ETV Bharat / city

ಅಕ್ರಮ ಕಲ್ಲುಗಣಿಗಾರಿಕೆ, ಅಧಿಕಾರಿಗಳ ದಾಳಿ: 2 ಹಿಟಾಚಿ, 3 ಟ್ರ್ಯಾಕ್ಟರ್, ಸಿಡಿಮದ್ದು ವಶ

ಸಾಗುವಳಿ ಭೂಮಿಯಲ್ಲಿ ಅಕ್ರಮವಾಗಿ ಕಲ್ಲು ಗಣಿಗಾರಿಕೆ ನಡೆಸುತ್ತಿರುವಾಗ ಗಣಿ ಮತ್ತು ಭೂ ವಿಜ್ಞಾನ ಇಲಾಖೆಯ ಅಧಿಕಾರಿಗಳು ದಾಳಿ ನಡೆಸಿರುವ ಘಟನೆ ಗೆಜ್ಜೆನಹಳ್ಳಿಯಲ್ಲಿ ನಡೆದಿದೆ.

author img

By

Published : Mar 2, 2020, 9:32 PM IST

kn_smg_04_stonemince_raid_7204213
ಅಕ್ರಮ ಕಲ್ಲುಗಣಿಗಾರಿಕೆ, ಅಧಿಕಾರಿಗಳ ದಾಳಿ: 2 ಹಿಟಾಚಿ, 3 ಟ್ರ್ಯಾಕ್ಟರ್, ಸಿಡಿಮದ್ದು ವಶ

ಶಿವಮೊಗ್ಗ: ಸಾಗುವಳಿ ಭೂಮಿಯಲ್ಲಿ ಅಕ್ರಮವಾಗಿ ಕಲ್ಲು ಗಣಿಗಾರಿಕೆ ನಡೆಸುತ್ತಿರುವಾಗ ಗಣಿ ಮತ್ತು ಭೂ ವಿಜ್ಞಾನ ಇಲಾಖೆಯ ಅಧಿಕಾರಿಗಳು ದಾಳಿ ನಡೆಸಿರುವ ಘಟನೆ ಗೆಜ್ಜೆನಹಳ್ಳಿಯಲ್ಲಿ ನಡೆದಿದೆ.

ಅಕ್ರಮ ಕಲ್ಲುಗಣಿಗಾರಿಕೆ, ಅಧಿಕಾರಿಗಳ ದಾಳಿ: 2 ಹಿಟಾಚಿ, 3 ಟ್ರ್ಯಾಕ್ಟರ್, ಸಿಡಿಮದ್ದು ವಶ

ಶಿವಮೊಗ್ಗ ತಾಲೂಕು ಗೆಜ್ಜೇನಹಳ್ಳಿಯ ಹಸೀನಾ ಬೇಗಂ ಹಾಗೂ ಮುದ್ದಮ್ಮ ಎಂಬುವರ ಸಾಗುವಳಿ ಭೂಮಿಯಲ್ಲಿ ಯಾವುದೇ ಅನುಮತಿ ಇಲ್ಲದೆ ಕಲ್ಲು ಗಣಿಗಾರಿಕೆ ನಡೆಸಲಾಗುತ್ತಿತ್ತು. ಮಾಹಿತಿ ಮೇರೆಗೆ ಗಣಿ ಮತ್ತು ಭೂ ವಿಜ್ಞಾನ ಇಲಾಖೆ ಅಧಿಕಾರಿ ರೇಷ್ಮಿ ರವರ ನೇತೃತ್ವದಲ್ಲಿ ದಾಳಿ ನಡೆಸಲಾಗಿದೆ. ದಾಳಿಯ ವೇಳೆ ಎರಡು ಹಿಟಾಚಿ, ಮೂರು ಟ್ರಾಕ್ಟರ್ ಹಾಗೂ ಅಪಾರ ಪ್ರಮಾಣದ ಸಿಡಿ ಮದ್ದನ್ನು ವಶಕ್ಕೆ ಪಡೆಯಲಾಗಿದೆ. ಇದು ಕಂದಾಯ ಭೂಮಿಯಾದ ಕಾರಣ ಇದನ್ನು ಕಂದಾಯ ಇಲಾಖೆಯವರ ವಶಕ್ಕೆ ನೀಡಲಾಗಿದೆ.

ಶಿವಮೊಗ್ಗ ತಹಶೀಲ್ದಾರ್ ಗಿರೀಶ್ ಸ್ಥಳ ಪರಿಶೀಲನೆ ನಡೆಸಿ, ಅಕ್ರಮ ಕಲ್ಲುಗಣಿಗಾರಿಕೆ ನಡೆಸುತ್ತಿದ್ದವರ ವಿರುದ್ದ ವಿನೋಬನಗರ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದ್ದಾರೆ.

ಶಿವಮೊಗ್ಗ: ಸಾಗುವಳಿ ಭೂಮಿಯಲ್ಲಿ ಅಕ್ರಮವಾಗಿ ಕಲ್ಲು ಗಣಿಗಾರಿಕೆ ನಡೆಸುತ್ತಿರುವಾಗ ಗಣಿ ಮತ್ತು ಭೂ ವಿಜ್ಞಾನ ಇಲಾಖೆಯ ಅಧಿಕಾರಿಗಳು ದಾಳಿ ನಡೆಸಿರುವ ಘಟನೆ ಗೆಜ್ಜೆನಹಳ್ಳಿಯಲ್ಲಿ ನಡೆದಿದೆ.

ಅಕ್ರಮ ಕಲ್ಲುಗಣಿಗಾರಿಕೆ, ಅಧಿಕಾರಿಗಳ ದಾಳಿ: 2 ಹಿಟಾಚಿ, 3 ಟ್ರ್ಯಾಕ್ಟರ್, ಸಿಡಿಮದ್ದು ವಶ

ಶಿವಮೊಗ್ಗ ತಾಲೂಕು ಗೆಜ್ಜೇನಹಳ್ಳಿಯ ಹಸೀನಾ ಬೇಗಂ ಹಾಗೂ ಮುದ್ದಮ್ಮ ಎಂಬುವರ ಸಾಗುವಳಿ ಭೂಮಿಯಲ್ಲಿ ಯಾವುದೇ ಅನುಮತಿ ಇಲ್ಲದೆ ಕಲ್ಲು ಗಣಿಗಾರಿಕೆ ನಡೆಸಲಾಗುತ್ತಿತ್ತು. ಮಾಹಿತಿ ಮೇರೆಗೆ ಗಣಿ ಮತ್ತು ಭೂ ವಿಜ್ಞಾನ ಇಲಾಖೆ ಅಧಿಕಾರಿ ರೇಷ್ಮಿ ರವರ ನೇತೃತ್ವದಲ್ಲಿ ದಾಳಿ ನಡೆಸಲಾಗಿದೆ. ದಾಳಿಯ ವೇಳೆ ಎರಡು ಹಿಟಾಚಿ, ಮೂರು ಟ್ರಾಕ್ಟರ್ ಹಾಗೂ ಅಪಾರ ಪ್ರಮಾಣದ ಸಿಡಿ ಮದ್ದನ್ನು ವಶಕ್ಕೆ ಪಡೆಯಲಾಗಿದೆ. ಇದು ಕಂದಾಯ ಭೂಮಿಯಾದ ಕಾರಣ ಇದನ್ನು ಕಂದಾಯ ಇಲಾಖೆಯವರ ವಶಕ್ಕೆ ನೀಡಲಾಗಿದೆ.

ಶಿವಮೊಗ್ಗ ತಹಶೀಲ್ದಾರ್ ಗಿರೀಶ್ ಸ್ಥಳ ಪರಿಶೀಲನೆ ನಡೆಸಿ, ಅಕ್ರಮ ಕಲ್ಲುಗಣಿಗಾರಿಕೆ ನಡೆಸುತ್ತಿದ್ದವರ ವಿರುದ್ದ ವಿನೋಬನಗರ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದ್ದಾರೆ.

For All Latest Updates

TAGGED:

ETV Bharat Logo

Copyright © 2024 Ushodaya Enterprises Pvt. Ltd., All Rights Reserved.