ETV Bharat / city

ಜನರ ಸಮಸ್ಯೆ ಪರಿಹರಿಸುವುದು ನಮ್ಮ ಜವಾಬ್ದಾರಿ ಇದರಲ್ಲಿ ಕ್ರೆಡಿಟ್ ಪ್ರಶ್ನೆ ಬರಲ್ಲ: ಸಂಸದ ಪ್ರತಾಪ್​ ಸಿಂಹ​

author img

By

Published : Mar 9, 2022, 4:51 PM IST

Updated : Mar 9, 2022, 5:55 PM IST

ಕ್ರೆಡಿಟ್​ ತೆಗೆದುಕೊಳ್ಳಲು ಕೆಲಸ ಮಾಡುತ್ತಿದ್ದಾರೆ ಎಂದು ಟೀಕಿಸಿದ್ದ ಮಂಡ್ಯ ಸಂಸದೆ ಸುಮಲತಾ ಅಂಬರೀಶ್​ ಅವರಿಗೆ ತಿರುಗೇಟು ನೀಡಿರುವ ಸಂಸದ ಪ್ರತಾಪ್​ ಸಿಂಹ, ಜನರ ಕೆಲಸ ಮಾಡಿಕೊಟ್ಟರೆ ಅದರಲ್ಲಿ ನಮಗೆ ಕ್ರೆಡಿಟ್​ ಏನು ಬರುತ್ತೆ. ನಾವಿರುವುದೇ ಜನರ ಕೆಲಸ ಮಾಡಲು ಅಲ್ಲವೇ ಎಂದು ಪ್ರಶ್ನಿಸಿದ್ದಾರೆ.

pratap-simha
ಪ್ರತಾಪ್​ ಸಿಂಹ

ಮೈಸೂರು: ಜನರ ಸಮಸ್ಯೆಯನ್ನ ಪರಿಹರಿಸುವುದು ನಮ್ಮ ಜವಾಬ್ದಾರಿ, ಇದರಲ್ಲಿ ಕ್ರೆಡಿಟ್ ಪ್ರಶ್ನೆ ಬರುವುದಿಲ್ಲ. ಕ್ರೆಡಿಟ್ ಅಂದರೆ ಏನು ಎಂದು ಸಂಸದ ಪ್ರತಾಪ್ ಸಿಂಹ ಅವರು ಸಂಸದೆ ಸುಮಲತಾ ಅಂಬರೀಶ್ ಹೇಳಿಕೆಗೆ ತಿರುಗೇಟು ನೀಡಿದ್ದಾರೆ.

ಜನರ ಸಮಸ್ಯೆ ಪರಿಹರಿಸುವುದು ನಮ್ಮ ಜವಾಬ್ದಾರಿ ಇದರಲ್ಲಿ ಕ್ರೆಡಿಟ್ ಪ್ರಶ್ನೆ ಬರಲ್ಲ: ಸಂಸದ ಪ್ರತಾಪ್​ ಸಿಂಹ​

ಮಾಧ್ಯಮಗಳ ಜೊತೆ ಮಾತನಾಡಿದ ಅವರು, ಮೈಸೂರು ಬೆಂಗಳೂರು ನಡುವಿನ ಹೈವೇ ನಿರ್ಮಾಣದ ವೇಳೆ ಸಬ್ ವೇಗಳು ಹಾಗೂ ಸೇತುವೆಗಳನ್ನು ಜನರ ಮನವಿಗೆ ಅನುಗುಣವಾಗಿ ಮಾಡಿಸುತ್ತಿದ್ದು, ಮೈಸೂರಿಗೆ ಹೈ ವೇ ತರುತ್ತಿದ್ದೇನೆ. ಈ ಮಧ್ಯೆ ಸಮಸ್ಯೆಗಳಾದರೆ ಅದನ್ನು ಪರಿಹರಿಸುವುದು ನಮ್ಮ ಜವಾಬ್ದಾರಿ. ಆ ಕೆಲಸವನ್ನೇ ನಾನು ಮಾಡುತ್ತಿದ್ದೇನೆ ಎಂದರು.

ಜನ ಕೆಲಸ ಮಾಡಿ ಎಂದು ನನ್ನನ್ನು ಕೇಳಿದರೆ, ಆ ಕೆಲಸವನ್ನು ನಾನು ಮಾಡಿಕೊಟ್ಟಾಗ ಅದಕ್ಕೆ ಜನರು ಬೆನ್ನು ತಟ್ಟುತ್ತಾರೆ. ಇದರಲ್ಲಿ ನಮಗೆ ಕ್ರೆಡಿಟ್ ಏನು ಇಲ್ಲ. ಜನ ಕೆಲಸ ಮಾಡಿಕೊಡಿ ಎಂದರೆ, ನನ್ನ ಕೈಲಾದರೆ ಮಾಡಿಕೊಡುತ್ತೇನೆ. ನಾವಿರುವುದೇ ಜನರ ಕೆಲಸ ಮಾಡಲು ಎಂದರು.

ಓದಿ: ಮೇಕೆದಾಟು ಅಣೆಕಟ್ಟು ಕಟ್ಟುವುದಕ್ಕೆ ವಿರೋಧವಿದೆ: ನಟ ಚೇತನ್

ಮೈಸೂರು: ಜನರ ಸಮಸ್ಯೆಯನ್ನ ಪರಿಹರಿಸುವುದು ನಮ್ಮ ಜವಾಬ್ದಾರಿ, ಇದರಲ್ಲಿ ಕ್ರೆಡಿಟ್ ಪ್ರಶ್ನೆ ಬರುವುದಿಲ್ಲ. ಕ್ರೆಡಿಟ್ ಅಂದರೆ ಏನು ಎಂದು ಸಂಸದ ಪ್ರತಾಪ್ ಸಿಂಹ ಅವರು ಸಂಸದೆ ಸುಮಲತಾ ಅಂಬರೀಶ್ ಹೇಳಿಕೆಗೆ ತಿರುಗೇಟು ನೀಡಿದ್ದಾರೆ.

ಜನರ ಸಮಸ್ಯೆ ಪರಿಹರಿಸುವುದು ನಮ್ಮ ಜವಾಬ್ದಾರಿ ಇದರಲ್ಲಿ ಕ್ರೆಡಿಟ್ ಪ್ರಶ್ನೆ ಬರಲ್ಲ: ಸಂಸದ ಪ್ರತಾಪ್​ ಸಿಂಹ​

ಮಾಧ್ಯಮಗಳ ಜೊತೆ ಮಾತನಾಡಿದ ಅವರು, ಮೈಸೂರು ಬೆಂಗಳೂರು ನಡುವಿನ ಹೈವೇ ನಿರ್ಮಾಣದ ವೇಳೆ ಸಬ್ ವೇಗಳು ಹಾಗೂ ಸೇತುವೆಗಳನ್ನು ಜನರ ಮನವಿಗೆ ಅನುಗುಣವಾಗಿ ಮಾಡಿಸುತ್ತಿದ್ದು, ಮೈಸೂರಿಗೆ ಹೈ ವೇ ತರುತ್ತಿದ್ದೇನೆ. ಈ ಮಧ್ಯೆ ಸಮಸ್ಯೆಗಳಾದರೆ ಅದನ್ನು ಪರಿಹರಿಸುವುದು ನಮ್ಮ ಜವಾಬ್ದಾರಿ. ಆ ಕೆಲಸವನ್ನೇ ನಾನು ಮಾಡುತ್ತಿದ್ದೇನೆ ಎಂದರು.

ಜನ ಕೆಲಸ ಮಾಡಿ ಎಂದು ನನ್ನನ್ನು ಕೇಳಿದರೆ, ಆ ಕೆಲಸವನ್ನು ನಾನು ಮಾಡಿಕೊಟ್ಟಾಗ ಅದಕ್ಕೆ ಜನರು ಬೆನ್ನು ತಟ್ಟುತ್ತಾರೆ. ಇದರಲ್ಲಿ ನಮಗೆ ಕ್ರೆಡಿಟ್ ಏನು ಇಲ್ಲ. ಜನ ಕೆಲಸ ಮಾಡಿಕೊಡಿ ಎಂದರೆ, ನನ್ನ ಕೈಲಾದರೆ ಮಾಡಿಕೊಡುತ್ತೇನೆ. ನಾವಿರುವುದೇ ಜನರ ಕೆಲಸ ಮಾಡಲು ಎಂದರು.

ಓದಿ: ಮೇಕೆದಾಟು ಅಣೆಕಟ್ಟು ಕಟ್ಟುವುದಕ್ಕೆ ವಿರೋಧವಿದೆ: ನಟ ಚೇತನ್

Last Updated : Mar 9, 2022, 5:55 PM IST
ETV Bharat Logo

Copyright © 2024 Ushodaya Enterprises Pvt. Ltd., All Rights Reserved.