ETV Bharat / city

ಇನ್ಮುಂದೆ ಸಾರ್ವಜನಿಕವಾಗಿ ರೌಡಿಗಳ ಪರೇಡ್: ಎಸ್​ಪಿ ರಾಹುಲ್ ಕುಮಾರ್ ವಾರ್ನಿಂಗ್

author img

By

Published : Jul 29, 2021, 10:50 AM IST

ಇನ್ಮುಂದೆ ಅಪರಾಧ ಚಟುವಟಿಕೆಗಳಲ್ಲಿ ತೊಡಗಿಸಿಕೊಂಡಿರುವುದು ಗೊತ್ತಾದರೆ ಸಾರ್ವಜನಿಕವಾಗಿ ರೌಡಿಗಳ ಪರೇಡ್​ ನಡೆಸಲಾಗುವುದು ಎಂದು ತುಮಕೂರು ಎಸ್​ಪಿ ರಾಹುಲ್ ಕುಮಾರ್ ಖಡಕ್ ವಾರ್ನಿಂಗ್ ನೀಡಿದ್ದಾರೆ.

Tumkur
ತುಮಕೂರು

ತುಮಕೂರು: ಪದೇ ಪದೆ ಅಪರಾಧ ಚಟುವಟಿಕೆಗಳಲ್ಲಿ ತೊಡಗಿಸಿಕೊಂಡಿರುವುದು ಪತ್ತೆಯಾದರೆ ಇನ್ಮುಂದೆ ಸಾರ್ವಜನಿಕವಾಗಿ ರೌಡಿಗಳ ಪರೇಡ್ ನಡೆಸಲಾಗುವುದು ಎಂದು ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ರಾಹುಲ್ ಕುಮಾರ್ ಶಹಪೂರ್‌ವಾಡ್ ಖಡಕ್ ಎಚ್ಚರಿಕೆ ನೀಡಿದ್ದಾರೆ.

ಇನ್ಮುಂದೆ ಸಾರ್ವಜನಿಕವಾಗಿ ರೌಡಿಗಳ ಪರೇಡ್: ಎಸ್​ಪಿ ರಾಹುಲ್ ಕುಮಾರ್ ವಾರ್ನಿಂಗ್

ಇಷ್ಟು ದಿನ ಪೊಲೀಸ್ ಅಧಿಕಾರಿಗಳು ಹಾಗೂ ಸಿಬ್ಬಂದಿ ಸಮ್ಮುಖದಲ್ಲಿ ರೌಡಿಶೀಟರ್​​​​​​​ಗಳ ಪರೇಡ್​ ನಡೆಸಿ, ಅಪರಾಧ ಚುಟುವಟಿಗಳಲ್ಲಿ ಭಾಗಿಯಾಗದಂತೆ ಎಚ್ಚರಿಕೆ ನೀಡಲಾಗುತ್ತಿತ್ತು. ಇದಕ್ಕೆ ಕ್ಯಾರೆ ಎನ್ನದ ರೌಡಿಗಳು, ಪುನಃ ಅಪರಾಧ ಚಟುವಟಿಕೆಗಳಲ್ಲಿ ಪಾಲ್ಗೊಳ್ಳುತ್ತಿದ್ದರು.

ಹೀಗಾಗಿ, ಮಧುಗಿರಿ ಪಟ್ಟಣದ ರಾಜೀವ್ ಗಾಂಧಿ ಕ್ರೀಡಾಂಗಣದಲ್ಲಿ ಮಧುಗಿರಿ ಉಪವಿಭಾಗ ವ್ಯಾಪ್ತಿಯ ರೌಡಿಶೀಟರ್​ಗಳು ಮತ್ತು ವಿವಿಧ ಅಪರಾಧ ಪ್ರಕರಣಗಳಲ್ಲಿ ಭಾಗಿಯಾದವರ ಪರೇಡ್​ ನಡೆಸಿದ ಎಸ್​ಪಿ ರಾಹುಲ್ ಕುಮಾರ್, ಇನ್ಮುಂದೆ ಅಪರಾಧ ಚಟುವಟಿಕೆಗಳಲ್ಲಿ ತೊಡಗಿಸಿಕೊಂಡಿರುವುದು ಗೊತ್ತಾದರೆ ಸಾರ್ವಜನಿಕರ ಮುಂದೆ ಪರೇಡ್​ ನಡೆಸಲಾಗುವುದು ಎಂದು ವಾರ್ನಿಂಗ್ ಕೊಟ್ಟಿದ್ದಾರೆ.

ಜೊತೆಗೆ ಮುಂದಿನ ಬಾರಿ ರೌಡಿ​ಗಳ ಪರೇಡ್ ನಡೆಸುವ ಸಂದರ್ಭದಲ್ಲಿ ಸಾರ್ವಜನಿಕರು ನೆರೆದಿರಬೇಕು. ಈ ಕುರಿತು ಸಾರ್ವಜನಿಕರ ಭಾಗವಹಿಸುವಿಕೆಗೆ ಪ್ರಚಾರ ಮಾಡಬೇಕು ಎಂದು ಸ್ಥಳದಲ್ಲಿದ್ದ ಪೊಲೀಸ್ ಅಧಿಕಾರಿಗಳಿಗೆ ಸೂಚನೆ ನೀಡಿದ್ದಾರೆ. ಅಲ್ಲದೇ, ಆಯಾ ತಾಲೂಕು ಕೇಂದ್ರಗಳಲ್ಲಿ ರೌಡಿಗಳು, ಮಟ್ಕಾ ಹಾಗೂ ಜೂಜಾಟ ಪರೇಡ್ ನಡೆಸಲು ಸೂಚಿಸಿದ್ದರು.

ಇದನ್ನೂ ಓದಿ: ಕೃಷ್ಣಾ ನದಿಗೆ 4 ಲಕ್ಷ ಕ್ಯೂಸೆಕ್ ನೀರು ಬಿಡುಗಡೆ: ಪ್ರಸಿದ್ಧ ಅಲ್ಲಮಪ್ರಭುಲಿಂಗೇಶ್ವರ ದೇಗುಲ ಜಲಾವೃತ

ತುಮಕೂರು: ಪದೇ ಪದೆ ಅಪರಾಧ ಚಟುವಟಿಕೆಗಳಲ್ಲಿ ತೊಡಗಿಸಿಕೊಂಡಿರುವುದು ಪತ್ತೆಯಾದರೆ ಇನ್ಮುಂದೆ ಸಾರ್ವಜನಿಕವಾಗಿ ರೌಡಿಗಳ ಪರೇಡ್ ನಡೆಸಲಾಗುವುದು ಎಂದು ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ರಾಹುಲ್ ಕುಮಾರ್ ಶಹಪೂರ್‌ವಾಡ್ ಖಡಕ್ ಎಚ್ಚರಿಕೆ ನೀಡಿದ್ದಾರೆ.

ಇನ್ಮುಂದೆ ಸಾರ್ವಜನಿಕವಾಗಿ ರೌಡಿಗಳ ಪರೇಡ್: ಎಸ್​ಪಿ ರಾಹುಲ್ ಕುಮಾರ್ ವಾರ್ನಿಂಗ್

ಇಷ್ಟು ದಿನ ಪೊಲೀಸ್ ಅಧಿಕಾರಿಗಳು ಹಾಗೂ ಸಿಬ್ಬಂದಿ ಸಮ್ಮುಖದಲ್ಲಿ ರೌಡಿಶೀಟರ್​​​​​​​ಗಳ ಪರೇಡ್​ ನಡೆಸಿ, ಅಪರಾಧ ಚುಟುವಟಿಗಳಲ್ಲಿ ಭಾಗಿಯಾಗದಂತೆ ಎಚ್ಚರಿಕೆ ನೀಡಲಾಗುತ್ತಿತ್ತು. ಇದಕ್ಕೆ ಕ್ಯಾರೆ ಎನ್ನದ ರೌಡಿಗಳು, ಪುನಃ ಅಪರಾಧ ಚಟುವಟಿಕೆಗಳಲ್ಲಿ ಪಾಲ್ಗೊಳ್ಳುತ್ತಿದ್ದರು.

ಹೀಗಾಗಿ, ಮಧುಗಿರಿ ಪಟ್ಟಣದ ರಾಜೀವ್ ಗಾಂಧಿ ಕ್ರೀಡಾಂಗಣದಲ್ಲಿ ಮಧುಗಿರಿ ಉಪವಿಭಾಗ ವ್ಯಾಪ್ತಿಯ ರೌಡಿಶೀಟರ್​ಗಳು ಮತ್ತು ವಿವಿಧ ಅಪರಾಧ ಪ್ರಕರಣಗಳಲ್ಲಿ ಭಾಗಿಯಾದವರ ಪರೇಡ್​ ನಡೆಸಿದ ಎಸ್​ಪಿ ರಾಹುಲ್ ಕುಮಾರ್, ಇನ್ಮುಂದೆ ಅಪರಾಧ ಚಟುವಟಿಕೆಗಳಲ್ಲಿ ತೊಡಗಿಸಿಕೊಂಡಿರುವುದು ಗೊತ್ತಾದರೆ ಸಾರ್ವಜನಿಕರ ಮುಂದೆ ಪರೇಡ್​ ನಡೆಸಲಾಗುವುದು ಎಂದು ವಾರ್ನಿಂಗ್ ಕೊಟ್ಟಿದ್ದಾರೆ.

ಜೊತೆಗೆ ಮುಂದಿನ ಬಾರಿ ರೌಡಿ​ಗಳ ಪರೇಡ್ ನಡೆಸುವ ಸಂದರ್ಭದಲ್ಲಿ ಸಾರ್ವಜನಿಕರು ನೆರೆದಿರಬೇಕು. ಈ ಕುರಿತು ಸಾರ್ವಜನಿಕರ ಭಾಗವಹಿಸುವಿಕೆಗೆ ಪ್ರಚಾರ ಮಾಡಬೇಕು ಎಂದು ಸ್ಥಳದಲ್ಲಿದ್ದ ಪೊಲೀಸ್ ಅಧಿಕಾರಿಗಳಿಗೆ ಸೂಚನೆ ನೀಡಿದ್ದಾರೆ. ಅಲ್ಲದೇ, ಆಯಾ ತಾಲೂಕು ಕೇಂದ್ರಗಳಲ್ಲಿ ರೌಡಿಗಳು, ಮಟ್ಕಾ ಹಾಗೂ ಜೂಜಾಟ ಪರೇಡ್ ನಡೆಸಲು ಸೂಚಿಸಿದ್ದರು.

ಇದನ್ನೂ ಓದಿ: ಕೃಷ್ಣಾ ನದಿಗೆ 4 ಲಕ್ಷ ಕ್ಯೂಸೆಕ್ ನೀರು ಬಿಡುಗಡೆ: ಪ್ರಸಿದ್ಧ ಅಲ್ಲಮಪ್ರಭುಲಿಂಗೇಶ್ವರ ದೇಗುಲ ಜಲಾವೃತ

ETV Bharat Logo

Copyright © 2024 Ushodaya Enterprises Pvt. Ltd., All Rights Reserved.