ETV Bharat / crime

ಜೈಲಿನಿಂದ ಮುನಾವರ್ ಫಾರೂಕಿ ಬಿಡುಗಡೆ: ನ್ಯಾಯ ಸಿಕ್ಕೇ ಸಿಗುತ್ತದೆ ಎಂದ ಹಾಸ್ಯ ಕಲಾವಿದ - ಜೈಲಿನಿಂದ ಬಿಡುಗಡೆಯಾದ ಬಳಿಕ ಕಾಮಿಡಿಯನ್ ಮುನಾವರ್ ಪ್ರತಿಕ್ರಿಯೆ

ಇಂದೋರ್ ಕೇಂದ್ರ ಕಾರಾಗೃಹದಿಂದ ಸ್ಟ್ಯಾಂಡಪ್ ಕಾಮಿಡಿಯನ್ ಮುನಾವರ್ ಫಾರೂಕಿ ಬಿಡುಗಡೆಯಾಗಿದ್ದು, ನಮ್ಮ ನ್ಯಾಯಾಂಗ ವ್ಯವಸ್ಥೆ ಬಗ್ಗೆ ನನಗೆ ನಂಬಿಕೆಯಿದೆ. ನನಗೆ ನ್ಯಾಯ ಸಿಕ್ಕೇ ಸಿಗುತ್ತದೆ ಎಂದಿದ್ದಾರೆ.

Comedian Munawar Faruqui released from Indore Central Jail
ಜೈಲಿನಿಂದ ಮುನಾವರ್ ಫಾರೂಕಿ ಬಿಡುಗಡೆ
author img

By

Published : Feb 7, 2021, 3:54 PM IST

ಇಂದೋರ್ (ಮಧ್ಯಪ್ರದೇಶ): ಧಾರ್ಮಿಕ ಭಾವನೆಗೆ ಧಕ್ಕೆ ಮತ್ತು ಕೇಂದ್ರ ಗೃಹ ಸಚಿವ ಅಮಿತ್​​ ಶಾ ಬಗ್ಗೆ ಅವಹೇಳನಕಾರಿ ಹೇಳಿಕೆ ಆರೋಪದ ಮೇಲೆ ಅರೆಸ್ಟ್​ ಆಗಿದ್ದ ಹಾಸ್ಯ ಕಲಾವಿದ ಮುನಾವರ್ ಫಾರೂಕಿ ಇಂದು ಇಂದೋರ್ ಕೇಂದ್ರ ಕಾರಾಗೃಹದಿಂದ ಬಿಡುಗಡೆಯಾಗಿದ್ದಾರೆ.

ಶುಕ್ರವಾರವೇ ಫಾರೂಕಿಗೆ ಸುಪ್ರೀಂ ಕೋರ್ಟ್ ಜಾಮೀನು ನೀಡಿತ್ತಾದರೂ ಇಂದು ಜೈಲಿನಿಂದ ರಿಲೀಸ್​ ಮಾಡಲಾಗಿದೆ. ಮಾಧ್ಯಮದವರಿಂದ ತಪ್ಪಿಸಲು ಹಾಗೂ ಸುರಕ್ಷತೆಗಾಗಿ ಮುನಾವರ್ ಫಾರೂಕಿ ಅವರನ್ನು ಜೈಲಿನ ಮುಖ್ಯ ದ್ವಾರದ ಬದಲಾಗಿ ಮತ್ತೊಂದು ಬಾಗಿಲಿನಿಂದ ಪೊಲೀಸ್​ ಭದ್ರತೆಯೊಂದಿಗೆ ಬಿಡುಗಡೆ ಮಾಡಲಾಗಿದೆ.

ಬಿಡುಗಡೆ ಬಳಿಕ ಈಟಿವಿ ಭಾರತದೊಂದಿಗೆ ಮಾತನಾಡಿದ ಫಾರೂಕಿ

ಬಿಡುಗಡೆ ಬಳಿಕ ಈಟಿವಿ ಭಾರತದೊಂದಿಗೆ ಮಾತನಾಡಿದ ಫಾರೂಕಿ, "ನಮ್ಮ ನ್ಯಾಯಾಂಗ ವ್ಯವಸ್ಥೆ ಬಗ್ಗೆ ನನಗೆ ನಂಬಿಕೆಯಿದೆ. ನನಗೆ ನ್ಯಾಯ ಸಿಕ್ಕೇ ಸಿಗುತ್ತದೆ" ಎಂದು ಹೇಳಿದರು.

ಇದನ್ನೂ ಓದಿ: 'ಉತ್ತರಾಖಂಡದೊಂದಿಗೆ ಭಾರತ ನಿಂತಿದೆ' ಎಂದ ಮೋದಿ, ಅಮಿತ್​ ಶಾ.. ರಕ್ಷಣೆಗೆ ಧಾವಿಸಿದ ಸೇನಾ ಪಡೆ

ಮಧ್ಯಪ್ರದೇಶದ ಇಂದೋರ್​ನಲ್ಲಿ ನಡೆದ ಕಾರ್ಯಕ್ರಮವೊಂದರಲ್ಲಿ ಧಾರ್ಮಿಕ ಭಾವನೆಗಳಿಗೆ ಧಕ್ಕೆ ತಂದ ಹಾಗೂ ಅಮಿತ್​​ ಶಾ ಬಗ್ಗೆ ಅವಹೇಳನಕಾರಿ ಹೇಳಿಕೆ ನೀಡಿದ ಆರೋಪದಡಿ ಬಿಜೆಪಿ ಶಾಸಕರೊಬ್ಬರು ಮುನಾವರ್ ವಿರುದ್ಧ ಪ್ರಕರಣ ದಾಖಲಿಸಿದ್ದರು. ಈ ಸಂಬಂಧ ಜನವರಿ 2ರಂದು ಸ್ಟ್ಯಾಂಡಪ್ ಕಾಮಿಡಿಯನ್ ಮುನಾವರ್ ಫಾರೂಕಿ ಸೇರಿ ನಾಲ್ವರನ್ನು ಪೊಲೀಸರು ಬಂಧಿಸಿದ್ದರು.

ಇಂದೋರ್ (ಮಧ್ಯಪ್ರದೇಶ): ಧಾರ್ಮಿಕ ಭಾವನೆಗೆ ಧಕ್ಕೆ ಮತ್ತು ಕೇಂದ್ರ ಗೃಹ ಸಚಿವ ಅಮಿತ್​​ ಶಾ ಬಗ್ಗೆ ಅವಹೇಳನಕಾರಿ ಹೇಳಿಕೆ ಆರೋಪದ ಮೇಲೆ ಅರೆಸ್ಟ್​ ಆಗಿದ್ದ ಹಾಸ್ಯ ಕಲಾವಿದ ಮುನಾವರ್ ಫಾರೂಕಿ ಇಂದು ಇಂದೋರ್ ಕೇಂದ್ರ ಕಾರಾಗೃಹದಿಂದ ಬಿಡುಗಡೆಯಾಗಿದ್ದಾರೆ.

ಶುಕ್ರವಾರವೇ ಫಾರೂಕಿಗೆ ಸುಪ್ರೀಂ ಕೋರ್ಟ್ ಜಾಮೀನು ನೀಡಿತ್ತಾದರೂ ಇಂದು ಜೈಲಿನಿಂದ ರಿಲೀಸ್​ ಮಾಡಲಾಗಿದೆ. ಮಾಧ್ಯಮದವರಿಂದ ತಪ್ಪಿಸಲು ಹಾಗೂ ಸುರಕ್ಷತೆಗಾಗಿ ಮುನಾವರ್ ಫಾರೂಕಿ ಅವರನ್ನು ಜೈಲಿನ ಮುಖ್ಯ ದ್ವಾರದ ಬದಲಾಗಿ ಮತ್ತೊಂದು ಬಾಗಿಲಿನಿಂದ ಪೊಲೀಸ್​ ಭದ್ರತೆಯೊಂದಿಗೆ ಬಿಡುಗಡೆ ಮಾಡಲಾಗಿದೆ.

ಬಿಡುಗಡೆ ಬಳಿಕ ಈಟಿವಿ ಭಾರತದೊಂದಿಗೆ ಮಾತನಾಡಿದ ಫಾರೂಕಿ

ಬಿಡುಗಡೆ ಬಳಿಕ ಈಟಿವಿ ಭಾರತದೊಂದಿಗೆ ಮಾತನಾಡಿದ ಫಾರೂಕಿ, "ನಮ್ಮ ನ್ಯಾಯಾಂಗ ವ್ಯವಸ್ಥೆ ಬಗ್ಗೆ ನನಗೆ ನಂಬಿಕೆಯಿದೆ. ನನಗೆ ನ್ಯಾಯ ಸಿಕ್ಕೇ ಸಿಗುತ್ತದೆ" ಎಂದು ಹೇಳಿದರು.

ಇದನ್ನೂ ಓದಿ: 'ಉತ್ತರಾಖಂಡದೊಂದಿಗೆ ಭಾರತ ನಿಂತಿದೆ' ಎಂದ ಮೋದಿ, ಅಮಿತ್​ ಶಾ.. ರಕ್ಷಣೆಗೆ ಧಾವಿಸಿದ ಸೇನಾ ಪಡೆ

ಮಧ್ಯಪ್ರದೇಶದ ಇಂದೋರ್​ನಲ್ಲಿ ನಡೆದ ಕಾರ್ಯಕ್ರಮವೊಂದರಲ್ಲಿ ಧಾರ್ಮಿಕ ಭಾವನೆಗಳಿಗೆ ಧಕ್ಕೆ ತಂದ ಹಾಗೂ ಅಮಿತ್​​ ಶಾ ಬಗ್ಗೆ ಅವಹೇಳನಕಾರಿ ಹೇಳಿಕೆ ನೀಡಿದ ಆರೋಪದಡಿ ಬಿಜೆಪಿ ಶಾಸಕರೊಬ್ಬರು ಮುನಾವರ್ ವಿರುದ್ಧ ಪ್ರಕರಣ ದಾಖಲಿಸಿದ್ದರು. ಈ ಸಂಬಂಧ ಜನವರಿ 2ರಂದು ಸ್ಟ್ಯಾಂಡಪ್ ಕಾಮಿಡಿಯನ್ ಮುನಾವರ್ ಫಾರೂಕಿ ಸೇರಿ ನಾಲ್ವರನ್ನು ಪೊಲೀಸರು ಬಂಧಿಸಿದ್ದರು.

ETV Bharat Logo

Copyright © 2025 Ushodaya Enterprises Pvt. Ltd., All Rights Reserved.