ETV Bharat / city

ಅಪಾಯಪಟ್ಟದಲ್ಲಿ ನೇತ್ರಾವತಿ ನದಿ: 381 ಮಂದಿ ರಕ್ಷಣೆ, 50 ಮಂದಿ ಸಿಲುಕಿರುವ ಶಂಕೆ - chief minister relief fund

ಬೆಳ್ತಂಗಡಿ ತಾಲೂಕಿನಲ್ಲಿ ನೇತ್ರಾವತಿ ನದಿಯು ಅಪಾಯದ ಮಟ್ಟ ಮೀರಿ ಹರಿಯುತ್ತಿದ್ದು, ತಾಲೂಕಿನ ಹಲವಾರು ಪ್ರದೇಶಗಳು ಸಂಪೂರ್ಣ ಮುಳುಗಿವೆ.

Netravati River at risk
author img

By

Published : Aug 10, 2019, 3:00 AM IST

ಮಂಗಳೂರು: ದ.ಕ.ಜಿಲ್ಲೆಯ ಬೆಳ್ತಂಗಡಿ ತಾಲೂಕಿನಲ್ಲಿ ನೇತ್ರಾವತಿ ನದಿಯು ಅಪಾಯದ ಮಟ್ಟ ಮೀರಿ ಹರಿಯುತ್ತಿದ್ದು, ತಾಲೂಕಿನ ಹಲವಾರು ಪ್ರದೇಶಗಳು ಸಂಪೂರ್ಣ ಜಲಾವೃತಗೊಂಡಿದೆ. ಮಧ್ಯಾಹ್ನ 3ಗಂಟೆಯ ಅವಧಿಯಲ್ಲಿ ನೀರು ಪ್ರವಾಹ ರೂಪದಲ್ಲಿ ಬಂದಿದೆ. ಈ ವೇಳೆ 381 ಮಂದಿಯನ್ನು ರಕ್ಷಿಸಲಾಗಿದ್ದು, ಇನ್ನೂ 50 ಮಂದಿ ಸಿಲುಕಿಕೊಂಡಿರುವ ಶಂಕೆಯಿದೆ.

ಕುಕ್ಕೆ ಸುಬ್ರಹ್ಮಣ್ಯದಲ್ಲಿದ್ದ ಎನ್​ಡಿಆರ್​ಎಫ್ ತಂಡ ಬೆಳ್ತಂಗಡಿಗೆ ಆಗಮಿಸಿ ರಕ್ಷಣಾ ಕಾರ್ಯದಲ್ಲಿ ತೊಡಗಿದೆ. ಅಲ್ಲದೆ ಮತ್ತೊಂದು ತಂಡ ಆದಷ್ಟು ಬೇಗ ಜಿಲ್ಲೆಗೆ ಆಗಮಿಸಲಿದೆ ಎಂದು ದ.ಕ.ಜಿಲ್ಲಾಧಿಕಾರಿ ಸಸಿಕಾಂತ್ ಸೆಂಥಿಲ್ ಹೇಳಿದ್ದಾರೆ.

ಸೇತುವೆ ಕುಸಿತ ಕಂಡಿರುವುದು
ನೇತ್ರಾವತಿ ನದಿಯಲ್ಲಿಇದ್ದಕ್ಕಿದ್ದಂತೆ 10 ಮೀ ನೀರಿನ ಮಟ್ಟ ಅಧಿಕವಾಗಿದೆ. ಕುಮಾರಧಾರಾ ನದಿ 26.5 ಮೀ., ಗುಂಡ್ಯ ನದಿ 5 ಮೀ. ಅಪಾಯ ಮಟ್ಟದಲ್ಲಿ ಹರಿಯುತ್ತಿದೆ. ಬೆಳ್ತಂಗಡಿಯ ಅಣಿಯೂರು ಗ್ರಾಮದ ಕಟಾಜೆ, ಲಾಯಿಲ, ಪುದುವೆಟ್ಟು, ಬೊಳ್ಮನಾರು ಕೇರ್ಯ, ನಾವೂರು, ಮಿತ್ತಬಾಗಿಲು, ಡಿಡುಪೆ, ಕಡಿರುದ್ಯಾವರ, ಬೊಳ್ಳಾರುಬೈಲು, ಕಾಡಬೆಟ್ಟು, ಚಾರ್ಮಾಡಿ ಸೇರಿದಂತೆ ಹಲವಾರು ಪ್ರದೇಶಗಳು ಸಂಪೂರ್ಣ ಮುಳುಗಿವೆ.
Netravati River at risk
ತೋಟಕ್ಕೆ ನೀರು ನುಗ್ಗಿರುವುದು

ಅಣಿಯೂರು ಗ್ರಾಮದ ಕಟಾಜೆಯಲ್ಲಿ ನೀರಿನಲ್ಲಿ ಸಿಲುಕಿಕೊಂಡ ವೃದ್ಧನನ್ನು ಸ್ಥಳೀಯರು ರಕ್ಷಿಸಿದ್ದಾರೆ. ಲಾಯಿಲಬೈಲು ಎಂಬಲ್ಲಿ ಗದ್ದೆ, ತೋಟಕ್ಕೆ ನೀರು ನುಗ್ಗಿದ್ದು, ಕಾಲು ಸೇತುವೆಯೊಂದು ಕೊಚ್ಚಿ ಹೋಗಿದೆ. ಅಲ್ಲದೆ ದಲಿತ ಕಾಲನಿಯೊಂದು ನೀರಿನಿಂದ ದಿಗ್ಭಂದನವಾಗಿದೆ. ಮಿತ್ತಬಾಗಿಲು ಡಿಡುಪೆಯ ಕುಕ್ಕಾವು ಸದಾಶಿವೇಶ್ವರ ದೇವಸ್ಥಾನಕ್ಕೆ ಬಂದಿದ್ದ 100ಕ್ಕೂ ಅಧಿಕ ಭಕ್ತರು ದೇವಾಲಯದಲ್ಲಿ ಸಿಲುಕಿಕೊಂಡಿದ್ದಾರೆ. ಮಿತ್ತಬಾಗಿಲು ಕಾಡಬೆಟ್ಟಿನಲ್ಲಿ ಎರಡು ಮನೆ ಮುಳುಗಿದ್ದು, ಮತ್ತೆರಡು ಮನೆಯೊಳಗೆ ಜನರು ಸಿಲುಕಿಕೊಂಡಿದ್ದಾರೆ. ಇವರ ರಕ್ಷಣೆ‌ ಆಗಿಲ್ಲ.ನೆರಿಯದಲ್ಲಿ ಮುಳುಗಿದ್ದ ಮನೆಯಲ್ಲಿ ಐವರನ್ನು ಸುರಕ್ಷಿತ ಸ್ಥಳಕ್ಕೆ ತಲುಪಿಸಿದ್ದಾರೆ. ಮಿತ್ತಬಾಗಿಲಿನ ಕುಕ್ಕಾವು ಸೇತುವೆ, ಬಾಂಜಾರುಮಲೆಯ ಸೇತುವೆ ಕೊಚ್ಚಿ ಹೋಗಿದೆ.

ಬೆಳ್ತಂಗಡಿ ಶಾಸಕ ಹರೀಶ್ ಪೂಂಜ ಹಾಗೂ ವಿಧಾನ ಪರಿಷತ್ ಸದಸ್ಯ ಹರೀಶ್ ಕುಮಾರ್ ಹಾಗೂ ತಹಶೀಲ್ದಾರ್ ಅವರೂ ರಕ್ಷಣಾ ಕಾರ್ಯದಲ್ಲಿ ನೇತೃತ್ವ ವಹಿಸಿದ್ದರು. ಚಾರ್ಮಾಡಿಯಲ್ಲಿ ಗುಡ್ಡ ಕುಸಿತವಾಗಿದ್ದು, ದುರಸ್ತಿ ಕಾರ್ಯ ಭರದಿಂದ ಸಾಗುತ್ತಿದೆ. ಈ ಹಿನ್ನೆಲೆಯಲ್ಲಿ ಆಗಸ್ಟ್ 14ರವರೆಗೆ ವಾಹನ ಸಂಚಾರವನ್ನು ಸ್ಥಗಿತಗೊಳಿಸಲಾಗಿದೆ.

ಮಂಗಳೂರು: ದ.ಕ.ಜಿಲ್ಲೆಯ ಬೆಳ್ತಂಗಡಿ ತಾಲೂಕಿನಲ್ಲಿ ನೇತ್ರಾವತಿ ನದಿಯು ಅಪಾಯದ ಮಟ್ಟ ಮೀರಿ ಹರಿಯುತ್ತಿದ್ದು, ತಾಲೂಕಿನ ಹಲವಾರು ಪ್ರದೇಶಗಳು ಸಂಪೂರ್ಣ ಜಲಾವೃತಗೊಂಡಿದೆ. ಮಧ್ಯಾಹ್ನ 3ಗಂಟೆಯ ಅವಧಿಯಲ್ಲಿ ನೀರು ಪ್ರವಾಹ ರೂಪದಲ್ಲಿ ಬಂದಿದೆ. ಈ ವೇಳೆ 381 ಮಂದಿಯನ್ನು ರಕ್ಷಿಸಲಾಗಿದ್ದು, ಇನ್ನೂ 50 ಮಂದಿ ಸಿಲುಕಿಕೊಂಡಿರುವ ಶಂಕೆಯಿದೆ.

ಕುಕ್ಕೆ ಸುಬ್ರಹ್ಮಣ್ಯದಲ್ಲಿದ್ದ ಎನ್​ಡಿಆರ್​ಎಫ್ ತಂಡ ಬೆಳ್ತಂಗಡಿಗೆ ಆಗಮಿಸಿ ರಕ್ಷಣಾ ಕಾರ್ಯದಲ್ಲಿ ತೊಡಗಿದೆ. ಅಲ್ಲದೆ ಮತ್ತೊಂದು ತಂಡ ಆದಷ್ಟು ಬೇಗ ಜಿಲ್ಲೆಗೆ ಆಗಮಿಸಲಿದೆ ಎಂದು ದ.ಕ.ಜಿಲ್ಲಾಧಿಕಾರಿ ಸಸಿಕಾಂತ್ ಸೆಂಥಿಲ್ ಹೇಳಿದ್ದಾರೆ.

ಸೇತುವೆ ಕುಸಿತ ಕಂಡಿರುವುದು
ನೇತ್ರಾವತಿ ನದಿಯಲ್ಲಿಇದ್ದಕ್ಕಿದ್ದಂತೆ 10 ಮೀ ನೀರಿನ ಮಟ್ಟ ಅಧಿಕವಾಗಿದೆ. ಕುಮಾರಧಾರಾ ನದಿ 26.5 ಮೀ., ಗುಂಡ್ಯ ನದಿ 5 ಮೀ. ಅಪಾಯ ಮಟ್ಟದಲ್ಲಿ ಹರಿಯುತ್ತಿದೆ. ಬೆಳ್ತಂಗಡಿಯ ಅಣಿಯೂರು ಗ್ರಾಮದ ಕಟಾಜೆ, ಲಾಯಿಲ, ಪುದುವೆಟ್ಟು, ಬೊಳ್ಮನಾರು ಕೇರ್ಯ, ನಾವೂರು, ಮಿತ್ತಬಾಗಿಲು, ಡಿಡುಪೆ, ಕಡಿರುದ್ಯಾವರ, ಬೊಳ್ಳಾರುಬೈಲು, ಕಾಡಬೆಟ್ಟು, ಚಾರ್ಮಾಡಿ ಸೇರಿದಂತೆ ಹಲವಾರು ಪ್ರದೇಶಗಳು ಸಂಪೂರ್ಣ ಮುಳುಗಿವೆ.
Netravati River at risk
ತೋಟಕ್ಕೆ ನೀರು ನುಗ್ಗಿರುವುದು

ಅಣಿಯೂರು ಗ್ರಾಮದ ಕಟಾಜೆಯಲ್ಲಿ ನೀರಿನಲ್ಲಿ ಸಿಲುಕಿಕೊಂಡ ವೃದ್ಧನನ್ನು ಸ್ಥಳೀಯರು ರಕ್ಷಿಸಿದ್ದಾರೆ. ಲಾಯಿಲಬೈಲು ಎಂಬಲ್ಲಿ ಗದ್ದೆ, ತೋಟಕ್ಕೆ ನೀರು ನುಗ್ಗಿದ್ದು, ಕಾಲು ಸೇತುವೆಯೊಂದು ಕೊಚ್ಚಿ ಹೋಗಿದೆ. ಅಲ್ಲದೆ ದಲಿತ ಕಾಲನಿಯೊಂದು ನೀರಿನಿಂದ ದಿಗ್ಭಂದನವಾಗಿದೆ. ಮಿತ್ತಬಾಗಿಲು ಡಿಡುಪೆಯ ಕುಕ್ಕಾವು ಸದಾಶಿವೇಶ್ವರ ದೇವಸ್ಥಾನಕ್ಕೆ ಬಂದಿದ್ದ 100ಕ್ಕೂ ಅಧಿಕ ಭಕ್ತರು ದೇವಾಲಯದಲ್ಲಿ ಸಿಲುಕಿಕೊಂಡಿದ್ದಾರೆ. ಮಿತ್ತಬಾಗಿಲು ಕಾಡಬೆಟ್ಟಿನಲ್ಲಿ ಎರಡು ಮನೆ ಮುಳುಗಿದ್ದು, ಮತ್ತೆರಡು ಮನೆಯೊಳಗೆ ಜನರು ಸಿಲುಕಿಕೊಂಡಿದ್ದಾರೆ. ಇವರ ರಕ್ಷಣೆ‌ ಆಗಿಲ್ಲ.ನೆರಿಯದಲ್ಲಿ ಮುಳುಗಿದ್ದ ಮನೆಯಲ್ಲಿ ಐವರನ್ನು ಸುರಕ್ಷಿತ ಸ್ಥಳಕ್ಕೆ ತಲುಪಿಸಿದ್ದಾರೆ. ಮಿತ್ತಬಾಗಿಲಿನ ಕುಕ್ಕಾವು ಸೇತುವೆ, ಬಾಂಜಾರುಮಲೆಯ ಸೇತುವೆ ಕೊಚ್ಚಿ ಹೋಗಿದೆ.

ಬೆಳ್ತಂಗಡಿ ಶಾಸಕ ಹರೀಶ್ ಪೂಂಜ ಹಾಗೂ ವಿಧಾನ ಪರಿಷತ್ ಸದಸ್ಯ ಹರೀಶ್ ಕುಮಾರ್ ಹಾಗೂ ತಹಶೀಲ್ದಾರ್ ಅವರೂ ರಕ್ಷಣಾ ಕಾರ್ಯದಲ್ಲಿ ನೇತೃತ್ವ ವಹಿಸಿದ್ದರು. ಚಾರ್ಮಾಡಿಯಲ್ಲಿ ಗುಡ್ಡ ಕುಸಿತವಾಗಿದ್ದು, ದುರಸ್ತಿ ಕಾರ್ಯ ಭರದಿಂದ ಸಾಗುತ್ತಿದೆ. ಈ ಹಿನ್ನೆಲೆಯಲ್ಲಿ ಆಗಸ್ಟ್ 14ರವರೆಗೆ ವಾಹನ ಸಂಚಾರವನ್ನು ಸ್ಥಗಿತಗೊಳಿಸಲಾಗಿದೆ.

Intro:

ಮಂಗಳೂರು: ದ.ಕ.ಜಿಲ್ಲೆಯ ಬೆಳ್ತಂಗಡಿ ತಾಲೂಕಿನಲ್ಲಿ ನೇತ್ರಾವತಿ ನದಿಯು ಅಪಾಯದ ಮಟ್ಟವನ್ನು ಮೀರಿ ಹರಿಯುತ್ತಿದ್ದು ಬೆಳ್ತಂಗಡಿ ತಾಲೂಕಿನ ಹಲವಾರು ಪ್ರದೇಶಗಳು ಸಂಪೂರ್ಣ ಜಲಾವೃತಗೊಂಡಿದೆ. ಮಧ್ಯಾಹ್ನ 3.30-4 ಗಂಟೆಯ ಅವಧಿಯಲ್ಲಿ ನೀರು ಪ್ರವಾಹ ರೂಪದಲ್ಲಿ ಬಂದಿದ್ದು, ಹಲವಾರು ಮಂದಿ ಇದರಲ್ಲಿ ಸಿಕ್ಕಿ ಹಾಕಿಕೊಂಡಿದ್ದಾರೆ. ಒಟ್ಟು ಜಿಲ್ಲೆಯಲ್ಲಿ 381 ಮಂದಿಯನ್ನು ರಕ್ವಣೆ ಮಾಡಿ ಸ್ಥಳಾಂತರ ಮಾಡಿದ್ದು, 50 ಮಂದಿ ಇನ್ನೂ ಪ್ರವಾಹದಲ್ಲಿ ಸಿಲುಕಿಕೊಂಡಿರುವ ಶಂಕೆಯಿದೆ.

ಈಗಾಗಲೇ ಸುಬ್ರಹ್ಮಣ್ಯ ದಲ್ಲಿರುವ ಎನ್ ಡಿಆರ್ ಎಫ್ ತಂಡವು ಬೆಳ್ತಂಗಡಿಗೆ ಆಗಮಿಸಿ ಪ್ರವಾಹದಲ್ಲಿ ಸಿಲುಕಿಕೊಂಡಿರುವ ವರ ರಕ್ಷಣಾ ಕಾರ್ಯದಲ್ಲಿ ತೊಡಗಿದೆ. ಅಲ್ಲದೆ ಮತ್ತೊಂದು ಎನ್ ಡಿಆರ್ ಎಫ್ ತಂಡ ಆದಷ್ಟು ಬೇಗ ದ.ಕ.ಜಿಲ್ಲೆಗೆ ಆಗಮಿಸಲಿದೆ ಎಂದು ದ.ಕ.ಜಿಲ್ಲಾಧಿಕಾರಿ ಸಸಿಕಾಂತ್ ಸೆಂಥಿಲ್ ಹೇಳಿದ್ದಾರೆ.

ಇದ್ದಕ್ಕಿದ್ದಂತೆ ನೇತ್ರಾವತಿ ನೀರಿನ ಮಟ್ಟ ಹೆಚ್ಚಳವಾಗಿದ್ದು, 10.0 ಮೀ. ಅಪಾಯ ಮಟ್ಟದಲ್ಲಿ ಹರಿಯುತ್ತಿದೆ. ಉಪ್ಪಿನಂಗಡಿಯಲ್ಲಿ 31.5 ಮೀ. ಅಪಾಯ ಮಟ್ಟದಲ್ಲಿ ಹರಿಯುತ್ತಿದೆ‌. ಕುಮಾರಧಾರ ನದಿಯು 26.5 ಮೀ. ಅಪಾಯ ಮಟ್ಟದಲ್ಲಿ ಹರಿಯುತ್ತಿದೆ. 5.0 ಮೀ. ಅಪಾಯ ಮಟ್ಟದಲ್ಲಿ ಗುಂಡ್ಯ ನದಿ ಹರಿಯುತ್ತಿದೆ.

ಬೆಳ್ತಂಗಡಿ ತಾಲೂಕಿನ ಅಣಿಯೂರು ಗ್ರಾಮದ ಕಟಾಜೆ, ಲಾಯಿಲ, ಪುದುವೆಟ್ಟು, ಬೊಳ್ಮನಾರು ಕೇರ್ಯ, ನಾವೂರು, ಮಿತ್ತಬಾಗಿಲು,ಡಿಡುಪೆ, ಕಡಿರುದ್ಯಾವರ, ಬೊಳ್ಳಾರುಬೈಲು, ಕಾಡಬೆಟ್ಟು, ಚಾರ್ಮಾಡಿ ಮುಂತಾದ ಪ್ರದೇಶಗಳು ಸಂಪೂರ್ಣ ಜಲಾವೃತಗೊಂಡಿದೆ.

Body:ಅಣಿಯೂರು ಗ್ರಾಮದ ಕಟಾಜೆಯಲ್ಲಿ ನೀರಿನಲ್ಲಿ ಸಿಲುಕಿಕೊಂಡ ವೃದ್ಧನನ್ನು ಸ್ಥಳೀಯರು ರಕ್ಷಣೆ‌ ಮಾಡಿದ್ದಾರೆ. ಲಾಯಿಲಬೈಲು ಎಂಬಲ್ಲಿ ಗದ್ದೆ, ತೋಟಕ್ಕೆ ನೀರು ನುಗ್ಗಿದ್ದು, ಕಾಲು ಸೇತುವೆಯೊಂದು ಕೊಚ್ಚಿ ಹೋಗಿದೆ. ಅಲ್ಲದೆ ದಲಿತ ಕಾಲನಿಯೊಂದು ನೀರಿನಿಂದ ದಿಗ್ಭಂದನವಾಗಿದ್ದು, ಇಲ್ಲಿ ಹಲವಾರು ಮಂದಿ ಸಿಲುಕಿಕೊಂಡಿರಬಹುದೆಂದು ಶಂಕಿಸಲಾಗಿದೆ. ಮಿತ್ತಬಾಗಿಲು ಡಿಡುಪೆಯ ಕುಕ್ಕಾವು ಸದಾಶಿವೇಶ್ವರ ದೇವಸ್ಥಾನದಲ್ಲಿ ಪೂಜೆಗೆ ಬಂದ 100 ಕ್ಕೂ ಅಧಿಕ ಮಂದಿ ದೇವಾಲಯದಲ್ಲಿ ಸಿಲುಕಿಕೊಂಡಿದ್ದಾರೆ. ಮಿತ್ತಬಾಗಿಲು ಕಾಡಬೆಟ್ಟಿನಲ್ಲಿ ಎರಡು ಮನೆ ಮುಳುಗಡೆಯಾಗಿದ್ದು, ಮತ್ತೆರಡು ಮನೆಯೊಳಗೆ ಜನರು ಸಿಲುಕಿಕೊಂಡಿದ್ದಾರೆ, ಇವರ ರಕ್ಷಣೆ‌ ಆಗಿಲ್ಲ. ನೆರಿಯದಲ್ಲಿ ಮನೆಯೊಂದು ‌ಮುಳುಗಡೆಯಾಗಿದ್ದು, ಸ್ಥಳೀಯರು ಮನೆಯಲ್ಲಿದ್ದ ಐದು ಜನರನ್ನು ರಕ್ಷಣೆ‌ ಮಾಡಿ ಸ್ಥಳಾಂತರ ಮಾಡಿದ್ದಾರೆ. ಮಿತ್ತಬಾಗಿಲಿನ ಕುಕ್ಕಾವು ಸೇತುವೆಯೂ ಕುಸಿತವಾಗಿದ್ದು, ಸಂಪರ್ಕ ಕಡಿತವಾಗಿದೆ. ಕಕ್ಕಿಂಜೆ ಪರ್ಲಾನಿಯ ಜನವಸತಿ ಪ್ರದೇಶಗಳಿಗೆ ನದಿ ನೀರು ನುಗ್ಗಿದೆ. ಬಾಂಜಾರುಮಲೆಯ ಸೇತುವೆ ಕೊಚ್ಚಿ ಹೋಗಿದ್ದು, ನಲುವತ್ತು ಮಲೆಕುಡಿಯ ಕುಟುಂಬ ಹೊರ ಪ್ರಪಂಚದ ಸಂಪರ್ಕವನ್ನೇ ಕಡಿದು ಕೊಂಡಿದೆ.

ಸಂತ್ರಸ್ತರನ್ನು ಹೊರತರಲು ತಾಲೂಕು ಆಡಳಿತ ಸ್ಥಳೀಯರ ಸಹಕಾರದೊಂದಿಗೆ ಪ್ರಯತ್ನ ನಡೆಯುತ್ತಿದೆ. ಅಲ್ಲದೆ ಬೆಳ್ತಂಗಡಿ ಶಾಸಕ ಹರೀಶ್ ಪೂಂಜ ಹಾಗೂ ವಿಧಾನ ಪರಿಷತ್ ಸದಸ್ಯ ಹರೀಶ್ ಕುಮಾರ್ ಹಾಗೂ ತಹಶೀಲ್ದಾರ್ ಅವರೂ ರಕ್ಷಣಾ ಕಾರ್ಯದಲ್ಲಿ ನೇತೃತ್ವ ವಹಿಸಿದ್ದಾರೆ.

ಬಂಟ್ವಾಳ ಸುತ್ತಮುತ್ತಲಿನ ಪರಿಸರದಲ್ಲಿ ಕೃತಕ ನೆರೆ ಸೃಷ್ಟಿಯಾಗಿದ್ದು, ಬಂಟ್ವಾಳ ತಾಲೂಕಿನಲ್ಲಿಯೂ ಹಲವು ಮನೆಗಳು ಮುಳುಗಡೆಯಾಗಿವೆ.

ಚಾರ್ಮಾಡಿಯಲ್ಲಿ ಗುಡ್ಡ ಕುಸಿತವಾಗಿದ್ದು, ದುರಸ್ತಿ ಕಾರ್ಯ ಭರದಿಂದ ಸಾಗುತ್ತಿದೆ. ಈ ಹಿನ್ನೆಲೆಯಲ್ಲಿ ಆಗಸ್ಟ್ 14ರವರೆಗೆ ವಾಹನ ಸಂಚಾರವನ್ನು ಸ್ಥಗಿತಗೊಳಿಸಲಾಗಿದೆ.

Reporter_Vishwanath PanjimogaruConclusion:
ETV Bharat Logo

Copyright © 2025 Ushodaya Enterprises Pvt. Ltd., All Rights Reserved.