ETV Bharat / city

ಯುಗಾದಿ ಪ್ರಯುಕ್ತ ನಡೆಯುವ ಕೂಡ್ಲಿ ಸಂಗಮೇಶ್ವರ ಜಾತ್ರೆಗೆ ಚಾಲನೆ

ಪ್ರತಿ ವರ್ಷ ಯುಗಾದಿ ದಿನ ಆರಂಭವಾಗುವ ಕೂಡ್ಲಿ ಸಂಗಮೇಶ್ವರನ ಜಾತ್ರೆ ಮೂರು ದಿನ ನಡೆಯುತ್ತದೆ.

author img

By

Published : Apr 3, 2022, 7:07 AM IST

koodli sangameshwara fair
ಸಂಗಮೇಶ್ವರ ಜಾತ್ರೆ ಚಾಲನೆ

ಶಿವಮೊಗ್ಗ: ಶಿವಮೊಗ್ಗ ತಾಲೂಕಿನ ಸಂಗಮೇಶ್ವರ ಜಾತ್ರೆಗೆ ನಿನ್ನೆ (ಶನಿವಾರ) ಚಾಲನೆ ದೊರೆತಿದೆ. ಕೂಡ್ಲಿ ಗ್ರಾಮದಲ್ಲಿ ತುಂಗ ಮತ್ತು ಭದ್ರಾ ನದಿಗಳ ಸಂಗಮವಾಗುತ್ತದೆ. ಇಲ್ಲಿ ವರ್ಷಂಪ್ರತಿ ಯುಗಾದಿಯ ದಿನದಿಂದ ಮೂರು ದಿನಗಳ ಕಾಲ ಜಾತ್ರೆ ನಡೆಯುತ್ತದೆ.


ಈ ಜಾತ್ರೆಯ 2ನೇ ದಿನ ಸಂಗಮೇಶ್ವರನ ರಥೋತ್ಸವ ನಡೆಯುತ್ತದೆ. ಈ ದಿನ ಕೂಡ್ಲಿ ಸುತ್ತಮುತ್ತಲಿನ ನೂರಾರು ಗ್ರಾಮದ ದೇವತೆಗಳು ಆಗಮಿಸಿ ತುಂಗ ಭದ್ರಾ ಸಂಗಮದಲ್ಲಿ ಪೂಜೆ ಸಲ್ಲಿಸಿ, ಸಂಗಮೇಶ್ವರನ ದರ್ಶನ ಪಡೆದು ವಾಪಸ್ ಆಗುತ್ತಾರೆ ಎನ್ನುವುದು ಜನರ ನಂಬಿಕೆ. ಸಂಗಮದಲ್ಲಿ ನಡೆಯುವ ಜಾತ್ರೆ ಜನರನ್ನು ಆಕರ್ಷಿಸುವುದು ಇಲ್ಲಿ ನಡೆಯುವ ನಡುಗಡ್ಡೆಯ ಜಾತ್ರೆಯಿಂದ. ಜಾತ್ರೆಗೆ ಬರುವವರು ತೆಪ್ಪದಲ್ಲಿ ಸಾಗುತ್ತಾರೆ.

ಸಂಗಮದಲ್ಲಿ ಸ್ನಾನ: ಜಾತ್ರೆಯಂದು ಭಕ್ತರು ಸಂಗಮದಲ್ಲಿ ಪುಣ್ಯಸ್ನಾನ ಮಾಡಿ ಸಂಗಮೇಶ್ವರನ ದರ್ಶನ ಪಡೆದು ಪುನೀತರಾಗುತ್ತಾರೆ.‌ ಪುರಾತನ ಸ್ಥಳವನ್ನು ರಾಷ್ಟ್ರಕೂಟರು, ಹೊಯ್ಸಳರು ಅಭಿವೃದ್ದಿಪಡಿಸಿದ ಇತಿಹಾಸವಿದ್ದು, ವಿವಿಧ ದೇವಾಲಯಗಳನ್ನು ನಿರ್ಮಿಸಲಾಗಿದೆ.

ಇದನ್ನೂ ಓದಿ: ಹುಬ್ಬಳ್ಳಿಯಲ್ಲಿ ಯುಗಾದಿ ಸಂಭ್ರಮ.. ಚಂದ್ರಮೌಳೇಶ್ವರ ದೇವಸ್ಥಾನದಲ್ಲಿ‌ ಶಿವಲಿಂಗ ಸ್ಪರ್ಶಿಸಿದ ಸೂರ್ಯ ರಶ್ಮಿ

ಶಿವಮೊಗ್ಗ: ಶಿವಮೊಗ್ಗ ತಾಲೂಕಿನ ಸಂಗಮೇಶ್ವರ ಜಾತ್ರೆಗೆ ನಿನ್ನೆ (ಶನಿವಾರ) ಚಾಲನೆ ದೊರೆತಿದೆ. ಕೂಡ್ಲಿ ಗ್ರಾಮದಲ್ಲಿ ತುಂಗ ಮತ್ತು ಭದ್ರಾ ನದಿಗಳ ಸಂಗಮವಾಗುತ್ತದೆ. ಇಲ್ಲಿ ವರ್ಷಂಪ್ರತಿ ಯುಗಾದಿಯ ದಿನದಿಂದ ಮೂರು ದಿನಗಳ ಕಾಲ ಜಾತ್ರೆ ನಡೆಯುತ್ತದೆ.


ಈ ಜಾತ್ರೆಯ 2ನೇ ದಿನ ಸಂಗಮೇಶ್ವರನ ರಥೋತ್ಸವ ನಡೆಯುತ್ತದೆ. ಈ ದಿನ ಕೂಡ್ಲಿ ಸುತ್ತಮುತ್ತಲಿನ ನೂರಾರು ಗ್ರಾಮದ ದೇವತೆಗಳು ಆಗಮಿಸಿ ತುಂಗ ಭದ್ರಾ ಸಂಗಮದಲ್ಲಿ ಪೂಜೆ ಸಲ್ಲಿಸಿ, ಸಂಗಮೇಶ್ವರನ ದರ್ಶನ ಪಡೆದು ವಾಪಸ್ ಆಗುತ್ತಾರೆ ಎನ್ನುವುದು ಜನರ ನಂಬಿಕೆ. ಸಂಗಮದಲ್ಲಿ ನಡೆಯುವ ಜಾತ್ರೆ ಜನರನ್ನು ಆಕರ್ಷಿಸುವುದು ಇಲ್ಲಿ ನಡೆಯುವ ನಡುಗಡ್ಡೆಯ ಜಾತ್ರೆಯಿಂದ. ಜಾತ್ರೆಗೆ ಬರುವವರು ತೆಪ್ಪದಲ್ಲಿ ಸಾಗುತ್ತಾರೆ.

ಸಂಗಮದಲ್ಲಿ ಸ್ನಾನ: ಜಾತ್ರೆಯಂದು ಭಕ್ತರು ಸಂಗಮದಲ್ಲಿ ಪುಣ್ಯಸ್ನಾನ ಮಾಡಿ ಸಂಗಮೇಶ್ವರನ ದರ್ಶನ ಪಡೆದು ಪುನೀತರಾಗುತ್ತಾರೆ.‌ ಪುರಾತನ ಸ್ಥಳವನ್ನು ರಾಷ್ಟ್ರಕೂಟರು, ಹೊಯ್ಸಳರು ಅಭಿವೃದ್ದಿಪಡಿಸಿದ ಇತಿಹಾಸವಿದ್ದು, ವಿವಿಧ ದೇವಾಲಯಗಳನ್ನು ನಿರ್ಮಿಸಲಾಗಿದೆ.

ಇದನ್ನೂ ಓದಿ: ಹುಬ್ಬಳ್ಳಿಯಲ್ಲಿ ಯುಗಾದಿ ಸಂಭ್ರಮ.. ಚಂದ್ರಮೌಳೇಶ್ವರ ದೇವಸ್ಥಾನದಲ್ಲಿ‌ ಶಿವಲಿಂಗ ಸ್ಪರ್ಶಿಸಿದ ಸೂರ್ಯ ರಶ್ಮಿ

ETV Bharat Logo

Copyright © 2024 Ushodaya Enterprises Pvt. Ltd., All Rights Reserved.