಂಡಿರುವುದು ಬೆಳಕಿಗೆ ಬಂದಿದೆ. ನಾಪತ್ತೆಯಾದ ಯುವತಿಯ ತಾಯಿ ಅನ್ಯಕೋಮಿನ ಯುವಕನನ್ನು ಪ್ರೀತಿಸಿ ಮದುವೆಯಾಗಿದ್ದರು. ಇದರಿಂದ ಯುವತಿಯ ಮನೆಯವರು ಅವಮಾನಕ್ಕೊಳಗಾಗಿ ಸೇಡು ತೀರಿಸಲು ಕಾಯುತ್ತಿದ್ದರು. ಈ ಮಹಿಳೆಯ ಪುತ್ರಿಗೆ ನಿಶ್ಚಿತಾರ್ಥವಾದ ಬೆನ್ನಲ್ಲೇ ಕುಟುಂಬ ಆಕೆಯ ಮೂಲಕ ಸೇಡು ತೀರಿಸಲು ನಿರ್ಧರಿಸಿತ್ತು. ಆಕೆಯನ್ನು ಮನೆಬಿಟ್ಟು ಬರುವಂತೆ ಸೂಚಿಸಿದ ಮಹಿಳೆಯ ಹೆತ್ತವರು, ಗದಗದಲ್ಲಿರುವ ಮಹಿಳೆಯ ಅಕ್ಕನ ಮಗನಿಗೆ ಕೊಟ್ಟು ಮದುವೆ ಮಾಡಿಸಿದ್ದಾರೆ. ಗದಗದಲ್ಲಿ ರಿಜಿಸ್ಟರ್ ಮದುವೆ ಆಗಿರುವ ಬಗ್ಗೆ ಪೊಲೀಸ್ ಮೂಲಗಳಿಂದ ಮಾಹಿತಿ ತಿಳಿದುಬಂದಿದೆ.

ಹಿಂದೂ ಯುವಕನನ್ನು ಪ್ರೀತಿಸಿ ಮದುವೆಯಾದ ತಮ್ಮ ಮನೆ ಮಗಳನ್ನು ಗದಗದ ಮುಸ್ಲಿಂ ಕುಟುಂಬ ಆಕೆಯ ಮಗಳ ಮೂಲಕ ಮತ್ತೆ ತಮ್ಮ ಕುಟುಂಬಕ್ಕೆ ಸೇರಿಸಿ ಸೇಡು ತೀರಿಸಿಕೊಂಡಿದೆ.

Last Updated : Sep 9, 2021, 4:54 PM IST
ETV Bharat Logo

Copyright © 2025 Ushodaya Enterprises Pvt. Ltd., All Rights Reserved.