ETV Bharat / city

ಚಿಕಿತ್ಸೆಗೆ ಬೇಕಿದೆ ಆರ್ಥಿಕ ನೆರವು:ದಾನಿಗಳ ಸಹಾಯದ ನಿರೀಕ್ಷೆಯಲ್ಲಿ ಯಕ್ಷಗುರು ಗಣೇಶ ಕೊಲೆಕಾಡಿ

author img

By

Published : Aug 4, 2021, 8:05 PM IST

Updated : Aug 4, 2021, 9:11 PM IST

'ಮುಂಬೈಗೆ ಹೋಗುವ ಸಂದರ್ಭ ರಿಕ್ಷಾದಲ್ಲಿ ಪ್ರಯಾಣಿಸುತ್ತಿದ್ದಾಗ ಯಾರೋ ನಾಲ್ಕೈದು ಮಂದಿ ದುಷ್ಕರ್ಮಿಗಳು ತನ್ನ ಮೇಲೆ ದಾಳಿ ನಡೆಸಿ, ಇರುವುದನ್ನೆಲ್ಲ ದೋಚಿದ್ದರು. ಅಷ್ಟೇ ಅಲ್ಲದೆ ಎರಡು ಕೈಗಳು, ಎರಡೂ ಕಾಲುಗಳು ನಿಷ್ಕ್ರಿಯ ಆಗುವಂತೆ ಹೊಡೆದಿದ್ದಾರೆ. ಅಲ್ಲದೇ ಅದೇ ಸಮಯ ತಲೆಯ ಹಿಂಭಾಗಕ್ಕೂ ಬಿದ್ದ ಏಟಿನಿಂದ ಮತ್ತಷ್ಟು ಘಾಸಿಯಾಗಿ ಈ ಸ್ಥಿತಿಗೆ ತಲುಪಿದ್ದೇನೆ' ಎನ್ನುತ್ತಾರೆ‌ ಗಣೇಶ ಕೊಲೆಕಾಡಿ.

Yakshagana artist Ganesh Kolekadi
ಯಕ್ಷಗಾನ ಕಲಾವಿದ ಗಣೇಶ ಕೊಲೆಕಾಡಿ

ಮಂಗಳೂರು: ವಿದ್ಯಾಪೇಕ್ಷೆಯಿಂದ ಮನೆಗೆ ಬಂದ ನೂರಾರು ವಿದ್ಯಾರ್ಥಿಗಳಿಗೆ ಮಲಗಿದಲ್ಲಿಂದಲೇ ಉಚಿತವಾಗಿ ಪಾಠ ಮಾಡಿದ್ದ ಮಹಾನ್ ಯಕ್ಷಗುರು, ಛಾಂದಸ ಪ್ರತಿಭೆ ಗಣೇಶ ಕೊಲೆಕಾಡಿ. ಸದ್ಯ ಅವರ ದೇಹ ಸ್ಥಿತಿಯು 3-4 ತಿಂಗಳಿನಿಂದ ಮತ್ತಷ್ಟು ಕ್ಷೀಣಿಸಿದ್ದು, ಹಾಸಿಗೆ ಬಿಟ್ಟು ಏಳಲಾರದ ಸ್ಥಿತಿಗೆ ತಲುಪಿದ್ದಾರೆ‌. ಅವರ ವೈದ್ಯಕೀಯ ವೆಚ್ಚ, ಮನೆಯ ಖರ್ಚು ಸೇರಿ ತಿಂಗಳಿಗೆ 40 ಸಾವಿರ ರೂ. ಅಗತ್ಯವಿದ್ದು, ಯಾವುದೇ ಆದಾಯ ಮೂಲ ಇಲ್ಲದಿರುವುದರಿಂದ ದಾನಿಗಳ ನೆರವಿನ‌ ನಿರೀಕ್ಷೆಯಲ್ಲಿದ್ದಾರೆ.

ದಾನಿಗಳ ಸಹಾಯದ ನಿರೀಕ್ಷೆಯಲ್ಲಿ ಯಕ್ಷಗುರು ಗಣೇಶ ಕೊಲೆಕಾಡಿ

18 ವರ್ಷಗಳ ಹಿಂದೆ ದುಷ್ಕರ್ಮಿಗಳಿಂದ ಹಲ್ಲೆ:

ಯಕ್ಷಗಾನ ಕ್ಷೇತ್ರದಲ್ಲಿಯೇ ಪ್ರಾಜ್ಞಗುರುವೆಂದು, ಕ್ಲಿಷ್ಟ, ಸಂಕೀರ್ಣ ಛಂದಸ್ಸಿನಲ್ಲಿಯೂ ಲೀಲಾಜಾಲವಾಗಿ ಪದ್ಯರಚನೆ ಮಾಡುವವರೆಂದು ವಿದ್ವಜ್ಜನರಿಂದಲೇ ಕೊಂಡಾಡಲ್ಪಟ್ಟ ಗುರು ಗಣೇಶ ಕೊಲೆಕಾಡಿಯವರು, 18 ವರ್ಷಗಳ ಹಿಂದೆ ಕಾರ್ಯ ನಿಮಿತ್ತ ಮುಂಬೈಗೆ ಹೋಗಿದ್ದ ಸಂದರ್ಭದಲ್ಲಿ ದುಷ್ಕರ್ಮಿಗಳು ದಾಳಿಗೊಳಗಾಗಿ ಸಂಪೂರ್ಣ ಹಾಸಿಗೆ ಹಿಡಿಯುವಂತಾಗಿದ್ದರು.

ತಲೆಯ ಹಿಂಭಾಗಕ್ಕೂ ಬಿದ್ದ ಏಟಿನಿಂದ ಈ ಸ್ಥಿತಿ:

ಅವರೇ ಹೇಳುವ ಪ್ರಕಾರ 'ಮುಂಬೈಗೆ ಹೋಗುವ ಸಂದರ್ಭ ರಿಕ್ಷಾದಲ್ಲಿ ಪ್ರಯಾಣಿಸುತ್ತಿದ್ದಾಗ ಯಾರೋ ನಾಲ್ಕೈದು ಮಂದಿ ದುಷ್ಕರ್ಮಿಗಳು ತನ್ನ ಮೇಲೆ ದಾಳಿ ನಡೆಸಿ, ಇರುವುದನ್ನೆಲ್ಲ ದೋಚಿದ್ದರು. ಅಷ್ಟೇ ಅಲ್ಲದೆ ಎರಡು ಕೈಗಳು, ಎರಡೂ ಕಾಲುಗಳು ನಿಷ್ಕ್ರಿಯ ಆಗುವಂತೆ ಹೊಡೆದಿದ್ದಾರೆ. ಅಲ್ಲದೆ ಅದೇ ಸಮಯ ತಲೆಯ ಹಿಂಭಾಗಕ್ಕೂ ಬಿದ್ದ ಏಟಿನಿಂದ ಮತ್ತಷ್ಟು ಘಾಸಿಯಾಗಿ ಈ ಸ್ಥಿತಿಗೆ ತಲುಪಿದ್ದೇನೆ' ಎನ್ನುತ್ತಾರೆ‌.

ಈವರೆಗೆ 70 ಲಕ್ಷ ರೂ. ಖರ್ಚು:

ಆ ಕಾಲಕ್ಕೆ ಆಸ್ಪತ್ರೆಯಲ್ಲಿ ವೈದ್ಯರ ನಿರ್ಲಕ್ಷ್ಯದಿಂದ ಗುರು ಗಣೇಶ ಕೊಲೆಕಾಡಿಯವರು ಸಂಪೂರ್ಣ ಹಾಸಿಗೆ ಹಿಡಿಯುವಂತಾದದ್ದು ಮಾತ್ರ ವಿಪರ್ಯಾಸ. ಅಲ್ಲಿಂದ ಇಲ್ಲಿಯವರೆಗೆ ಅವರಿಗೆ ಆಸ್ಪತ್ರೆ ವೆಚ್ಚ, ವೈದ್ಯಕೀಯ ಸೌಲಭ್ಯ ಸೇರಿ ಸುಮಾರು 70 ಲಕ್ಷ ರೂ. ಖರ್ಚಾಗಿದೆ. ಇದೆಲ್ಲವನ್ನು ದಾನಿಗಳು, ಅಭಿಮಾನಿಗಳು, ಶಿಷ್ಯರ ನೆರವಿನಿಂದ ಪೂರೈಸಲಾಗಿದೆ.

ದಾನಿಗಳ ಸಹಾಯದ ನಿರೀಕ್ಷೆಯಲ್ಲಿ ಯಕ್ಷಗುರು ಗಣೇಶ ಕೊಲೆಕಾಡಿ

ಸುಬ್ರಹ್ಮಣ್ಯ ದೇಗುಲದ ಆಡಳಿತ ಮಂಡಳಿಯಿಂದ ಆರ್ಥಿಕ ನೆರವು

ದೈಹಿಕವಾಗಿ ನಡೆದ ಆಘಾತದಿಂದ ಯಾವೊಂದು ಕೆಲಸ ಮಾಡಲಾಗದ ಅವರು ಆದಾಯದ ಮೂಲವಿಲ್ಲದೇ ತಾಯಿಯೊಂದಿಗೆ ಶೋಚನೀಯವಾಗಿ ಜೀವನ ನಡೆಸುತ್ತಿದ್ದಾರೆ. ಕೆಲ ವರ್ಷಗಳ ಹಿಂದೆ ಉಡುಪಿ ‌ಯಕ್ಷಗಾನ ಕಲಾರಂಗವು ಉಳಿದುಕೊಳ್ಳಲು ಮನೆಯೊಂದನ್ನು ಕಟ್ಟಿಕೊಟ್ಟಿದೆ. ಇವರ ಪರಿಸ್ಥಿತಿ ಎಷ್ಟು ಹದಗೆಟ್ಟಿದೆ ಎಂದರೆ ಒಂದು ಹೊತ್ತಿನ ಅನ್ನವನ್ನೂ ಬೇಯಿಸಲು ಅಸಾಧ್ಯವಾಗಿದ್ದು, ಪಾವಂಜೆಯ ಜ್ಞಾನಶಕ್ತಿ ಶ್ರೀ ಸುಬ್ರಹ್ಮಣ್ಯ ದೇಗುಲದ ಆಡಳಿತ ಮಂಡಳಿ ಊಟಕ್ಕಾಗಿ ಪ್ರತಿ ತಿಂಗಳು ಆರ್ಥಿಕ ನೆರವು ನೀಡುತ್ತಿದೆ.

Yakshagana artist Ganesh Kolekadi
ತಾಯಿಯೊಂದಿಗೆ ಗಣೇಶ ಕೊಲೆಕಾಡಿ

ಮಲಗಿರುವಲ್ಲಿಂದಲೇ ಉಚಿತ ಪಾಠ:

ಇಷ್ಟೆಲ್ಲ ಕಷ್ಟಗಳಿದ್ದರೂ 18 ವರ್ಷಗಳಿಂದ ಮಲಗಿರುವಲ್ಲಿಂದಲೇ ನೂರಾರು ವಿದ್ಯಾರ್ಥಿಗಳಿಗೆ ಉಚಿತವಾಗಿ ಯಕ್ಷಗಾನ ಭಾಗವತಿಕೆ, ಛಂದಸ್ಸು, ಮದ್ದಳೆ ಪಾಠ ಮಾಡಿದ್ದಾರೆ. ಇವರಿಂದ ಕಲಿತ ಎಷ್ಟೋ ವಿದ್ಯಾರ್ಥಿಗಳು ಇಂದು ಯಕ್ಷಗಾನ ಕ್ಷೇತ್ರದಲ್ಲಿ ಬಹಳಷ್ಟು ಹೆಸರುವಾಸಿ ಕಲಾವಿದರಾಗಿದ್ದಾರೆ. ಈ ನಡುವೆ ಅವರ ವಯೋವೃದ್ಧೆ ತಾಯಿಯ ಆರೋಗ್ಯವೂ ಸಂಪೂರ್ಣ ಹದಗೆಟ್ಟಿದೆ.

ಸಹಾಯಕ್ಕಾಗಿ ಮನವಿ:

ಮಾನಸಿಕವಾಗಿ ಜರ್ಜರಿತರಾದ ಗುರು ಗಣೇಶ ಕೊಲೆಕಾಡಿಯವರ ದೇಹಸ್ಥಿತಿ ಈ ನಾಲ್ಕು ತಿಂಗಳಿಂದೀಚೆಗೆ ಮತ್ತಷ್ಟು ದುರ್ಬಲವಾಗಿದ್ದು, ಏನೂ ಮಾಡಲಾಗದ ಹಂತಕ್ಕೆ ತಲುಪಿದ್ದಾರೆ. ಇದೀಗ ಅವರಿಗೆ ತಿಂಗಳಿಗೆ ವೈದ್ಯಕೀಯ ವೆಚ್ಚವೇ ಹೊರೆಯಾಗಿದ್ದು, ಅದನ್ನು ನಿಭಾಯಿಸುವುದು ಕಷ್ಟವಾಗಿದೆ. ಸಾವಿರಾರು ಮಕ್ಕಳಿಗೆ ಸ್ವಾಭಿಮಾನದಿಂದ ಉಚಿತವಾಗಿ ಪಾಠ ಮಾಡಿದ ಗುರು ಇಂದು ಅಸಹಾಯಕರಾಗಿ ಕ್ಷೀಣ ಸ್ವರದಲ್ಲಿ ಸಹಾಯಕ್ಕಾಗಿ ಯಾಚನೆ ಮಾಡುತ್ತಿದ್ದಾರೆ.

ಜನಪ್ರತಿನಿಧಿಗಳು ಇತ್ತ ಕಡೆಗೆ ಗಮನ ಹರಿಸಿ ಗುರು ಗಣೇಶ ಕೊಲೆಕಾಡಿಯವರ ತಿಂಗಳ ವೈದ್ಯಕೀಯ ವೆಚ್ಚವನ್ನು ಭರಿಸುವ ವ್ಯವಸ್ಥೆ ಮಾಡಿದ್ದಲ್ಲಿ ಅವರ ದೊಡ್ಡ ಹೊರೆಯೊಂದು ಇಳಿದಂತಾಗುವುದು. ಸ್ಥಳೀಯ ಶಾಸಕರು, ಸಚಿವರು, ಸಂಸದರು ಈ ಕಲಾ ಗುರುವಿನ ನೆರವಿಗೆ ಧಾವಿಸಬೇಕಾದ ಅನಿವಾರ್ಯತೆ ಇದೆ. ಇದರೊಂದಿಗೆ ದಾನಿಗಳ ನೆರವಿನ ತುರ್ತು ಅಗತ್ಯವಿದೆ. ಸಾಕಷ್ಟು ಮಕ್ಕಳಿಗೆ ಪಾಠ ಮಾಡಿರುವ ಗುರುವಿನ ಬದುಕಿಗೆ ಆಸರೆಯಾಗುವ ದೊಡ್ಡ ಮನಸ್ಸು ದಾನಿಗಳ ಮೂಲಕ ಆಗಬೇಕಿದೆ ಎಂಬುದು ಈಟಿವಿ ಭಾರತದ ಆಶಯ.

ಗಣೇಶ ಕೊಲೆಕಾಡಿ:

Google Pay No: 9482130381

Bank Details:

State Bank Of India, Karnad, Mulky

A/c Number: 20303905203
IFSC: SBI0007904

ಮಂಗಳೂರು: ವಿದ್ಯಾಪೇಕ್ಷೆಯಿಂದ ಮನೆಗೆ ಬಂದ ನೂರಾರು ವಿದ್ಯಾರ್ಥಿಗಳಿಗೆ ಮಲಗಿದಲ್ಲಿಂದಲೇ ಉಚಿತವಾಗಿ ಪಾಠ ಮಾಡಿದ್ದ ಮಹಾನ್ ಯಕ್ಷಗುರು, ಛಾಂದಸ ಪ್ರತಿಭೆ ಗಣೇಶ ಕೊಲೆಕಾಡಿ. ಸದ್ಯ ಅವರ ದೇಹ ಸ್ಥಿತಿಯು 3-4 ತಿಂಗಳಿನಿಂದ ಮತ್ತಷ್ಟು ಕ್ಷೀಣಿಸಿದ್ದು, ಹಾಸಿಗೆ ಬಿಟ್ಟು ಏಳಲಾರದ ಸ್ಥಿತಿಗೆ ತಲುಪಿದ್ದಾರೆ‌. ಅವರ ವೈದ್ಯಕೀಯ ವೆಚ್ಚ, ಮನೆಯ ಖರ್ಚು ಸೇರಿ ತಿಂಗಳಿಗೆ 40 ಸಾವಿರ ರೂ. ಅಗತ್ಯವಿದ್ದು, ಯಾವುದೇ ಆದಾಯ ಮೂಲ ಇಲ್ಲದಿರುವುದರಿಂದ ದಾನಿಗಳ ನೆರವಿನ‌ ನಿರೀಕ್ಷೆಯಲ್ಲಿದ್ದಾರೆ.

ದಾನಿಗಳ ಸಹಾಯದ ನಿರೀಕ್ಷೆಯಲ್ಲಿ ಯಕ್ಷಗುರು ಗಣೇಶ ಕೊಲೆಕಾಡಿ

18 ವರ್ಷಗಳ ಹಿಂದೆ ದುಷ್ಕರ್ಮಿಗಳಿಂದ ಹಲ್ಲೆ:

ಯಕ್ಷಗಾನ ಕ್ಷೇತ್ರದಲ್ಲಿಯೇ ಪ್ರಾಜ್ಞಗುರುವೆಂದು, ಕ್ಲಿಷ್ಟ, ಸಂಕೀರ್ಣ ಛಂದಸ್ಸಿನಲ್ಲಿಯೂ ಲೀಲಾಜಾಲವಾಗಿ ಪದ್ಯರಚನೆ ಮಾಡುವವರೆಂದು ವಿದ್ವಜ್ಜನರಿಂದಲೇ ಕೊಂಡಾಡಲ್ಪಟ್ಟ ಗುರು ಗಣೇಶ ಕೊಲೆಕಾಡಿಯವರು, 18 ವರ್ಷಗಳ ಹಿಂದೆ ಕಾರ್ಯ ನಿಮಿತ್ತ ಮುಂಬೈಗೆ ಹೋಗಿದ್ದ ಸಂದರ್ಭದಲ್ಲಿ ದುಷ್ಕರ್ಮಿಗಳು ದಾಳಿಗೊಳಗಾಗಿ ಸಂಪೂರ್ಣ ಹಾಸಿಗೆ ಹಿಡಿಯುವಂತಾಗಿದ್ದರು.

ತಲೆಯ ಹಿಂಭಾಗಕ್ಕೂ ಬಿದ್ದ ಏಟಿನಿಂದ ಈ ಸ್ಥಿತಿ:

ಅವರೇ ಹೇಳುವ ಪ್ರಕಾರ 'ಮುಂಬೈಗೆ ಹೋಗುವ ಸಂದರ್ಭ ರಿಕ್ಷಾದಲ್ಲಿ ಪ್ರಯಾಣಿಸುತ್ತಿದ್ದಾಗ ಯಾರೋ ನಾಲ್ಕೈದು ಮಂದಿ ದುಷ್ಕರ್ಮಿಗಳು ತನ್ನ ಮೇಲೆ ದಾಳಿ ನಡೆಸಿ, ಇರುವುದನ್ನೆಲ್ಲ ದೋಚಿದ್ದರು. ಅಷ್ಟೇ ಅಲ್ಲದೆ ಎರಡು ಕೈಗಳು, ಎರಡೂ ಕಾಲುಗಳು ನಿಷ್ಕ್ರಿಯ ಆಗುವಂತೆ ಹೊಡೆದಿದ್ದಾರೆ. ಅಲ್ಲದೆ ಅದೇ ಸಮಯ ತಲೆಯ ಹಿಂಭಾಗಕ್ಕೂ ಬಿದ್ದ ಏಟಿನಿಂದ ಮತ್ತಷ್ಟು ಘಾಸಿಯಾಗಿ ಈ ಸ್ಥಿತಿಗೆ ತಲುಪಿದ್ದೇನೆ' ಎನ್ನುತ್ತಾರೆ‌.

ಈವರೆಗೆ 70 ಲಕ್ಷ ರೂ. ಖರ್ಚು:

ಆ ಕಾಲಕ್ಕೆ ಆಸ್ಪತ್ರೆಯಲ್ಲಿ ವೈದ್ಯರ ನಿರ್ಲಕ್ಷ್ಯದಿಂದ ಗುರು ಗಣೇಶ ಕೊಲೆಕಾಡಿಯವರು ಸಂಪೂರ್ಣ ಹಾಸಿಗೆ ಹಿಡಿಯುವಂತಾದದ್ದು ಮಾತ್ರ ವಿಪರ್ಯಾಸ. ಅಲ್ಲಿಂದ ಇಲ್ಲಿಯವರೆಗೆ ಅವರಿಗೆ ಆಸ್ಪತ್ರೆ ವೆಚ್ಚ, ವೈದ್ಯಕೀಯ ಸೌಲಭ್ಯ ಸೇರಿ ಸುಮಾರು 70 ಲಕ್ಷ ರೂ. ಖರ್ಚಾಗಿದೆ. ಇದೆಲ್ಲವನ್ನು ದಾನಿಗಳು, ಅಭಿಮಾನಿಗಳು, ಶಿಷ್ಯರ ನೆರವಿನಿಂದ ಪೂರೈಸಲಾಗಿದೆ.

ದಾನಿಗಳ ಸಹಾಯದ ನಿರೀಕ್ಷೆಯಲ್ಲಿ ಯಕ್ಷಗುರು ಗಣೇಶ ಕೊಲೆಕಾಡಿ

ಸುಬ್ರಹ್ಮಣ್ಯ ದೇಗುಲದ ಆಡಳಿತ ಮಂಡಳಿಯಿಂದ ಆರ್ಥಿಕ ನೆರವು

ದೈಹಿಕವಾಗಿ ನಡೆದ ಆಘಾತದಿಂದ ಯಾವೊಂದು ಕೆಲಸ ಮಾಡಲಾಗದ ಅವರು ಆದಾಯದ ಮೂಲವಿಲ್ಲದೇ ತಾಯಿಯೊಂದಿಗೆ ಶೋಚನೀಯವಾಗಿ ಜೀವನ ನಡೆಸುತ್ತಿದ್ದಾರೆ. ಕೆಲ ವರ್ಷಗಳ ಹಿಂದೆ ಉಡುಪಿ ‌ಯಕ್ಷಗಾನ ಕಲಾರಂಗವು ಉಳಿದುಕೊಳ್ಳಲು ಮನೆಯೊಂದನ್ನು ಕಟ್ಟಿಕೊಟ್ಟಿದೆ. ಇವರ ಪರಿಸ್ಥಿತಿ ಎಷ್ಟು ಹದಗೆಟ್ಟಿದೆ ಎಂದರೆ ಒಂದು ಹೊತ್ತಿನ ಅನ್ನವನ್ನೂ ಬೇಯಿಸಲು ಅಸಾಧ್ಯವಾಗಿದ್ದು, ಪಾವಂಜೆಯ ಜ್ಞಾನಶಕ್ತಿ ಶ್ರೀ ಸುಬ್ರಹ್ಮಣ್ಯ ದೇಗುಲದ ಆಡಳಿತ ಮಂಡಳಿ ಊಟಕ್ಕಾಗಿ ಪ್ರತಿ ತಿಂಗಳು ಆರ್ಥಿಕ ನೆರವು ನೀಡುತ್ತಿದೆ.

Yakshagana artist Ganesh Kolekadi
ತಾಯಿಯೊಂದಿಗೆ ಗಣೇಶ ಕೊಲೆಕಾಡಿ

ಮಲಗಿರುವಲ್ಲಿಂದಲೇ ಉಚಿತ ಪಾಠ:

ಇಷ್ಟೆಲ್ಲ ಕಷ್ಟಗಳಿದ್ದರೂ 18 ವರ್ಷಗಳಿಂದ ಮಲಗಿರುವಲ್ಲಿಂದಲೇ ನೂರಾರು ವಿದ್ಯಾರ್ಥಿಗಳಿಗೆ ಉಚಿತವಾಗಿ ಯಕ್ಷಗಾನ ಭಾಗವತಿಕೆ, ಛಂದಸ್ಸು, ಮದ್ದಳೆ ಪಾಠ ಮಾಡಿದ್ದಾರೆ. ಇವರಿಂದ ಕಲಿತ ಎಷ್ಟೋ ವಿದ್ಯಾರ್ಥಿಗಳು ಇಂದು ಯಕ್ಷಗಾನ ಕ್ಷೇತ್ರದಲ್ಲಿ ಬಹಳಷ್ಟು ಹೆಸರುವಾಸಿ ಕಲಾವಿದರಾಗಿದ್ದಾರೆ. ಈ ನಡುವೆ ಅವರ ವಯೋವೃದ್ಧೆ ತಾಯಿಯ ಆರೋಗ್ಯವೂ ಸಂಪೂರ್ಣ ಹದಗೆಟ್ಟಿದೆ.

ಸಹಾಯಕ್ಕಾಗಿ ಮನವಿ:

ಮಾನಸಿಕವಾಗಿ ಜರ್ಜರಿತರಾದ ಗುರು ಗಣೇಶ ಕೊಲೆಕಾಡಿಯವರ ದೇಹಸ್ಥಿತಿ ಈ ನಾಲ್ಕು ತಿಂಗಳಿಂದೀಚೆಗೆ ಮತ್ತಷ್ಟು ದುರ್ಬಲವಾಗಿದ್ದು, ಏನೂ ಮಾಡಲಾಗದ ಹಂತಕ್ಕೆ ತಲುಪಿದ್ದಾರೆ. ಇದೀಗ ಅವರಿಗೆ ತಿಂಗಳಿಗೆ ವೈದ್ಯಕೀಯ ವೆಚ್ಚವೇ ಹೊರೆಯಾಗಿದ್ದು, ಅದನ್ನು ನಿಭಾಯಿಸುವುದು ಕಷ್ಟವಾಗಿದೆ. ಸಾವಿರಾರು ಮಕ್ಕಳಿಗೆ ಸ್ವಾಭಿಮಾನದಿಂದ ಉಚಿತವಾಗಿ ಪಾಠ ಮಾಡಿದ ಗುರು ಇಂದು ಅಸಹಾಯಕರಾಗಿ ಕ್ಷೀಣ ಸ್ವರದಲ್ಲಿ ಸಹಾಯಕ್ಕಾಗಿ ಯಾಚನೆ ಮಾಡುತ್ತಿದ್ದಾರೆ.

ಜನಪ್ರತಿನಿಧಿಗಳು ಇತ್ತ ಕಡೆಗೆ ಗಮನ ಹರಿಸಿ ಗುರು ಗಣೇಶ ಕೊಲೆಕಾಡಿಯವರ ತಿಂಗಳ ವೈದ್ಯಕೀಯ ವೆಚ್ಚವನ್ನು ಭರಿಸುವ ವ್ಯವಸ್ಥೆ ಮಾಡಿದ್ದಲ್ಲಿ ಅವರ ದೊಡ್ಡ ಹೊರೆಯೊಂದು ಇಳಿದಂತಾಗುವುದು. ಸ್ಥಳೀಯ ಶಾಸಕರು, ಸಚಿವರು, ಸಂಸದರು ಈ ಕಲಾ ಗುರುವಿನ ನೆರವಿಗೆ ಧಾವಿಸಬೇಕಾದ ಅನಿವಾರ್ಯತೆ ಇದೆ. ಇದರೊಂದಿಗೆ ದಾನಿಗಳ ನೆರವಿನ ತುರ್ತು ಅಗತ್ಯವಿದೆ. ಸಾಕಷ್ಟು ಮಕ್ಕಳಿಗೆ ಪಾಠ ಮಾಡಿರುವ ಗುರುವಿನ ಬದುಕಿಗೆ ಆಸರೆಯಾಗುವ ದೊಡ್ಡ ಮನಸ್ಸು ದಾನಿಗಳ ಮೂಲಕ ಆಗಬೇಕಿದೆ ಎಂಬುದು ಈಟಿವಿ ಭಾರತದ ಆಶಯ.

ಗಣೇಶ ಕೊಲೆಕಾಡಿ:

Google Pay No: 9482130381

Bank Details:

State Bank Of India, Karnad, Mulky

A/c Number: 20303905203
IFSC: SBI0007904

Last Updated : Aug 4, 2021, 9:11 PM IST
ETV Bharat Logo

Copyright © 2024 Ushodaya Enterprises Pvt. Ltd., All Rights Reserved.