ETV Bharat / city

ಭಾರಿ ಮಳೆಗೆ 7ಎಕರೆಯಲ್ಲಿ ಬೆಳೆದ ಬಾಳೆ ಬೆಳೆ ನಾಶ, ರೈತರು ಕಂಗಾಲು

author img

By

Published : Apr 16, 2022, 9:44 AM IST

ಭಾರಿ ಮಳೆಗೆ ಸುಮಾರು 7 ಎಕರೆ ಬಾಳೆ ಬೆಳೆ ನಾಶವಾದ ಘಟನೆ ಮೈಸೂರಿನ ಹೆಚ್.ಡಿ ಕೋಟೆ ತಾಲೂಕಿನ ಹೈರಿಗೆ ಗ್ರಾಮದಲ್ಲಿ ನಡೆದಿದೆ. ರೈತರಾದ ಮರೀಗೌಡ ಮತ್ತು ಮಾದೇ ಗೌಡ ಅವರು ತಮ್ಮ ತೋಟದಲ್ಲಿ ಬೆಳೆದ ಬಾಳೆ ಬೆಳೆ ಮಳೆಗೆ ಆಹುತಿಯಾಗಿದೆ. ಈ ಕುರಿತು ನಷ್ಟ ಪರಿಹಾರ ನೀಡುವಂತೆ ತೋಟಗಾರಿಕೆ ಇಲಾಖೆಗೆ ಒತ್ತಾಯಿಸಿದ್ದಾರೆ.

damaged-banana-crop-of-7-acres-due-to-heavy-rainfall
ಭಾರೀ ಮಳೆಗೆ 7ಎಕರೆಯಲ್ಲಿ ಬೆಳೆದ ಬಾಳೆ ಬೆಳೆ ನಾಶ, ರೈತರು ಕಂಗಾಲು

ಮೈಸೂರು: ಭಾರಿ ಗಾಳಿ ಮಳೆಗೆ 7 ಎಕರೆಯಲ್ಲಿ ಬೆಳೆದ ಬಾಳೆ ಬೆಳೆ ಸಂಪೂರ್ಣವಾಗಿ ನಾಶವಾಗಿರುವ ಘಟನೆ ಎಚ್.ಡಿ.ಕೋಟೆ ತಾಲೂಕಿನ ಹೈರಿಗೆ ಗ್ರಾಮದಲ್ಲಿ ನಡೆದಿದೆ. ಇಲ್ಲಿನ ಮರೀಗೌಡ ಮತ್ತು ಮಾದೇಗೌಡ ಎಂಬುವವರಿಗೆ ಸೇರಿದ ಬಾಳೆ ಬೆಳೆ‌ ಮಳೆ-ಗಾಳಿ‌ಗೆ ನಾಶವಾಗಿದೆ ಎಂದು ತಿಳಿದುಬಂದಿದೆ.

ಶುಕ್ರವಾರ ರಾತ್ರಿ ಸುರಿದ ಭಾರಿ ಮಳೆಯಿಂದ, ಇಡೀ ವರ್ಷ ಶ್ರಮವಹಿಸಿ ಬೆಳೆದು ಗೊನೆ ಬಿಟ್ಟಿದ್ದ ಬಾಳೆ ಬೆಳೆ, ಸಂಪೂರ್ಣವಾಗಿ ನೆಲಕಚ್ಚಿದೆ. ಹೈರಿಗೆ ಗ್ರಾಮದ ಹೊರವಲಯದಲ್ಲಿ ಸುಮಾರು 7 ಎಕರೆಯಲ್ಲಿ ಬೆಳೆದಿದ್ದ ಬಾಳೆ ನಾಶವಾಗಿದ್ದು, ರೈತರಾದ ಮರೀಗೌಡ ಮತ್ತು ಮಾದೇಗೌಡ ಕಂಗಲಾಗಿದ್ದಾರೆ. ನಷ್ಟ ಪರಿಹಾರ ನೀಡುವಂತೆ ರೈತರು‌ ತೋಟಗಾರಿಕೆ ಇಲಾಖೆಗೆ ಒತ್ತಾಯಿಸಿದ್ದಾರೆ.

ಮೈಸೂರು: ಭಾರಿ ಗಾಳಿ ಮಳೆಗೆ 7 ಎಕರೆಯಲ್ಲಿ ಬೆಳೆದ ಬಾಳೆ ಬೆಳೆ ಸಂಪೂರ್ಣವಾಗಿ ನಾಶವಾಗಿರುವ ಘಟನೆ ಎಚ್.ಡಿ.ಕೋಟೆ ತಾಲೂಕಿನ ಹೈರಿಗೆ ಗ್ರಾಮದಲ್ಲಿ ನಡೆದಿದೆ. ಇಲ್ಲಿನ ಮರೀಗೌಡ ಮತ್ತು ಮಾದೇಗೌಡ ಎಂಬುವವರಿಗೆ ಸೇರಿದ ಬಾಳೆ ಬೆಳೆ‌ ಮಳೆ-ಗಾಳಿ‌ಗೆ ನಾಶವಾಗಿದೆ ಎಂದು ತಿಳಿದುಬಂದಿದೆ.

ಶುಕ್ರವಾರ ರಾತ್ರಿ ಸುರಿದ ಭಾರಿ ಮಳೆಯಿಂದ, ಇಡೀ ವರ್ಷ ಶ್ರಮವಹಿಸಿ ಬೆಳೆದು ಗೊನೆ ಬಿಟ್ಟಿದ್ದ ಬಾಳೆ ಬೆಳೆ, ಸಂಪೂರ್ಣವಾಗಿ ನೆಲಕಚ್ಚಿದೆ. ಹೈರಿಗೆ ಗ್ರಾಮದ ಹೊರವಲಯದಲ್ಲಿ ಸುಮಾರು 7 ಎಕರೆಯಲ್ಲಿ ಬೆಳೆದಿದ್ದ ಬಾಳೆ ನಾಶವಾಗಿದ್ದು, ರೈತರಾದ ಮರೀಗೌಡ ಮತ್ತು ಮಾದೇಗೌಡ ಕಂಗಲಾಗಿದ್ದಾರೆ. ನಷ್ಟ ಪರಿಹಾರ ನೀಡುವಂತೆ ರೈತರು‌ ತೋಟಗಾರಿಕೆ ಇಲಾಖೆಗೆ ಒತ್ತಾಯಿಸಿದ್ದಾರೆ.

ಓದಿ : ಮೈಸೂರು: ಮಳೆ-ಗಾಳಿಗೆ ಕೊಂಬೆ ಮುರಿದು ಬಿದ್ದು ಹೋರಿ ಸಾವು, ಅಪಾಯದಿಂದ ರೈತ ಪಾರು

ETV Bharat Logo

Copyright © 2024 Ushodaya Enterprises Pvt. Ltd., All Rights Reserved.