ETV Bharat / city

ಸುತ್ತೂರು ಸಮೀಪ ಮದ್ಯದಂಗಡಿ ತೆರೆಯಲು ಮುಂದಾದ ವ್ಯಕ್ತಿ: ಗ್ರಾಮಸ್ಥರಿಂದ ಆಕ್ಷೇಪ - Nanjangud Taluk Suttur Village

ನಂಜನಗೂಡು ತಾಲೂಕಿನ ಸುತ್ತೂರು ಸುತ್ತಮುತ್ತಲ 15 ಕಿ‌.ಮೀ‌. ವ್ಯಾಪ್ತಿಯಲ್ಲಿ ಮದ್ಯದಂಗಡಿ ತೆರೆಯಲು ಅನುಮತಿ ನೀಡದಂತೆ ಗ್ರಾಮಸ್ಥರು ರಾಜ್ಯಸರ್ಕಾರಕ್ಕೆ ಮನವಿ ಮಾಡಿದ್ದಾರೆ. ಆದರೂ ಮದ್ಯದಂಗಡಿ ತೆರೆಯಲು ಮುಂದಾಗಿರುವ ವ್ಯಕ್ತಿಯ ವಿರುದ್ಧ ಗ್ರಾಮಸ್ಥರು ಕಿಡಿಕಾರಿದ್ದಾರೆ.

Suttur Villagers Appeal  to not open liquor shop
ಸುತ್ತೂರು ಸಮೀಪ ಮದ್ಯದಂಗಡಿ ಮುಂದಾದ ವ್ಯಕ್ತಿ: ಗ್ರಾಮಸ್ಥರಿಂದ ಆಕ್ಷೇಪ
author img

By

Published : Apr 13, 2021, 12:58 PM IST

Updated : Apr 13, 2021, 2:52 PM IST

ಮೈಸೂರು: ಜಿಲ್ಲೆಯ ನಂಜನಗೂಡು ತಾಲೂಕಿನ ಸುತ್ತೂರು ಸಮೀಪ ಮದ್ಯದಂಗಡಿ ತೆರೆಯಲು ಮುಂದಾಗಿರುವ ವ್ಯಕ್ತಿಯ ವಿರುದ್ಧ ಗ್ರಾಮಸ್ಥರು ಆಕ್ರೋಶ ವ್ಯಕ್ತಪಡಿಸಿದ್ದಾರೆ.

ಸುತ್ತೂರು ಸಮೀಪ ಮದ್ಯದಂಗಡಿ ಮುಂದಾದ ವ್ಯಕ್ತಿ: ಗ್ರಾಮಸ್ಥರಿಂದ ಆಕ್ಷೇಪ

ಸುತ್ತೂರು ಸುತ್ತಮುತ್ತಲ 15 ಕಿ‌.ಮೀ‌. ವ್ಯಾಪ್ತಿಯಲ್ಲಿ ಮದ್ಯದಂಗಡಿ ತೆರೆಯಲು ಅನುಮತಿ ನೀಡದಂತೆ ಗ್ರಾಮಸ್ಥರು ರಾಜ್ಯಸರ್ಕಾರಕ್ಕೆ ಮನವಿ ಮಾಡಿದ್ದಾರೆ. ಆದರೂ ಮದ್ಯದಂಗಡಿ ತೆರೆಯಲು ಮುಂದಾಗಿರುವ ವ್ಯಕ್ತಿಯ ವಿರುದ್ಧ ಗ್ರಾಮಸ್ಥರು ಕಿಡಿಕಾರಿದ್ದಾರೆ.

ಡಾ.ಯತೀಂದ್ರ ಸಿದ್ದರಾಮಯ್ಯ ಶಾಸಕರಾಗಿ ಪ್ರತಿನಿಧಿಸುತ್ತಿರುವ ವರುಣಾ ಕ್ಷೇತ್ರದ ಸುತ್ತೂರು ಗ್ರಾಮದ 4 ಕಿ.ಮೀ.ಅಂತರದಲ್ಲಿರುವ ಎಸ್.ಹೊಸಕೋಟೆ ಗ್ರಾಮದ‌ ದಲಿತರ ಬೀದಿಯಲ್ಲಿ ಮದ್ಯದಂಗಡಿ ತೆರೆಯಲು ಅವಕಾಶ ಸಿಗದ ಹಿನ್ನೆಲೆಯಲ್ಲಿ ಬಗರ್ ಹುಕ್ಕುಂ‌ ಮಾಜಿ ಅಧ್ಯಕ್ಷ ಕುಮಾರ್, ತನ್ನ‌ ಸ್ನೇಹಿತನ ಮುಖಾಂತರ ಸುತ್ತೂರಿನಲ್ಲಿ ಮದ್ಯದಂಗಡಿ ತೆರೆಸಲು ಮುಂದಾಗಿದ್ದಾನೆ ಎಂಬ ಆರೋಪ‌ ಕೇಳಿಬಂದಿದೆ.

ಈ ಬಗ್ಗೆ ಜಿಲ್ಲಾಧಿಕಾರಿ ರೋಹಿಣಿ ಸಿಂಧೂರಿ, ಅಬಕಾರಿ ಡಿಸಿ, ನಂಜನಗೂಡಿನ ತಹಶೀಲ್ದಾರ್ ಸೇರಿ ಸಂಬಂಧಪಟ್ಟ ಅಧಿಕಾರಿಗಳಿಗೆ ಗ್ರಾಮಸ್ಥರ ದೂರು ನೀಡಿದ್ದಾರೆ.

ಓದಿ: ಸಾರಿಗೆ ನೌಕರರ ವಿರುದ್ಧ ಮತ್ತೊಂದು ಕಾನೂನು ಅಸ್ತ್ರ ಪ್ರಯೋಗಿಸಿದ ನಿಗಮಗಳು

ಮೈಸೂರು: ಜಿಲ್ಲೆಯ ನಂಜನಗೂಡು ತಾಲೂಕಿನ ಸುತ್ತೂರು ಸಮೀಪ ಮದ್ಯದಂಗಡಿ ತೆರೆಯಲು ಮುಂದಾಗಿರುವ ವ್ಯಕ್ತಿಯ ವಿರುದ್ಧ ಗ್ರಾಮಸ್ಥರು ಆಕ್ರೋಶ ವ್ಯಕ್ತಪಡಿಸಿದ್ದಾರೆ.

ಸುತ್ತೂರು ಸಮೀಪ ಮದ್ಯದಂಗಡಿ ಮುಂದಾದ ವ್ಯಕ್ತಿ: ಗ್ರಾಮಸ್ಥರಿಂದ ಆಕ್ಷೇಪ

ಸುತ್ತೂರು ಸುತ್ತಮುತ್ತಲ 15 ಕಿ‌.ಮೀ‌. ವ್ಯಾಪ್ತಿಯಲ್ಲಿ ಮದ್ಯದಂಗಡಿ ತೆರೆಯಲು ಅನುಮತಿ ನೀಡದಂತೆ ಗ್ರಾಮಸ್ಥರು ರಾಜ್ಯಸರ್ಕಾರಕ್ಕೆ ಮನವಿ ಮಾಡಿದ್ದಾರೆ. ಆದರೂ ಮದ್ಯದಂಗಡಿ ತೆರೆಯಲು ಮುಂದಾಗಿರುವ ವ್ಯಕ್ತಿಯ ವಿರುದ್ಧ ಗ್ರಾಮಸ್ಥರು ಕಿಡಿಕಾರಿದ್ದಾರೆ.

ಡಾ.ಯತೀಂದ್ರ ಸಿದ್ದರಾಮಯ್ಯ ಶಾಸಕರಾಗಿ ಪ್ರತಿನಿಧಿಸುತ್ತಿರುವ ವರುಣಾ ಕ್ಷೇತ್ರದ ಸುತ್ತೂರು ಗ್ರಾಮದ 4 ಕಿ.ಮೀ.ಅಂತರದಲ್ಲಿರುವ ಎಸ್.ಹೊಸಕೋಟೆ ಗ್ರಾಮದ‌ ದಲಿತರ ಬೀದಿಯಲ್ಲಿ ಮದ್ಯದಂಗಡಿ ತೆರೆಯಲು ಅವಕಾಶ ಸಿಗದ ಹಿನ್ನೆಲೆಯಲ್ಲಿ ಬಗರ್ ಹುಕ್ಕುಂ‌ ಮಾಜಿ ಅಧ್ಯಕ್ಷ ಕುಮಾರ್, ತನ್ನ‌ ಸ್ನೇಹಿತನ ಮುಖಾಂತರ ಸುತ್ತೂರಿನಲ್ಲಿ ಮದ್ಯದಂಗಡಿ ತೆರೆಸಲು ಮುಂದಾಗಿದ್ದಾನೆ ಎಂಬ ಆರೋಪ‌ ಕೇಳಿಬಂದಿದೆ.

ಈ ಬಗ್ಗೆ ಜಿಲ್ಲಾಧಿಕಾರಿ ರೋಹಿಣಿ ಸಿಂಧೂರಿ, ಅಬಕಾರಿ ಡಿಸಿ, ನಂಜನಗೂಡಿನ ತಹಶೀಲ್ದಾರ್ ಸೇರಿ ಸಂಬಂಧಪಟ್ಟ ಅಧಿಕಾರಿಗಳಿಗೆ ಗ್ರಾಮಸ್ಥರ ದೂರು ನೀಡಿದ್ದಾರೆ.

ಓದಿ: ಸಾರಿಗೆ ನೌಕರರ ವಿರುದ್ಧ ಮತ್ತೊಂದು ಕಾನೂನು ಅಸ್ತ್ರ ಪ್ರಯೋಗಿಸಿದ ನಿಗಮಗಳು

Last Updated : Apr 13, 2021, 2:52 PM IST
ETV Bharat Logo

Copyright © 2025 Ushodaya Enterprises Pvt. Ltd., All Rights Reserved.