ETV Bharat / city

ಹೊಸನಗರ ಆಹಾರ ತಪಾಸಣಾಧಿಕಾರಿ ದತ್ತಾತ್ರೇಯ ಆತ್ಯಹತ್ಯೆ: ನ್ಯಾಯಕ್ಕಾಗಿ ಪ್ರತಿಭಟನೆ

ಮೌನ ಪ್ರತಿಭಟನೆ ನಡೆಸಿದ ಜಿಲ್ಲಾ ಸರ್ಕಾರಿ ಸಂಘದವರು ದತ್ತಾತ್ರೇಯ ರವರ ಆತ್ಮಹತ್ಯೆಗೆ ಕಾರಣರಾದ ಹೊಸನಗರದ ತಹಶೀಲ್ದಾರ್ ಶ್ರೀಧರ್ ಮೂರ್ತಿ ಸೇರಿದಂತೆ ಇತರೆ ಏಳು ಜನರ ವಿರುದ್ದ ಸೂಕ್ತ ಕ್ರಮ ತೆಗೆದು ಕೊಳ್ಳಬೇಕು ಎಂದು ಆಗ್ರಹಿಸಿದರು. ಅಲ್ಲದೆ ದತ್ತಾತ್ರೇಯ ಕುಟುಂಬದ ಓರ್ವರಿಗೆ ಅನುಕಂಪದ ಆಧಾರದ ಮೇಲೆ ಸರ್ಕಾರಿ ಕೆಲಸ ನೀಡುವಂತೆ ಒತ್ತಾಯಿಸಿದರು.

author img

By

Published : Dec 9, 2019, 9:01 PM IST

shivamogga-hosanagar-food-inspection-suicide-news
ಹೊಸನಗರ ಆಹಾರ ತಪಾಸಣಾಧಿಕಾರಿ ಆತ್ಯಹತ್ಯೆ ಹಿನ್ನೆಲೆ ನ್ಯಾಯಕ್ಕಾಗಿ ಪ್ರತಿಭಟನೆ

ಶಿವಮೊಗ್ಗ : ಆಹಾರ ನಿರೀಕ್ಷಕ ದತ್ತಾತ್ರೇಯ ಆತ್ಮಹತ್ಯೆಗೆ ಕಾರಣರಾದವರ ವಿರುದ್ಧ ತಕ್ಷಣ ಕಠಿಣ ಕ್ರಮ ತೆಗೆದುಕೊಳ್ಳುವಂತೆ ಒತ್ತಾಯಿಸಿ ಜಿಲ್ಲಾ ಸರ್ಕಾರಿ ನೌಕರರ ಸಂಘ ಹಾಗೂ ಜಿಲ್ಲಾ ಕಂದಾಯ ಇಲಾಖೆ ನೌಕರರು ಜಿಲ್ಲಾಧಿಕಾರಿಗಳಿಗೆ ಮನವಿ ಸಲ್ಲಿಸಿದರು.

ಜಿಲ್ಲಾಧಿಕಾರಿ ಕಚೇರಿ‌ ಎದುರು ಮೌನ ಪ್ರತಿಭಟನೆ ನಡೆಸಿದ ನೌಕರರ ಸಂಘದವರು ದತ್ತಾತ್ರೇಯ ರವರ ಆತ್ಮಹತ್ಯೆಗೆ ಕಾರಣರಾದ ಹೊಸನಗರದ ತಹಶೀಲ್ದಾರ್ ಶ್ರೀಧರ್ ಮೂರ್ತಿ ಸೇರಿದಂತೆ ಇತರೆ ಏಳು ಜನರ ವಿರುದ್ದ ಸೂಕ್ತ ಕ್ರಮ ತೆಗೆದು ಕೊಳ್ಳಬೇಕು ಎಂದು ಆಗ್ರಹಿಸಿದರು. ಅಲ್ಲದೆ ದತ್ತಾತ್ರೇಯ ಕುಟುಂಬದ ಓರ್ವರಿಗೆ ಅನುಕಂಪದ ಆಧಾರದ ಮೇಲೆ ಸರ್ಕಾರಿ ಕೆಲಸ ನೀಡುವಂತೆ ಒತ್ತಾಯಿಸಿದರು.

ಹೊಸನಗರ ಆಹಾರ ತಪಾಸಣಾಧಿಕಾರಿ ಆತ್ಯಹತ್ಯೆ ಹಿನ್ನೆಲೆ ನ್ಯಾಯಕ್ಕಾಗಿ ಪ್ರತಿಭಟನೆ

ದತ್ತಾತ್ರೇಯ ರವರಿಗೆ ಮೇಲಾಧಿಕಾರಿಗಳ ಸಹಾಯ ದೂರಕಿದ್ದರೆ ಈ ರೀತಿಯ ಘಟನೆ ನಡೆಯುತ್ತಿರಲಿಲ್ಲ. ಈ ರೀತಿ ಮುಂದೆ ಯಾರಿಗೂ ಆಗಬಾರದು, ಇದಕ್ಕೆ ರಾಜ್ಯ ಸರ್ಕಾರಿ ನೌಕರರ ಸಂಘ ಕ್ರಮ ತೆಗೆದು ಕೊಳ್ಳಲಿದೆ ಎಂದು ರಾಜ್ಯ ಸರ್ಕಾರಿ ನೌಕರರ ಸಂಘದ ಅಧ್ಯಕ್ಷ ಷಡಕ್ಷರಿ ತಿಳಿಸಿದರು.

ನಂತರ ಮಾತನಾಡಿದ ಡಿಸಿ, ಘಟನೆ ನಡೆದಿದ್ದು ದುರದೃಷ್ಟಕರ, ಕೆಳಗಿನ ಅಧಿಕಾರಿಗಳಿಗೆ ಮೇಲಾಧಿಕಾರಿಗಳು ಯಾವಾಗಲೂ ಸಹಾಯಕವಾಗಿರಬೇಕು. ಮೃತ ದತ್ತಾತ್ರೇಯ ರವರು ಕಳೆದ ವರ್ಷ ಕಂದಾಯ ರತ್ನ ಪ್ರಶಸ್ತಿಯನ್ನು ಪಡೆದು ಕೊಂಡಿದ್ದರು. ಅಲ್ಲದೆ ಜಿಲ್ಲೆಯ ಹಿಂದಿನ ಜಿಲ್ಲಾಧಿಕಾರಿ ಕೆ.ಎ.ದಯಾನಂದ್ ರವರು ತಮ್ಮ ಗ್ರಾಮ ವಾಸ್ತವ್ಯವನ್ನು ಹೊಸನಗರದ ನಗರ ಗ್ರಾಮದಲ್ಲಿ ಮಾಡಿದ್ದರು. ಇಂತಹ ದಕ್ಷ ಅಧಿಕಾರಿ ವಿರುದ್ದ ಸುಳ್ಳು ಕೇಸು ದಾಖಲು ಮಾಡಿಸಿ, ಕೋರ್ಟ್ ಗೆ ಅಲೆಯುವಂತೆ ಮಾಡಿದ್ದರು ಎಂದು ಹೇಳಿದರು.

ಕೇಸ್ ಅನ್ನು ಖುಲಾಸೆ ಮಾಡಿಸಲು ತಹಶೀಲ್ದಾರ್ ಶ್ರೀಧರ್ ಮೂರ್ತಿ, ಆನಂದ್ ಕಾರ್ವಿ, ನಾಗೇಂದ್ರ ಹಾಗೂ ಇತರರ ಮೂಲಕ ಹಣದ ಬೇಡಿಕೆ ಇಟ್ಟಿದ್ದರು. ನೀನು ಬಂದು ನನ್ನ ಕಾಲನ್ನು ಹಿಡಿದು ಎಲ್ಲರ ಮುಂದೆ ಕ್ಷಮಾಪಣೆ ಕೇಳಿದ್ರೆ, ಕೇಸ್ ನಿಂದ ನಿಮ್ಮನ್ನು ಖುಲಾಸೆ ಮಾಡುವದಾಗಿ ಹೇಳಿದ್ರು, ಇದರಿಂದ ಬೇಸತ್ತು ಆತ್ಮಹತ್ಯೆ ಮಾಡಿ ಕೊಂಡಿದ್ದಾರೆ. ನಮ್ಮ ತಂದೆಯ ಆತ್ಮಕ್ಕೆ ಶಾಂತಿ‌ ಸಿಗಬೇಕಾದರೆ, ಆರೋಪಿಗಳ ವಿರುದ್ದ ಕಾನೂನು ಕ್ರಮ ತೆಗೆದು ಕೊಳ್ಳಬೇಕು ಎಂದು ದತ್ತಾತ್ರೇಯರವರ ಪುತ್ರಿ ಸುಮ ಆಗ್ರಹಿಸಿದರು.

ಶಿವಮೊಗ್ಗ : ಆಹಾರ ನಿರೀಕ್ಷಕ ದತ್ತಾತ್ರೇಯ ಆತ್ಮಹತ್ಯೆಗೆ ಕಾರಣರಾದವರ ವಿರುದ್ಧ ತಕ್ಷಣ ಕಠಿಣ ಕ್ರಮ ತೆಗೆದುಕೊಳ್ಳುವಂತೆ ಒತ್ತಾಯಿಸಿ ಜಿಲ್ಲಾ ಸರ್ಕಾರಿ ನೌಕರರ ಸಂಘ ಹಾಗೂ ಜಿಲ್ಲಾ ಕಂದಾಯ ಇಲಾಖೆ ನೌಕರರು ಜಿಲ್ಲಾಧಿಕಾರಿಗಳಿಗೆ ಮನವಿ ಸಲ್ಲಿಸಿದರು.

ಜಿಲ್ಲಾಧಿಕಾರಿ ಕಚೇರಿ‌ ಎದುರು ಮೌನ ಪ್ರತಿಭಟನೆ ನಡೆಸಿದ ನೌಕರರ ಸಂಘದವರು ದತ್ತಾತ್ರೇಯ ರವರ ಆತ್ಮಹತ್ಯೆಗೆ ಕಾರಣರಾದ ಹೊಸನಗರದ ತಹಶೀಲ್ದಾರ್ ಶ್ರೀಧರ್ ಮೂರ್ತಿ ಸೇರಿದಂತೆ ಇತರೆ ಏಳು ಜನರ ವಿರುದ್ದ ಸೂಕ್ತ ಕ್ರಮ ತೆಗೆದು ಕೊಳ್ಳಬೇಕು ಎಂದು ಆಗ್ರಹಿಸಿದರು. ಅಲ್ಲದೆ ದತ್ತಾತ್ರೇಯ ಕುಟುಂಬದ ಓರ್ವರಿಗೆ ಅನುಕಂಪದ ಆಧಾರದ ಮೇಲೆ ಸರ್ಕಾರಿ ಕೆಲಸ ನೀಡುವಂತೆ ಒತ್ತಾಯಿಸಿದರು.

ಹೊಸನಗರ ಆಹಾರ ತಪಾಸಣಾಧಿಕಾರಿ ಆತ್ಯಹತ್ಯೆ ಹಿನ್ನೆಲೆ ನ್ಯಾಯಕ್ಕಾಗಿ ಪ್ರತಿಭಟನೆ

ದತ್ತಾತ್ರೇಯ ರವರಿಗೆ ಮೇಲಾಧಿಕಾರಿಗಳ ಸಹಾಯ ದೂರಕಿದ್ದರೆ ಈ ರೀತಿಯ ಘಟನೆ ನಡೆಯುತ್ತಿರಲಿಲ್ಲ. ಈ ರೀತಿ ಮುಂದೆ ಯಾರಿಗೂ ಆಗಬಾರದು, ಇದಕ್ಕೆ ರಾಜ್ಯ ಸರ್ಕಾರಿ ನೌಕರರ ಸಂಘ ಕ್ರಮ ತೆಗೆದು ಕೊಳ್ಳಲಿದೆ ಎಂದು ರಾಜ್ಯ ಸರ್ಕಾರಿ ನೌಕರರ ಸಂಘದ ಅಧ್ಯಕ್ಷ ಷಡಕ್ಷರಿ ತಿಳಿಸಿದರು.

ನಂತರ ಮಾತನಾಡಿದ ಡಿಸಿ, ಘಟನೆ ನಡೆದಿದ್ದು ದುರದೃಷ್ಟಕರ, ಕೆಳಗಿನ ಅಧಿಕಾರಿಗಳಿಗೆ ಮೇಲಾಧಿಕಾರಿಗಳು ಯಾವಾಗಲೂ ಸಹಾಯಕವಾಗಿರಬೇಕು. ಮೃತ ದತ್ತಾತ್ರೇಯ ರವರು ಕಳೆದ ವರ್ಷ ಕಂದಾಯ ರತ್ನ ಪ್ರಶಸ್ತಿಯನ್ನು ಪಡೆದು ಕೊಂಡಿದ್ದರು. ಅಲ್ಲದೆ ಜಿಲ್ಲೆಯ ಹಿಂದಿನ ಜಿಲ್ಲಾಧಿಕಾರಿ ಕೆ.ಎ.ದಯಾನಂದ್ ರವರು ತಮ್ಮ ಗ್ರಾಮ ವಾಸ್ತವ್ಯವನ್ನು ಹೊಸನಗರದ ನಗರ ಗ್ರಾಮದಲ್ಲಿ ಮಾಡಿದ್ದರು. ಇಂತಹ ದಕ್ಷ ಅಧಿಕಾರಿ ವಿರುದ್ದ ಸುಳ್ಳು ಕೇಸು ದಾಖಲು ಮಾಡಿಸಿ, ಕೋರ್ಟ್ ಗೆ ಅಲೆಯುವಂತೆ ಮಾಡಿದ್ದರು ಎಂದು ಹೇಳಿದರು.

ಕೇಸ್ ಅನ್ನು ಖುಲಾಸೆ ಮಾಡಿಸಲು ತಹಶೀಲ್ದಾರ್ ಶ್ರೀಧರ್ ಮೂರ್ತಿ, ಆನಂದ್ ಕಾರ್ವಿ, ನಾಗೇಂದ್ರ ಹಾಗೂ ಇತರರ ಮೂಲಕ ಹಣದ ಬೇಡಿಕೆ ಇಟ್ಟಿದ್ದರು. ನೀನು ಬಂದು ನನ್ನ ಕಾಲನ್ನು ಹಿಡಿದು ಎಲ್ಲರ ಮುಂದೆ ಕ್ಷಮಾಪಣೆ ಕೇಳಿದ್ರೆ, ಕೇಸ್ ನಿಂದ ನಿಮ್ಮನ್ನು ಖುಲಾಸೆ ಮಾಡುವದಾಗಿ ಹೇಳಿದ್ರು, ಇದರಿಂದ ಬೇಸತ್ತು ಆತ್ಮಹತ್ಯೆ ಮಾಡಿ ಕೊಂಡಿದ್ದಾರೆ. ನಮ್ಮ ತಂದೆಯ ಆತ್ಮಕ್ಕೆ ಶಾಂತಿ‌ ಸಿಗಬೇಕಾದರೆ, ಆರೋಪಿಗಳ ವಿರುದ್ದ ಕಾನೂನು ಕ್ರಮ ತೆಗೆದು ಕೊಳ್ಳಬೇಕು ಎಂದು ದತ್ತಾತ್ರೇಯರವರ ಪುತ್ರಿ ಸುಮ ಆಗ್ರಹಿಸಿದರು.

Intro:ಹೊಸನಗರದ ಆಹಾರ ನಿರೀಕ್ಷಕರಾಗಿದ್ದ ದತ್ತಾತ್ತ್ರೇಯ ರವರ ಆತ್ಮಹತ್ಯೆಗೆ ಸಂಬಂಧಿಸಿದಂತೆ ಅವರ ಆತ್ಮಹತ್ಯೆಗೆ ಕಾರಣರಾದವರ ವಿರುದ್ದ ತಕ್ಷಣ ಕ್ರಮ ತೆಗೆದು ಕೊಳ್ಳಬೇಕು ಎಂದು ಆಗ್ರಹಿಸಿ ಶಿವಮೊಗ್ಗ ಜಿಲ್ಲಾ ಸರ್ಕಾರಿ ನೌಕರರ ಸಂಘ ಹಾಗೂ ಜಿಲ್ಲಾ ಕಂದಾಯ ಇಲಾಖಾ ನೌಕರರ ಸಂಘದವರು ಜಿಲ್ಲಾಧಿಕಾರಿಗಳಿಗೆ ಮನವಿ ಸಲ್ಲಿಸಿದ್ದಾರೆ. ಜಿಲ್ಲಾಧಿಕಾರಿ ಕಚೇರಿ‌ ಎದುರು ಮೌನ ಪ್ರತಿಭಟನೆ ನಡೆಸಿದ ನೌಕರರ ಸಂಘದವರು ದತ್ತಾತ್ರೇಯ ರವರ ಆತ್ಮಹತ್ಯೆಗೆ ಕಾರಣರಾದ ಹೊಸನಗರದ ತಹಶೀಲ್ದಾರ್ ಶ್ರೀಧರ್ ಮೂರ್ತಿ ಸೇರಿದಂತೆ ಇತರೆ ಏಳು ಜನರ ವಿರುದ್ದ ಸೂಕ್ತ ಕ್ರಮ ತೆಗೆದು ಕೊಳ್ಳಬೇಕು ಎಂದು ಆಗ್ರಹಿಸಿ ಮನವಿ ಸಲ್ಲಿಸಿದರು. ಈ ವೇಳೆ ಮೃತ ದತ್ತಾತ್ರೇಯ ರವರ ಕುಟುಂಬದಲ್ಲಿ ಓರ್ವರಿಗೆ ಅನುಕಂಪದ ಆಧಾರದ ಮೇಲೆ ಸರ್ಕಾರಿ ಕೆಲಸ ನೀಡುವಂತೆ ಒತ್ತಾಯಿಸಿ, ರಾಜ್ಯ ಸರ್ಕಾರಿ ನೌಕರರ ಸಂಘದ ಅಧ್ಯಕ್ಷ ಷಡಕ್ಷರಿ ರವರು ಡಿಸಿ ರವರಿಗೆ ಮನವಿ ಸಲ್ಲಿಸಿದರು. ದತ್ತಾತ್ರೇಯ ರವರಿಗೆ ಮೇಲಾಧಿಕಾರಿಗಳ ಸಹಾಯ ದೂರಕಿದ್ದರೆ ಈ ರೀತಿಯ ಘಟನೆ ನಡೆಯುತ್ತಿರಲಿಲ್ಲ. ಈ ರೀತಿ ಮುಂದೆ ಯಾರಿಗೂ ಆಗಬಾರದು, ಇದಕ್ಕೆ ರಾಜ್ಯ ಸರ್ಕಾರಿ ನೌಕರರ ಸಂಘ ಕ್ರಮ ತೆಗೆದು ಕೊಳ್ಳಲಿದೆ ಎಂದು ಷಡಕ್ಷರಿ ತಿಳಿಸಿದರು. ನಂತ್ರ ಮಾತನಾಡಿದ ಡಿಸಿ ರವರು, ಘಟನೆ ನಡೆದಿದ್ದು ದುರದೃಷ್ಟಕರ, ಕೆಳಗಿನ ಅಧಿಕಾರಿಗಳಿಗೆ ಮೇಲಾಧಿಕಾರಿಗಳು ಯಾವಾಗಲೂ ಸಹಾಯಕವಾಗಿರಬೇಕು ಎಂದರು.


Body:ಮೃತ ದತ್ತಾತ್ರೇಯ ರವರು ಕಳೆದ ವರ್ಷ ಶಿವಮೊಗ್ಗ ಜಿಲ್ಲಾಡಳಿತದ ವತಿಯಿಂದ‌ ನೀಡುವ ಕಂದಾಯ ರತ್ನ ಪ್ರಶಸ್ತಿಯನ್ನು ಪಡೆದು ಕೊಂಡಿದ್ದರು. ಕಳೆದ 20 ವರ್ಷಗಳಿಂದ ಹೊಸನಗರ ತಾಲೂಕಿನಲ್ಲಿಯೇ ಕಾರ್ಯ ನಿರ್ವಹಿಸಿದ್ದ ದತ್ತಾತ್ರೇಯ ರವರು ಈ ಭಾಗದಲ್ಲಿ ಜನಾನೂರಾಗಿಯಾಗಿದ್ದರು. ಇವರು ವಿ.ಎ ಆಗಿ ನಂತ್ರ ಆರ್ ಐ ಕಳೆದ ನಾಲ್ಕೈದು ತಿಂಗಳ ಹಿಂದೆ ಅಹಾರ ನಿರೀಕ್ಷಕರಾಗಿ ಬಡ್ತಿ ಹೊಂದಿದ್ದರು. ಇವರು ಅತ್ಯಂತ ಪ್ರಮಾಣಿಕರಾಗಿ ಕಾರ್ಯ ನಿರ್ವಹಿಸಿದ ಪರಿಣಾಮ ಶಿವಮೊಗ್ಗ ಜಿಲ್ಲೆಯ ಹಿಂದಿನ ಜಿಲ್ಲಾಧಿಕಾರಿ ಕೆ.ಎ.ದಯಾನಂದ್ ರವರು ತಮ್ಮ ಗ್ರಾಮ ವಾಸ್ತವ್ಯವನ್ನು ಹೊಸನಗರದ ನಗರ ಗ್ರಾಮದಲ್ಲಿ ಮಾಡಿದ್ದರು. ಇಂತಹ ದಕ್ಷ ಅಧಿಕಾರಿ ವಿರುದ್ದ ಸುಳ್ಳು ಕೇಸು ದಾಖಲು ಮಾಡಿಸಿ, ಕೋರ್ಟ್ ಗೆ ಅಲಿಯುವಂತೆ ಮಾಡಿದ್ದರು.


Conclusion:ಕೇಸ್ ನ್ನು ಖುಲಾಸೆ ಮಾಡಿಸಲು ತಹಶೀಲ್ದಾರ್ ಶ್ರೀಧರ್ ಮೂರ್ತಿ, ಆನಂದ್ ಕಾರ್ವಿ, ನಾಗೇಂದ್ರ ಹಾಗೂ ಇತರರ ಮೂಲಕ ಹಣದ ಬೇಡಿಕೆ ಇಟ್ಟಿದ್ದರು. ಅಲ್ಲದೆ ಮಗಳ ಮದುವೆಗೆ ಕೇವಲ ಎರಡು ದಿನ ರಜೆ ನೀಡಿದ್ದರಂತೆ, ನೀನು ಬಂದು ನನ್ನ ಕಾಲನ್ನು ಹಿಡಿದು ಎಲ್ಲಾರ ಮುಂದೆ ಕ್ಷಮಾಪಣೆ ಕೇಳಿದ್ರೆ, ಈ ಕೇಸ್ ನಿಂದ ನಿಮ್ಮನ್ನು ಖುಲಾಸೆ ಮಾಡುವುದಾಗಿ ಹೇಳಿದಕ್ಕೆ ಬೇಸತ್ತು ಆತ್ಮಹತ್ಯೆ ಮಾಡಿ ಕೊಂಡಿದ್ದಾರೆ.ನಮ್ಮ ತಂದೆಯ ಆತ್ಮಕ್ಕೆ ಶಾಂತಿ‌ ಸಿಗಬೇಕಾದರೆ, ತಹಶೀಲ್ದಾರ್ ಶ್ರೀಧರ್ ಮೂರ್ತಿ ಹಾಗೂ ಇತರರು ವಿರುದ್ದ ಕಾನೂನು ಕ್ರಮ ತೆಗೆದು ಕೊಳ್ಲಬೇಕು ಎಂದು ದತ್ತಾತ್ರೇಯ ರವರ ಪುತ್ರಿ ಸುಮ ಆಗ್ರಹಿಸಿದ್ದಾರೆ.

ಬೈಟ್: ಷಡಕ್ಷರಿ. ಅಧ್ಯಕ್ಷರು. ರಾಜ್ಯ ಸರ್ಕಾರಿ ನೌಕರರ ಸಂಘ.(ಲೋಗೋ ಬೈಟ್)

ಬೈಟ್: ಶಿವಕುಮಾರ್. ಜಿಲ್ಲಾಧಿಕಾರಿ.

ಬೈಟ್: ಸುಮ. ಮೃತನ ಮಗಳು.
ETV Bharat Logo

Copyright © 2024 Ushodaya Enterprises Pvt. Ltd., All Rights Reserved.