ETV Bharat / city

ಮೈಸೂರಿನಲ್ಲಿ ಡೆತ್ ರೇಟ್ ಆಡಿಟಿಂಗ್ ಮಾಡಿಸುತ್ತೇನೆ: ಹೆಚ್.ವಿ.ರಾಜೀವ್​

author img

By

Published : Jun 3, 2021, 3:29 PM IST

ಸಂಸದ ಪ್ರತಾಪ್​ ಸಿಂಹ ಅವರು ಕೂಡ ಡೇತ್​ರೇಟ್ ಬಗ್ಗೆ ಅನುಮಾನ ವ್ಯಕ್ತಪಡಿಸಿದ್ದಾರೆ. ಈ ಹಿನ್ನೆಲೆ ಕೊರೊನಾ ಸೋಂಕಿತರ ಸಾವಿನ ಬಗ್ಗೆ ಶೀಘ್ರದಲ್ಲೇ ಡೆತ್ ಆಡಿಟಿಂಗ್ ಮಾಡಿಸುತ್ತೇನೆ ಎಂದು ಮುಡಾ ಅಧ್ಯಕ್ಷ ಹೆಚ್.ವಿ.ರಾಜೀವ್ ತಿಳಿಸಿದ್ದಾರೆ.

 i conduct Death Rate Auditing in Mysore: HV Rajeev
i conduct Death Rate Auditing in Mysore: HV Rajeev

ಮೈಸೂರು: ಮೈಸೂರಿನಲ್ಲಿ ಕೊರೊನಾ ಸೋಂಕಿತರ ಸಾವಿನ ಬಗ್ಗೆ ಶೀಘ್ರದಲ್ಲೇ ಡೆತ್ ಆಡಿಟಿಂಗ್ ಮಾಡಿಸಿ, ಸಾರ್ವಜನಿಕರಿಗೆ ನಿಜವಾದ ಅಂಕಿ - ಅಂಶ ಬಿಡುಗಡೆ ಮಾಡುತ್ತೇನೆ ಎಂದು ಕೊರೊನಾ ಟಾಸ್ಕ್ ಫೋರ್ಸ್​ ಸಮಿತಿ ಸದಸ್ಯ, ಮುಡಾ ಅಧ್ಯಕ್ಷ ಹೆಚ್.ವಿ.ರಾಜೀವ್ ಹೇಳಿದ್ದಾರೆ.

ಮುಡಾ ಸಭಾಂಗಣದಲ್ಲಿ ಸುದ್ದಿಗೋಷ್ಠಿಯನ್ನುದ್ದೇಶಿಸಿ ಮಾತನಾಡಿದ ಅವರು, ಸಂಸದ ಪ್ರತಾಪ್​ ಸಿಂಹ ಅವರು ಕೂಡ ಡೇತ್​ರೇಟ್ ಬಗ್ಗೆ ಅನುಮಾನ ವ್ಯಕ್ತಪಡಿಸಿದ್ದಾರೆ. ನಿತ್ಯ ಮಾಧ್ಯಮಗಳಲ್ಲಿ ಜನ ಪ್ರತಿನಿಧಿಗಳಲ್ಲಿ ಡೇತ್ ರೇಟ್ ಬಗ್ಗೆ ಅನುಮಾನ ಮೂಡುತ್ತಿದೆ. ಈ ಸಂಬಂಧ ಜಿಲ್ಲಾ ಉಸ್ತುವಾರಿ ಸಚಿವ ಜೊತೆ ಚರ್ಚೆ ಮಾಡ್ತಿನಿ ಎಂದರು.

ಪಿಪಿಇ ಕಿಟ್​ಗಳನ್ನು ಬೆಳವತ್ತ ಗ್ರಾಮದ ನಾಲೆ ಬಳಿ ಬಿಸಾಡಿ ಹೋಗಿರುವ ಬಗ್ಗೆ ಅಧಿಕಾರಿಗಳ ಜೊತೆ ಚರ್ಚೆ ಮಾಡುತ್ತೇನೆ, ಕೊರೊನಾ ಸೋಂಕಿತರ ಹಾಗೂ ಆಸ್ಪತ್ರೆಯ ತ್ಯಾಜ್ಯಗಳನ್ನ ಎಲ್ಲೆಂದರಲ್ಲಿ ಬಿಸಾಡದಂತೆ ಕ್ರಮ ವಹಿಸಲು ಅಧಿಕಾರಿಗಳಿಗೆ ಸೂಚನೆ ನೀಡುತ್ತೇನೆ ಎಂದು ಹೇಳಿದರು.

ಮೈಸೂರು: ಮೈಸೂರಿನಲ್ಲಿ ಕೊರೊನಾ ಸೋಂಕಿತರ ಸಾವಿನ ಬಗ್ಗೆ ಶೀಘ್ರದಲ್ಲೇ ಡೆತ್ ಆಡಿಟಿಂಗ್ ಮಾಡಿಸಿ, ಸಾರ್ವಜನಿಕರಿಗೆ ನಿಜವಾದ ಅಂಕಿ - ಅಂಶ ಬಿಡುಗಡೆ ಮಾಡುತ್ತೇನೆ ಎಂದು ಕೊರೊನಾ ಟಾಸ್ಕ್ ಫೋರ್ಸ್​ ಸಮಿತಿ ಸದಸ್ಯ, ಮುಡಾ ಅಧ್ಯಕ್ಷ ಹೆಚ್.ವಿ.ರಾಜೀವ್ ಹೇಳಿದ್ದಾರೆ.

ಮುಡಾ ಸಭಾಂಗಣದಲ್ಲಿ ಸುದ್ದಿಗೋಷ್ಠಿಯನ್ನುದ್ದೇಶಿಸಿ ಮಾತನಾಡಿದ ಅವರು, ಸಂಸದ ಪ್ರತಾಪ್​ ಸಿಂಹ ಅವರು ಕೂಡ ಡೇತ್​ರೇಟ್ ಬಗ್ಗೆ ಅನುಮಾನ ವ್ಯಕ್ತಪಡಿಸಿದ್ದಾರೆ. ನಿತ್ಯ ಮಾಧ್ಯಮಗಳಲ್ಲಿ ಜನ ಪ್ರತಿನಿಧಿಗಳಲ್ಲಿ ಡೇತ್ ರೇಟ್ ಬಗ್ಗೆ ಅನುಮಾನ ಮೂಡುತ್ತಿದೆ. ಈ ಸಂಬಂಧ ಜಿಲ್ಲಾ ಉಸ್ತುವಾರಿ ಸಚಿವ ಜೊತೆ ಚರ್ಚೆ ಮಾಡ್ತಿನಿ ಎಂದರು.

ಪಿಪಿಇ ಕಿಟ್​ಗಳನ್ನು ಬೆಳವತ್ತ ಗ್ರಾಮದ ನಾಲೆ ಬಳಿ ಬಿಸಾಡಿ ಹೋಗಿರುವ ಬಗ್ಗೆ ಅಧಿಕಾರಿಗಳ ಜೊತೆ ಚರ್ಚೆ ಮಾಡುತ್ತೇನೆ, ಕೊರೊನಾ ಸೋಂಕಿತರ ಹಾಗೂ ಆಸ್ಪತ್ರೆಯ ತ್ಯಾಜ್ಯಗಳನ್ನ ಎಲ್ಲೆಂದರಲ್ಲಿ ಬಿಸಾಡದಂತೆ ಕ್ರಮ ವಹಿಸಲು ಅಧಿಕಾರಿಗಳಿಗೆ ಸೂಚನೆ ನೀಡುತ್ತೇನೆ ಎಂದು ಹೇಳಿದರು.

ETV Bharat Logo

Copyright © 2024 Ushodaya Enterprises Pvt. Ltd., All Rights Reserved.