ETV Bharat / city

ಮಲೆನಾಡಲ್ಲಿ ಮಳೆಯ ಕಣ್ಣಾಮುಚ್ಚಾಲೆ: ಜಲಾಶಯಗಳು ಭರ್ತಿಯಾಗೋದು ಡೌಟು!

author img

By

Published : Jul 25, 2019, 3:00 AM IST

ಮಲೆನಾಡ ಹೆಬ್ಬಾಗಿಲು ಶಿವಮೊಗ್ಗ ಜಿಲ್ಲೆಯಲ್ಲಿ ಈ ಬಾರಿ ನೀರಿಕ್ಷೆಯಂತೆ ಮಳೆಯಾಗಿಲ್ಲ. ಕಳೆದ ವರ್ಷ ಈ ವೇಳೆಗಾಗಲೇ ಮುಂಗಾರು ಅಬ್ಬರಿಸಿ ಸುರಿಯುತ್ತಿದ್ದರಿಂದ  ಶಿವಮೊಗ್ಗದ ಪ್ರಮುಖ ಜಲಾಶಯಗಳಾದ ಲಿಂಗನಮಕ್ಕಿ, ಭದ್ರಾ, ತುಂಗಾ, ಮಾಣಿ  ಭಾಗಶಃ ಭರ್ತಿಯಾಗಿದ್ದವು. ಆದರೆ ಈ ಬಾರಿ ತುಂಗಾ ಜಲಾಶಯ ಹೊರತುಪಡಿಸಿ ಮತ್ಯಾವ ಜಲಾಶಯಗಳು ಕೂಡ ಭರ್ತಿಯಾಗಿಲ್ಲ.

Malenadu, Dams

ಶಿವಮೊಗ್ಗ: ಮಲೆನಾಡಿನಲ್ಲಿ ಕಳೆದೊಂದು ವಾರದಿಂದ ಮಳೆ ಕ್ಷೀಣಿಸಿದೆ. ವಾಡಿಕೆಯಂತೆ ಈ ವೇಳೆಗಾಗಲೇ ಭಾಗಶಃ ಭರ್ತಿಯಾಗುತ್ತಿದ್ದ ಜಲಾಶಯಗಳು ಈ ಬಾರಿ ಇನ್ನೂ ಭರ್ತಿಯಾಗಿಲ್ಲ. ಇದರಿಂದ ಕೃಷಿ ಚಟುವಟಿಕೆಗಳಿಗೆ ಹಿನ್ನಡೆ ಉಂಟಾಗಿದೆ.

ಮಲೆನಾಡ ಹೆಬ್ಬಾಗಿಲು ಶಿವಮೊಗ್ಗ ಜಿಲ್ಲೆಯಲ್ಲಿ ಈ ಬಾರಿ ನೀರಿಕ್ಷೆಯಂತೆ ಮಳೆಯಾಗಿಲ್ಲ. ಕಳೆದ ವರ್ಷ ಈ ವೇಳೆಗಾಗಲೇ ಮುಂಗಾರು ಅಬ್ಬರಿಸಿ ಸುರಿಯುತ್ತಿದ್ದರಿಂದ ಶಿವಮೊಗ್ಗದ ಪ್ರಮುಖ ಜಲಾಶಯಗಳಾದ ಲಿಂಗನಮಕ್ಕಿ, ಭದ್ರಾ, ತುಂಗಾ, ಮಾಣಿ ಭಾಗಶಃ ಭರ್ತಿಯಾಗಿದ್ದವು. ಆದರೆ ಈ ಬಾರಿ ತುಂಗಾ ಜಲಾಶಯ ಹೊರತುಪಡಿಸಿ ಮತ್ಯಾವ ಜಲಾಶಯಗಳು ಕೂಡ ಭರ್ತಿಯಾಗಿಲ್ಲ. ಜುಲೈ ತಿಂಗಳಲ್ಲಿ ಶೇ. 37ರಷ್ಟು ಮಳೆ ಕೊರತೆ ಎದುರಾಗಿದೆ.

ಮಲೆನಾಡ ಜಲಾಶಯಗಳು ಭರ್ತಿಯಾಗೋದು ಡೌಟು

ಕಳೆದೊಂದು ವಾರದಿಂದ ಜಿಲ್ಲೆಯಾದ್ಯಂತ ವರುಣ ಕಣ್ಣಾಮುಚ್ಚಾಲೆ ಆಟ ಆಡುತ್ತಿದ್ದು, ಇದೇ ರೀತಿ ಮುಂದುವರೆದರೆ ಜಲಾಶಯಗಳಿಗೆ ಒಳಹರಿವಿನ ಪ್ರಮಾಣ ಗಣನೀಯ ಇಳಿಕೆಯಾಗುವ ಆತಂಕ ಎದುರಾಗಿದೆ. ಜೂನ್ 1ರಿಂದ ಇದುವರೆಗೆ ಜಿಲ್ಲೆಯಲ್ಲಿ ವಾಡಿಕೆ ಮಳೆ 1071 ಮಿ.ಮೀ. ಆಗಬೇಕಿತ್ತು. ಆದರೆ ಕೇವಲ 675 ಮಿ.ಮೀ ಮಳೆ ಬಿದ್ದಿದೆ. ಇನ್ನು ಶಿವಮೊಗ್ಗದಲ್ಲಿ ಶೇ. 30, ಭದ್ರಾವತಿಯಲ್ಲಿ ಶೇ. 34, ತೀರ್ಥಹಳ್ಳಿಯಲ್ಲಿ ಶೇ. 49, ಸಾಗರದಲ್ಲಿ ಶೇ. 13, ಹೊಸನಗರದಲ್ಲಿ ಶೇ. 27, ಶಿಕಾರಿಪುರದಲ್ಲಿ ಶೇ. 31 ಹಾಗೂ ಸೊರಬದಲ್ಲಿ ಶೇ. 47ರಷ್ಟು ಮಳೆ ಕೊರತೆ ಎದುರಾಗಿದೆ.

ಜಿಲ್ಲೆಯ ಅತಿ ಸಣ್ಣದಾದ ತುಂಗಾ ಡ್ಯಾಂ ಭರ್ತಿಯಾಗಿದ್ದು, ಜಲಾಶಯದ ಮೂಲಕ ನಾಲೆಗಳಿಗೆ 14 ಸಾವಿರ ಕ್ಯೂಸೆಕ್ ನೀರು ಹರಿಬಿಡಲಾಗುತ್ತಿದೆ. ಕಳೆದ ವರ್ಷ ಈ ವೇಳೆಗೆ ಐದು ಜಿಲ್ಲೆಗಳ ಜೀವನಾಡಿ ಎಂದೇ ಕರೆಸಿಕೊಳ್ಳುವ ಭದ್ರಾ ಜಲಾಶಯ 181 ಅಡಿ ತಲುಪಿತ್ತು. ಆದ್ರೆ ಈ ಬಾರಿ 139 ಅಡಿ ಮಾತ್ರ ತಲುಪಿದೆ. ಜಲಾಶಯಕ್ಕೆ ಹರಿದುಬರುತ್ತಿರುವ ಒಳಹರಿವಿನ ಪ್ರಮಾಣವೂ 8 ಸಾವಿರ ಕ್ಯೂಸೆಕ್​ಗೆ ಇಳಿದಿದೆ.

ರಾಜ್ಯದ ಅತಿ ದೊಡ್ಡ ಜಲಾಶಯವೆಂದು ಹೆಸರುವಾಸಿಯಾದ ಲಿಂಗನಮಕ್ಕಿ ಜಲಾಶಯ ಕೂಡ ಈ ಬಾರಿ ಭರ್ತಿಯಾಗುವುದು ಅನುಮಾನ. ಹೊಸನಗರ, ತೀರ್ಥಹಳ್ಳಿ ಹಾಗೂ ಸಾಗರ ಭಾಗದಲ್ಲಿ ಮಳೆ ಕ್ಷೀಣಿಸಿದ ಕಾರಣ ಜಲಾಶಯಕ್ಕೆ ಒಳಹರಿವಿನ ಪ್ರಮಾಣ ಇಳಿಕೆಯಾಗಿದೆ. ಆದರೆ ಕಳೆದ ವರ್ಷ ಈ ವೇಳೆಗಾಗಲೇ ಜಲಾಶಯದ ನೀರಿನ ಮಟ್ಟ 1802 ಅಡಿ ತಲುಪಿತ್ತು. ಈ ಬಾರಿ ಇನ್ನೂ ಕೇವಲ 1768.80 ಅಡಿ ತಲುಪಿದೆ.

ಮಳೆಯ ಅಭಾವದಿಂದ ಸರಿಯಾದ ಸಮಯಕ್ಕೆ ಬಿತ್ತಲು ರೈತರಿಗೆ ಸಾಧ್ಯವಾಗುತ್ತಿಲ್ಲ. ಈದೀಗ ಬಿತ್ತನೆ ಮಾಡಿರುವ ಬೆಳಗಳನ್ನು ಉಳಿಸಲು ಸಹ ಪರದಾಡುವಂತಾಗಿದೆ.

ಶಿವಮೊಗ್ಗ: ಮಲೆನಾಡಿನಲ್ಲಿ ಕಳೆದೊಂದು ವಾರದಿಂದ ಮಳೆ ಕ್ಷೀಣಿಸಿದೆ. ವಾಡಿಕೆಯಂತೆ ಈ ವೇಳೆಗಾಗಲೇ ಭಾಗಶಃ ಭರ್ತಿಯಾಗುತ್ತಿದ್ದ ಜಲಾಶಯಗಳು ಈ ಬಾರಿ ಇನ್ನೂ ಭರ್ತಿಯಾಗಿಲ್ಲ. ಇದರಿಂದ ಕೃಷಿ ಚಟುವಟಿಕೆಗಳಿಗೆ ಹಿನ್ನಡೆ ಉಂಟಾಗಿದೆ.

ಮಲೆನಾಡ ಹೆಬ್ಬಾಗಿಲು ಶಿವಮೊಗ್ಗ ಜಿಲ್ಲೆಯಲ್ಲಿ ಈ ಬಾರಿ ನೀರಿಕ್ಷೆಯಂತೆ ಮಳೆಯಾಗಿಲ್ಲ. ಕಳೆದ ವರ್ಷ ಈ ವೇಳೆಗಾಗಲೇ ಮುಂಗಾರು ಅಬ್ಬರಿಸಿ ಸುರಿಯುತ್ತಿದ್ದರಿಂದ ಶಿವಮೊಗ್ಗದ ಪ್ರಮುಖ ಜಲಾಶಯಗಳಾದ ಲಿಂಗನಮಕ್ಕಿ, ಭದ್ರಾ, ತುಂಗಾ, ಮಾಣಿ ಭಾಗಶಃ ಭರ್ತಿಯಾಗಿದ್ದವು. ಆದರೆ ಈ ಬಾರಿ ತುಂಗಾ ಜಲಾಶಯ ಹೊರತುಪಡಿಸಿ ಮತ್ಯಾವ ಜಲಾಶಯಗಳು ಕೂಡ ಭರ್ತಿಯಾಗಿಲ್ಲ. ಜುಲೈ ತಿಂಗಳಲ್ಲಿ ಶೇ. 37ರಷ್ಟು ಮಳೆ ಕೊರತೆ ಎದುರಾಗಿದೆ.

ಮಲೆನಾಡ ಜಲಾಶಯಗಳು ಭರ್ತಿಯಾಗೋದು ಡೌಟು

ಕಳೆದೊಂದು ವಾರದಿಂದ ಜಿಲ್ಲೆಯಾದ್ಯಂತ ವರುಣ ಕಣ್ಣಾಮುಚ್ಚಾಲೆ ಆಟ ಆಡುತ್ತಿದ್ದು, ಇದೇ ರೀತಿ ಮುಂದುವರೆದರೆ ಜಲಾಶಯಗಳಿಗೆ ಒಳಹರಿವಿನ ಪ್ರಮಾಣ ಗಣನೀಯ ಇಳಿಕೆಯಾಗುವ ಆತಂಕ ಎದುರಾಗಿದೆ. ಜೂನ್ 1ರಿಂದ ಇದುವರೆಗೆ ಜಿಲ್ಲೆಯಲ್ಲಿ ವಾಡಿಕೆ ಮಳೆ 1071 ಮಿ.ಮೀ. ಆಗಬೇಕಿತ್ತು. ಆದರೆ ಕೇವಲ 675 ಮಿ.ಮೀ ಮಳೆ ಬಿದ್ದಿದೆ. ಇನ್ನು ಶಿವಮೊಗ್ಗದಲ್ಲಿ ಶೇ. 30, ಭದ್ರಾವತಿಯಲ್ಲಿ ಶೇ. 34, ತೀರ್ಥಹಳ್ಳಿಯಲ್ಲಿ ಶೇ. 49, ಸಾಗರದಲ್ಲಿ ಶೇ. 13, ಹೊಸನಗರದಲ್ಲಿ ಶೇ. 27, ಶಿಕಾರಿಪುರದಲ್ಲಿ ಶೇ. 31 ಹಾಗೂ ಸೊರಬದಲ್ಲಿ ಶೇ. 47ರಷ್ಟು ಮಳೆ ಕೊರತೆ ಎದುರಾಗಿದೆ.

ಜಿಲ್ಲೆಯ ಅತಿ ಸಣ್ಣದಾದ ತುಂಗಾ ಡ್ಯಾಂ ಭರ್ತಿಯಾಗಿದ್ದು, ಜಲಾಶಯದ ಮೂಲಕ ನಾಲೆಗಳಿಗೆ 14 ಸಾವಿರ ಕ್ಯೂಸೆಕ್ ನೀರು ಹರಿಬಿಡಲಾಗುತ್ತಿದೆ. ಕಳೆದ ವರ್ಷ ಈ ವೇಳೆಗೆ ಐದು ಜಿಲ್ಲೆಗಳ ಜೀವನಾಡಿ ಎಂದೇ ಕರೆಸಿಕೊಳ್ಳುವ ಭದ್ರಾ ಜಲಾಶಯ 181 ಅಡಿ ತಲುಪಿತ್ತು. ಆದ್ರೆ ಈ ಬಾರಿ 139 ಅಡಿ ಮಾತ್ರ ತಲುಪಿದೆ. ಜಲಾಶಯಕ್ಕೆ ಹರಿದುಬರುತ್ತಿರುವ ಒಳಹರಿವಿನ ಪ್ರಮಾಣವೂ 8 ಸಾವಿರ ಕ್ಯೂಸೆಕ್​ಗೆ ಇಳಿದಿದೆ.

ರಾಜ್ಯದ ಅತಿ ದೊಡ್ಡ ಜಲಾಶಯವೆಂದು ಹೆಸರುವಾಸಿಯಾದ ಲಿಂಗನಮಕ್ಕಿ ಜಲಾಶಯ ಕೂಡ ಈ ಬಾರಿ ಭರ್ತಿಯಾಗುವುದು ಅನುಮಾನ. ಹೊಸನಗರ, ತೀರ್ಥಹಳ್ಳಿ ಹಾಗೂ ಸಾಗರ ಭಾಗದಲ್ಲಿ ಮಳೆ ಕ್ಷೀಣಿಸಿದ ಕಾರಣ ಜಲಾಶಯಕ್ಕೆ ಒಳಹರಿವಿನ ಪ್ರಮಾಣ ಇಳಿಕೆಯಾಗಿದೆ. ಆದರೆ ಕಳೆದ ವರ್ಷ ಈ ವೇಳೆಗಾಗಲೇ ಜಲಾಶಯದ ನೀರಿನ ಮಟ್ಟ 1802 ಅಡಿ ತಲುಪಿತ್ತು. ಈ ಬಾರಿ ಇನ್ನೂ ಕೇವಲ 1768.80 ಅಡಿ ತಲುಪಿದೆ.

ಮಳೆಯ ಅಭಾವದಿಂದ ಸರಿಯಾದ ಸಮಯಕ್ಕೆ ಬಿತ್ತಲು ರೈತರಿಗೆ ಸಾಧ್ಯವಾಗುತ್ತಿಲ್ಲ. ಈದೀಗ ಬಿತ್ತನೆ ಮಾಡಿರುವ ಬೆಳಗಳನ್ನು ಉಳಿಸಲು ಸಹ ಪರದಾಡುವಂತಾಗಿದೆ.

Intro:ಶಿವಮೊಗ್ಗ,
ಫಾರ್ಮೆಟ್ : ಪ್ಯಾಕೇಜ್
ಸ್ಲಗ್ : ಮಲೆನಾಡಿನಲ್ಲಿ ಮಳೆಯ ಕೊರತೆ-ಜಲಾಶಯ ಭರ್ತಿಯಾಗೋದು ಡೌಟ್.

ಆ್ಯಂಕರ್............
ಮಲೆನಾಡಿನಲ್ಲಿ ಕಳೆದೊಂದು ವಾರದಿಂದ ಮಳೆ ಕಡಿಮೆಯಾಗಿದೆ. ಕಳೆದ ವರ್ಷ ಈ ವೇಳೆಗಾಗಲೇ ಬಹುತೇಕ ಭರ್ತಿಯಾಗಿದ್ದ ಜಲಾಶಯಗಳು ಈ ಬಾರಿ ಭರ್ತಿಯಾಗುವುದೇ ಅನುಮಾನವಾಗಿದೆ.. ಜುಲೈ ತಿಂಗಳಲ್ಲಿ ಜಿಲ್ಲೆಯಲ್ಲಿ ಶೇಕಡಾ 37% ಮಳೆ ಕೊರತೆ ಎದುರಾಗಿದ್ದು ಕೃಷಿ ಚಟುವಟಿಕೆಯಲ್ಲಿ ಹಿನ್ನಡೆ ಉಂಟಾಗಿದೆ..

ವಾಯ್ಸ್ ಓವರ್......1
ಮಲೆನಾಡು ಹೆಬ್ಬಾಗಿಲು ಶಿವಮೊಗ್ಗ ಜಿಲ್ಲೆಯಲ್ಲಿ ಈ ಬಾರಿ ನೀರಿಕ್ಷೆಯಂತೆ ಮಳೆಯಾಗಿಲ್ಲ,. ಕಳೆದ ವರ್ಷ ಈ ವೇಳೆಗೆ ಮುಂಗಾರು ಮಳೆ ಅಬ್ಬರಿಸಿದ್ದರಿಂದ ಶಿವಮೊಗ್ಗದ ಪ್ರಮುಖ ಜಲಾಶಯಗಳಾದ ಲಿಂಗನಮಕ್ಕಿ, ಭದ್ರಾ, ತುಂಗಾ, ಮಾಣಿ, ಜಲಾಶಯಗಳು ಭರ್ತಿಯಾಗಿದ್ದವು. ಆದ್ರೆ, ಈ ಬಾರಿ ತುಂಗಾ ಜಲಾಶಯವ ಹೊರತುಪಡಿಸಿ ಇನ್ನುಳಿದ ಯಾವ ಜಲಾಶಯಗಳು ಕೂಡ ಭರ್ತಿಯಾಗಿಲ್ಲ. ಕಳೆದ ಒಂದು ವಾರದಿಂದ ಜಿಲ್ಲೆಯಾಧ್ಯಂತ ವರುಣರಾಯ ಕಣ್ಣಾಮುಚ್ಚಾಲೆಯಾಡುತ್ತಿದ್ದು ಇದೇ ರೀತಿ ಮುಂದುವರೆದರೆ ಜಲಾಶಯಗಳಿಗೆ ಒಳಹರಿವಿನ ಪ್ರಮಾಣ ಗಣನೀಯ ಪ್ರಮಾಣದಲ್ಲಿ ಇಳಿಕೆಯಾಗುವುದರಲ್ಲಿ ಅನುಮಾನವಿಲ್ಲ, ಜೂನ್ 1 ರಿಂದ ಇದುವರೆಗೆ ಜಿಲ್ಲೆಯ ವಾಡಿಕೆ ಮಳೆ 1071 ಮಿ.ಮೀ ಆಗಬೇಕಿದ್ದು, ಕೇವಲ 675ಮಿಮಿ ಮಳೆ ಬಿದ್ದಿದೆ. ಇನ್ನು ಶಿವಮೊಗ್ಗ ಶೇ.30, ಭದ್ರಾವತಿ ಶೇ.34, ತೀರ್ಥಹಳ್ಳಿ ಶೇ.49, ಸಾಗರ ಶೇ.13, ಹೊಸನಗರ ಶೇ.27, ಶಿಕಾರಿಪುರ ಶೇ.31 ಹಾಗೂ ಸೊರಬದಲ್ಲಿ ಶೇ.47ರಷ್ಟು ಮಳೆ ಕೊರತೆ ಈ ವರ್ಷದಲ್ಲಿ ದಾಖಲಾಗಿದೆ. ಇನ್ನು ಜಿಲ್ಲೆಯ ಅತಿ ಸಣ್ಣ ಜಲಾಶಯ ತುಂಗಾ ಡ್ಯಾ ಭರ್ತಿಯಾಗಿದ್ದು ಜಲಾಶಯದಿಂದ ನದಿಗಳು ಹಾಗೂ ನಾಲೆಗಳಿಗೆ 14 ಸಾವಿರ ಕ್ಯೂಸೆಕ್ ನೀರು ಹರಿಬಿಡಲಾಗುತ್ತಿದೆ...
ಬೈಟ್...1
ಕೆ.ಟಿ.ಗಂಗಾಧರ್ : ರೈತ ಸಂಘದ ರಾಜ್ಯಾಧ್ಯಕ್ಷ.

ವಾಯ್ಸ್ ಓವರ್............2
ಇನ್ನು ಐದು ಜಿಲ್ಲೆಗಳ ಜೀವನಾಡಿ ಎಂದೇ ಕರೆಸಿಕೊಳ್ಳುವ ಭದ್ರಾ ಜಲಾಶಯವು ಕಳೆದ ವರ್ಷ ಈ ವೇಳೆಯಲ್ಲಿ ಚಿಕ್ಕಮಗಳೂರು ಹಾಗೂ ಭದ್ರಾ ಜಲಾಶಯದ ಹಿನ್ನಿರಿನ ಪಾತ್ರದಲ್ಲಿ ಸುರಿದ್ದ ಬಾರಿ ಮಳೆಗೆ ಭದ್ರಾ ಜಲಾಶಯ 181 ಅಡಿ ತಲುಪಿತ್ತು, ಆದ್ರೆ ಈ ಬಾರಿ 139 ಅಡಿ ಮಾತ್ರ ತಲುಪಿದೆ. ಇನ್ನು ಜಲಾಶಯಲ್ಲಿ ಹರಿದುಬರುತ್ತಿರುವ ಒಳ ಹರಿವಿನ ಪ್ರಮಾಣವೂ ಸಹ 8 ಸಾವಿರ ಕ್ಯೂಸೆಕ್ ಗೆ ಇಳಿದಿದೆ.. ಇನ್ನು ರಾಜ್ಯದ ಅತಿ ದೊಡ್ಡ ಜಲಾಶಯವೆಂದು ಹೆಸರುವಾಸಿಯಾಗಿರುವ ಲಿಂಗನಮಕ್ಕಿ ಜಲಾಶವು ಕೂಡ ಈ ಬಾರಿ ಭರ್ತಿಯಾಗುವುದು ಅನುಮಾನವಿದೆ, ಹೊಸನಗರ, ತೀರ್ಥಹಳ್ಳಿ ಹಾಗೂ ಸಾಗರ ಪ್ರಮಾಣದಲ್ಲಿ ಮಳೆ ಕಡಿಮೆಯಾಗಿದ್ದ ಜಲಾಶಯಕ್ಕೆ ಒಳಹರಿವಿನ ಪ್ರಮಾಣ 16 ಸಾವಿರಕ್ಕೆ ಇಳಿದಿದೆ, ಇನ್ನು ಹೋದ ವರ್ಷ 1802 ಅಡಿ ತಲುಪಿದ್ದ ಜಲಾಶಯದ ನೀರಿನ ಮಟ್ಟ ಈ ಬಾರಿ 1768.80 ಅಡಿಯಷ್ಟಿದೆ.

ಕನ್ ಕ್ಲೂಷನ್...........
ಕಳೆದ ವರ್ಷ ಅತಿ ಹೆಚ್ಚು ಮಳೆಯಿಂದಾಗಿ ರೈತರು ಸರಿಯಾದ ಸಮಯಕ್ಕೆ ಬೆಳೆಗಳನ್ನ ಬಿತ್ತಲು ಸಾದ್ಯವಾಗಿರಲಿಲ್ಲ, ಬಾರಿ ಮಳೆಯ ಅಭಾವದಿಂದ ಸರಿಯಾದ ಸಮಯಕ್ಕೆ ಬೆಳೆ ಬಿತ್ತಲು ಸಾದ್ಯವಾಗುತ್ತಿಲ್ಲ. ಈವರೆಗೆ ಬಿತ್ತನೆ ಮಾಡಿರುವ ಬೆಳಗಳನ್ನು ಉಳಿಸಲು ಸಹ ಮುಂದಿನ ದಿನಗಳಲ್ಲಿ ಪರದಾಡಬೇಕಿದೆ. ಇದೇ ರೀತಿ ಮುಂದಿನ ದಿನಗಳಲ್ಲಿ ಜಿಲ್ಲೆಯಲ್ಲಿ ಮಳೆಕೊರತೆ ಎದುರಾದಲ್ಲಿ ಬೇಸಿಗೆ ಕಾಲದಲ್ಲಿ ರೈತರ ಸಾಕಷ್ಟು ತೊಂದರೆ ಅನುಭವಿಸುವುದರಲ್ಲಿ ಯಾವುದೇ ಅನುಮಾನವಿಲ್ಲ. ಹಾಗಾಗೀ ಸರ್ಕಾರ ಈಗಲೇ ಪರ್ಯಾಯ ಕ್ರಮಗಳನ್ನು ಕೈಗೊಳ್ಳಬೇಕು ಎಂಬುದು ಸಾರ್ವಜನಿಕರ ಆಗ್ರಹವಾಗಿದೆ..

ಭೀಮಾನಾಯ್ಕ ಎಸ್ ಶಿವಮೊಗ್ಗBody:ಭೀಮಾನಾಯ್ಕ ಎಸ್ ಶಿವಮೊಗ್ಗConclusion:

For All Latest Updates

TAGGED:

ETV Bharat Logo

Copyright © 2024 Ushodaya Enterprises Pvt. Ltd., All Rights Reserved.