ETV Bharat / city

ನಾವು ಪೊಲೀಸರು ಅಂತಾ ನಂಬಿಸಿ ದಂಪತಿಯನ್ನ ಯಾಮಾರಿಸಿದ ಖದೀಮರು!

author img

By

Published : Dec 2, 2019, 10:13 PM IST

ಪೊಲೀಸರ ಸೋಗಿನಲ್ಲಿ ಬಂದ ಕಳ್ಳರಿಬ್ಬರು ₹ 3 ಲಕ್ಷ ಮೌಲ್ಯದ ಚಿನ್ನಾಭರಣ ಕದ್ದು ಪರಾರಿಯಾಗಿದ್ದಾರೆ.

Shivamogga crime news
ಚಿನ್ನಾಭರಣ ಕದ್ದರು

ಶಿವಮೊಗ್ಗ: ಪೊಲೀಸರ ಸೋಗಿನಲ್ಲಿ ಬಂದ ಕಳ್ಳರಿಬ್ಬರು ₹ 3 ಲಕ್ಷ ಮೌಲ್ಯದ ಚಿನ್ನಾಭರಣ ಕದ್ದು ಪರಾರಿಯಾಗಿರುವ ಘಟನೆ ಶಿವಮೊಗ್ಗದ ಹರಕೆರೆ ಬಳಿ ನಡೆದಿದೆ.

ಶಿವಮೊಗ್ಗದಿಂದ ಗಾಜನೂರು ರಸ್ತೆಯ ಹರಕರೆಯ ನಾರಾಯಣ ಹೃದಯಾಲಯದ ಮುಂಭಾಗ ದಂಪತಿ ತೆರಳುತ್ತಿದ್ದ ಬೈಕ್​​​ ಅಡ್ಡಗಟ್ಟಿದ ಇಬ್ಬರು, ನಾವು ಪೊಲೀಸರು, ಇಂದು ಎರಡು ಕಡೆ ಬಂಗಾರದ ಸರ ಅಪಹರಣ ಪ್ರಕರಣಗಳು ನಡೆದಿವೆ. ನೀವು ಹೀಗೆಲ್ಲ ಒಡವೆ ಹಾಕಿಕೊಂಡು ಹೋಗಬೇಡಿ ಎಂದು ಹೇಳಿದ್ದಾರೆ. ದಂಪತಿ ಮೈ ಮೇಲೆ ಇದ್ದ ಒಡವೆಗಳನ್ನು ಬಿಚ್ಚಿಕೊಂಡು ಹೋಗುವಂತೆ ತಿಳಿಸಿದ್ದಾರೆ.

ತುಂಗಾನಗರ ಪೊಲೀಸ್​ ಠಾಣೆ

ಪೊಲೀಸರೇ ಹೇಳಿದ್ದಾರೆ ಎಂದುಕೊಂಡು ದಂಪತಿ ನಂಬಿದ್ದಾರೆ. ತಕ್ಷಣ ಮಹಿಳೆ ತನ್ನ 60 ಗ್ರಾಂ ಮಾಂಗಲ್ಯ‌ಸರ, ಉಂಗುರ, ಪತಿ ಬಳಿ ಇದ್ದ ಉಂಗುರ ಹಾಗೂ ಕೊರಳಿನ ಚೈನ್​​ಅನ್ನು ತಮ್ಮ ಕರ್ಚಿಪ್​​​​ನಲ್ಲಿ ಕಟ್ಟಿಕೊಳ್ಳಲು ಮುಂದಾಗಿದ್ದಾರೆ.

ಈ ವೇಳೆ ಖದೀಮರು ನಮಗೆ ಕೊಡಿ, ಇನ್ನೂ ಚೆನ್ನಾಗಿ‌ ಕಟ್ಟಿ ಕೊಡುತ್ತೇವೆ ಎಂದು ದಂಪತಿಯಿಂದ ಕರ್ಚಿಪ್​​ ಪಡೆದುಕೊಂಡಿದ್ದಾರೆ. ದಂಪತಿ ಮಾತನಾಡಿಸುವಷ್ಟರಲ್ಲಿ ಕರ್ಚಿಪ್​​ ಅದಲು-ಬದಲು ಮಾಡಿ ದಂಪತಿಗೆ ಕೊಟ್ಟು ಪರಾರಿಯಾಗಿದ್ದಾರೆ.

ಸ್ವಲ್ಪ ದೂರ ಹೋಗಿ ದಂಪತಿ ಕರ್ಚಿಪ್​​ ನೋಡಿದಾಗ ತಾವು ಮೋಸ ಹೋಗಿರುವುದು ತಿಳಿದಿದೆ. ಈ ಕುರಿತು ದಂಪತಿ ತುಂಗಾ ನಗರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಿಸಿದ್ದಾರೆ. ಈ ಬಗ್ಗೆ ಪಿಎಸ್​​ಐ 'ಈಟಿವಿ ಭಾರತ್​​'ಗೆ ಸ್ಪಷ್ಟಪಡಿಸಿದ್ದಾರೆ.

ಶಿವಮೊಗ್ಗ: ಪೊಲೀಸರ ಸೋಗಿನಲ್ಲಿ ಬಂದ ಕಳ್ಳರಿಬ್ಬರು ₹ 3 ಲಕ್ಷ ಮೌಲ್ಯದ ಚಿನ್ನಾಭರಣ ಕದ್ದು ಪರಾರಿಯಾಗಿರುವ ಘಟನೆ ಶಿವಮೊಗ್ಗದ ಹರಕೆರೆ ಬಳಿ ನಡೆದಿದೆ.

ಶಿವಮೊಗ್ಗದಿಂದ ಗಾಜನೂರು ರಸ್ತೆಯ ಹರಕರೆಯ ನಾರಾಯಣ ಹೃದಯಾಲಯದ ಮುಂಭಾಗ ದಂಪತಿ ತೆರಳುತ್ತಿದ್ದ ಬೈಕ್​​​ ಅಡ್ಡಗಟ್ಟಿದ ಇಬ್ಬರು, ನಾವು ಪೊಲೀಸರು, ಇಂದು ಎರಡು ಕಡೆ ಬಂಗಾರದ ಸರ ಅಪಹರಣ ಪ್ರಕರಣಗಳು ನಡೆದಿವೆ. ನೀವು ಹೀಗೆಲ್ಲ ಒಡವೆ ಹಾಕಿಕೊಂಡು ಹೋಗಬೇಡಿ ಎಂದು ಹೇಳಿದ್ದಾರೆ. ದಂಪತಿ ಮೈ ಮೇಲೆ ಇದ್ದ ಒಡವೆಗಳನ್ನು ಬಿಚ್ಚಿಕೊಂಡು ಹೋಗುವಂತೆ ತಿಳಿಸಿದ್ದಾರೆ.

ತುಂಗಾನಗರ ಪೊಲೀಸ್​ ಠಾಣೆ

ಪೊಲೀಸರೇ ಹೇಳಿದ್ದಾರೆ ಎಂದುಕೊಂಡು ದಂಪತಿ ನಂಬಿದ್ದಾರೆ. ತಕ್ಷಣ ಮಹಿಳೆ ತನ್ನ 60 ಗ್ರಾಂ ಮಾಂಗಲ್ಯ‌ಸರ, ಉಂಗುರ, ಪತಿ ಬಳಿ ಇದ್ದ ಉಂಗುರ ಹಾಗೂ ಕೊರಳಿನ ಚೈನ್​​ಅನ್ನು ತಮ್ಮ ಕರ್ಚಿಪ್​​​​ನಲ್ಲಿ ಕಟ್ಟಿಕೊಳ್ಳಲು ಮುಂದಾಗಿದ್ದಾರೆ.

ಈ ವೇಳೆ ಖದೀಮರು ನಮಗೆ ಕೊಡಿ, ಇನ್ನೂ ಚೆನ್ನಾಗಿ‌ ಕಟ್ಟಿ ಕೊಡುತ್ತೇವೆ ಎಂದು ದಂಪತಿಯಿಂದ ಕರ್ಚಿಪ್​​ ಪಡೆದುಕೊಂಡಿದ್ದಾರೆ. ದಂಪತಿ ಮಾತನಾಡಿಸುವಷ್ಟರಲ್ಲಿ ಕರ್ಚಿಪ್​​ ಅದಲು-ಬದಲು ಮಾಡಿ ದಂಪತಿಗೆ ಕೊಟ್ಟು ಪರಾರಿಯಾಗಿದ್ದಾರೆ.

ಸ್ವಲ್ಪ ದೂರ ಹೋಗಿ ದಂಪತಿ ಕರ್ಚಿಪ್​​ ನೋಡಿದಾಗ ತಾವು ಮೋಸ ಹೋಗಿರುವುದು ತಿಳಿದಿದೆ. ಈ ಕುರಿತು ದಂಪತಿ ತುಂಗಾ ನಗರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಿಸಿದ್ದಾರೆ. ಈ ಬಗ್ಗೆ ಪಿಎಸ್​​ಐ 'ಈಟಿವಿ ಭಾರತ್​​'ಗೆ ಸ್ಪಷ್ಟಪಡಿಸಿದ್ದಾರೆ.

Intro:ನಾವ್ ಪೊಲೀಸ್,ನಿಮ್ಮ ಬಂಗಾರ್ ಸೇಫ್ ಮಾಡ್ತಿನಿ ಅಂತ ಬಂಗಾರ ಕದ್ದು ಪರಾರಿ.

ಶಿವಮೊಗ್ಗ: ಪೊಲೀಸರ ಹೆಸರು ಹೇಳಿ ಕೊಂಡು ಸುಮಾರು 3 ಲಕ್ಷ ರೂ ಮೌಲ್ಯದ ಚಿನ್ನಾಭರಣವನ್ನು ಇಬ್ಬರು ಕದೀಮರು ಕದ್ದು ಪರಾರಿಯಾಗಿರುವ ಘಟನೆ ತಡವಾಗಿ ಬೆಳಕಿಗೆ ಬಂದಿದೆ. ಶಿವಮೊಗ್ಗದ ಹರಕೆರೆ ಬಳಿ ನಿನ್ನೆ ಮಧ್ಯಾಹ್ನ ಘಟನೆ ನಡೆದಿದೆ. ನಿನ್ನೆ ಮಧ್ಯಾಹ್ನ ದಂಪತಿಗಳಿಬ್ಬರು ಬೈಕ್ ನಲ್ಲಿ ಶಿವಮೊಗ್ಗ ಕಡೆಯಿಂದ ಗಾಜನೂರು ರಸ್ತೆಯಲ್ಲಿ ತೆರಳುವಾಗ ಹರಕರೆಯ ನಾರಾಯಣ ಹೃದಯಾಲಯದ ಮುಂಭಾಗ ಬೈಕ್ ನಲ್ಲಿ ಇಬ್ಬರು ತಾವು ಪೊಲೀಸರು, ಇಂದು ಎರಡು ಕಡೆ ಬಂಗಾರದ ಸರ ಅಪಹರಿಸಲಾಗಿದೆ. ನೀವು ಹೀಗೆಲ್ಲಾ ಒಡವೆ ಹಾಕಿ ಕೊಂಡು ಹೋಗಬೇಡಿ ಎಂದು ಹೇಳಿ ದಂಪತಿಗಳ ಮೈ ಮೇಲೆ ಇದ್ದ ಒಡವೆಗಳನ್ನು ಬಿಚ್ಚಿ ಕೊಂಡು ಹೋಗುವಂತೆ ತಿಳಿಸಿದ್ದಾರೆ.Body: ಇದಕ್ಕೆ ದಂಪತಿಗಳು ಪೊಲೀಸರೆ ಹೇಳುವಾಗ ನಂಬದೆ ಇರುತ್ತಾರೆಯೇ, ತಕ್ಷಣ ಮಹಿಳೆ ತನ್ನ 60 ಗ್ರಾಂ ಮಾಂಗಲ್ಯ‌ ಸರ, ಉಂಗುರ, ಪತಿ ತನ್ನ ಉಂಗುರ ಹಾಗೂ ಕೊರಳಿನ ಚೈನ್ ಗಳನ್ನು ತಮ್ಮ ಕರ್ಚಿಫ್ ನಲ್ಲಿ ಕಟ್ಟಿ ಕೊಂಡಿದ್ದಾರೆ. ಈ ವೇಳೆ ಪೊಲೀಸರ ಸೂಗಿನಲ್ಲಿದ್ದ ಕದೀಮರು ಕೊಡಿ ಚೆನ್ನಾಗಿ‌ ಕಟ್ಟಿ ಕೊಡುತ್ತೆವೆ ಎಂದು ಹೇಳಿ ಕರ್ಚಿಫ್‌ ಪಡೆದು ಕೊಂಡಿದ್ದಾನೆ. ಇನ್ನೂರ್ವ ದಂಪತಿಯನ್ನು ಮಾತನಾಡಿಸುತ್ತಿರುವಷ್ಟರಲ್ಲಿ ಕರ್ಚಿಫ್ ಬದಲು ಮಾಡಿ ದಂಪತಿಗೆ ನೀಡಿ ಪರಾರಿಯಾಗಿದ್ದಾರೆ.Conclusion:ಈ ವೇಳೆ ಪೊಲೀಸರ ಸೂಗಿನಲ್ಲಿದ್ದ ಕದೀಮರು ಕೊಡಿ ಚೆನ್ನಾಗಿ‌ ಕಟ್ಟಿ ಕೊಡುತ್ತೆವೆ ಎಂದು ಹೇಳಿ ಕರ್ಚಿಫ್‌ ಪಡೆದು ಕೊಂಡಿದ್ದಾನೆ. ಇನ್ನೂರ್ವ ದಂಪತಿಯನ್ನು ಮಾತನಾಡಿಸುತ್ತಿರುವಷ್ಟರಲ್ಲಿ ಕರ್ಚಿಫ್ ಬದಲು ಮಾಡಿ ದಂಪತಿಗೆ ನೀಡಿ ಪರಾರಿಯಾಗಿದ್ದಾರೆ. ಸ್ವಲ್ಪ ದೂರ ಹೋಗಿ ದಂಪತಿಗಳು ಕರ್ಚಿಫ್ ನೋಡಿದಾಗ ತಾವು ಮೋಸ ಹೋಗಿರುವುದು ತಿಳಿದಿದೆ. ಈ ಕುರಿತು ದಂಪತಿಗಳು ತುಂಗಾ ನಗರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲು ಮಾಡಿದ್ದಾರೆ. ದೂರು ದಾಖಲಾಗಿರುವ ಬಗ್ಗೆ ತುಂಗಾ ನಗರ ಕ್ರೈಂ ಪಿಎಸ್ ಐ ರವರು ಈ ಟಿವಿ ಭಾರತಕ್ಕೆ ಸ್ಪಷ್ಟ ಪಡಿಸಿದ್ದಾರೆ.
ETV Bharat Logo

Copyright © 2024 Ushodaya Enterprises Pvt. Ltd., All Rights Reserved.