ETV Bharat / city

ಪ್ಲಾಸ್ಟಿಕ್​ ವಿರುದ್ಧ ಸಮರ : ಶಿವಮೊಗ್ಗ ಪಾಲಿಕೆ ಸಿಬ್ಬಂದಿ ಮೇಲೆ ಮಾಲೀಕನ ಹಲ್ಲೆ ವಿಡಿಯೋ..!

author img

By

Published : Nov 15, 2019, 5:52 AM IST

Updated : Nov 15, 2019, 6:36 AM IST

ಪ್ಲಾಸ್ಟಿಕ್ ಬ್ಯಾಗ್ ಪರಿಶೀಲನೆಗೆ ತೆರಳಿದ್ದ ಪಾಲಿಕೆ ಸಿಬ್ಬಂದಿಯ ಮೇಲೆ ಅಂಗಡಿ ಮಾಲೀಕನೋರ್ವ ಹಲ್ಲೆ ನಡೆಸಿ ದರ್ಪ ತೋರಿದ್ದಾನೆ. ಹಲ್ಲೆ ನಡೆಸಿರುವ ಘಟನೆ ಸಿ.ಸಿ.ಟಿವಿ ಕ್ಯಾಮರಾದಲ್ಲಿ ಸೆರೆಯಾಗಿದೆ.

ಪೌರಕಾರ್ಮಿಕರ ಮೇಲೆ ಹಲ್ಲೆ

ಶಿವಮೊಗ್ಗ: ಪ್ಲಾಸ್ಟಿಕ್ ನಿಷೇಧ ಹಿನ್ನೆಲೆ ಅಂಗಡಿಯೊಂದರ ಮೇಲೆ ದಾಳಿ ಮಾಡಿದ ವೇಳೆ ಸಿಬ್ಬಂದಿ ಮೇಲೆ ಮಾಲೀಕ ಹಲ್ಲೆ ಮಾಡಿದ್ದಾನೆ ಎಂದು ಆರೋಪಿಸಿ ಶಿವಮೊಗ್ಗ ಪಾಲಿಕೆ ಅಧಿಕಾರಿಗಳು ಪೊಲೀಸ್​ ಠಾಣೆಯಲ್ಲಿ ದೂರು ದಾಖಲಿಸಿದ್ದಾರೆ.

ಪ್ಲಾಸ್ಟಿಕ್​ ಬಳಕೆ ಮತ್ತು ಮಾರಾಟ ನಿಯಂತ್ರಿಸುವ ನಿಟ್ಟಿನಲ್ಲಿ ಶಿವಮೊಗ್ಗ ಮಹಾನಗರ ಪಾಲಿಕೆಯ ಅಧಿಕಾರಿಗಳ ನೇತೃತ್ವದಲ್ಲಿ ಕಾರ್ಯಾಚರಣೆ ನಡೆಸಲು ಹೋಗಿದ್ದ ನಾಲ್ವರು ಪೌರಕಾರ್ಮಿಕರ ಮೇಲೆ ಅಂಗಡಿ ಮಾಲೀಕನೋರ್ವ ಹಲ್ಲೆ ನಡೆಸಿದ್ದಾನೆ.

ಪೌರಕಾರ್ಮಿಕರ ಮೇಲೆ ಹಲ್ಲೆ

ಮಹಾನಗರ ಪಾಲಿಕೆ ಹೆಲ್ತ್ ಇನ್​​​ಸ್ಪೆಕ್ಟರ್​​​ ತಂಡ ಪ್ಲಾಸ್ಟಿಕ್ ಬಳಸುವ ಅಂಗಡಿ ಹಾಗೂ ವಾಣಿಜ್ಯ ಕೇಂದ್ರಗಳ ಮೇಲೆ ಕಾರ್ಯಾಚರಣೆ ನಡೆಸಿತ್ತು. ನಗರದ ವಿನೋಬಾ ನಗರದಲ್ಲಿ ನಂದನ್ ಮೊಬೈಲ್ ಅಂಗಡಿ ಮೇಲೆ ಅಧಿಕಾರಿಗಳು ದಾಳಿ ಮಾಡಿದಾಗ, ಅಂಗಡಿ ಮಾಲೀಕ ನಮ್ಮಲ್ಲಿ ಪ್ಲಾಸ್ಟಿಕ್ ಬ್ಯಾಗ್​​ಗಳಿಲ್ಲ ಎಂದು ಪೌರ ಕಾರ್ಮಿಕರರೊಂದಿಗೆ ಅಸಭ್ಯವಾಗಿ ವರ್ತಿಸಿದ್ದಾನೆ. ಸಿಬ್ಬಂದಿ ಮೇಲಿನ ಹಲ್ಲೆಯ ದೃಶ್ಯಾವಳಿಗಳು ಸಿಸಿಟಿವಿ ಕ್ಯಾಮೆರಾದಲ್ಲಿ ಸೆರೆಯಾಗಿವೆ.

ಪಾಲಿಕೆ ಸಿಬ್ಬಂದ ಹಾಗೂ ಅಂಗಡಿ ಮಾಲೀಕನ ನಡುವೆ ಮಾತಿನ ಸಮರ ಜೋರಾಗಿ ಸಂದೇಶ್, ಶ್ರೀನಿವಾಸ್, ರವಿ ಹಾಗೂ ಭರತ್ ಮೇಲೆ ಅಂಗಡಿ ಮಾಲೀಕ ಸ್ಟೀಲ್​ನಂತಹ ಕೋಲು ಹಿಡಿದ ಹಲ್ಲೆ ನಡೆಸಿದ್ದಾನೆ. ಪರಸ್ಪರರು ತಳಾಡಿದ ದೃಶ್ಯಾವಳಿಗಳು ಸಹ ಇದರಲ್ಲಿವೆ.

ಆರೋಗ್ಯ ಅಧಿಕಾರಿ ಹಾಗೂ ಪಾಲಿಕೆಯ ಪೌರ ಕಾರ್ಮಿಕರು ವಿನೋಬಾನಗರ ಪೊಲೀಸ್ ಠಾಣೆಯಲ್ಲಿ ಅಂಗಡಿ ಮಾಲೀಕನ ವಿರುದ್ಧ ಪ್ರಕರಣ ದಾಖಲಿಸಿದ್ದಾರೆ.

ಶಿವಮೊಗ್ಗ: ಪ್ಲಾಸ್ಟಿಕ್ ನಿಷೇಧ ಹಿನ್ನೆಲೆ ಅಂಗಡಿಯೊಂದರ ಮೇಲೆ ದಾಳಿ ಮಾಡಿದ ವೇಳೆ ಸಿಬ್ಬಂದಿ ಮೇಲೆ ಮಾಲೀಕ ಹಲ್ಲೆ ಮಾಡಿದ್ದಾನೆ ಎಂದು ಆರೋಪಿಸಿ ಶಿವಮೊಗ್ಗ ಪಾಲಿಕೆ ಅಧಿಕಾರಿಗಳು ಪೊಲೀಸ್​ ಠಾಣೆಯಲ್ಲಿ ದೂರು ದಾಖಲಿಸಿದ್ದಾರೆ.

ಪ್ಲಾಸ್ಟಿಕ್​ ಬಳಕೆ ಮತ್ತು ಮಾರಾಟ ನಿಯಂತ್ರಿಸುವ ನಿಟ್ಟಿನಲ್ಲಿ ಶಿವಮೊಗ್ಗ ಮಹಾನಗರ ಪಾಲಿಕೆಯ ಅಧಿಕಾರಿಗಳ ನೇತೃತ್ವದಲ್ಲಿ ಕಾರ್ಯಾಚರಣೆ ನಡೆಸಲು ಹೋಗಿದ್ದ ನಾಲ್ವರು ಪೌರಕಾರ್ಮಿಕರ ಮೇಲೆ ಅಂಗಡಿ ಮಾಲೀಕನೋರ್ವ ಹಲ್ಲೆ ನಡೆಸಿದ್ದಾನೆ.

ಪೌರಕಾರ್ಮಿಕರ ಮೇಲೆ ಹಲ್ಲೆ

ಮಹಾನಗರ ಪಾಲಿಕೆ ಹೆಲ್ತ್ ಇನ್​​​ಸ್ಪೆಕ್ಟರ್​​​ ತಂಡ ಪ್ಲಾಸ್ಟಿಕ್ ಬಳಸುವ ಅಂಗಡಿ ಹಾಗೂ ವಾಣಿಜ್ಯ ಕೇಂದ್ರಗಳ ಮೇಲೆ ಕಾರ್ಯಾಚರಣೆ ನಡೆಸಿತ್ತು. ನಗರದ ವಿನೋಬಾ ನಗರದಲ್ಲಿ ನಂದನ್ ಮೊಬೈಲ್ ಅಂಗಡಿ ಮೇಲೆ ಅಧಿಕಾರಿಗಳು ದಾಳಿ ಮಾಡಿದಾಗ, ಅಂಗಡಿ ಮಾಲೀಕ ನಮ್ಮಲ್ಲಿ ಪ್ಲಾಸ್ಟಿಕ್ ಬ್ಯಾಗ್​​ಗಳಿಲ್ಲ ಎಂದು ಪೌರ ಕಾರ್ಮಿಕರರೊಂದಿಗೆ ಅಸಭ್ಯವಾಗಿ ವರ್ತಿಸಿದ್ದಾನೆ. ಸಿಬ್ಬಂದಿ ಮೇಲಿನ ಹಲ್ಲೆಯ ದೃಶ್ಯಾವಳಿಗಳು ಸಿಸಿಟಿವಿ ಕ್ಯಾಮೆರಾದಲ್ಲಿ ಸೆರೆಯಾಗಿವೆ.

ಪಾಲಿಕೆ ಸಿಬ್ಬಂದ ಹಾಗೂ ಅಂಗಡಿ ಮಾಲೀಕನ ನಡುವೆ ಮಾತಿನ ಸಮರ ಜೋರಾಗಿ ಸಂದೇಶ್, ಶ್ರೀನಿವಾಸ್, ರವಿ ಹಾಗೂ ಭರತ್ ಮೇಲೆ ಅಂಗಡಿ ಮಾಲೀಕ ಸ್ಟೀಲ್​ನಂತಹ ಕೋಲು ಹಿಡಿದ ಹಲ್ಲೆ ನಡೆಸಿದ್ದಾನೆ. ಪರಸ್ಪರರು ತಳಾಡಿದ ದೃಶ್ಯಾವಳಿಗಳು ಸಹ ಇದರಲ್ಲಿವೆ.

ಆರೋಗ್ಯ ಅಧಿಕಾರಿ ಹಾಗೂ ಪಾಲಿಕೆಯ ಪೌರ ಕಾರ್ಮಿಕರು ವಿನೋಬಾನಗರ ಪೊಲೀಸ್ ಠಾಣೆಯಲ್ಲಿ ಅಂಗಡಿ ಮಾಲೀಕನ ವಿರುದ್ಧ ಪ್ರಕರಣ ದಾಖಲಿಸಿದ್ದಾರೆ.

Intro:ಪ್ಲಾಸ್ಟಿಕ್ ಬ್ಯಾಗ್ ಪರಿಶೀಲನೆಗೆ ತೆರಳಿದ್ದ ಪಾಲಿಕೆ ಸಿಬ್ಬಂದಿಗಳ ಮೇಲೆ ಅಂಗಡಿಯವನಿಂದ ಹಲ್ಲೆ: ಸಿ.ಸಿ ಕ್ಯಾಮಾರದಲ್ಲಿ ಹಲ್ಲೆ ಸೆರೆ.

ಶಿವಮೊಗ್ಗ: ಪ್ಲಾಸ್ಟಿಕ್ ಕವರ್, ಬ್ಯಾಗ್ ಸೇರಿದಂತೆ ಇತರೆ ಬ್ಯಾನ್ ಪ್ಲಾಸ್ಟಿಕ್ ವಸ್ತುಗಳ ವಶಕ್ಕೆ ಹೋಗಿದ್ದ ಮಹಾನಗರ ಪಾಲಿಕೆ ಸಿಬ್ಬಂದಿಗಳ ಮೇಲೆ ಅಂಗಡಿ ಮಾಲೀಕನೋರ್ವ ಹಲ್ಲೆ ನಡೆಸಿರುವ ಶಿವಮೊಗ್ಗದಲ್ಲಿ ನಡೆದಿದೆ. ಶಿವಮೊಗ್ಗ ವಿನೋಬನಗರದಲ್ಲಿ ಇಂದು ಮಹಾನಗರ ಪಾಲಿಕೆಯ ಹೆಲ್ತ್ ಇನ್ಸ್ ಪೆಕ್ಟರ್ ಗಳ ನೇತೃತ್ವದಲ್ಲಿ ಮಹಾನಗರ ಪಾಲಿಕೆಯ ಪೌರ ನೌಕರರ ಪ್ಲಾಸ್ಟಿಕ್ ಬ್ಯಾಗ್ ವಶದ ಕಾರ್ಯಾಚರಣೆ ನಡೆಸಿದ್ದರು. ಅದರಂತೆ ವಿನೋಬನಗರದ ಪೊಲೀಸ್ ಚೌಕಿ ಬಳಿಯ ನಂದನ್ ಮೊಬೈಲ್ ಅಂಗಡಿಗೆ ಹೋದಾಗ ಅಂಗಡಿಯವನು ನಮ್ಮಲ್ಲಿ ಪ್ಲಾಸ್ಟಿಕ್ ಬ್ಯಾಗ್ ಗಳಲ್ಲಿ ಎಂದು ಹೇಳಿದ್ದರೆ ಸರಿ ಇರುತ್ತಿತ್ತು, ಆದ್ರೆ,Body:ಅಂಗಡಿ ಮಾಲೀಕ ಪೌರ ಕಾರ್ಮಿಕರ ಜೊತೆ ಅಸಭ್ಯವಾಗಿ ವರ್ತನೆ ನಡೆಸಿದ್ದಾನೆ. ಅವರ ಮೇಲೆ ದೈಹಿಕ ಹಲ್ಲೆ ನಡೆಸಿದ್ದಾನೆ. ಈ ವೇಳೆ ಅಂಗಡಿಯವನು ನೆಲ ಒರೆಸುವ ಸ್ಟೀಲ್ ಕೋಲಿನಿಂದ ಪೌರ ಕಾರ್ಮಿಕರಾದ ಸಂದೇಶ್, ಶ್ರೀನಿವಾಸ್, ರವಿ ಹಾಗೂ ಭರತ್ ಎಂಬುವರ ಮೇಲೆ ಹಲ್ಲೆ ನಡೆಸಿದ್ದಾನೆ. ಇದರಿಂದ ನೊಂದ ಪಾಲಿಕೆಯ ಎಲ್ಲಾ ಹೆಲ್ತ್ ಇನ್ಸ್ ಪೆಕ್ಟರ್ ಗುತ್ತಿಗೆ ಪೌರ ಕಾರ್ಮಿಕರು ವಿನೋಬ ನಗರ ಪೊಲೀಸ್ ಠಾಣೆಯಲ್ಲಿ ದೂರು ದಾಖಲು ಮಾಡಿದ್ದಾರೆ. ಸ್ಟೀಲ್ ಕೋಲಿನಿಂದ ಹಲ್ಲೆ ನಡೆಸಿದ ಪರಿಣಾಮ ನಾಲ್ವರಿಗೆ ಗಾಯಗಳಾಗಿವೆ. ಹಲ್ಲೆ ಪ್ರಕರಣದಲ್ಲಿ ನೊಂದವರಿಗೆ ನ್ಯಾಯ ಒದಗಿಸಿ ಕೊಡಬೇಕಿದೆ.Conclusion:ತಮ್ಮ ಜೀವ ರಕ್ಷಣೆ‌‌ ಸರ್ಕಾರ ಮಾಡಬೇಕಿದೆ. ಜೀವ ಭಯದಲ್ಲಿ ಕೆಲ್ಸ ನಿರ್ವಹಿಸುವುದು ಕಷ್ಟಕರ ಎಂದು ಪಾಲಿಕೆ ಸಿಬ್ಬಂದಿ ತಮ್ಮ ಕಷ್ಟವನ್ನು ಹೊರ ಹಾಕಿದ್ದಾರೆ.

ಬೈಟ್:ಸಂದೇಶ್ ಹಲ್ಲೆಗೆ ಒಳಗಾದವರು.

ಬೈಟ್: ಮಂಜುಣ್ಣ. ಪಾಲಿಕೆ‌ ಸಿಬ್ಬಂದಿ
Last Updated : Nov 15, 2019, 6:36 AM IST
ETV Bharat Logo

Copyright © 2024 Ushodaya Enterprises Pvt. Ltd., All Rights Reserved.