ETV Bharat / city

ಮುಸ್ಲಿಮರಿಗೆ ಪ್ರಧಾನಿ ಆಗುವ ಅರ್ಹತೆ ಇದೆ, ರಾಷ್ಟ್ರಪತಿ, ವಿಜ್ಞಾನಿಯಾದ ಉದಾಹರಣೆ ಇಲ್ಲವೇ?:ಡಿಕೆಶಿ

ವ್ಯಾಪಾರ, ಆಚರಣೆಯಲ್ಲಿ ಧಾರ್ಮಿಕ ವಿಚಾರಗಳ ಅಡ್ಡಗೋಡೆಯನ್ನು ತಂದು ಸಮಾಜದಲ್ಲಿ ಬಿಜೆಪಿ ಬಿರುಕು ಮೂಡಿಸುವ ಕಾರ್ಯ ಮಾಡುತ್ತಿದೆ ಎಂದು ಡಿ.ಕೆ. ಶಿವಕುಮಾರ್​ ದೂರಿದರು.

author img

By

Published : Apr 24, 2022, 7:58 PM IST

Updated : Apr 24, 2022, 9:29 PM IST

D. K. Shivakumar Member of the Karnataka Legislative Assembly
ಮುಸ್ಲಿಂರಿಗೆ ಪ್ರಧಾನ ಮಂತ್ರಿ ಆಗುವ ಅರ್ಹತೆ ಇದೆ, ರಾಷ್ಟ್ರಪತಿ, ವಿಜ್ಞಾನಿಯಾದ ಉದಾಹರಣೆ ಇಲ್ಲವೇ

ದಾವಣಗೆರೆ: ಮುಸ್ಲಿಮರಿಗೆ ದೇಶದ ಪ್ರಧಾನಮಂತ್ರಿ ಆಗುವ ಅರ್ಹತೆ ಇದೆ. ಮುಸ್ಲಿಮರು ರಾಷ್ರಪತಿಯಾಗಿಲ್ವಾ, ವಿಜ್ಞಾನಿಗಳಾಗಿಲ್ವಾ ಎಂದು ಕೆಪಿಸಿಸಿ ಅಧ್ಯಕ್ಷ ಡಿಕೆ ಶಿವಕುಮಾರ್ ಪ್ರಶ್ನಿಸಿದರು. ದಾವಣಗೆರೆಯಲ್ಲಿ ಮಾತನಾಡಿದ ಅವರು, ಕಷ್ಟಕಾಲದಲ್ಲಿ ಬಡವರ ಹೊಟ್ಟೆ ಮೇಲೆ ಬರೆ ಹಾಕಿದರು. ಎಲ್ಲಾದರೂ ಗಾಡಿ ನಿಂತರೆ ಪಂಕ್ಚರ್ ಯಾರು ಹಾಕುತ್ತಾರೆ? ಸಂವಿಧಾನ ಕಿತ್ತು ಹಾಕಲು ನಿಮ್ಮಿಂದ ಆಗುತ್ತಾ?, ದೇಶ ಶಾಂತಿಯ ತೋಟವೆಂದು ನಾವು ಬದುಕಬೇಕು.‌ ಬೆಂಗಳೂರಲ್ಲಿ ದೊಡ್ಡ ದೊಡ್ಡ ಬಿಲ್ಡಿಂಗ್​ಗಳನ್ನು ಮುಸ್ಲಿಮರೇ ಕಟ್ಟಿದ್ದಾರೆ. ಪ್ರಧಾನಿಯಾಗುವ ಯೋಗ್ಯತೆ ಅವರಲ್ಲಿದೆ ಎಂದರು.

ಹಲಾಲ್, ಪಲಾಲ್ ಎಲ್ಲ ಮಾಡಿದ್ದು ಯಾರು?: ಹಲಾಲ್, ಪಲಾಲ್ ಎಲ್ಲ ಮಾಡಿದ್ದು ಬಿಜೆಪಿಯವರೇ. ನಮ್ಮ ಭಾಗದಲ್ಲಿ ಕಬ್ಬಾಳಮ್ಮ ದೇವಸ್ಥಾನ ಇದೆ. ಅಲ್ಲಿ ಸಾವಿರ ಮರಿ ಕಡೀತಾರೆ. ಕಡಿದ ಮರಿಗಳನ್ನು ಮುಸ್ಲಿಮರೇ ಕ್ಲಿನ್ ಮಾಡುತ್ತಾರೆ. ಕೋಲಾರ, ರಾಮನಗರದಲ್ಲಿ ಮಾವಿನ ತೋಪಿಗೆ ಔಷಧಿ ಹೊಡೆಯುವರು ಯಾರು? ಬಿಜೆಪಿಯವರು ಭೇದ ಮಾಡಿರುವುದರ ಪರಿಣಾಮ ಸಂತೆ, ಜಾತ್ರೆಗಳ ಮೇಲೆ ಬಿದ್ದಿದೆ ಎಂದರು.

ಮುಸ್ಲಿಮರಿಗೆ ಪ್ರಧಾನಿ ಆಗುವ ಅರ್ಹತೆ ಇದೆ, ರಾಷ್ಟ್ರಪತಿ, ವಿಜ್ಞಾನಿಯಾದ ಉದಾಹರಣೆ ಇಲ್ಲವೇ?:ಡಿಕೆಶಿ

ಬುಲ್ಡೋಜರ್ ತರೋಕೆ ಇದು ಉತ್ತರ ಪ್ರದೇಶ ಅಲ್ಲ: ಬುಲ್ಡೋಜರ್ ತರೋಕೆ ಇದು ಉತ್ತರ ಪ್ರದೇಶ ಅಲ್ಲ. ಕರ್ನಾಟಕವನ್ನು ಯುಪಿಗೆ ಹೋಲಿಸಬೇಡಿ. ಅಲ್ಲಿ ಬೇರೆ ಬೇರೆ ವಿಷಯಗಳಿದ್ದವು. ಅದಕ್ಕೆ ಬುಲ್ಡೋಜರ್ ಮಾದರಿ ಮಾಡುತ್ತಿದೆ ಅಲ್ಲಿನ ಸರ್ಕಾರ. ಆದರೆ ಕರ್ನಾಟಕದಲ್ಲಿ ಪ್ರಜ್ಞಾವಂತರಿದ್ದಾರೆ. ಬಿಜೆಪಿಯವರು ಆಪರೇಷನ್ ಕಮಲ ಮಾಡಿ ಅಧಿಕಾರಕ್ಕೆ ಬಂದಿದ್ದಾರೆ, ಅವರು ಜನಾದೇಶದಿಂದ ಅಧಿಕಾರಕ್ಕೆ ಬಂದಿಲ್ಲ. ಶಾಸಕರನ್ನು ಖರೀದಿ ಮಾಡಿ ಅಧಿಕಾರ ನಡೆಸುತ್ತಿದ್ದಾರೆ. ಅದಕ್ಕೆ ಭ್ರಷ್ಟಾಚಾರ ತಾಂಡವಾಡುತ್ತಿದೆ ಎಂದು ಹೇಳಿದರು.

ಇದನ್ನೂ ಓದಿ: 'ನನ್ನದು ಅಳಿಲು ಸೇವೆ ಮಾತ್ರ, ಶಿವಮೊಗ್ಗ ವಿಮಾನ ನಿಲ್ದಾಣಕ್ಕೆ ನನ್ನ ಹೆಸರು ಬೇಡ': ಸಿಎಂಗೆ ಬಿಎಸ್​ವೈ ಪತ್ರ

ದಾವಣಗೆರೆ: ಮುಸ್ಲಿಮರಿಗೆ ದೇಶದ ಪ್ರಧಾನಮಂತ್ರಿ ಆಗುವ ಅರ್ಹತೆ ಇದೆ. ಮುಸ್ಲಿಮರು ರಾಷ್ರಪತಿಯಾಗಿಲ್ವಾ, ವಿಜ್ಞಾನಿಗಳಾಗಿಲ್ವಾ ಎಂದು ಕೆಪಿಸಿಸಿ ಅಧ್ಯಕ್ಷ ಡಿಕೆ ಶಿವಕುಮಾರ್ ಪ್ರಶ್ನಿಸಿದರು. ದಾವಣಗೆರೆಯಲ್ಲಿ ಮಾತನಾಡಿದ ಅವರು, ಕಷ್ಟಕಾಲದಲ್ಲಿ ಬಡವರ ಹೊಟ್ಟೆ ಮೇಲೆ ಬರೆ ಹಾಕಿದರು. ಎಲ್ಲಾದರೂ ಗಾಡಿ ನಿಂತರೆ ಪಂಕ್ಚರ್ ಯಾರು ಹಾಕುತ್ತಾರೆ? ಸಂವಿಧಾನ ಕಿತ್ತು ಹಾಕಲು ನಿಮ್ಮಿಂದ ಆಗುತ್ತಾ?, ದೇಶ ಶಾಂತಿಯ ತೋಟವೆಂದು ನಾವು ಬದುಕಬೇಕು.‌ ಬೆಂಗಳೂರಲ್ಲಿ ದೊಡ್ಡ ದೊಡ್ಡ ಬಿಲ್ಡಿಂಗ್​ಗಳನ್ನು ಮುಸ್ಲಿಮರೇ ಕಟ್ಟಿದ್ದಾರೆ. ಪ್ರಧಾನಿಯಾಗುವ ಯೋಗ್ಯತೆ ಅವರಲ್ಲಿದೆ ಎಂದರು.

ಹಲಾಲ್, ಪಲಾಲ್ ಎಲ್ಲ ಮಾಡಿದ್ದು ಯಾರು?: ಹಲಾಲ್, ಪಲಾಲ್ ಎಲ್ಲ ಮಾಡಿದ್ದು ಬಿಜೆಪಿಯವರೇ. ನಮ್ಮ ಭಾಗದಲ್ಲಿ ಕಬ್ಬಾಳಮ್ಮ ದೇವಸ್ಥಾನ ಇದೆ. ಅಲ್ಲಿ ಸಾವಿರ ಮರಿ ಕಡೀತಾರೆ. ಕಡಿದ ಮರಿಗಳನ್ನು ಮುಸ್ಲಿಮರೇ ಕ್ಲಿನ್ ಮಾಡುತ್ತಾರೆ. ಕೋಲಾರ, ರಾಮನಗರದಲ್ಲಿ ಮಾವಿನ ತೋಪಿಗೆ ಔಷಧಿ ಹೊಡೆಯುವರು ಯಾರು? ಬಿಜೆಪಿಯವರು ಭೇದ ಮಾಡಿರುವುದರ ಪರಿಣಾಮ ಸಂತೆ, ಜಾತ್ರೆಗಳ ಮೇಲೆ ಬಿದ್ದಿದೆ ಎಂದರು.

ಮುಸ್ಲಿಮರಿಗೆ ಪ್ರಧಾನಿ ಆಗುವ ಅರ್ಹತೆ ಇದೆ, ರಾಷ್ಟ್ರಪತಿ, ವಿಜ್ಞಾನಿಯಾದ ಉದಾಹರಣೆ ಇಲ್ಲವೇ?:ಡಿಕೆಶಿ

ಬುಲ್ಡೋಜರ್ ತರೋಕೆ ಇದು ಉತ್ತರ ಪ್ರದೇಶ ಅಲ್ಲ: ಬುಲ್ಡೋಜರ್ ತರೋಕೆ ಇದು ಉತ್ತರ ಪ್ರದೇಶ ಅಲ್ಲ. ಕರ್ನಾಟಕವನ್ನು ಯುಪಿಗೆ ಹೋಲಿಸಬೇಡಿ. ಅಲ್ಲಿ ಬೇರೆ ಬೇರೆ ವಿಷಯಗಳಿದ್ದವು. ಅದಕ್ಕೆ ಬುಲ್ಡೋಜರ್ ಮಾದರಿ ಮಾಡುತ್ತಿದೆ ಅಲ್ಲಿನ ಸರ್ಕಾರ. ಆದರೆ ಕರ್ನಾಟಕದಲ್ಲಿ ಪ್ರಜ್ಞಾವಂತರಿದ್ದಾರೆ. ಬಿಜೆಪಿಯವರು ಆಪರೇಷನ್ ಕಮಲ ಮಾಡಿ ಅಧಿಕಾರಕ್ಕೆ ಬಂದಿದ್ದಾರೆ, ಅವರು ಜನಾದೇಶದಿಂದ ಅಧಿಕಾರಕ್ಕೆ ಬಂದಿಲ್ಲ. ಶಾಸಕರನ್ನು ಖರೀದಿ ಮಾಡಿ ಅಧಿಕಾರ ನಡೆಸುತ್ತಿದ್ದಾರೆ. ಅದಕ್ಕೆ ಭ್ರಷ್ಟಾಚಾರ ತಾಂಡವಾಡುತ್ತಿದೆ ಎಂದು ಹೇಳಿದರು.

ಇದನ್ನೂ ಓದಿ: 'ನನ್ನದು ಅಳಿಲು ಸೇವೆ ಮಾತ್ರ, ಶಿವಮೊಗ್ಗ ವಿಮಾನ ನಿಲ್ದಾಣಕ್ಕೆ ನನ್ನ ಹೆಸರು ಬೇಡ': ಸಿಎಂಗೆ ಬಿಎಸ್​ವೈ ಪತ್ರ

Last Updated : Apr 24, 2022, 9:29 PM IST

For All Latest Updates

ETV Bharat Logo

Copyright © 2024 Ushodaya Enterprises Pvt. Ltd., All Rights Reserved.