ETV Bharat / city

ಗಸ್ತಿನಲ್ಲಿದ್ದ ಪೊಲೀಸರಿಗೆ ಸಿಕ್ಕಿಬಿದ್ದ ಮೊಬೈಲ್ ಕಳ್ಳರು: 14 ಮೊಬೈಲ್ ಫೋನ್ ವಶ

ಜಿಲ್ಲೆಯ ಭದ್ರಾವತಿಯ ನ್ಯೂ ಟೌನ್​ ಪೊಲೀಸರು ನಾಲ್ಕು ಜನ ಮೊಬೈಲ್ ಕಳ್ಳರನ್ನು ಬಂಧಿಸಿದ್ದು, ಅವರಿಂದ ಸುಮಾರು 1 ಲಕ್ಷದ 27 ಸಾವಿರ ರೂ. ಬೆಲೆಯ‌ 14 ಮೊಬೈಲ್ ಫೋನ್​ಗಳನ್ನು ವಶಕ್ಕೆ ಪಡೆದಿದ್ದಾರೆ.

author img

By

Published : Oct 5, 2019, 4:42 AM IST

ಗಸ್ತಿನಲ್ಲಿದ್ದ ಪೊಲೀಸರಿಗೆ ಸಿಕ್ಕಿಬಿದ್ದ ಮೊಬೈಲ್ ಕಳ್ಳರು: 14 ಮೊಬೈಲ್ ಫೋನ್ ವಶ

ಶಿವಮೊಗ್ಗ: ಭದ್ರಾವತಿ ನಗರದ ಕೆಎಸ್ಆರ್​ಟಿಸಿ ಬಸ್​ ನಿಲ್ದಾಣದಲ್ಲಿ ಪೊಲೀಸರು ಗಸ್ತಿನಲ್ಲಿದ್ದಾಗ ಆರು ಜನರ ತಂಡವೊಂದು ಬಸ್​ ನಿಲ್ದಾಣದಲ್ಲಿ ಅನುಮಾನಾಸ್ಪದವಾಗಿ ತಿರುಗಾಡುತ್ತಿತ್ತು. ಇವರನ್ನು ವಿಚಾರಣೆಗೊಳಪಡಿಸಿದಾಗ ಆರು ಜನರಲ್ಲಿ ಇಬ್ಬರು ಓಡಿ ಹೋಗಿದ್ದಾರೆ.

ತಕ್ಷಣ ಎಚ್ಚೆತ್ತ ಪೊಲೀಸರು ಉಳಿದ ನಾಲ್ವರನ್ನು ಠಾಣೆಗೆ ಕರೆತಂದು ವಿಚಾರಿಸಿದಾಗ ಮೊಬೈಲ್​ ಕಳ್ಳತನ ಬೆಳಕಿಗೆ ಬಂದಿದೆ. ಇವರಿಂದ ಒಟ್ಟು 14 ಮೊಬೈಲ್​ಗಳನ್ನು ವಶಕ್ಕೆ ಪಡೆಯಲಾಗಿದೆ. ದೇವರಾಜ್, ಶರತ್ ಕುಮಾರ್, ಕೃಷ್ಣಪ್ಪ, ಪಾಲಯ್ಯ ಬಂಧಿತ ಆರೋಪಿಗಳು. ಇವರು ಮೊಬೈಲ್ ಕಳ್ಳರಾಗಿದ್ದು, ಬೆಂಗಳೂರು ಹಾಗೂ ತುಮಕೂರಿನಲ್ಲಿ ಕಳ್ಳತನ ಮಾಡಿದ್ದಾಗಿ ಒಪ್ಪಿ ಕೊಂಡಿದ್ದಾರೆ. ಬಂಧಿತರ ಮೇಲೆ ಕಲಂ 379 ಅಡಿ ಪ್ರಕರಣ ದಾಖಲಿಸಿಕೊಳ್ಳಲಾಗಿದೆ.

ಶಿವಮೊಗ್ಗ: ಭದ್ರಾವತಿ ನಗರದ ಕೆಎಸ್ಆರ್​ಟಿಸಿ ಬಸ್​ ನಿಲ್ದಾಣದಲ್ಲಿ ಪೊಲೀಸರು ಗಸ್ತಿನಲ್ಲಿದ್ದಾಗ ಆರು ಜನರ ತಂಡವೊಂದು ಬಸ್​ ನಿಲ್ದಾಣದಲ್ಲಿ ಅನುಮಾನಾಸ್ಪದವಾಗಿ ತಿರುಗಾಡುತ್ತಿತ್ತು. ಇವರನ್ನು ವಿಚಾರಣೆಗೊಳಪಡಿಸಿದಾಗ ಆರು ಜನರಲ್ಲಿ ಇಬ್ಬರು ಓಡಿ ಹೋಗಿದ್ದಾರೆ.

ತಕ್ಷಣ ಎಚ್ಚೆತ್ತ ಪೊಲೀಸರು ಉಳಿದ ನಾಲ್ವರನ್ನು ಠಾಣೆಗೆ ಕರೆತಂದು ವಿಚಾರಿಸಿದಾಗ ಮೊಬೈಲ್​ ಕಳ್ಳತನ ಬೆಳಕಿಗೆ ಬಂದಿದೆ. ಇವರಿಂದ ಒಟ್ಟು 14 ಮೊಬೈಲ್​ಗಳನ್ನು ವಶಕ್ಕೆ ಪಡೆಯಲಾಗಿದೆ. ದೇವರಾಜ್, ಶರತ್ ಕುಮಾರ್, ಕೃಷ್ಣಪ್ಪ, ಪಾಲಯ್ಯ ಬಂಧಿತ ಆರೋಪಿಗಳು. ಇವರು ಮೊಬೈಲ್ ಕಳ್ಳರಾಗಿದ್ದು, ಬೆಂಗಳೂರು ಹಾಗೂ ತುಮಕೂರಿನಲ್ಲಿ ಕಳ್ಳತನ ಮಾಡಿದ್ದಾಗಿ ಒಪ್ಪಿ ಕೊಂಡಿದ್ದಾರೆ. ಬಂಧಿತರ ಮೇಲೆ ಕಲಂ 379 ಅಡಿ ಪ್ರಕರಣ ದಾಖಲಿಸಿಕೊಳ್ಳಲಾಗಿದೆ.

Intro:ರಾತ್ರಿ ಗಸ್ತಿನಲ್ಲಿದ್ದ ಪೊಲೀಸರಿಗೆ ಸಿಕ್ಕಿ ಬಿದ್ದ ಮೊಬೈಲ್ ಕಳ್ಳರು: 1 ಲಕ್ಷಕ್ಕೂ ಅಧಿಕ ಬೆಲೆಯ ಮೊಬೈಲ್ ವಶ.

ಶಿವಮೊಗ್ಗ: ರಾತ್ರಿ ಗಸ್ತಿನಲ್ಲಿದ್ದ ಭದ್ರಾವತಿ
ಪೊಲೀಸರಿಗೆ ಮೊಬೈಲ್ ಕಳ್ಳರು ಸಿಕ್ಕಿ ಬಿದ್ದಿದ್ದಾರೆ. ಭದ್ರಾವತಿಯ ನ್ಯೂ ಟೌನ್ ಪೊಲೀಸರು ರಾತ್ರಿ ಕೆಎಸ್ಆರ್ ಟಿಸಿ ಬಸ್ ನಿಲ್ದಾಣದ ಬಳಿ ಆರು ಜನರ ತಂಡ ಅನುಮಾಸ್ಪದವಾಗಿ ಓಡಾಡುತ್ತಿದ್ದು.Body:ಇವರನ್ನು ಹಿಡಿದು ವಿಚಾರಿಸಿದಾಗ ಆರು ಜನರ ತಂಡದಲ್ಲಿದ್ದ ಇಬ್ಬರು ಓಡಿ ಹೋಗಿದ್ದಾರೆ. ತಕ್ಷಣ ಎಚ್ಚೆತ್ತಾ ಪೊಲೀಸರು ನಾಲ್ಕು ಜನರನ್ನು ಪೊಲೀಸ್ ಠಾಣೆಗೆ ಕರೆ ತಂದು ವಿಚಾರಿಸಿದಾಗ ಇವರ ಬಳಿ 1 ಲಕ್ಷದ 27 ಸಾವಿರ ರೂ ಬೆಲೆಯ‌ 14 ಮೊಬೈಲ್ ಗಳು ಪತ್ತೆಯಾಗಿವೆ. ಇವರು ಮೊಬೈಲ್ ಕಳ್ಳರಾಗಿದ್ದು
ಬೆಂಗಳೂರು ಹಾಗೂ ತುಮಕೂರಿನ ಕಳ್ಳತನ ಮಾಡಿದ್ದಾಗಿ ಆರೋಪಿಗಳು ಒಪ್ಪಿ ಕೊಂಡಿದ್ದಾರೆ.Conclusion: 1) ದೇವರಾಜ್ 2) ಶರತ್ ಕುಮಾರ್ 3) ಕೃಷ್ಣಪ್ಪ 4) ಪಾಲಯ್ಯ ರನ್ನು ಬಂಧಿಸಲಾಗಿದೆ. ಇನ್ನಿಬ್ಬರು ಓಡಿ ಹೋಗಿದ್ದಾರೆ. ಬಂಧಿತರ ಮೇಲೆ ಕಲಂ 379 ಐಪಿಸಿ ಪ್ರಕರಣ ದಾಖಲಿಸಿ ತನಿಖೆ ಕೈಗೊಳ್ಳಲಾಗಿದೆ.
ETV Bharat Logo

Copyright © 2024 Ushodaya Enterprises Pvt. Ltd., All Rights Reserved.