ETV Bharat / city

ಹುಣಸೋಡು ಸ್ಫೋಟದ 'ನಿಷ್ಪಕ್ಷಪಾತ ತನಿಖೆಗೆ ಈಶ್ವರಪ್ಪ ಅಡ್ಡಿ': ಸಿಬಿಐಗೆ ವಹಿಸುವಂತೆ ಕೆಪಿಸಿಸಿ ವಕ್ತಾರ ಆಗ್ರಹ - Hunasuru blast case

ಹುಣಸೋಡು ಸ್ಫೋಟ ಪ್ರಕರಣ ಸಂಬಂಧ ಪೊಲೀಸರು ಇದುವರೆಗೂ ಯಾವುದೇ ಸ್ಥಳೀಯರನ್ನು ಬಂಧಿಸಿಲ್ಲ. ಪೊಲೀಸರ ನಿಷ್ಪಕ್ಷಪಾತ ತನಿಖೆಗೆ ಜಿಲ್ಲಾ ಉಸ್ತುವಾರಿ ಸಚಿವ ಕೆಎಸ್ ಈಶ್ವರಪ್ಪ ಅಡ್ಡಿಪಡಿಸುತ್ತಿದ್ದಾರೆ ಎಂದು ಕೆಪಿಸಿಸಿ ವಕ್ತಾರ ಕೆ.ಬಿ ಪ್ರಸನ್ನ ಕುಮಾರ್ ಆರೋಪಿಸಿದ್ದಾರೆ.

ಕೆ.ಬಿ.ಪ್ರಸನ್ನ ಕುಮಾರ್
ಕೆ.ಬಿ.ಪ್ರಸನ್ನ ಕುಮಾರ್
author img

By

Published : Mar 19, 2021, 1:48 PM IST

Updated : Mar 19, 2021, 2:31 PM IST

ಶಿವಮೊಗ್ಗ: ಹುಣಸೋಡು ಸ್ಫೋಟ ಸಂಭವಿಸಿ 60 ದಿನಗಳಾಗಿದ್ದು, ತನಿಖೆಯು ತನ್ನ ಹಾದಿ ತಪ್ಪುತ್ತಿದೆ. ಹೀಗಾಗಿ, ಸ್ಫೋಟ ಪ್ರಕರಣದ ತನಿಖೆಯನ್ನು ಹೈಕೋರ್ಟ್ ನ್ಯಾಯಮೂರ್ತಿ ಅಥವಾ ಸಿಬಿಐಗೆ ವಹಿಸಬೇಕು ಎಂದು ಕೆಪಿಸಿಸಿ ವಕ್ತಾರ ಕೆ.ಬಿ ಪ್ರಸನ್ನ ಕುಮಾರ್ ಆಗ್ರಹಿಸಿದ್ದಾರೆ.

ಜನವರಿ 21ರಂದು ಹುಣಸೋಡಿನ ಕುಲಕರ್ಣಿ ಮಾಲೀಕತ್ವದ ಜಮೀನಿನಲ್ಲಿ ಕ್ರಷರ್ ನಡೆಸುವ ಸ್ಥಳದಲ್ಲಿ ಸ್ಫೋಟಕ ತುಂಬಿದ ವಾಹನ ಸ್ಫೋಟಗೊಂಡು 6 ಜನ ಮೃತಪಟ್ಟಿದ್ದರು.‌ ಘಟನೆಯ ಬಳಿಕ ಸುಧಾಕರ್, ನರಸಿಂಹ ಮತ್ತು ಮಮ್ತಾಜ್ ಅವರನ್ನು ಬಂಧಿಸಲಾಗಿತ್ತು. ನಂತರ ಸ್ಫೋಟಕ ವಸ್ತುಗಳನ್ನು ನೀಡಿದ ಅನಂತಪುರಂನ ಸಾಯಿ ಎಂಟರ್​ರ್ಪ್ರೈಸ್​ನ ಮಾಲೀಕ ಹಾಗೂ ಅವರ ಮಕ್ಕಳನ್ನು ಬಂಧಿಸಿದ್ದು ಬಿಟ್ಟರೆ, ಸ್ಥಳೀಯವಾಗಿ ಯಾರನ್ನು ಬಂಧಿಸಿಲ್ಲ. ಸ್ಥಳೀಯರನ್ನು ಬಂಧಿಸಿದರೆ ಜಿಲ್ಲಾ ಉಸ್ತುವಾರಿ ಸಚಿವ ಕೆ.ಎಸ್.ಈಶ್ವರಪ್ಪ ಅವರು ಬಂಧಿತರನ್ನು ಬಿಡುವಂತೆ ಒತ್ತಡ ಹಾಕುತ್ತಿದ್ದಾರೆ ಎಂದು ಆರೋಪಿಸಿದರು.

ಸ್ಫೋಟದ ಕುರಿತು ಸೂಕ್ತ ತನಿಖೆಗೆ ಕೆಪಿಸಿಸಿ ವಕ್ತಾರ ಕೆ.ಬಿ ಪ್ರಸನ್ನ ಕುಮಾರ್ ಒತ್ತಾಯ

ಈ ಹಿಂದೆ ಪೊಲೀಸರು ಸ್ಥಳೀಯ ಮುಖಂಡರನ್ನು ವಿಚಾರಣೆಗೆಂದು ಕರೆದು‌ಕೊಂಡು ಹೋಗಿ ಮತ್ತೆ ವಾಪಸ್ ಕಳುಹಿಸಿದ್ದಾರೆ. ಇದರಿಂದಾಗಿ ಪೊಲೀಸರು ಸ್ವತಂತ್ರವಾಗಿ ತನಿಖೆ ನಡೆಸಲು ಜಿಲ್ಲಾ ಉಸ್ತುವಾರಿ ಸಚಿವರು ಬಿಡುತ್ತಿಲ್ಲ. ಮಾಧ್ಯಮದವರ ಪ್ರವೇಶಕ್ಕೆ ಸಹ ಅವಕಾಶ ನೀಡುತ್ತಿಲ್ಲ ಎಂದರು.

ಸ್ಫೋಟ ನಡೆದ ಸುತ್ತಮುತ್ತ ಪ್ರದೇಶದಲ್ಲಿ ಅನೇಕ ಕ್ವಾರಿಗಳಲ್ಲಿ ಅಕ್ರಮ ಬ್ಲಾಸ್ಟಿಂಗ್ ನಡೆಯುತ್ತಿದ್ದರು ಸಹ ಪೊಲೀಸರು, ಕಂದಾಯ ಅಧಿಕಾರಿಗಳು ಸುಮ್ಮನೆ ಇರುವಂತೆ ಸೂಚಿಸಿದ್ದಾರೆ. ಈ ಹಿಂದೆ ಖಾಸಗಿ ಜಮೀನನಲ್ಲಿ ಕಲ್ಲು ಗಣಿಗಾರಿಕೆಯನ್ನು ಅಕ್ರಮವಾಗಿ ನಡೆಸುತ್ತಿರುವ ಬಗ್ಗೆ ಕ್ರಮ ತೆಗೆದುಕೊಳ್ಳಬೇಕೆಂದು ಕಂದಾಯ ಅಧಿಕಾರಿಗಳು ಎಸಿ ಅವರಿಗೆ ಪತ್ರ ಬರೆದಿದ್ದರು. ಅದನ್ನೂ ಸಹ ಸಚಿವರು ತಡೆ ಹಿಡಿದಿದ್ದಾರೆ ಎಂದು ಪ್ರಸನ್ನ ಕುಮಾರ್ ದೂರಿದ್ದಾರೆ.

ಈ ವೇಳೆ ಕಾಂಗ್ರೆಸ್ ಮುಖಂಡ ರಮೇಶ್ ಹೆಗಡೆ, ರಂಗನಾಥ್ ಹಾಜರಿದ್ದರು.

ಶಿವಮೊಗ್ಗ: ಹುಣಸೋಡು ಸ್ಫೋಟ ಸಂಭವಿಸಿ 60 ದಿನಗಳಾಗಿದ್ದು, ತನಿಖೆಯು ತನ್ನ ಹಾದಿ ತಪ್ಪುತ್ತಿದೆ. ಹೀಗಾಗಿ, ಸ್ಫೋಟ ಪ್ರಕರಣದ ತನಿಖೆಯನ್ನು ಹೈಕೋರ್ಟ್ ನ್ಯಾಯಮೂರ್ತಿ ಅಥವಾ ಸಿಬಿಐಗೆ ವಹಿಸಬೇಕು ಎಂದು ಕೆಪಿಸಿಸಿ ವಕ್ತಾರ ಕೆ.ಬಿ ಪ್ರಸನ್ನ ಕುಮಾರ್ ಆಗ್ರಹಿಸಿದ್ದಾರೆ.

ಜನವರಿ 21ರಂದು ಹುಣಸೋಡಿನ ಕುಲಕರ್ಣಿ ಮಾಲೀಕತ್ವದ ಜಮೀನಿನಲ್ಲಿ ಕ್ರಷರ್ ನಡೆಸುವ ಸ್ಥಳದಲ್ಲಿ ಸ್ಫೋಟಕ ತುಂಬಿದ ವಾಹನ ಸ್ಫೋಟಗೊಂಡು 6 ಜನ ಮೃತಪಟ್ಟಿದ್ದರು.‌ ಘಟನೆಯ ಬಳಿಕ ಸುಧಾಕರ್, ನರಸಿಂಹ ಮತ್ತು ಮಮ್ತಾಜ್ ಅವರನ್ನು ಬಂಧಿಸಲಾಗಿತ್ತು. ನಂತರ ಸ್ಫೋಟಕ ವಸ್ತುಗಳನ್ನು ನೀಡಿದ ಅನಂತಪುರಂನ ಸಾಯಿ ಎಂಟರ್​ರ್ಪ್ರೈಸ್​ನ ಮಾಲೀಕ ಹಾಗೂ ಅವರ ಮಕ್ಕಳನ್ನು ಬಂಧಿಸಿದ್ದು ಬಿಟ್ಟರೆ, ಸ್ಥಳೀಯವಾಗಿ ಯಾರನ್ನು ಬಂಧಿಸಿಲ್ಲ. ಸ್ಥಳೀಯರನ್ನು ಬಂಧಿಸಿದರೆ ಜಿಲ್ಲಾ ಉಸ್ತುವಾರಿ ಸಚಿವ ಕೆ.ಎಸ್.ಈಶ್ವರಪ್ಪ ಅವರು ಬಂಧಿತರನ್ನು ಬಿಡುವಂತೆ ಒತ್ತಡ ಹಾಕುತ್ತಿದ್ದಾರೆ ಎಂದು ಆರೋಪಿಸಿದರು.

ಸ್ಫೋಟದ ಕುರಿತು ಸೂಕ್ತ ತನಿಖೆಗೆ ಕೆಪಿಸಿಸಿ ವಕ್ತಾರ ಕೆ.ಬಿ ಪ್ರಸನ್ನ ಕುಮಾರ್ ಒತ್ತಾಯ

ಈ ಹಿಂದೆ ಪೊಲೀಸರು ಸ್ಥಳೀಯ ಮುಖಂಡರನ್ನು ವಿಚಾರಣೆಗೆಂದು ಕರೆದು‌ಕೊಂಡು ಹೋಗಿ ಮತ್ತೆ ವಾಪಸ್ ಕಳುಹಿಸಿದ್ದಾರೆ. ಇದರಿಂದಾಗಿ ಪೊಲೀಸರು ಸ್ವತಂತ್ರವಾಗಿ ತನಿಖೆ ನಡೆಸಲು ಜಿಲ್ಲಾ ಉಸ್ತುವಾರಿ ಸಚಿವರು ಬಿಡುತ್ತಿಲ್ಲ. ಮಾಧ್ಯಮದವರ ಪ್ರವೇಶಕ್ಕೆ ಸಹ ಅವಕಾಶ ನೀಡುತ್ತಿಲ್ಲ ಎಂದರು.

ಸ್ಫೋಟ ನಡೆದ ಸುತ್ತಮುತ್ತ ಪ್ರದೇಶದಲ್ಲಿ ಅನೇಕ ಕ್ವಾರಿಗಳಲ್ಲಿ ಅಕ್ರಮ ಬ್ಲಾಸ್ಟಿಂಗ್ ನಡೆಯುತ್ತಿದ್ದರು ಸಹ ಪೊಲೀಸರು, ಕಂದಾಯ ಅಧಿಕಾರಿಗಳು ಸುಮ್ಮನೆ ಇರುವಂತೆ ಸೂಚಿಸಿದ್ದಾರೆ. ಈ ಹಿಂದೆ ಖಾಸಗಿ ಜಮೀನನಲ್ಲಿ ಕಲ್ಲು ಗಣಿಗಾರಿಕೆಯನ್ನು ಅಕ್ರಮವಾಗಿ ನಡೆಸುತ್ತಿರುವ ಬಗ್ಗೆ ಕ್ರಮ ತೆಗೆದುಕೊಳ್ಳಬೇಕೆಂದು ಕಂದಾಯ ಅಧಿಕಾರಿಗಳು ಎಸಿ ಅವರಿಗೆ ಪತ್ರ ಬರೆದಿದ್ದರು. ಅದನ್ನೂ ಸಹ ಸಚಿವರು ತಡೆ ಹಿಡಿದಿದ್ದಾರೆ ಎಂದು ಪ್ರಸನ್ನ ಕುಮಾರ್ ದೂರಿದ್ದಾರೆ.

ಈ ವೇಳೆ ಕಾಂಗ್ರೆಸ್ ಮುಖಂಡ ರಮೇಶ್ ಹೆಗಡೆ, ರಂಗನಾಥ್ ಹಾಜರಿದ್ದರು.

Last Updated : Mar 19, 2021, 2:31 PM IST
ETV Bharat Logo

Copyright © 2025 Ushodaya Enterprises Pvt. Ltd., All Rights Reserved.