ETV Bharat / city

ನಿಜ ಜೀವನದಲ್ಲೂ ಅಭಿಮನ್ಯುವಾದೆ... ಯುದ್ಧ ಮುಗಿದ ಮೇಲೂ ಹಿಂದಿನಿಂದ ತಿವಿದರು: ನಿಖಿಲ್​ ಕುಮಾರಸ್ವಾಮಿ

author img

By

Published : Nov 18, 2019, 10:12 AM IST

ಮಂಡ್ಯ ಲೋಕಸಭಾ ಚುನಾವಣೆಯಲ್ಲಿ ಪಕ್ಷೇತರ ಅಭ್ಯರ್ಥಿಯಾಗಿ ನಟಿ ಸುಮಲತಾ ಅಂಬರೀಷ್​ ಕಣಕ್ಕಿಳಿದು, ಜೆಡಿಎಸ್​ನ ನಿಖಿಲ್​ ಕುಮಾರಸ್ವಾಮಿಯನ್ನು ಸೋಲಿಸಿ ಇತಿಹಾಸ ಬರೆದಿದ್ದರು. ಆದರೆ ಚುನಾವಣೆಯಲ್ಲಿ ಉಂಟಾದ ಅನುಭವ, ಅನುಭವಿಸಿದ ಸಂಕಟದ ಬಗ್ಗೆ ಜೆಡಿಎಸ್​ ಪರಾಜಿತ ಅಭ್ಯರ್ಥಿ ನಿಖಿಲ್​ ಕುಮಾರಸ್ವಾಮಿ ಮನಬಿಚ್ಚಿ ಮಾತನಾಡಿದ್ದಾರೆ.

ಕನ್ನಡ ರಾಜ್ಯೋತ್ಸವ ಕಾರ್ಯಕ್ರಮದಲ್ಲಿ ಪಾಲ್ಗೊಂಡು ಮಾತನಾಡಿದ ನಿಖಿಲ್​

ತುಮಕೂರು: ಮಂಡ್ಯದಲ್ಲಿ ಸೋತಿರಬಹುದು ಆದರೆ ಅನುಭವ ಅಪಾರ ಕುರುಕ್ಷೇತ್ರ ಸಿನಿಮಾದಲ್ಲಿ ಅಭಿಮನ್ಯು ಆದ ನಾನು ನಿಜ ಜೀವನದಲ್ಲೂ ಅಭಿಮನ್ಯುವಾಗಿ ಹೋದೆ. ಕುರುಕ್ಷೇತ್ರದಲ್ಲಿ ಘಂಟೆ ಬಾರಿಸಿದ ಬಳಿಕ ಮತ್ತೆ ಯುದ್ಧ ಮಾಡುವ ಹಾಗಿಲ್ಲ. ಆದರೆ ನನಗೆ ಯುದ್ಧ ಮುಗಿದರೂ ಹಿಂದಿನಿಂದ ತಿವಿದರು ಎಂದು ಜೆಡಿಎಸ್ ಯುವ ಘಟಕದ ರಾಜ್ಯಾಧ್ಯಕ್ಷ ನಿಖಿಲ್ ಕುಮಾರಸ್ವಾಮಿ ಆರೋಪಿಸಿದರು.

ಕನ್ನಡ ರಾಜ್ಯೋತ್ಸವ ಕಾರ್ಯಕ್ರಮದಲ್ಲಿ ಪಾಲ್ಗೊಂಡು ಮಾತನಾಡಿದ ನಿಖಿಲ್​

ತುಮಕೂರು ತಾಲೂಕು ಹೊನ್ನುಡಿಕೆ ಗ್ರಾಮದಲ್ಲಿ ನಡೆದ ಕನ್ನಡ ರಾಜ್ಯೋತ್ಸವ ಕಾರ್ಯಕ್ರಮದಲ್ಲಿ ಪಾಲ್ಗೊಂಡು ಮಾತನಾಡಿದ ನಿಖಿಲ್​, ಮಂಡ್ಯ ಲೋಕಸಭೆ ಚುನಾವಣೆಯಲ್ಲಿ ನನ್ನ ಸೋಲಿಸಲು ಕೆಲವರು ನಿದ್ದೆ ಮಾಡಲಿಲ್ಲ, ಊಟ ತಿಂಡಿ ಬಿಟ್ಟಿದ್ದರು, ಷಡ್ಯಂತ್ರ ಮಾಡಿದ್ರು. ನಾನು ಮೈತ್ರಿ ಅಭ್ಯರ್ಥಿಯಾಗಿ ಕಣದಲ್ಲಿದ್ದೆ, ಆದರೆ ಮೈತ್ರಿ ಧರ್ಮ ಪಾಲನೆ ಆಗಲಿಲ್ಲ ಎಂದರು. ಮಂಡ್ಯ ಚುನಾವಣೆಯನ್ನು ಇಡೀ ದೇಶ ಗಮನಿಸಿತ್ತು. ಅದು ಇತಿಹಾಸ ನಿರ್ಮಿಸಿದೆ ಅಂದರೆ ತಪ್ಪಾಗಲಾರದು. ಎಷ್ಟೋ ಜನರು ಕುಮಾರಣ್ಣನ ಹೆಸರಲ್ಲಿ ಗೆದ್ದಿದ್ದಾರೆ. ಆದರೆ ಯಾವತ್ತೂ ಚುನಾವಣೆಗೆ ನಿಲ್ಲಲು ನಾನು ಮುಂದಾಗಿರಲಿಲ್ಲ. ಮುಖಂಡರ ಒತ್ತಾಯದ ಮೇರೆಗೆ ನಿಂತೆ ಎಂದರು.

ಯೋಗ ಪಡೆದುಕೊಂಡು ಬರಬೇಕು. ಯೋಗ್ಯತೆ ಬೆಳೆಸಿಕೊಳ್ಳಬೇಕು. ನಾನು ಯೋಗ್ಯತೆ ಬೆಳೆಸಿಕೊಳ್ಳುತ್ತಿದ್ದೇನೆ. ದೊಡ್ಡಗೌಡರು ಯುವ ಘಟಕದ ಸ್ಥಾನ ನೀಡಿ ನನಗೆ ದೊಡ್ಡ ಜವಾಬ್ದಾರಿ ಕೊಟ್ಟರು. ಒಲ್ಲದ ಮನಸ್ಸಿನಿಂದ ನಾನು ಒಪ್ಪಿಕೊಂಡೆ ಎಂದು ಹೇಳಿದರು.

ನಾರಾಯಣಗೌಡ ವಿರುದ್ಧ ನಿಖಿಲ್ ಆಕ್ರೋಶ:

ಅಂದು ಕೆ.ಆರ್.ಪೇಟೆಯಲ್ಲಿ ನಾರಾಯಣ ಗೌಡರಿಗೆ ಟಿಕೆಟ್​ ನೀಡಲು ವಿರೋಧವಿತ್ತು. ಆದರೆ ಇದೇ ನಿಖಿಲ್ ಕುಮಾರಸ್ವಾಮಿ ನಾರಾಯಣ ಗೌಡರಿಗೆ ಟಿಕೆಟ್ ಘೋಷಣೆ ಮಾಡಿದ್ದು, ತಂದೆಯ ಅನುಮತಿ ಮೇರೆಗೆ ನಾನೇ ಕಾರ್ಯಕ್ರಮದಲ್ಲಿ ಟಿಕೆಟ್​ ಘೋಷಣೆ ಮಾಡಿದ್ದು. ಆದರೆ ಗೆದ್ದ ನಂತರ ನಾರಾಯಣ ಗೌಡರು ವೈಯಕ್ತಿಕ ವಿಚಾರ ತಗೊಂಡು‌ ಬರುತ್ತಿದ್ದರು. ಜನರ ಸಮಸ್ಯೆ ತಗೊಂಡು‌ ಬರುತ್ತಿರಲಿಲ್ಲ. ನನಗೇನು ಆಗ್ತಿಲ್ಲವಲ್ಲ ಎಂದು ಬರುತ್ತಿದ್ದರು. ಈಗ ಮುಖ್ಯಮಂತ್ರಿಗಳ ಹಿಂದೆ ನಾರಾಯಣ ಗೌಡರ ಮಕ್ಕಳು ಕಾಣಿಸಿಕೊಳ್ಳುತ್ತಿದ್ದಾರೆ. ಫೈಲ್​ಗಳನ್ನ ಇಟ್ಟುಕೊಂಡು ಅಧಿಕಾರಿಗಳಿಗೆ ದಿನನಿತ್ಯ ಪೋನ್ ಮಾಡ್ತಾರೆ. ಆದರೆ ನಾನೂ ಎಂದೂ ನಮ್ಮ ಅಪ್ಪನ ಅಧಿಕಾರದಲ್ಲಿ ಮೂಗು ತೂರಿಸಿಲ್ಲ ಎಂದರು.

14 ತಿಂಗಳ ಕಾಲ ನಮ್ಮಪ್ಪನ ಅಧಿಕಾರಾವಧಿಯಲ್ಲಿ ಸನಿಹಕ್ಕೂ ಹೋಗಿಲ್ಲ. ಸುಖಾಸುಮ್ಮನೆ ನನ್ನನ್ನ ಟ್ರೋಲ್‌ ಮಾಡಿದ್ರು. ಮಾನಸಿಕವಾಗಿ ಕೊಲ್ಲಲು ಪ್ರಯತ್ನ ಮಾಡಿದರು ಎಂದು ನಿಖಿಲ್ ಆರೋಪಿಸಿದರು.

ತುಮಕೂರು: ಮಂಡ್ಯದಲ್ಲಿ ಸೋತಿರಬಹುದು ಆದರೆ ಅನುಭವ ಅಪಾರ ಕುರುಕ್ಷೇತ್ರ ಸಿನಿಮಾದಲ್ಲಿ ಅಭಿಮನ್ಯು ಆದ ನಾನು ನಿಜ ಜೀವನದಲ್ಲೂ ಅಭಿಮನ್ಯುವಾಗಿ ಹೋದೆ. ಕುರುಕ್ಷೇತ್ರದಲ್ಲಿ ಘಂಟೆ ಬಾರಿಸಿದ ಬಳಿಕ ಮತ್ತೆ ಯುದ್ಧ ಮಾಡುವ ಹಾಗಿಲ್ಲ. ಆದರೆ ನನಗೆ ಯುದ್ಧ ಮುಗಿದರೂ ಹಿಂದಿನಿಂದ ತಿವಿದರು ಎಂದು ಜೆಡಿಎಸ್ ಯುವ ಘಟಕದ ರಾಜ್ಯಾಧ್ಯಕ್ಷ ನಿಖಿಲ್ ಕುಮಾರಸ್ವಾಮಿ ಆರೋಪಿಸಿದರು.

ಕನ್ನಡ ರಾಜ್ಯೋತ್ಸವ ಕಾರ್ಯಕ್ರಮದಲ್ಲಿ ಪಾಲ್ಗೊಂಡು ಮಾತನಾಡಿದ ನಿಖಿಲ್​

ತುಮಕೂರು ತಾಲೂಕು ಹೊನ್ನುಡಿಕೆ ಗ್ರಾಮದಲ್ಲಿ ನಡೆದ ಕನ್ನಡ ರಾಜ್ಯೋತ್ಸವ ಕಾರ್ಯಕ್ರಮದಲ್ಲಿ ಪಾಲ್ಗೊಂಡು ಮಾತನಾಡಿದ ನಿಖಿಲ್​, ಮಂಡ್ಯ ಲೋಕಸಭೆ ಚುನಾವಣೆಯಲ್ಲಿ ನನ್ನ ಸೋಲಿಸಲು ಕೆಲವರು ನಿದ್ದೆ ಮಾಡಲಿಲ್ಲ, ಊಟ ತಿಂಡಿ ಬಿಟ್ಟಿದ್ದರು, ಷಡ್ಯಂತ್ರ ಮಾಡಿದ್ರು. ನಾನು ಮೈತ್ರಿ ಅಭ್ಯರ್ಥಿಯಾಗಿ ಕಣದಲ್ಲಿದ್ದೆ, ಆದರೆ ಮೈತ್ರಿ ಧರ್ಮ ಪಾಲನೆ ಆಗಲಿಲ್ಲ ಎಂದರು. ಮಂಡ್ಯ ಚುನಾವಣೆಯನ್ನು ಇಡೀ ದೇಶ ಗಮನಿಸಿತ್ತು. ಅದು ಇತಿಹಾಸ ನಿರ್ಮಿಸಿದೆ ಅಂದರೆ ತಪ್ಪಾಗಲಾರದು. ಎಷ್ಟೋ ಜನರು ಕುಮಾರಣ್ಣನ ಹೆಸರಲ್ಲಿ ಗೆದ್ದಿದ್ದಾರೆ. ಆದರೆ ಯಾವತ್ತೂ ಚುನಾವಣೆಗೆ ನಿಲ್ಲಲು ನಾನು ಮುಂದಾಗಿರಲಿಲ್ಲ. ಮುಖಂಡರ ಒತ್ತಾಯದ ಮೇರೆಗೆ ನಿಂತೆ ಎಂದರು.

ಯೋಗ ಪಡೆದುಕೊಂಡು ಬರಬೇಕು. ಯೋಗ್ಯತೆ ಬೆಳೆಸಿಕೊಳ್ಳಬೇಕು. ನಾನು ಯೋಗ್ಯತೆ ಬೆಳೆಸಿಕೊಳ್ಳುತ್ತಿದ್ದೇನೆ. ದೊಡ್ಡಗೌಡರು ಯುವ ಘಟಕದ ಸ್ಥಾನ ನೀಡಿ ನನಗೆ ದೊಡ್ಡ ಜವಾಬ್ದಾರಿ ಕೊಟ್ಟರು. ಒಲ್ಲದ ಮನಸ್ಸಿನಿಂದ ನಾನು ಒಪ್ಪಿಕೊಂಡೆ ಎಂದು ಹೇಳಿದರು.

ನಾರಾಯಣಗೌಡ ವಿರುದ್ಧ ನಿಖಿಲ್ ಆಕ್ರೋಶ:

ಅಂದು ಕೆ.ಆರ್.ಪೇಟೆಯಲ್ಲಿ ನಾರಾಯಣ ಗೌಡರಿಗೆ ಟಿಕೆಟ್​ ನೀಡಲು ವಿರೋಧವಿತ್ತು. ಆದರೆ ಇದೇ ನಿಖಿಲ್ ಕುಮಾರಸ್ವಾಮಿ ನಾರಾಯಣ ಗೌಡರಿಗೆ ಟಿಕೆಟ್ ಘೋಷಣೆ ಮಾಡಿದ್ದು, ತಂದೆಯ ಅನುಮತಿ ಮೇರೆಗೆ ನಾನೇ ಕಾರ್ಯಕ್ರಮದಲ್ಲಿ ಟಿಕೆಟ್​ ಘೋಷಣೆ ಮಾಡಿದ್ದು. ಆದರೆ ಗೆದ್ದ ನಂತರ ನಾರಾಯಣ ಗೌಡರು ವೈಯಕ್ತಿಕ ವಿಚಾರ ತಗೊಂಡು‌ ಬರುತ್ತಿದ್ದರು. ಜನರ ಸಮಸ್ಯೆ ತಗೊಂಡು‌ ಬರುತ್ತಿರಲಿಲ್ಲ. ನನಗೇನು ಆಗ್ತಿಲ್ಲವಲ್ಲ ಎಂದು ಬರುತ್ತಿದ್ದರು. ಈಗ ಮುಖ್ಯಮಂತ್ರಿಗಳ ಹಿಂದೆ ನಾರಾಯಣ ಗೌಡರ ಮಕ್ಕಳು ಕಾಣಿಸಿಕೊಳ್ಳುತ್ತಿದ್ದಾರೆ. ಫೈಲ್​ಗಳನ್ನ ಇಟ್ಟುಕೊಂಡು ಅಧಿಕಾರಿಗಳಿಗೆ ದಿನನಿತ್ಯ ಪೋನ್ ಮಾಡ್ತಾರೆ. ಆದರೆ ನಾನೂ ಎಂದೂ ನಮ್ಮ ಅಪ್ಪನ ಅಧಿಕಾರದಲ್ಲಿ ಮೂಗು ತೂರಿಸಿಲ್ಲ ಎಂದರು.

14 ತಿಂಗಳ ಕಾಲ ನಮ್ಮಪ್ಪನ ಅಧಿಕಾರಾವಧಿಯಲ್ಲಿ ಸನಿಹಕ್ಕೂ ಹೋಗಿಲ್ಲ. ಸುಖಾಸುಮ್ಮನೆ ನನ್ನನ್ನ ಟ್ರೋಲ್‌ ಮಾಡಿದ್ರು. ಮಾನಸಿಕವಾಗಿ ಕೊಲ್ಲಲು ಪ್ರಯತ್ನ ಮಾಡಿದರು ಎಂದು ನಿಖಿಲ್ ಆರೋಪಿಸಿದರು.

Intro:Body:ಮಂಡ್ಯ ಚುನಾವಣೆ: ನನ್ನ ಸೋಲಿಸಲು ಕೆಲವರು ನಿದ್ದೆ ಮಾಡಲಿಲ್ಲ, ಊಟ ತಿಂಡಿ ಬಿಟ್ಟಿದ್ರು.....
ನಿಖಿಲ್ ಕುಮಾರಸ್ವಾಮಿ....

ತುಮಕೂರು
ಮಂಡ್ಯ ಲೋಕಸಭೆ ಚುನಾವಣೆಯಲ್ಲಿ ನನ್ನ ಸೋಲಿಸಲು ಕೆಲವರು ನಿದ್ದೆ ಮಾಡಲಿಲ್ಲ, ಊಟ ತಿಂಡಿ ಬಿಟ್ಟಿದ್ರು..ಷಡ್ಯಂತ್ರ ಮಾಡಿದ್ರು ಎಂದು ಜೆಡಿಎಸ್ ಯುವ ಘಟಕದ ರಾಜ್ಯಾಧ್ಯಕ್ಷ ನಿಖಿಲ್ ಕುಮಾರಸ್ವಾಮಿ ಹೇಳಿದರು.
ತುಮಕೂರು ತಾಲೂಕು ಹೊನ್ನುಡಿಕೆ ಗ್ರಾಮದಲ್ಲಿ ನಡೆದ ಕನ್ನಡ ರಾಜ್ಯೋತ್ಸವ ಕಾರ್ಯಕ್ರಮದಲ್ಲಿ ಪಾಲ್ಗೊಂಡು ಮಾತನಾಡಿ, ಮೈತ್ರಿ ಅಭ್ಯರ್ಥಿ ಯಾಗಿ ಕಣದಲ್ಲಿದ್ದೆ,ಆದರೆ ಮೈತ್ರಿ ಧರ್ಮ ಪಾಲನೆ ಆಗಲಿಲ್ಲ ಎಂದರು.
ಮಂಡ್ಯ ಚುನಾವಣೆಗೆ ಇಡೀ ದೇಶ ಗಮನಿಸಿತ್ತು. ಅದು ಇತಿಹಾಸ ನಿರ್ಮಿಸಿದೆ ಅಂದರೆ ತಪ್ಪಾಗಲಾರದು. ಎಷ್ಟೋ ಜನರು ಕುಮಾರಣ್ಣನ ಹೆಸರಲ್ಲಿ ಗೆದ್ದಿದ್ದಾರೆ. ಆದರೆ ಯಾವತ್ತೂ ನಾನು‌ ಚುನಾವಣೆಗೆ ನಿಲ್ಲಲು ನಾನು ಮುಂದಾಗಿರಲಿಲ್ಲ.
ಮುಖಂಡರ ಒತ್ತಾಯದ ಮೂಲಕ ನಿಂತೆ ಎಂದರು.
ಯೋಗ ಪಡೆದುಕೊಂಡು ಬರಬೇಕು. ಯೋಗ್ಯತೆ ಬೆಳೆಸಿಕೊಳ್ಳಬೇಕು. ನಾನು ಯೋಗ್ಯತೆ ಬೆಳೆಸಿಕೊಳ್ಳುತ್ತಿ ದ್ದೇನೆ. ದೊಡ್ಡಗೌಡರು ಯುವ ಘಟಕದ ಸ್ಥಾನ ನನಗೆ ದೊಡ್ಡ ಜವಾಬ್ದಾರಿ ಕೊಟ್ಟರು. ಒಲ್ಲದ ಮನಸ್ಸಿನಿಂದ ನಾನು ಒಪ್ಪಿಕೊಂಡೆ ಎಂದು ಹೇಳಿದರು.

ಮಂಡ್ಯದಲ್ಲಿ
ಸೋತಿರಬಹುದು ಆದರೆ ಅನುಭವ ಅಪಾರ.
ಕುರುಕ್ಷೇತ್ರ ದ ಅಭಿಮನ್ಯು ನಿಜಜೀವನದಲ್ಲೂ ಅಭಿಮನ್ಯು ಆಗಿಹೋದ್ದೇನೆ. ಕುರುಕ್ಷೇತ್ರ ದಲ್ಲಿ ಘಂಟೆ ಬಾರಿಸಿದ ಬಳಿಕ ಮತ್ತೆ ಯುದ್ದ ಮಾಡುವ ಹಾಗಿಲ್ಲ. ಆದರೆ ನನಗೆ ಯುದ್ದ ಮುಗಿದರೂ
ಹಿಂದಿನಿಂದ ತಿವಿದವರು.
ಹಿತಶತ್ರುಗಳು ಅನ್ನುವ‌‌ ವಿಚಾರ ವನ್ನು ದೇವೇಗೌಡರಿಂದ ತಿಳಿದುಕೊಂಡೆ ಎಂದರು.

ಕೆ.ಆರ್.ಪೇಟೆಯಲ್ಲಿ ನಾರಾಯಣ ಗೌಡರಿಗೆ ವಿರೋಧ ಇತ್ತು. ಇದೇ ನಿಖಿಲ್ ಕುಮಾರಸ್ವಾಮಿ ನಾರಾಯಣ ಗೌಡರಿಗೆ ಟಿಕೆಟ್ ಘೋಷಣೆ ಮಾಡಿದ್ದು. ತಂದೆಯ ಅನುಮತಿ ಮೇರೆಗೆ ನಾನೇ ಕಾರ್ಯಕ್ರಮದಲ್ಲಿ ಘೋಷಣೆ ಮಾಡಿದ್ದು. ಗೆದ್ದ ನಂತರ ನಾರಾಯಣ ಗೌಡರು
ವೈಯಕ್ತಿಕ ವಿಚಾರ ತಗೊಂಡು‌ ಬರುತ್ತಿದ್ದರು.ಜನರ ಸಮಸ್ಯೆ ತಗೊಂಡು‌ ಬರುತ್ತಿರಲಿಲ್ಲ. ನನಗೇನು ಆಗ್ತಿಲ್ಲವಲ್ಲ.ಎಂದು ಬರುತ್ತಿದ್ದರು. ಈಗ ಮುಖ್ಯಮಂತ್ರಿಗಳ ಹಿಂದೆ ನಾರಾಯನಗೌಡರ ಮಕ್ಕಳು ಕಾಣಿಸಿಕೊಳ್ಳುತ್ತಿದ್ದಾರೆ.ಫೈಲ್ ಗಳನ್ನ ಇಟ್ಟುಕೊಂಡು
ಅಧಿಕಾರಿ ಗಳಿಗೆ ದಿನನಿತ್ಯ ಪೋನ್ ಮಾಡ್ತಾರೆ. ಆದರೆ ನಾನೂ ಎಂದೂ ನಮ್ಮ ಅಪ್ಪನ ಅಧಿಕಾರದಲ್ಲಿ ಮೂಗು ತೋರಿಸಿಲ್ಲ ಎಂದರು.

14 ತಿಂಗಳ ಕಾಲ ನಮ್ಮಪ್ಪನ ಅಧಿಕಾರದಲ್ಲಿ ಸನಿಹಕ್ಕೆ ಹೋಗಿಲ್ಲ. ಸುಖಾಸುಮ್ಮನೆ ನನ್ನನ್ನ ಟ್ರೋಲ್‌ ಮಾಡಿದ್ರು.ಮಾನಸಿಕವಾಗಿ ಕೊಲ್ಲಲು ಪ್ರಯತ್ನ ಮಾಡಿದರು.
ಬೈಟ್: ನಿಖಿಲ್ ಕುಮಾರಸ್ವಾಮಿ, ಜೆಡಿಎಸ್ ಯುವ ಘಟಕದ ಅಧ್ಯಕ್ಷ......Conclusion:
ETV Bharat Logo

Copyright © 2024 Ushodaya Enterprises Pvt. Ltd., All Rights Reserved.