ETV Bharat / city

ಮಂಗಳೂರಿನಲ್ಲಿ ನಾಲ್ವರಿಂದ ರೌಡಿಶೀಟರ್​ ಬರ್ಬರ ಕೊಲೆ

ಮಂಗಳೂರಿನಲ್ಲಿ ರೌಡಿಶೀಟರ್​ ಒಬ್ಬನನ್ನು ನಾಲ್ಕು ಜನರ ಗುಂಪೊಂದು ಅಟ್ಟಾಡಿಸಿಕೊಂಡು ಹೋಗಿ ಬರ್ಬರವಾಗಿ ಕೊಲೆ ಮಾಡಿದ್ದಾರೆ.

author img

By

Published : Apr 28, 2022, 9:40 PM IST

ಬರ್ಬರ ಕೊಲೆ

ಮಂಗಳೂರು: ಮಂಗಳೂರಿನಲ್ಲಿ ರೌಡಿಶೀಟರ್ ಒಬ್ಬ​ನನ್ನು ಹಳೆ ದ್ವೇಷದ ಹಿನ್ನೆಲೆಯಲ್ಲಿ ಅಟ್ಟಾಡಿಸಿ ಹತ್ಯೆ ಮಾಡಿದ ಘಟನೆ ನಡೆದಿದೆ. ಮಂಗಳೂರಿನ ಹೊಯಿಗೆ ಬಜಾರ್​ನ ರಾಹುಲ್(26) ಕೊಲೆಯಾದ ರೌಡಿಶೀಟರ್​. ರಾಹುಲ್ ಪಾಂಡೇಶ್ವರ್​ ವಿರುದ್ಧ ಪೊಲೀಸ್ ಠಾಣೆಯಲ್ಲಿ ರೌಡಿಶೀಟರ್ ಪಟ್ಟಿ ಇದೆ. ಈತನ ವಿರೋಧಿ ತಂಡ ಈ ಕೃತ್ಯವೆಸಗಿದೆ.

ಎಮ್ಮೆಕೆರೆಯಲ್ಲಿ ನಡೆಯುತ್ತಿದ್ದ ಕೋಳಿ ಅಂಕದ ಬಳಿ ಇದ್ದ ರಾಹುಲ್​ನನ್ನು ನಾಲ್ಕು ಜನರ ಗುಂಪು ಅಟ್ಟಾಡಿಸಿ ಹತ್ಯೆ ಮಾಡಿದೆ. ಎಮ್ಮೆಕೆರೆ ಮೈದಾನದಲ್ಲಿ ರಾಹುಲ್​ನನ್ನು ಬರ್ಬರವಾಗಿ ಹತ್ಯೆ ಮಾಡಿದೆ. ಮೃತದೇಹವನ್ನು ಶವಗಾರದಲ್ಲಿ ಇರಿಸಲಾಗಿದ್ದು, ಮಂಗಳೂರು ನಗರ ಪೊಲೀಸ್ ಕಮೀಷನರ್ ಶಶಿಕುಮಾರ್ ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ. ಪಾಂಡೇಶ್ವರ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ಮಂಗಳೂರು: ಮಂಗಳೂರಿನಲ್ಲಿ ರೌಡಿಶೀಟರ್ ಒಬ್ಬ​ನನ್ನು ಹಳೆ ದ್ವೇಷದ ಹಿನ್ನೆಲೆಯಲ್ಲಿ ಅಟ್ಟಾಡಿಸಿ ಹತ್ಯೆ ಮಾಡಿದ ಘಟನೆ ನಡೆದಿದೆ. ಮಂಗಳೂರಿನ ಹೊಯಿಗೆ ಬಜಾರ್​ನ ರಾಹುಲ್(26) ಕೊಲೆಯಾದ ರೌಡಿಶೀಟರ್​. ರಾಹುಲ್ ಪಾಂಡೇಶ್ವರ್​ ವಿರುದ್ಧ ಪೊಲೀಸ್ ಠಾಣೆಯಲ್ಲಿ ರೌಡಿಶೀಟರ್ ಪಟ್ಟಿ ಇದೆ. ಈತನ ವಿರೋಧಿ ತಂಡ ಈ ಕೃತ್ಯವೆಸಗಿದೆ.

ಎಮ್ಮೆಕೆರೆಯಲ್ಲಿ ನಡೆಯುತ್ತಿದ್ದ ಕೋಳಿ ಅಂಕದ ಬಳಿ ಇದ್ದ ರಾಹುಲ್​ನನ್ನು ನಾಲ್ಕು ಜನರ ಗುಂಪು ಅಟ್ಟಾಡಿಸಿ ಹತ್ಯೆ ಮಾಡಿದೆ. ಎಮ್ಮೆಕೆರೆ ಮೈದಾನದಲ್ಲಿ ರಾಹುಲ್​ನನ್ನು ಬರ್ಬರವಾಗಿ ಹತ್ಯೆ ಮಾಡಿದೆ. ಮೃತದೇಹವನ್ನು ಶವಗಾರದಲ್ಲಿ ಇರಿಸಲಾಗಿದ್ದು, ಮಂಗಳೂರು ನಗರ ಪೊಲೀಸ್ ಕಮೀಷನರ್ ಶಶಿಕುಮಾರ್ ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ. ಪಾಂಡೇಶ್ವರ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ಇದನ್ನೂ ಓದಿ: ಮೊಬೈಲ್​ ಶೋರೂಂ​​ನಲ್ಲಿ ಕೆಲಸ ಮಾಡ್ತಿದ್ದ ಯುವತಿ ಜೊತೆ ಅಸಭ್ಯ ವರ್ತನೆ- ಸಿಸಿಟಿವಿ ದೃಶ್ಯ

ETV Bharat Logo

Copyright © 2024 Ushodaya Enterprises Pvt. Ltd., All Rights Reserved.