ETV Bharat / city

ಎಳನೀರು ಮಾರಾಟ.. ಕುಟುಂಬ ನಿರ್ವಹಣೆ ಜೊತೆ ಮಕ್ಕಳನ್ನು ವಿದ್ಯಾವಂತರನ್ನಾಗಿಸಿದ ಮಹಾತಾಯಿ

author img

By

Published : May 8, 2022, 4:19 PM IST

ಪತಿಯ ಅಗಲಿಕೆ ನಂತರ ಗಂಡ ನಡೆಸುತ್ತಿದ್ದ ಎಳನೀರು ವ್ಯಾಪಾರವನ್ನೇ ತಮ್ಮ ಕಸುಬಾಗಿಸಿಕೊಂಡು ಇಬ್ಬರು ಮಕ್ಕಳನ್ನು ಓದಿಸಿ, ಕುಟುಂಬವನ್ನೂ ನಿರ್ವಹಿಸುತ್ತಿರುವ ದಿಟ್ಟ ತಾಯಿಯ ಕಥೆ ಇಲ್ಲಿದೆ.

Tender coconut trader Shahida Banu
ಎಳನೀರು ವ್ಯಾಪಾರಿ ಶಾಹಿದ ಬಾನು

ಶಿವಮೊಗ್ಗ: ಇಲ್ಲಿನ ಬಿ.ಹೆಚ್.ರಸ್ತೆಯ ದುಮ್ಮಳ್ಳಿ ತಿರುವಿನಲ್ಲಿ ಕಳೆದ 25 ವರ್ಷಗಳಿಂದ ಎಳನೀರು ವ್ಯಾಪಾರ ಮಾಡಿ ಶಾಹೀದಾ ಬಾನು ಎಂಬುವರು ಜೀವನ ನಡೆಸುತ್ತಿದ್ದಾರೆ. ಶಾಹೀದಾ ಬಾನು ಅವರ ಪತಿ ಒಮ್ಮೆಲೇ ತೀರಿಹೋದಾಗ ಕುಟುಂಬಕ್ಕೆ ಆಕಾಶವೇ ಕಳಚಿ ತಲೆ ಮೇಲೆ ಬಿದ್ದಂತಾಯಿತು. ಆಗ ಸಂಸಾರ ನಿರ್ವಹಣೆಗೆ ಅನಿವಾರ್ಯವಾಗಿ ಈ ಕಾಯಕಕ್ಕಿಳಿದರು. ಅಂದು ಮಚ್ಚು ಹಿಡಿದು ಎಳನೀರು ವ್ಯಾಪಾರ ಪ್ರಾರಂಭಿಸಿದ ಶಾಹೀದಾ ಬಾನು ಇಂದಿಗೂ ಅದನ್ನು ಮುಂದುವರೆಸಿಕೊಂಡ ಹೋಗುತ್ತಿದ್ದಾರೆ.

ಶಾಹೀದಾ ಬಾನು ಅವರದು ಸುಂದರ ಸಂಸಾರವಾಗಿತ್ತು.‌ ಪತಿ ಇಬ್ಬರು ಮಕ್ಕಳನ್ನು ಹೊಂದಿದ್ದ ಅವರು ಸುಖವಾಗಿಯೇ ಇದ್ದರು. ಆದರೆ ಅವರ ಪತಿ ಸಾವನ್ನಪ್ಪಿದ್ದು, ಮುಂದೆ ದಾರಿ ಕಾಣದಂತೆ ಆಗಿತ್ತು. ಶಾಹೀದಾ ಬಾನು ಅವರ ಪತಿ ಎಳನೀರು ವ್ಯಾಪಾರ ಮಾಡುತ್ತಿದ್ದರು. ಈ ವೇಳೆ ಪತಿ ಎಳನೀರನ್ನು ಕೊಚ್ಚುವುದನ್ನು ನೋಡಿದ್ದ ಶಾಹೀದಾ ಅವರು ಸಹ ಅದರಲ್ಲೇ ಜೀವನ ನಡೆಸಲು ಎಳನೀರು ವ್ಯಾಪಾರವನ್ನೇ ಆಯ್ಕೆ ಮಾಡಿಕೊಂಡರು.

ಎಳನೀರು ಮಾರಾಟ ಮಾಡಿ ಕುಟುಂಬ ನಿರ್ವಹಣೆ ಮಾಡುತ್ತಿರುವ ಶಾಹೀದಾ ಬಾನು

ಶಾಹೀದಾ ಬಾನು ಅವರು ಹೋಲ್​ಸೇಲ್ ಎಳನೀರು ಮಾರಾಟ ಮಾಡುವವರ ಬಳಿ ಎಳನೀರು ಖರೀದಿಸಿ ಮಾರಾಟ ಮಾಡುತ್ತಿದ್ದಾರೆ. ಗಂಡನ ಕಸುಬನ್ನೇ ವೃತ್ತಿಯನ್ನಾಗಿಸಿಕೊಂಡು ಮಕ್ಕಳನ್ನು ಸಾಕಲು ಪ್ರಾರಂಭಿಸಿದರು. ಇದಕ್ಕೆ ಶಾಹೀದಾ ಬಾನು ತವರು ಮನೆಯವರು ಸಹ ಸಾಥ್ ನೀಡಿದರು. ಇವರ ಗಂಡು ಮಗನನ್ನು ತವರು ಮನೆಯಲ್ಲಿ ಓದಲು ಕಳುಹಿಸಿದರು. ಮಗಳನ್ನು ತನ್ನ ಅಕ್ಕನ ಮನೆಯಲ್ಲಿ ಓದಿಸಿದರು.

ಮಗ‌ ದಾದಾಪೀರ್ ಭದ್ರಾವತಿಯ ಸರ್ಕಾರಿ ಐಟಿಐ ಕಾಲೇಜಿನಲ್ಲಿ ವಿದ್ಯಾಭ್ಯಾಸ ಕಲಿತರು. ಆದರೆ ಈಗ ಪೇಂಟಿಂಗ್ ವೃತ್ತಿ ಮಾಡುತ್ತಿದ್ದಾರೆ. ಮಗಳು ಸಲ್ಮಾ ಬಾನು ಈಗ ಅಕ್ಕನ ಮನೆಯಲ್ಲಿದ್ದು ಎಂ.ಕಾಂ ಓದುತ್ತಿದ್ದಾರೆ.

'ಈಟಿವಿ ಭಾರತ'ದೊಂದಿಗೆ ಮಾತನಾಡಿದ ಶಾಹೀದಾ ಬಾನು ಅವರು, ಪ್ರತಿದಿನ 250-300 ಎಳನೀರು ಕಾಯಿಗಳನ್ನು ಮಾರಾಟ ಮಾಡುತ್ತಿದ್ದೇನೆ. ಆದರೆ ಚಳಿಗಾಲದಲ್ಲಿ 50 ಎಳನೀರು ಸಹ ಮಾರಾಟವಾಗುವುದಿಲ್ಲ. ಎಳನೀರು ಕೊಚ್ಚಿ ಮೈಕೈ ನೋವು ಬರುತ್ತದೆ. ಆದರೆ ಕುಟುಂಬ ಜೀವನ ಸಾಗಿಸಲು ಇದನ್ನು‌ ಬಿಡಲು ಆಗುತ್ತಿಲ್ಲ. ಮಗ ದಾದಾಪೀರ್ ಈ ವ್ಯಾಪಾರ ಬಿಟ್ಟು ಆರಾಮವಾಗಿ ಮನೆಯಲ್ಲಿ ಇರು ಎಂದು ಹೇಳಿದ್ರು ಸಹ ಒಬ್ಬರ ದುಡಿಮೆಯಲ್ಲಿ ಕುಟುಂಬ ನಡೆಸುವುದು ಕಷ್ಟ. ಇದರಿಂದ ತಮಗೆ ದುಡಿಯುವ ಶಕ್ತಿ ಇರುವವರೆಗೂ ಕೆಲಸ ಮಾಡೋದಾಗಿ ಹೇಳುತ್ತಾರೆ.

ಮಗ ದಾದಾಪೀರ್ ಮಾತನಾಡಿ, ತಾಯಿಯೇ ನಮ್ಮನ್ನು ಸಾಕಿದ್ದು, ಅವರು ನಮಗೆಲ್ಲಾ ಸ್ಪೂರ್ತಿ ಅಂತಾರೆ. ಇವರ ಪ್ರತಿ ದಿನದ ಗ್ರಾಹಕರು ಸಹ ಶಾಹೀದಾ ಬಾನು ಅವರ ಶ್ರಮಕ್ಕೆ ಸಲಾಂ ಎನ್ನುತ್ತಿದ್ದಾರೆ. ತಾಯಂದಿರ ದಿನದಂದು ಅವರಿಗೆ ನಾವು ಕೂಡ ಸಲಾಂ ಹೇಳೋಣ..

ಇದನ್ನೂ ಓದಿ: ಮಂಟಪದಲ್ಲಿ ತಾಯಿಯ ಪಕ್ಕ ತಂದೆಯ ಮೇಣದ ಪ್ರತಿಮೆ ಕೂರಿಸಿ ಮದುವೆಯಾದ ಮಗ!

ಶಿವಮೊಗ್ಗ: ಇಲ್ಲಿನ ಬಿ.ಹೆಚ್.ರಸ್ತೆಯ ದುಮ್ಮಳ್ಳಿ ತಿರುವಿನಲ್ಲಿ ಕಳೆದ 25 ವರ್ಷಗಳಿಂದ ಎಳನೀರು ವ್ಯಾಪಾರ ಮಾಡಿ ಶಾಹೀದಾ ಬಾನು ಎಂಬುವರು ಜೀವನ ನಡೆಸುತ್ತಿದ್ದಾರೆ. ಶಾಹೀದಾ ಬಾನು ಅವರ ಪತಿ ಒಮ್ಮೆಲೇ ತೀರಿಹೋದಾಗ ಕುಟುಂಬಕ್ಕೆ ಆಕಾಶವೇ ಕಳಚಿ ತಲೆ ಮೇಲೆ ಬಿದ್ದಂತಾಯಿತು. ಆಗ ಸಂಸಾರ ನಿರ್ವಹಣೆಗೆ ಅನಿವಾರ್ಯವಾಗಿ ಈ ಕಾಯಕಕ್ಕಿಳಿದರು. ಅಂದು ಮಚ್ಚು ಹಿಡಿದು ಎಳನೀರು ವ್ಯಾಪಾರ ಪ್ರಾರಂಭಿಸಿದ ಶಾಹೀದಾ ಬಾನು ಇಂದಿಗೂ ಅದನ್ನು ಮುಂದುವರೆಸಿಕೊಂಡ ಹೋಗುತ್ತಿದ್ದಾರೆ.

ಶಾಹೀದಾ ಬಾನು ಅವರದು ಸುಂದರ ಸಂಸಾರವಾಗಿತ್ತು.‌ ಪತಿ ಇಬ್ಬರು ಮಕ್ಕಳನ್ನು ಹೊಂದಿದ್ದ ಅವರು ಸುಖವಾಗಿಯೇ ಇದ್ದರು. ಆದರೆ ಅವರ ಪತಿ ಸಾವನ್ನಪ್ಪಿದ್ದು, ಮುಂದೆ ದಾರಿ ಕಾಣದಂತೆ ಆಗಿತ್ತು. ಶಾಹೀದಾ ಬಾನು ಅವರ ಪತಿ ಎಳನೀರು ವ್ಯಾಪಾರ ಮಾಡುತ್ತಿದ್ದರು. ಈ ವೇಳೆ ಪತಿ ಎಳನೀರನ್ನು ಕೊಚ್ಚುವುದನ್ನು ನೋಡಿದ್ದ ಶಾಹೀದಾ ಅವರು ಸಹ ಅದರಲ್ಲೇ ಜೀವನ ನಡೆಸಲು ಎಳನೀರು ವ್ಯಾಪಾರವನ್ನೇ ಆಯ್ಕೆ ಮಾಡಿಕೊಂಡರು.

ಎಳನೀರು ಮಾರಾಟ ಮಾಡಿ ಕುಟುಂಬ ನಿರ್ವಹಣೆ ಮಾಡುತ್ತಿರುವ ಶಾಹೀದಾ ಬಾನು

ಶಾಹೀದಾ ಬಾನು ಅವರು ಹೋಲ್​ಸೇಲ್ ಎಳನೀರು ಮಾರಾಟ ಮಾಡುವವರ ಬಳಿ ಎಳನೀರು ಖರೀದಿಸಿ ಮಾರಾಟ ಮಾಡುತ್ತಿದ್ದಾರೆ. ಗಂಡನ ಕಸುಬನ್ನೇ ವೃತ್ತಿಯನ್ನಾಗಿಸಿಕೊಂಡು ಮಕ್ಕಳನ್ನು ಸಾಕಲು ಪ್ರಾರಂಭಿಸಿದರು. ಇದಕ್ಕೆ ಶಾಹೀದಾ ಬಾನು ತವರು ಮನೆಯವರು ಸಹ ಸಾಥ್ ನೀಡಿದರು. ಇವರ ಗಂಡು ಮಗನನ್ನು ತವರು ಮನೆಯಲ್ಲಿ ಓದಲು ಕಳುಹಿಸಿದರು. ಮಗಳನ್ನು ತನ್ನ ಅಕ್ಕನ ಮನೆಯಲ್ಲಿ ಓದಿಸಿದರು.

ಮಗ‌ ದಾದಾಪೀರ್ ಭದ್ರಾವತಿಯ ಸರ್ಕಾರಿ ಐಟಿಐ ಕಾಲೇಜಿನಲ್ಲಿ ವಿದ್ಯಾಭ್ಯಾಸ ಕಲಿತರು. ಆದರೆ ಈಗ ಪೇಂಟಿಂಗ್ ವೃತ್ತಿ ಮಾಡುತ್ತಿದ್ದಾರೆ. ಮಗಳು ಸಲ್ಮಾ ಬಾನು ಈಗ ಅಕ್ಕನ ಮನೆಯಲ್ಲಿದ್ದು ಎಂ.ಕಾಂ ಓದುತ್ತಿದ್ದಾರೆ.

'ಈಟಿವಿ ಭಾರತ'ದೊಂದಿಗೆ ಮಾತನಾಡಿದ ಶಾಹೀದಾ ಬಾನು ಅವರು, ಪ್ರತಿದಿನ 250-300 ಎಳನೀರು ಕಾಯಿಗಳನ್ನು ಮಾರಾಟ ಮಾಡುತ್ತಿದ್ದೇನೆ. ಆದರೆ ಚಳಿಗಾಲದಲ್ಲಿ 50 ಎಳನೀರು ಸಹ ಮಾರಾಟವಾಗುವುದಿಲ್ಲ. ಎಳನೀರು ಕೊಚ್ಚಿ ಮೈಕೈ ನೋವು ಬರುತ್ತದೆ. ಆದರೆ ಕುಟುಂಬ ಜೀವನ ಸಾಗಿಸಲು ಇದನ್ನು‌ ಬಿಡಲು ಆಗುತ್ತಿಲ್ಲ. ಮಗ ದಾದಾಪೀರ್ ಈ ವ್ಯಾಪಾರ ಬಿಟ್ಟು ಆರಾಮವಾಗಿ ಮನೆಯಲ್ಲಿ ಇರು ಎಂದು ಹೇಳಿದ್ರು ಸಹ ಒಬ್ಬರ ದುಡಿಮೆಯಲ್ಲಿ ಕುಟುಂಬ ನಡೆಸುವುದು ಕಷ್ಟ. ಇದರಿಂದ ತಮಗೆ ದುಡಿಯುವ ಶಕ್ತಿ ಇರುವವರೆಗೂ ಕೆಲಸ ಮಾಡೋದಾಗಿ ಹೇಳುತ್ತಾರೆ.

ಮಗ ದಾದಾಪೀರ್ ಮಾತನಾಡಿ, ತಾಯಿಯೇ ನಮ್ಮನ್ನು ಸಾಕಿದ್ದು, ಅವರು ನಮಗೆಲ್ಲಾ ಸ್ಪೂರ್ತಿ ಅಂತಾರೆ. ಇವರ ಪ್ರತಿ ದಿನದ ಗ್ರಾಹಕರು ಸಹ ಶಾಹೀದಾ ಬಾನು ಅವರ ಶ್ರಮಕ್ಕೆ ಸಲಾಂ ಎನ್ನುತ್ತಿದ್ದಾರೆ. ತಾಯಂದಿರ ದಿನದಂದು ಅವರಿಗೆ ನಾವು ಕೂಡ ಸಲಾಂ ಹೇಳೋಣ..

ಇದನ್ನೂ ಓದಿ: ಮಂಟಪದಲ್ಲಿ ತಾಯಿಯ ಪಕ್ಕ ತಂದೆಯ ಮೇಣದ ಪ್ರತಿಮೆ ಕೂರಿಸಿ ಮದುವೆಯಾದ ಮಗ!

ETV Bharat Logo

Copyright © 2024 Ushodaya Enterprises Pvt. Ltd., All Rights Reserved.