ETV Bharat / city

ವರ್ಲ್ಡ್‌ಕಪ್‌ ಗೆಲ್ಲೋಕೆ ಟೀಂ ಇಂಡಿಯಾ ಫೇವರಿಟ್.. ಕೆಎಲ್‌ಆರ್‌ ವಿಶೇಷ ಆಟಗಾರ ಎಂದ ರಾ'ವಾಲ್‌' ದ್ರಾವಿಡ್‌! - undefined

ಕ್ರಿಕೆಟ್​ ತಂಡಗಳು ಉಳಿಯಬೇಕಾದರೆ ಕ್ರಿಕೆಟ್​ನಲ್ಲಿರುವ ಎಲ್ಲಾ ರೀತಿಯ ಮಾದರಿಗಳ ಕುರಿತಾದ ಪರಿಣಿತಿಯನ್ನು ಕಲಿಯುವುದು ಅಗತ್ಯ ಎಂದು ಕ್ರಿಕೆಟ್​ನ ಗೋಡೆ ಎಂದು ಪ್ರಸಿದ್ಧಿ ಪಡೆದಿರುವ ಮಾಜಿ ಕ್ರಿಕೆಟಿಗ ರಾಹುಲ್ ದ್ರಾವಿಡ್ ಅವರು ಕಿವಿ ಮಾತು ಹೇಳಿದ್ಧಾರೆ.

ಮಾಜಿ ಕ್ರಿಕೆಟಿಗ ರಾಹುಲ್ ದ್ರಾವಿಡ್
author img

By

Published : Apr 24, 2019, 8:34 AM IST

ಮಂಗಳೂರು: ಕ್ರಿಕೆಟ್ ಟೀಮ್​ಗಳು‌ ಉಳಿಯಬೇಕಾದರೆ ಕ್ರಿಕೆಟ್​ನಲ್ಲಿರುವ ಎಲ್ಲಾ ಮಾದರಿಗಳಲ್ಲೂ ಪರಿಣಿತಿ ಪಡೆಯುವುದು ಅಗತ್ಯ ಎಂದು ಕ್ರಿಕೆಟ್​ನ ಗೋಡೆ ಎಂದೆ ಪ್ರಸಿದ್ಧಿ ಹೊಂದಿರುವ ಮಾಜಿ ಕ್ರಿಕೆಟಿಗ ರಾಹುಲ್ ದ್ರಾವಿಡ್ ಹೇಳಿದ್ದಾರೆ.

ನಗರದ ಟಿಎಂಎ ಪೈ ಕನ್ವೆಷನ್ ಹಾಲ್​ನಲ್ಲಿ ಮಣಿಪಾಲ ಆಸ್ಪತ್ರೆಗಳ ರಾಯಭಾರಿಯಾಗಿ ಮಣಿಪಾಲ ಆರೋಗ್ಯ ಕಾರ್ಡ್‌ನ ಬಿಡುಗಡೆ ಮಾಡಿ ಮಾತನಾಡಿದ ಅವರು, ಭಾರತದ ಕ್ರಿಕೆಟ್ ತಂಡ ಕಳೆದ ಎರಡು ವರ್ಷಗಳಲ್ಲಿ ಉತ್ತಮ ಪ್ರದರ್ಶನ ನೀಡುತ್ತಿದ್ದು, ತಂಡದ ಆಟಗಾರರೂ ಫಾರ್ಮ್​ನಲ್ಲಿ‌ ಇದ್ದಾರೆ. ಇದು ವಿಶ್ವಕಪ್​ಗೆ ಪೂರಕವಾಗಲಿದೆ. ಬರುವ ವರ್ಲ್ಡ್‌ಕಪ್‌ನಲ್ಲಿ ಭಾರತದ ತಂಡ ಉತ್ತಮ ಪ್ರದರ್ಶನ ನೀಡಲಿದೆ ಎಂದು ವಿಶ್ವಾಸ ವ್ಯಕ್ತಪಡಿಸಿದರು.

ಮಾಜಿ ಕ್ರಿಕೆಟಿಗ ರಾಹುಲ್ ದ್ರಾವಿಡ್

ಕರ್ನಾಟಕದ ಆಟಗಾರ ಕೆ.ಎಲ್.ರಾಹುಲ್‌ ಬಗ್ಗೆ ಸುದ್ದಿಗಾರರು ಕೇಳಿದ ಪ್ರಶ್ನೆಗೆ ಉತ್ತರಿಸಿದ ಅವರು, ಆತ ವಿಶೇಷ ಆಟಗಾರ. ಆತನ ಬಗ್ಗೆ ಸಾಕಷ್ಟು ನಿರೀಕ್ಷೆ ಇದೆ. ಅವನು ಕ್ರಿಕೆಟ್ ಎಲ್ಲಾ ಮಾದರಿಗಳಲ್ಲಿ ತನ್ನ ಸಾಧನೆ ತೋರಿದ್ದಾನೆ. ಭಾರತ ತಂಡಕ್ಕೆ ಸೇರ್ಪಡೆಗೊಂಡ ಬಳಿಕ ಆತನ ನಿರ್ವಹಣೆ ಸಾಕಷ್ಟು ಉತ್ತಮವಾಗಿದೆ. ಅಲ್ಲದೆ ಕಳೆದ ಎರಡು ವರ್ಷಗಳಲ್ಲಿ ‌ಆತನ ಆಟದಲ್ಲಿ ಸಾಕಷ್ಟು ಸುಧಾರಣೆ ಕಂಡಿದೆ ಎಂದು ಹೇಳಿದರು.

ಬಳಿಕ ಕ್ಯಾನ್ಸರ್ ಚಿಕಿತ್ಸೆ ಪಡೆಯುತ್ತಿರುವ ಮಕ್ಕಳ ಬ್ಯಾಟ್​ಗೆ ಸಹಿ ಹಾಕಿ ಮಕ್ಕಳ ಜೊತೆ ಕ್ರಿಕೆಟ್​ ಆಡಿ ಸಂಭ್ರಮಿಸಿದರು.

ಮಂಗಳೂರು: ಕ್ರಿಕೆಟ್ ಟೀಮ್​ಗಳು‌ ಉಳಿಯಬೇಕಾದರೆ ಕ್ರಿಕೆಟ್​ನಲ್ಲಿರುವ ಎಲ್ಲಾ ಮಾದರಿಗಳಲ್ಲೂ ಪರಿಣಿತಿ ಪಡೆಯುವುದು ಅಗತ್ಯ ಎಂದು ಕ್ರಿಕೆಟ್​ನ ಗೋಡೆ ಎಂದೆ ಪ್ರಸಿದ್ಧಿ ಹೊಂದಿರುವ ಮಾಜಿ ಕ್ರಿಕೆಟಿಗ ರಾಹುಲ್ ದ್ರಾವಿಡ್ ಹೇಳಿದ್ದಾರೆ.

ನಗರದ ಟಿಎಂಎ ಪೈ ಕನ್ವೆಷನ್ ಹಾಲ್​ನಲ್ಲಿ ಮಣಿಪಾಲ ಆಸ್ಪತ್ರೆಗಳ ರಾಯಭಾರಿಯಾಗಿ ಮಣಿಪಾಲ ಆರೋಗ್ಯ ಕಾರ್ಡ್‌ನ ಬಿಡುಗಡೆ ಮಾಡಿ ಮಾತನಾಡಿದ ಅವರು, ಭಾರತದ ಕ್ರಿಕೆಟ್ ತಂಡ ಕಳೆದ ಎರಡು ವರ್ಷಗಳಲ್ಲಿ ಉತ್ತಮ ಪ್ರದರ್ಶನ ನೀಡುತ್ತಿದ್ದು, ತಂಡದ ಆಟಗಾರರೂ ಫಾರ್ಮ್​ನಲ್ಲಿ‌ ಇದ್ದಾರೆ. ಇದು ವಿಶ್ವಕಪ್​ಗೆ ಪೂರಕವಾಗಲಿದೆ. ಬರುವ ವರ್ಲ್ಡ್‌ಕಪ್‌ನಲ್ಲಿ ಭಾರತದ ತಂಡ ಉತ್ತಮ ಪ್ರದರ್ಶನ ನೀಡಲಿದೆ ಎಂದು ವಿಶ್ವಾಸ ವ್ಯಕ್ತಪಡಿಸಿದರು.

ಮಾಜಿ ಕ್ರಿಕೆಟಿಗ ರಾಹುಲ್ ದ್ರಾವಿಡ್

ಕರ್ನಾಟಕದ ಆಟಗಾರ ಕೆ.ಎಲ್.ರಾಹುಲ್‌ ಬಗ್ಗೆ ಸುದ್ದಿಗಾರರು ಕೇಳಿದ ಪ್ರಶ್ನೆಗೆ ಉತ್ತರಿಸಿದ ಅವರು, ಆತ ವಿಶೇಷ ಆಟಗಾರ. ಆತನ ಬಗ್ಗೆ ಸಾಕಷ್ಟು ನಿರೀಕ್ಷೆ ಇದೆ. ಅವನು ಕ್ರಿಕೆಟ್ ಎಲ್ಲಾ ಮಾದರಿಗಳಲ್ಲಿ ತನ್ನ ಸಾಧನೆ ತೋರಿದ್ದಾನೆ. ಭಾರತ ತಂಡಕ್ಕೆ ಸೇರ್ಪಡೆಗೊಂಡ ಬಳಿಕ ಆತನ ನಿರ್ವಹಣೆ ಸಾಕಷ್ಟು ಉತ್ತಮವಾಗಿದೆ. ಅಲ್ಲದೆ ಕಳೆದ ಎರಡು ವರ್ಷಗಳಲ್ಲಿ ‌ಆತನ ಆಟದಲ್ಲಿ ಸಾಕಷ್ಟು ಸುಧಾರಣೆ ಕಂಡಿದೆ ಎಂದು ಹೇಳಿದರು.

ಬಳಿಕ ಕ್ಯಾನ್ಸರ್ ಚಿಕಿತ್ಸೆ ಪಡೆಯುತ್ತಿರುವ ಮಕ್ಕಳ ಬ್ಯಾಟ್​ಗೆ ಸಹಿ ಹಾಕಿ ಮಕ್ಕಳ ಜೊತೆ ಕ್ರಿಕೆಟ್​ ಆಡಿ ಸಂಭ್ರಮಿಸಿದರು.

Intro:ಮಂಗಳೂರು: ಕ್ರಿಕೆಟ್ ಟೀಮ್ ಗಳು‌ ಉಳಿಯಬೇಕಾದರೆ ಕ್ರಿಕೆಟ್ ನಲ್ಲಿರುವ ಎಲ್ಲಾ ಮಾದರಿಗಳಲ್ಲಿ ಪರಿಣತಿ ಪಡೆಯುವುದು ಅಗತ್ಯ ಎಂದು ಕ್ರಿಕೆಟ್ ನ ಗೋಡೆ ಎಂದೇ ಪ್ರಸಿದ್ಧಿ ಪಡೆದ ಮಾಜಿ ಕ್ರಿಕೆಟಿಗ ರಾಹುಲ್ ದ್ರಾವಿಡ್ ಹೇಳಿದರು.

ಮಂಗಳೂರಿನ ಟಿಎಂಎ ಪೈ ಕನ್ವೆಷನ್ ಹಾಲ್ ನಲ್ಲಿ ಮಣಿಪಾಲ ಆಸ್ಪತ್ರೆಗಳ ರಾಯಭಾರಿಯಾಗಿ ಮಣಿಪಾಲ ಆರೋಗ್ಯ ಕಾರ್ಡ್ ನ್ನು ಬಿಡುಗಡೆ ಮಾಡಿ ಮಾತನಾಡಿದ ಅವರು, ಭಾರತದ ಕ್ರಿಕೆಟ್ ತಂಡ ಕಳೆದ ಎರಡು ವರ್ಷಗಳಲ್ಲಿ ಉತ್ತಮ ಪ್ರದರ್ಶನ ನೀಡುತ್ತಿದ್ದು, ತಂಡದ ಆಟಗಾರರೂ ಫಾರ್ಮ್ ನಲ್ಲಿ‌ ಇದ್ದಾರೆ. ಇದು ವಿಶ್ವಕಪ್ ಗೆ ಪೂರಕವಾಗಲಿದೆ. ಮುಂದಿನ ವಿಶ್ವಕಪ್ ನಲ್ಲಿ ಭಾರತದ ತಂಡ ಉತ್ತಮ ಪ್ರದರ್ಶನ ನೀಡಲಿದೆ ಎಂದು ವಿಶ್ವಾಸ ವ್ಯಕ್ತಪಡಿಸಿದರು.




Body:ಕರ್ನಾಟಕದ ಆಟಗಾರ ಕೆ.ಎಲ್.ರಾಹುಲ್‌ ಬಗ್ಗೆ ಸುದ್ದಿಗಾರರು ಕೇಳಿದ ಪ್ರಶ್ನೆಗೆ ಉತ್ತರಿಸಿದ ರಾಹುಲ್ ದ್ರಾವಿಡ್, ಆತ ವಿಶೇಷ ಆಟಗಾರ, ಆತನ ಬಗ್ಗೆ ಸಾಕಷ್ಟು ನಿರೀಕ್ಷೆ ಇದೆ. ಅವನು ಕ್ರಿಕೆಟ್ ಎಲ್ಲಾ ಮಾದರಿಗಳಲ್ಲಿ ತನ್ನ ಸಾಧನೆ ತೋರಿದ್ದಾನೆ. ಭಾರತ ತಂಡಕ್ಕೆ ಸೇರ್ಪಡೆಗೊಂಡ ಬಳಿಕ ಆತನ ನಿರ್ವಹಣೆ ಸಾಕಷ್ಟು ಉತ್ತಮವಾಗಿದೆ. ಅಲ್ಲದೆ ಕಳೆದ ಎರಡು ವರ್ಷಗಳಲ್ಲಿ ‌ಆತನ ಆಟದಲ್ಲಿ ಸಾಕಷ್ಟು ಉತ್ತಮ ನಿರ್ವಹಣೆ ಕಾಣುತ್ತಿದೆ ಎಂದು ಹೇಳಿದರು.

ಬಳಿಕ ಕ್ಯಾನ್ಸರ್ ಚಿಕಿತ್ಸೆ ಪಡೆಯುತ್ತಿರುವ ಮಕ್ಕಳ ಬ್ಯಾಟ್ ಗೆ ಸಹಿ ಹಾಕಿದರು. ಮಕ್ಕಳ ಬಾಲ್ ಗೆ ಬ್ಯಾಟ್ ಬೀಸಿ ಸಂಭ್ರಮಿಸಿದರು. ಬಳಿಕ ತಾನು ಬೀಸಿದ ಬಾಲ್ ನ್ನು ಕ್ಯಾಚ್ ಹಿಡಿದ ಬಾಲಕನನ್ನು ಅಭಿನಂದಿಸಿದರು.

Reporter_Vishwanath Panjimogaru


Conclusion:

For All Latest Updates

TAGGED:

ETV Bharat Logo

Copyright © 2025 Ushodaya Enterprises Pvt. Ltd., All Rights Reserved.