ETV Bharat / city

ಮಾಜಿ ಶಾಸಕ ಅಪ್ಪಾಜಿ ಗೌಡರ ಸಾವಿನ ಹೊಣೆಯನ್ನ ಸರ್ಕಾರ ಹಾಗೂ ಜಿಲ್ಲಾಡಳಿತ ಹೊರಬೇಕು : ವೈಎಸ್​​ವಿ ದತ್ತಾ - ಮಾಜಿ ಶಾಸಕ ಅಪ್ಪಾಜಿ ಗೌಡರ ಸಾವು

ಸರಿಯಾದ ಸಮಯಕ್ಕೆ ವೆಂಟಿಲೇಟರ್​ ಸಿಗದೇ ಸಾವನ್ನಪ್ಪಿರುವ ಭದ್ರಾವತಿಯ ಮಾಜಿ ಶಾಸಕ ಅಪ್ಪಾಜಿ ಗೌಡರ ಸಾವಿನ ಹೊಣೆಯನ್ನು ಸರ್ಕಾರ ಹಾಗೂ ಜಿಲ್ಲಾಡಳಿತ ಹೊರಬೇಕು ಎಂದು ಮಾಜಿ ಶಾಸಕ ವೈಎಸ್​​ವಿ ದತ್ತಾ ಆಗ್ರಹಿಸಿದರು.

government is responsibility for death of former MLA Appaji Goward
ಮಾಜಿ ಶಾಸಕ ವೈಎಸ್​​ವಿ ದತ್ತಾ
author img

By

Published : Sep 5, 2020, 5:48 PM IST

ಶಿವಮೊಗ್ಗ : ಮಾಜಿ ಶಾಸಕ ಅಪ್ಪಾಜಿ ಗೌಡರ ಸಾವಿನ ಹೊಣೆಯನ್ನು ಸರ್ಕಾರ ಹಾಗೂ ಜಿಲ್ಲಾಡಳಿತ ಹೊರಬೇಕು ಎಂದು ಮಾಜಿ ಶಾಸಕ ವೈಎಸ್​​ವಿ ದತ್ತಾ ಒತ್ತಾಯಿಸಿದರು.

ಸುದ್ದಿಗೋಷ್ಠಿ ನಡೆಸಿ ಮಾತನಾಡಿದ ಅವರು, ಭದ್ರಾವತಿಯ ಮಾಜಿ ಶಾಸಕ ಅಪ್ಪಾಜಿ ಗೌಡರ ಸಾವು ಜೆಡಿಎಸ್ ಪಕ್ಷಕ್ಕೆ ಹಾಗೂ ಅವರ ಅಭಿಮಾನಿಗಳಿಗೆ ಮತ್ತು ಕುಟುಂಬಕ್ಕೆ ತುಂಬಲಾಗದ ನಷ್ಟ. ಅಪ್ಪಾಜಿ ಗೌಡರು ಸರಿಯಾದ ಸಮಯಕ್ಕೆ ವೆಂಟಿಲೇಟರ್ ಸಿಗದೇ ಸಾವನ್ನಪ್ಪಿದ್ದಾರೆ. ಹಾಗಾಗಿ ಅವರ ಸಾವಿನ ಹೊಣೆಯನ್ನು ಸರ್ಕಾರ ಹಾಗೂ ಜಿಲ್ಲಾಡಳಿತ ಹೊರಬೇಕು ಎಂದು ಆಗ್ರಹಿಸಿದರು.

ಮಾಜಿ ಶಾಸಕ ವೈಎಸ್​​ವಿ ದತ್ತಾ ಸುದ್ದಿಗೋಷ್ಠಿ

ಮಾಜಿ ಶಾಸಕರ ಸ್ಥಿತಿ ನೋಡಿ ಜನ ಸಾಮನ್ಯರು ನಮ್ಮ ಗತಿ ಏನು ಎಂದು ಚರ್ಚಿಸುತ್ತಿದ್ದಾರೆ. ವೆಂಟಿಲೇಟರ್ ಸಿಗದೇ ಸಾವನ್ನಪ್ಪಿರುವ ವಿಷಯ ರಾಜ್ಯಾದ್ಯಂತ ಚರ್ಚೆಗೆ ಗ್ರಾಸವಾಗಿದ್ದು ಈಗಲಾದರೂ ಜಿಲ್ಲಾಡಳಿತ ಎಚ್ಚೆತ್ತುಕೊಳ್ಳಬೇಕು ಎಂದರು.

ಪ್ರತಿದಿನ ಕೊರೊನಾ ಚಿಕಿತ್ಸೆಗೆ ಬೇಡ್ ಸಿಗದೇ ಹಾಗೂ ಬೇರೆ ಕಾಯಿಲೆಗಳಿಗೆ ಚಿಕಿತ್ಸೆ ಸಿಗದೇ ನೂರಾರು ಜನ ಸಾವನ್ನಪ್ಪುತ್ತಿದ್ದಾರೆ. ಕೋವಿಡ್​​ ಪಾಸಿಟಿವ್, ನೆಗೆಟಿವ್ ಎನ್ನುವುದು ಅನೇಕ ಅನುಮಾನಗಳಿಗೆ ಕಾರಣವಾಗಿ ಹಣ ಮಾಡುವ ದಂಧೆ ಆಗುತ್ತಿದೇಯೇ ಎಂಬ ಅನುಮಾನ ಜನ ಸಾಮನ್ಯರಿಗೆ ಕಾಡುತ್ತಿದೆ ಎಂದು ಕಳವಳ ವ್ಯಕ್ತಪಡಿಸಿದರು.

ಶಿವಮೊಗ್ಗ : ಮಾಜಿ ಶಾಸಕ ಅಪ್ಪಾಜಿ ಗೌಡರ ಸಾವಿನ ಹೊಣೆಯನ್ನು ಸರ್ಕಾರ ಹಾಗೂ ಜಿಲ್ಲಾಡಳಿತ ಹೊರಬೇಕು ಎಂದು ಮಾಜಿ ಶಾಸಕ ವೈಎಸ್​​ವಿ ದತ್ತಾ ಒತ್ತಾಯಿಸಿದರು.

ಸುದ್ದಿಗೋಷ್ಠಿ ನಡೆಸಿ ಮಾತನಾಡಿದ ಅವರು, ಭದ್ರಾವತಿಯ ಮಾಜಿ ಶಾಸಕ ಅಪ್ಪಾಜಿ ಗೌಡರ ಸಾವು ಜೆಡಿಎಸ್ ಪಕ್ಷಕ್ಕೆ ಹಾಗೂ ಅವರ ಅಭಿಮಾನಿಗಳಿಗೆ ಮತ್ತು ಕುಟುಂಬಕ್ಕೆ ತುಂಬಲಾಗದ ನಷ್ಟ. ಅಪ್ಪಾಜಿ ಗೌಡರು ಸರಿಯಾದ ಸಮಯಕ್ಕೆ ವೆಂಟಿಲೇಟರ್ ಸಿಗದೇ ಸಾವನ್ನಪ್ಪಿದ್ದಾರೆ. ಹಾಗಾಗಿ ಅವರ ಸಾವಿನ ಹೊಣೆಯನ್ನು ಸರ್ಕಾರ ಹಾಗೂ ಜಿಲ್ಲಾಡಳಿತ ಹೊರಬೇಕು ಎಂದು ಆಗ್ರಹಿಸಿದರು.

ಮಾಜಿ ಶಾಸಕ ವೈಎಸ್​​ವಿ ದತ್ತಾ ಸುದ್ದಿಗೋಷ್ಠಿ

ಮಾಜಿ ಶಾಸಕರ ಸ್ಥಿತಿ ನೋಡಿ ಜನ ಸಾಮನ್ಯರು ನಮ್ಮ ಗತಿ ಏನು ಎಂದು ಚರ್ಚಿಸುತ್ತಿದ್ದಾರೆ. ವೆಂಟಿಲೇಟರ್ ಸಿಗದೇ ಸಾವನ್ನಪ್ಪಿರುವ ವಿಷಯ ರಾಜ್ಯಾದ್ಯಂತ ಚರ್ಚೆಗೆ ಗ್ರಾಸವಾಗಿದ್ದು ಈಗಲಾದರೂ ಜಿಲ್ಲಾಡಳಿತ ಎಚ್ಚೆತ್ತುಕೊಳ್ಳಬೇಕು ಎಂದರು.

ಪ್ರತಿದಿನ ಕೊರೊನಾ ಚಿಕಿತ್ಸೆಗೆ ಬೇಡ್ ಸಿಗದೇ ಹಾಗೂ ಬೇರೆ ಕಾಯಿಲೆಗಳಿಗೆ ಚಿಕಿತ್ಸೆ ಸಿಗದೇ ನೂರಾರು ಜನ ಸಾವನ್ನಪ್ಪುತ್ತಿದ್ದಾರೆ. ಕೋವಿಡ್​​ ಪಾಸಿಟಿವ್, ನೆಗೆಟಿವ್ ಎನ್ನುವುದು ಅನೇಕ ಅನುಮಾನಗಳಿಗೆ ಕಾರಣವಾಗಿ ಹಣ ಮಾಡುವ ದಂಧೆ ಆಗುತ್ತಿದೇಯೇ ಎಂಬ ಅನುಮಾನ ಜನ ಸಾಮನ್ಯರಿಗೆ ಕಾಡುತ್ತಿದೆ ಎಂದು ಕಳವಳ ವ್ಯಕ್ತಪಡಿಸಿದರು.

ETV Bharat Logo

Copyright © 2025 Ushodaya Enterprises Pvt. Ltd., All Rights Reserved.