ETV Bharat / city

ತುಮಕೂರು ಪಾಲಿಕೆ ಸದಸ್ಯರು ಹಾಗೂ ಆಯುಕ್ತರ ನಡುವೆ ಮುಸುಕಿನ ಗುದ್ದಾಟ - commissioners news

ತುಮಕೂರು ಮಹಾನಗರ ಪಾಲಿಕೆಯಲ್ಲಿ ಮಹಿಳಾ ಪಾಲಿಕೆ ಸದಸ್ಯರೊಂದಿಗೆ ಅವರ ಗಂಡದಿರು ಹಾಗೂ ಸಂಬಂಧಿಕರು ವಿವಿಧ ಅಭಿವೃದ್ಧಿ ಕಾರ್ಯಗಳಲ್ಲಿ ಹಸ್ತಕ್ಷೇಪ ಮಾಡುತ್ತಿದ್ದಾರೆಂಬ ಆರೋಪದ ಹಿನ್ನೆಲೆ ಆಯುಕ್ತರು ಹಾಗೂ ಪಾಲಿಕೆ ಸದಸ್ಯರ ನಡುವೆ ಮುಸುಕಿನ ಗುದ್ದಾಟ ಆರಂಭವಾಗಿದೆ.

ತುಮಕೂರು ಪಾಲಿಕೆ ಸದಸ್ಯರು ಹಾಗೂ ಆಯುಕ್ತರ ನಡುವೆ ಮುಸುಕಿನ ಗುದ್ದಾಟ
author img

By

Published : Jul 31, 2019, 11:33 PM IST

Updated : Aug 1, 2019, 7:16 AM IST

ತುಮಕೂರು: ತುಮಕೂರು ಮಹಾನಗರ ಪಾಲಿಕೆಯಲ್ಲಿ ಮಹಿಳಾ ಪಾಲಿಕೆ ಸದಸ್ಯರೊಂದಿಗೆ ಅವರ ಗಂಡದಿರು, ಸಂಬಂಧಿಕರು ವಿವಿಧ ಅಭಿವೃದ್ಧಿ ಕಾರ್ಯಗಳಲ್ಲಿ ಹಸ್ತಕ್ಷೇಪ ಮಾಡುತ್ತಿದ್ದಾರೆಂಬ ಆರೋಪದ ಹಿನ್ನೆಲೆಯಲ್ಲಿ ಆಯುಕ್ತರು ಹಾಗೂ ಪಾಲಿಕೆ ಸದಸ್ಯರ ನಡುವೆ ಮುಸುಕಿನ ಗುದ್ದಾಟ ಆರಂಭವಾಗಿದೆ.

ತುಮಕೂರು ಪಾಲಿಕೆ ಸದಸ್ಯರು ಹಾಗೂ ಆಯುಕ್ತರ ನಡುವೆ ಮುಸುಕಿನ ಗುದ್ದಾಟ

ತುಮಕೂರು ನಗರಕ್ಕೆ ನೀರು ಸರಬರಾಜು ಮಾಡುವಂತಹ ಬುಗುಡನಹಳ್ಳಿ ಕೆರೆಯಲ್ಲಿ ಮೀನುಗಾರಿಕೆಗೆ ಅವಕಾಶ ಕಲ್ಪಿಸಿಕೊಡಲಾಗಿದೆ. ಈ ಕೆರೆಯಿಂದ ನಗರದ ವಿವಿಧ ವಾರ್ಡ್​ಗಳಿಗೆ ಸರಬರಾಜು ಮಾಡುವ ನೀರಿನಲ್ಲಿ ಮಣ್ಣು ಬರುತ್ತಿದೆ ಎಂದು ಪಾಲಿಕೆ ಸದಸ್ಯರು ಮೇಯರ್​ಗೆ ದೂರು ನೀಡಿದ್ದರು. ಹೀಗಾಗಿ ಕೆರೆಯಲ್ಲಿ ಮೀನುಗಾರಿಕೆ ನಡೆಸುತ್ತಿರುವ ಕುರಿತು ಮಾಹಿತಿ ನೀಡುವಂತೆ ಪಾಲಿಕೆ ಮೇಯರ್ ಲಲಿತ ರಮೇಶ್ ಅವರು ಆಯುಕ್ತರಾದ ಬೂಬಾಲನ್ ಅವರಿಗೆ ದೂರವಾಣಿ ಮೂಲಕ ಸೂಚಿಸಿ ಸಭೆಗೆ ಬರುವಂತೆ ಸೂಚಿಸಿದ್ದರು. ಆದರೆ ಆಯುಕ್ತರು ಮಾತ್ರ ಸಭೆಗೆ ಬರಲು ನಿರಾಕರಿಸಿದ್ದಾರೆ.

ಇನ್ನು ಈ ಕುರಿತಂತೆ ಆಯುಕ್ತ ಬೂಬಾಲನ್ ಅವರು, ಪಾಲಿಕೆ ಸದಸ್ಯರು, ಸಂಬಂಧಿಕರು ಅಧಿಕಾರಿಗಳ ಮೇಲೆ ಇನ್ನಿಲ್ಲದಂತೆ ವಿನಾಕಾರಣ ಒತ್ತಡ ಹಾಕುತ್ತಾರೆ. ಸಭೆಗೆ ಬರಲೇಬೇಕು ಎಂದು ಒತ್ತಡ ಹಾಕುತ್ತಾರೆ, ಎಲ್ಲರೂ ಸೇರಿ ನನಗೆ ಸಂಬಂಧವಿಲ್ಲದ ವಿಷಯಗಳ ಕುರಿತು ವಿಚಾರಣೆ ಮಾಡುತ್ತಾರೆ ಎಂದು ಅಸಮಾಧಾನ ವ್ಯಕ್ತಪಡಿಸಿದ್ದಾರೆ.

ತುಮಕೂರು: ತುಮಕೂರು ಮಹಾನಗರ ಪಾಲಿಕೆಯಲ್ಲಿ ಮಹಿಳಾ ಪಾಲಿಕೆ ಸದಸ್ಯರೊಂದಿಗೆ ಅವರ ಗಂಡದಿರು, ಸಂಬಂಧಿಕರು ವಿವಿಧ ಅಭಿವೃದ್ಧಿ ಕಾರ್ಯಗಳಲ್ಲಿ ಹಸ್ತಕ್ಷೇಪ ಮಾಡುತ್ತಿದ್ದಾರೆಂಬ ಆರೋಪದ ಹಿನ್ನೆಲೆಯಲ್ಲಿ ಆಯುಕ್ತರು ಹಾಗೂ ಪಾಲಿಕೆ ಸದಸ್ಯರ ನಡುವೆ ಮುಸುಕಿನ ಗುದ್ದಾಟ ಆರಂಭವಾಗಿದೆ.

ತುಮಕೂರು ಪಾಲಿಕೆ ಸದಸ್ಯರು ಹಾಗೂ ಆಯುಕ್ತರ ನಡುವೆ ಮುಸುಕಿನ ಗುದ್ದಾಟ

ತುಮಕೂರು ನಗರಕ್ಕೆ ನೀರು ಸರಬರಾಜು ಮಾಡುವಂತಹ ಬುಗುಡನಹಳ್ಳಿ ಕೆರೆಯಲ್ಲಿ ಮೀನುಗಾರಿಕೆಗೆ ಅವಕಾಶ ಕಲ್ಪಿಸಿಕೊಡಲಾಗಿದೆ. ಈ ಕೆರೆಯಿಂದ ನಗರದ ವಿವಿಧ ವಾರ್ಡ್​ಗಳಿಗೆ ಸರಬರಾಜು ಮಾಡುವ ನೀರಿನಲ್ಲಿ ಮಣ್ಣು ಬರುತ್ತಿದೆ ಎಂದು ಪಾಲಿಕೆ ಸದಸ್ಯರು ಮೇಯರ್​ಗೆ ದೂರು ನೀಡಿದ್ದರು. ಹೀಗಾಗಿ ಕೆರೆಯಲ್ಲಿ ಮೀನುಗಾರಿಕೆ ನಡೆಸುತ್ತಿರುವ ಕುರಿತು ಮಾಹಿತಿ ನೀಡುವಂತೆ ಪಾಲಿಕೆ ಮೇಯರ್ ಲಲಿತ ರಮೇಶ್ ಅವರು ಆಯುಕ್ತರಾದ ಬೂಬಾಲನ್ ಅವರಿಗೆ ದೂರವಾಣಿ ಮೂಲಕ ಸೂಚಿಸಿ ಸಭೆಗೆ ಬರುವಂತೆ ಸೂಚಿಸಿದ್ದರು. ಆದರೆ ಆಯುಕ್ತರು ಮಾತ್ರ ಸಭೆಗೆ ಬರಲು ನಿರಾಕರಿಸಿದ್ದಾರೆ.

ಇನ್ನು ಈ ಕುರಿತಂತೆ ಆಯುಕ್ತ ಬೂಬಾಲನ್ ಅವರು, ಪಾಲಿಕೆ ಸದಸ್ಯರು, ಸಂಬಂಧಿಕರು ಅಧಿಕಾರಿಗಳ ಮೇಲೆ ಇನ್ನಿಲ್ಲದಂತೆ ವಿನಾಕಾರಣ ಒತ್ತಡ ಹಾಕುತ್ತಾರೆ. ಸಭೆಗೆ ಬರಲೇಬೇಕು ಎಂದು ಒತ್ತಡ ಹಾಕುತ್ತಾರೆ, ಎಲ್ಲರೂ ಸೇರಿ ನನಗೆ ಸಂಬಂಧವಿಲ್ಲದ ವಿಷಯಗಳ ಕುರಿತು ವಿಚಾರಣೆ ಮಾಡುತ್ತಾರೆ ಎಂದು ಅಸಮಾಧಾನ ವ್ಯಕ್ತಪಡಿಸಿದ್ದಾರೆ.

Intro:ತುಮಕೂರು ಪಾಲಿಕೆ ಸದಸ್ಯರು ಹಾಗೂ ಆಯುಕ್ತರ ನಡುವೆ ಮುಸುಕಿನ ಗುದ್ದಾಟ......

ತುಮಕೂರು
ತುಮಕೂರು ಮಹಾನಗರ ಪಾಲಿಕೆಯಲ್ಲಿ ಮಹಿಳಾ ಪಾಲಿಕೆ ಸದಸ್ಯರೊಂದಿಗೆ ಅವರ ಪತಿಯಂದಿರು, ಸಂಬಂಧಿಕರು ವಿವಿಧ ಅಭಿವೃದ್ಧಿ ಕಾರ್ಯಗಳಲ್ಲಿ ಹಸ್ತಕ್ಷೇಪ ಮಾಡುತ್ತಿದ್ದಾರೆ ಎಂಬ ಆರೋಪಗಳ ಹಿನ್ನೆಲೆಯಲ್ಲಿ ಆಯುಕ್ತರು ಹಾಗೂ ಪಾಲಿಕೆ ಸದಸ್ಯರ ನಡುವೆ ಮುಸುಕಿನ ಗುದ್ದಾಟ ಆರಂಭವಾಗಿದೆ. ಹಲವು ದಿನಗಳಿಂದ ಬೂದಿ ಮುಚ್ಚಿದ ಕೆಂಡದಂತಿದ್ದ ಈ ರೀತಿಯ ಒಂದು ಬೆಳವಣಿಗೆ ಇದೀಗ ಬಹಿರಂಗಗೊಂಡಿದೆ. ಇದಕ್ಕೆ ಸಾಕ್ಷಿ ಎಂಬಂತೆ ಆಯುಕ್ತರು ಇತ್ತೀಚಿಗೆ ಮಹಿಳಾ ಸದಸ್ಯರು ಕರೆದ ಸಭೆಗೆ ನಯವಾಗಿ ತಿರಸ್ಕರಿದಿದ್ದಾರೆ. ಆಯುಕ್ತರ ಈ ರೀತಿಯಾದ ನಡೆ ಪಾಲಿಕೆ ಮಹಿಳಾ ಸದಸ್ಯರಿಗೆ ಬಾರಿ ಅಸಮಾಧಾನಕ್ಕೆ ಕಾರಣವಾಗಿದೆ.

ತುಮಕೂರು ನಗರಕ್ಕೆ ನೀರು ಸರಬರಾಜು ಮಾಡುವಂತಹ ಬುಗುಡನಹಳ್ಳಿ ಕೆರೆಯಲ್ಲಿ ಮೀನುಗಾರಿಕೆಗೆ ಅವಕಾಶ ಕಲ್ಪಿಸಿಕೊಡಲಾಗಿದೆ. ಈ ಕೆರೆಯಿಂದ ನಗರದ ವಿವಿಧೆಡೆ ವಾರ್ಡ್ ಗಳಿಗೆ ಸರಬರಾಜು ಮಾಡುವ ನೀರಿನಲ್ಲಿ ಮಣ್ಣು ಬರುತ್ತಿದೆ ಪಾಲಿಕೆ ಸದಸ್ಯರು ಮೇಯರ್ ಗೆ ದೂರು ನೀಡಿದ್ದರು. ಹೀಗಾಗಿ ಕೆರೆಯಲ್ಲಿ ಮೀನುಗಾರಿಕೆ ನಡೆಸುತ್ತಿರುವ ಕುರಿತು ವಿಚಾರಿಸಿದಾಗ ಪಾಲಿಕೆ ಆಯುಕ್ತರು ಗೊತ್ತಿಲ್ಲ ಎಂದಿದ್ದರು. ಇದಕ್ಕೆ ಸಂಬಂಧಪಟ್ಟಂತೆ ಮಾಹಿತಿ ನೀಡುವಂತೆ ಅಲ್ಲದೆ ಚರ್ಚೆ ನಡೆಸಲು ಪಾಲಿಕೆ ಮೇಯರ್ ಲಲಿತ ರಮೇಶ್ ಅವರು ಆಯುಕ್ತರಾದ ಬೂಬಾಲನ್ ಅವರನ್ನು ದೂರವಾಣಿ ಮೂಲಕ ಬರುವಂತೆ ಸೂಚಿಸಿದ್ದರು. ಆದರೆ ಪಾಲಿಕೆ ಸದಸ್ಯರು ಇದ್ದರೆ ಮಾತ್ರ ಸಭೆಗೆ ಬರುವುದಾಗಿ ಆಯುಕ್ತರು ಖಂಡಿತವಾಗಿ ಹೇಳಿದ್ದಾರೆ, ಸದಸ್ಯರನ್ನು ಹೊರತುಪಡಿಸಿ ಬೇರೆ ಯಾರು ಇಲ್ಲ ಬನ್ನಿ ಎಂದು ಹೇಳಿದರೂ ಕೂಡ ಆಯುಕ್ತರು ಮಾತ್ರ ಸಭೆಗೆ ಬರಲು ನಿರಾಕರಿಸಿದರು ಎನ್ನುತ್ತಾರೆ ಪಾಲಿಕೆ ಮೇಯರ್ ಲಲಿತ ರವೀಶ್.
ಬೈಟ್: ಲಲಿತ ರವೀಶ್, ಪಾಲಿಕೆ ಮೇಯರ್....
ಸಂಜೆ ಸುಮಾರು ಎಂಟು ಗಂಟೆ ಸಂದರ್ಭದಲ್ಲಿ ಕುಡಿಯೋ ನೀರಿಗೆ ಸಂಬಂಧಪಟ್ಟಂತೆ ಚರ್ಚಿಸಲು ಭೂಬಾಲನ್ ಅವರಿಗೆ ಮನವಿ ಮಾಡಲಾಯಿತು. ಅಲ್ಲದೆ ಆಯುಕ್ತರು ಸೇರಿ ಐವರು ಮಹಿಳಾ ಕಾರ್ಪೊರೇಟರ್ಗಳು ಮಾತ್ರ ಇದ್ದೇವೆ ಸಭೆಯಲ್ಲಿ ಯಾವುದೇ ಸಂಬಂಧಿಕರು ಇಲ್ಲ ಎಂದು ಹೇಳಿದರೂ ಕೂಡ ಅದಕ್ಕೆ ಆಯುಕ್ತರು ಒಪ್ಪಲಿಲ್ಲ. ಅವರು ಬಂದು ಸಭೆಯಲ್ಲಿ ಯಾರಿದ್ದಾರೆ ಎಂದು ನೋಡಿ ನಂತರ ನಿರ್ಧಾರ ತೆಗೆದುಕೊಳ್ಳಬೇಕಿತ್ತು. ಇದರಿಂದ ನಮಗೂ ಕೂಡ ಸಾಕಷ್ಟು ಬೇಜಾರಾಗಿದೆ ಎನ್ನುತ್ತಾರೆ ಮಹಿಳಾ ಕಾರ್ಪೋರೇಟರ್ ನವೀನ ಅರುಣ್....
ಬೈಟ್: ನವೀನ ಅರುಣ್, 34ನೇ ವಾರ್ಡ್ ಪಾಲಿಕೆ ಸದಸ್ಯೆ.

ಇನ್ನೊಂದೆಡೆ 'ಈಟಿವಿ ಭಾರತ' ಕ್ಕೆ ಈ ಘಟನೆ ಕುರಿತು ಪ್ರತಿಕ್ರಿಯೆ ನೀಡಿರುವ ಆಯುಕ್ತ ಬೂಬಾಲನ್ ಅವರು, ಪಾಲಿಕೆ ಸದಸ್ಯರು ಸಂಬಂಧಿಕರು ಅಧಿಕಾರಿಗಳ ಮೇಲೆ ಇನ್ನಿಲ್ಲದಂತೆ ವಿನಾಕಾರಣ ಒತ್ತಡ ಹಾಕುತ್ತಾರೆ. ಒಂದುರೀತಿ ಸಭೆಗೆ ಬರಲೇಬೇಕು ಎಂದು ಒತ್ತಡ ಹಾಕುವುದಲ್ಲದೆ ಪಾಲಿಕೆ ಪತಿಯಂದಿರು ಕೂಡ ಪ್ರಶ್ನೆಗಳನ್ನು ಕೇಳುತ್ತಾರೆ. ಎಲ್ಲರೂ ಸೇರಿ ನನಗೆ ಸಂಬಂಧವಿಲ್ಲದ ವಿಷಯಗಳ ಕುರಿತು ವಿಚಾರಣೆ ಮಾಡುತ್ತಾರೆ ಎಂದು ಅಸಮಾಧಾನವ್ಯಕ್ತಪಡಿಸಿದ್ದಾರೆ.

ಒಟ್ಟಾರೆ ಜನಪ್ರತಿನಿಧಿಗಳು ಹಾಗೂ ರೈತರ ನಡುವಿನ ಸಾಮರಸ್ಯ ಕೊರತೆ ಸ್ಪಷ್ಟವಾಗುತ್ತದೆ ಎಂದು ಹೇಳಬಹುದಾಗಿದೆ


Body:ತುಮಕೂರು


Conclusion:
Last Updated : Aug 1, 2019, 7:16 AM IST
ETV Bharat Logo

Copyright © 2025 Ushodaya Enterprises Pvt. Ltd., All Rights Reserved.