ETV Bharat / city

ನಾಯಿಮರಿಯನ್ನು ನುಂಗಿದ್ದ ನಾಗರಹಾವಿನ ರಕ್ಷಣೆ - protection of cobra in shivamogga

ಹಾವು, ನಾಯಿಮರಿಯನ್ನು ನುಂಗಿದ್ದು, ನಾಯಿ ಮರಿಯನ್ನು ಹೊರಗೆ ತೆಗೆಯಲಾಯಿತು. ಬಳಿಕ ಸ್ನೇಕ್ ಕಿರಣ್ ನಾಗರ ಹಾವನ್ನು ಹಿಡಿದು ಸುರಕ್ಷಿತವಾಗಿ ಕಾಡಿಗೆ ಬಿಟ್ಟು ಬಂದಿದ್ದಾರೆ..

protection-of-cobra-in-shivamogga
ನಾಯಿಮರಿಯನ್ನು ನುಂಗಿದ್ದ ನಾಗರಹಾವಿನ ರಕ್ಷಣೆ
author img

By

Published : Mar 26, 2022, 7:25 PM IST

ಶಿವಮೊಗ್ಗ: ನಾಯಿ ಮರಿಯನ್ನು ನುಂಗಿದ್ದ ನಾಗರಹಾವನ್ನು ರಕ್ಷಿಸಿರುವ ಘಟನೆ ಇಲ್ಲಿನ ವಿದ್ಯಾನಗರದಲ್ಲಿ ನಡೆದಿದೆ. ಮನೆಯ ಗೇಟಿನ ಬಳಿ ಮಲಗಿದ್ದ ನಾಗರ ಹಾವನ್ನು ಕಂಡ ಮನೆಯ ಮಾಲೀಕರು ಸ್ನೇಕ್ ಕಿರಣ್ ಅವರಿಗೆ ಫೋನಾಯಿಸಿದ್ದಾರೆ. ಸ್ಥಳಕ್ಕೆ ಬಂದ ಸ್ನೇಕ್ ಕಿರಣ್ ಅವರು ಹಾವನ್ನು ಹಿಡಿದು ರಕ್ಷಿಸಿದ್ದಾರೆ.‌

ನಾಯಿಮರಿಯನ್ನು ನುಂಗಿದ್ದ ನಾಗರಹಾವಿನ ರಕ್ಷಣೆ..

ವಿದ್ಯಾನಗರದ ನಿವಾಸಿಯಾದ ಚಂದ್ರಪ್ಪ ಎಂಬುವರ ಮನೆಗೆ ನಾಗರಹಾವು ಬಂದಿತ್ತು. ಸುಮಾರು 4 ಅಡಿ ಉದ್ದವಿದ್ದ ಹಾವು ಮನೆಯ ಗೇಟಿನ ಬಳಿ ಮಲಗಿರುವುದನ್ನು ಕಂಡ ಮನೆಯ ಮಾಲೀಕರು ಸ್ನೇಕ್ ಕಿರಣ್‌ಗೆ ಫೋನ್ ಮಾಡಿದ್ದಾರೆ. ಹಾವು, ನಾಯಿಮರಿಯನ್ನು ನುಂಗಿದ್ದು, ನಾಯಿ ಮರಿಯನ್ನು ಹೊರಗೆ ತೆಗೆಯಲಾಯಿತು. ಬಳಿಕ ಸ್ನೇಕ್ ಕಿರಣ್ ನಾಗರ ಹಾವನ್ನು ಹಿಡಿದು ಸುರಕ್ಷಿತವಾಗಿ ಕಾಡಿಗೆ ಬಿಟ್ಟು ಬಂದಿದ್ದಾರೆ.

ಓದಿ : ನನ್ಗೆ ಸ್ವಾಮೀಜಿಗಳ ಮೇಲೆ ಗೌರವವಿದೆ, ನೀವ್‌ ಯಾವ್ದ್‌ ಯಾವ್ದಕ್ಕೋ ಲಿಂಕ್‌ ಮಾಡ್ಬೇಡಿ.. ಮಾಧ್ಯಮದವರ ಮೇಲೆ ಸಿದ್ದು ಗರಂ

ಶಿವಮೊಗ್ಗ: ನಾಯಿ ಮರಿಯನ್ನು ನುಂಗಿದ್ದ ನಾಗರಹಾವನ್ನು ರಕ್ಷಿಸಿರುವ ಘಟನೆ ಇಲ್ಲಿನ ವಿದ್ಯಾನಗರದಲ್ಲಿ ನಡೆದಿದೆ. ಮನೆಯ ಗೇಟಿನ ಬಳಿ ಮಲಗಿದ್ದ ನಾಗರ ಹಾವನ್ನು ಕಂಡ ಮನೆಯ ಮಾಲೀಕರು ಸ್ನೇಕ್ ಕಿರಣ್ ಅವರಿಗೆ ಫೋನಾಯಿಸಿದ್ದಾರೆ. ಸ್ಥಳಕ್ಕೆ ಬಂದ ಸ್ನೇಕ್ ಕಿರಣ್ ಅವರು ಹಾವನ್ನು ಹಿಡಿದು ರಕ್ಷಿಸಿದ್ದಾರೆ.‌

ನಾಯಿಮರಿಯನ್ನು ನುಂಗಿದ್ದ ನಾಗರಹಾವಿನ ರಕ್ಷಣೆ..

ವಿದ್ಯಾನಗರದ ನಿವಾಸಿಯಾದ ಚಂದ್ರಪ್ಪ ಎಂಬುವರ ಮನೆಗೆ ನಾಗರಹಾವು ಬಂದಿತ್ತು. ಸುಮಾರು 4 ಅಡಿ ಉದ್ದವಿದ್ದ ಹಾವು ಮನೆಯ ಗೇಟಿನ ಬಳಿ ಮಲಗಿರುವುದನ್ನು ಕಂಡ ಮನೆಯ ಮಾಲೀಕರು ಸ್ನೇಕ್ ಕಿರಣ್‌ಗೆ ಫೋನ್ ಮಾಡಿದ್ದಾರೆ. ಹಾವು, ನಾಯಿಮರಿಯನ್ನು ನುಂಗಿದ್ದು, ನಾಯಿ ಮರಿಯನ್ನು ಹೊರಗೆ ತೆಗೆಯಲಾಯಿತು. ಬಳಿಕ ಸ್ನೇಕ್ ಕಿರಣ್ ನಾಗರ ಹಾವನ್ನು ಹಿಡಿದು ಸುರಕ್ಷಿತವಾಗಿ ಕಾಡಿಗೆ ಬಿಟ್ಟು ಬಂದಿದ್ದಾರೆ.

ಓದಿ : ನನ್ಗೆ ಸ್ವಾಮೀಜಿಗಳ ಮೇಲೆ ಗೌರವವಿದೆ, ನೀವ್‌ ಯಾವ್ದ್‌ ಯಾವ್ದಕ್ಕೋ ಲಿಂಕ್‌ ಮಾಡ್ಬೇಡಿ.. ಮಾಧ್ಯಮದವರ ಮೇಲೆ ಸಿದ್ದು ಗರಂ

ETV Bharat Logo

Copyright © 2025 Ushodaya Enterprises Pvt. Ltd., All Rights Reserved.