ETV Bharat / city

Revenge! ಆದಿತ್ಯರಾವ್‌ ಇಡೀ ಚರಿತ್ರೆ ಬಿಚ್ಚಿಟ್ಟ ಮಂಗಳೂರು ಪೊಲೀಸ್ ಆಯುಕ್ತರು! - ಬಾಂಬ್​ ಬ್ಲಾಸ್ಟ್​ ಪ್ರಕರಣ ಮಂಗಳೂರು ಕಮೀಷನರ್​ ಸುದ್ದಿಗೋಷ್ಠಿ

ವಿಮಾನ ನಿಲ್ದಾಣದಲ್ಲಿ ಬಾಂಬ್ ಇರಿಸಿದ್ದ ಆದಿತ್ಯರಾವ್ ಕುರಿತು ಮಂಗಳೂರು ಪೊಲೀಸ್ ಆಯುಕ್ತ ಡಾ. ಪಿ. ಎಸ್. ಹರ್ಷ ಸುದ್ದಿಗೋಷ್ಠಿ ನಡೆಸಿ ವಿವರವಾದ ಮಾಹಿತಿ ನೀಡಿದರು.

mangalore-police-commissioner
ಮಂಗಳೂರು ಪೊಲೀಸ್ ಕಮೀಷನರ್
author img

By

Published : Jan 23, 2020, 1:11 PM IST

Updated : Jan 23, 2020, 1:53 PM IST

ಮಂಗಳೂರು: ನಗರದ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿ ಬಾಂಬ್ ಇರಿಸಿದ ಆರೋಪಿ ಆದಿತ್ಯರಾವ್ ಬೆಂಗಳೂರು ವಿಮಾನ ನಿಲ್ದಾಣದಲ್ಲಿ ಸೆಕ್ಯುರಿಟಿ ಕೆಲಸ ಸಿಗದ ಕೋಪದಲ್ಲಿ ಕೃತ್ಯ ಎಸಗಿದ್ದಾನೆ ಎಂದು ಮಂಗಳೂರು ಪೊಲೀಸ್ ಕಮೀಷನರ್ ಡಾ. ಪಿ. ಎಸ್. ಹರ್ಷ ತಿಳಿಸಿದ್ದಾರೆ.

'ಇಂಟರ್‌ನೆಟ್‌ ಮೂಲಕ ಬಾಂಬ್‌ ತಯಾರಿಸೋದನ್ನು ಕಲಿತ'

ಬೆಂಗಳೂರು ಏರ್‌ಪೋರ್ಟ್​ನಲ್ಲಿ ಸೆಕ್ಯೂರಿಟಿ ಕೆಲಸಕ್ಕೆ ಪ್ರಯತ್ನಿಸಿದ್ದ, ಆದರೆ ಅದು ಬೇರೆಯವರ ಪಾಲಾಗಿತ್ತು. ಇದರಿಂದ ಕೋಪಗೊಂಡು ವಿಮಾನ ನಿಲ್ದಾಣಕ್ಕೆ ಹುಸಿ ಬಾಂಬ್​ ಬೆದರಿಕೆ ಕರೆ ಮಾಡುವುದಕ್ಕೆ ಶುರು ಮಾಡಿದ್ದಾನೆ. ರೈಲ್ವೆ ನಿಲ್ದಾಣಕ್ಕೂ ಬಾಂಬ್​ ಬೆದರಿಕೆ ಹಾಕಿ ಬಂಧಿತನಾಗಿದ್ದ. ಇದರಿಂದ ಮತ್ತಷ್ಟು ಆಕ್ರೋಶಗೊಂಡು ಇಂಟರ್‌ನೆಟ್​ ಮೂಲಕ ಬಾಂಬ್​​ ತಯಾರಿಕಾ ವಸ್ತುಗಳನ್ನು ತರಿಸಿ ಸ್ವತಃ ತಾನೇ ಬಾಂಬ್​ ತಯಾರಿಸಿ ವಿಮಾನ ನಿಲ್ದಾಣ ಸ್ಟೋಟಗೊಳಿಸಲು ಸಂಚು ರೂಪಿಸಿದ್ದ ಎಂದು ಪೊಲೀಸ್ ಕಮೀಷನರ್ ಡಾ. ಪಿ. ಎಸ್. ಹರ್ಷ ವಿವರಿಸಿದ್ರು.

ಮಂಗಳೂರು ಪೊಲೀಸ್ ಕಮೀಷನರ್

ಮಂಗಳೂರು ಕುಡ್ಲ ರೆಸ್ಟೋರೆಂಟ್‌ನಲ್ಲಿ ಕೆಲಸ ಮಾಡುತ್ತಾ ಬಾಂಬ್​​​ ತಯಾರಿಸಿ ಅಲ್ಲಿದ್ದರೆ ಅನುಮಾನ ಬರುತ್ತದೆ ಎಂದು ಕಾರ್ಕಳದ ಹೋಟೆಲ್​ವೊಂದರಲ್ಲಿ ಕೆಲಸಕ್ಕೆ ಸೇರಿದ್ದಾನೆ. ಬಳಿಕ ಅಲ್ಲಿಂದ ಜ. 20 ರಂದು ಮಂಗಳೂರಿಗೆ ಬಂದು ಬಜ್ಪೆಗೆ ತೆರಳಿ ಅಲ್ಲಿ ಸೆಲೂನ್​ವೊಂದಕ್ಕೆ ತೆರಳಿದ್ದಾನೆ. ಇಲ್ಲಿ ತಾನು ತಂದಿದ್ದ ಬ್ಯಾಗನಿಂದ ಬಾಂಬ್​ ತೆಗೆದುಕೊಂಡು ವಿಮಾನ ನಿಲ್ದಾಣಕ್ಕೆ ಬಂದು ಬಾಂಬ್​ ಇಟ್ಟು ತೆರಳಿದ್ದಾನೆ. ಬಳಿಕ ಪೊಲೀಸರ ಕಣ್ಣು ತಪ್ಪಿಸಿಕೊಳ್ಳಲು ಶಿರಸಿ, ಶಿವಮೊಗ್ಗ ನಂತರ ಬೆಂಗಳೂರಿಗೆ ತೆರಳಿ ಅಲ್ಲಿ ಪೊಲೀಸರಿಗೆ ಶರಣಾಗಿದ್ದಾನೆ. ಸಿಸಿಟಿವಿ ದೃಶ್ಯಗಳನ್ನು ನೋಡಿ ಶರಣಾದ ಆರೋಪಿ ಈತನೇ ಎಂದು ಪೊಲೀಸರು ಈತನನ್ನು ದಸ್ತಗಿರಿ ಮಾಡಿದ್ದಾರೆ ಎಂದು ಆಯುಕ್ತರು ತಿಳಿಸಿದರು.

'ಬಿಇ ಮೆಕ್ಯಾನಿಕ್‌, ಎಂಬಿಎ ಪದವೀಧರ'

ಆದಿತ್ಯರಾವ್ ಮೈಸೂರಿನಲ್ಲಿ ಬಿಇ ಮೆಕ್ಯಾನಿಕ್ ಪದವಿ ಹಾಗೂ ಎಂಬಿಎ ಪದವಿ ಪಡೆದಿದ್ದ. ಈತ ಬ್ಯಾಂಕಿಂಗ್ ಹಾಗೂ ಇನ್ಸೂರೆನ್ಸ್ ಕ್ಷೇತ್ರದಲ್ಲಿಯೂ ಕೆಲಸ ಮಾಡಿದ್ದಾನೆ. ಆದ್ರೆ, ಈತ ಸುದೀರ್ಘವಾಗಿ ಎಲ್ಲೂ ಕೆಲಸ ಮಾಡಿಲ್ಲ. ಈತನಿಗೆ ಇಂಡೋರ್‌ನಲ್ಲಿ ಕೆಲಸ ಮಾಡುವ ಆಸಕ್ತಿ ಕಡಿಮೆಯಾಗಿತ್ತು.

ಬೆಂಗಳೂರಿನ ಪ್ರತಿಷ್ಠಿತ ಕಂಪನಿಯಲ್ಲಿ ಕೆಲಸಮಾಡಿ ಬಿಟ್ಟು ನಂತರ ಆಳ್ವಾಸ್ ಕಾಲೇಜಿನಲ್ಲಿ, ಎಸ್‌.ಡಿ.ಎಂ ಕಾಲೇಜು ಉಜಿರೆ, ಮೂಡಬಿದಿರೆ ಎಂಐಟಿ ಕಾಲೇಜಿನಲ್ಲೂ ಕೆಲಸ ಮಾಡುತ್ತಾನೆ. ನಂತರ ಬಾರ್‌ನಲ್ಲಿ ಊಟ, ವಸತಿ ಸಿಗುತ್ತೆ ಅಂತ ಅಲ್ಲೂ ಕೆಲಸ ಮಾಡಿದ್ದಾನೆ. ಅನೇಕ‌ ಹೋಟೆಲ್‌ಗಳಲ್ಲಿ ಕೆಲಸ ಮಾಡಿದ್ದಾಗಿ ಆರೋಪಿ ವಿಚಾರಣೆ ವೇಳೆ ಹೇಳಿರುವುದಾಗಿ ಆಯುಕ್ತರು ತಿಳಿಸಿದ್ರು.

'ಏರ್‌ಪೋರ್ಟ್‌ನಲ್ಲಿ ಕೆಲಸ ಸಿಗದಿದ್ದಕ್ಕೆ Revenge'

ಬೆಂಗಳೂರು ವಿಮಾನ ನಿಲ್ದಾಣದಲ್ಲಿ ಸೆಕ್ಯುರಿಟಿ ಕೆಲಸ ಸಿಗದ ಹಿನ್ನೆಲೆಯಲ್ಲಿ ವಿಮಾನ ಇಲಾಖೆ ಕುರಿತು ಸ್ಟಡಿ ಮಾಡುತ್ತಾನೆ. 2018ರಲ್ಲಿ ಬೆಂಗಳೂರು ವಿಮಾನ ನಿಲ್ದಾಣದ ಅಧಿಕಾರಿಗಳಿಗೆ 2 ಬಾರಿ ಬೆದರಿಕೆ ಕಾಲ್ ಮಾಡಿದ್ದಾನೆ. ನಂತರ ರೈಲ್ವೆ ಇಲಾಖೆಗೂ ಬೆದರಿಕೆ ಕಾಲ್ ಮಾಡಿದ್ದಾನೆ. ಹೀಗೆ ಒಟ್ಟು 3 ಪ್ರಕರಣ ಇವನ ವಿರುದ್ಧ ದಾಖಲು ಆಗಿತ್ತು. ಚಿಕ್ಕಬಳ್ಳಾಪುರ ಜೈಲಿನಲ್ಲಿ 1 ವರ್ಷ ಜೈಲುವಾಸ ಅನುಭವಿಸುತ್ತಾನೆ. ನಂತರ ಜೈಲಿನಿಂದ ಹೊರ ಬಂದು ನಂತರ ವಿಮಾನ ನಿಲ್ದಾಣಕ್ಕೆ ಏನಾದರೂ ಮಾಡಬೇಕು ಅಂತ ವಿವಿಧ ರೀತಿಯಲ್ಲಿ ಆರೋಪಿ ಅಧ್ಯಯನ ಮಾಡುತ್ತಾನೆ ಎಂದರು.

ಮಂಗಳೂರು ವಿಮಾನ‌ ನಿಲ್ದಾಣದಲ್ಲಿ ಬಾಂಬ್ ಇರಿಸಿದ ಮತ್ತು ಇಂಡಿಗೋ ವಿಮಾನದಲ್ಲಿ ಬಾಂಬ್ ಇದೆ ಎಂದು ಹುಸಿ ಕರೆ ಮಾಡಿದ ಹಿನ್ನೆಲೆ ಎರಡು ಗಂಭೀರ ಪ್ರಕರಣವನ್ನು ಈತನ ವಿರುದ್ಧ ದಾಖಲಿಸಿದ್ದೇವೆ. ಇವತ್ತು ವೈದ್ಯಕೀಯ ಪರೀಕ್ಷೆ ಮಾಡಿಸಿ ನ್ಯಾಯಾಲಯಕ್ಕೆ ಹಾಜರುಪಡಿಸುತ್ತೇವೆ. ಟೈಮ್ ಇಟ್ಟು ಸ್ಫೋಟ ಮಾಡುವ ಉದ್ದೇಶ ಹೊಂದಿದ್ದ ಈತ ಒಬ್ಬನೇ ಈ ಕೃತ್ಯ ಎಸಗಿರೋದಾಗಿ ಡಾ. ಪಿ.ಎಸ್. ಹರ್ಷ ಸ್ಪಷ್ಟಪಡಿಸಿದರು.

ಮಂಗಳೂರು: ನಗರದ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿ ಬಾಂಬ್ ಇರಿಸಿದ ಆರೋಪಿ ಆದಿತ್ಯರಾವ್ ಬೆಂಗಳೂರು ವಿಮಾನ ನಿಲ್ದಾಣದಲ್ಲಿ ಸೆಕ್ಯುರಿಟಿ ಕೆಲಸ ಸಿಗದ ಕೋಪದಲ್ಲಿ ಕೃತ್ಯ ಎಸಗಿದ್ದಾನೆ ಎಂದು ಮಂಗಳೂರು ಪೊಲೀಸ್ ಕಮೀಷನರ್ ಡಾ. ಪಿ. ಎಸ್. ಹರ್ಷ ತಿಳಿಸಿದ್ದಾರೆ.

'ಇಂಟರ್‌ನೆಟ್‌ ಮೂಲಕ ಬಾಂಬ್‌ ತಯಾರಿಸೋದನ್ನು ಕಲಿತ'

ಬೆಂಗಳೂರು ಏರ್‌ಪೋರ್ಟ್​ನಲ್ಲಿ ಸೆಕ್ಯೂರಿಟಿ ಕೆಲಸಕ್ಕೆ ಪ್ರಯತ್ನಿಸಿದ್ದ, ಆದರೆ ಅದು ಬೇರೆಯವರ ಪಾಲಾಗಿತ್ತು. ಇದರಿಂದ ಕೋಪಗೊಂಡು ವಿಮಾನ ನಿಲ್ದಾಣಕ್ಕೆ ಹುಸಿ ಬಾಂಬ್​ ಬೆದರಿಕೆ ಕರೆ ಮಾಡುವುದಕ್ಕೆ ಶುರು ಮಾಡಿದ್ದಾನೆ. ರೈಲ್ವೆ ನಿಲ್ದಾಣಕ್ಕೂ ಬಾಂಬ್​ ಬೆದರಿಕೆ ಹಾಕಿ ಬಂಧಿತನಾಗಿದ್ದ. ಇದರಿಂದ ಮತ್ತಷ್ಟು ಆಕ್ರೋಶಗೊಂಡು ಇಂಟರ್‌ನೆಟ್​ ಮೂಲಕ ಬಾಂಬ್​​ ತಯಾರಿಕಾ ವಸ್ತುಗಳನ್ನು ತರಿಸಿ ಸ್ವತಃ ತಾನೇ ಬಾಂಬ್​ ತಯಾರಿಸಿ ವಿಮಾನ ನಿಲ್ದಾಣ ಸ್ಟೋಟಗೊಳಿಸಲು ಸಂಚು ರೂಪಿಸಿದ್ದ ಎಂದು ಪೊಲೀಸ್ ಕಮೀಷನರ್ ಡಾ. ಪಿ. ಎಸ್. ಹರ್ಷ ವಿವರಿಸಿದ್ರು.

ಮಂಗಳೂರು ಪೊಲೀಸ್ ಕಮೀಷನರ್

ಮಂಗಳೂರು ಕುಡ್ಲ ರೆಸ್ಟೋರೆಂಟ್‌ನಲ್ಲಿ ಕೆಲಸ ಮಾಡುತ್ತಾ ಬಾಂಬ್​​​ ತಯಾರಿಸಿ ಅಲ್ಲಿದ್ದರೆ ಅನುಮಾನ ಬರುತ್ತದೆ ಎಂದು ಕಾರ್ಕಳದ ಹೋಟೆಲ್​ವೊಂದರಲ್ಲಿ ಕೆಲಸಕ್ಕೆ ಸೇರಿದ್ದಾನೆ. ಬಳಿಕ ಅಲ್ಲಿಂದ ಜ. 20 ರಂದು ಮಂಗಳೂರಿಗೆ ಬಂದು ಬಜ್ಪೆಗೆ ತೆರಳಿ ಅಲ್ಲಿ ಸೆಲೂನ್​ವೊಂದಕ್ಕೆ ತೆರಳಿದ್ದಾನೆ. ಇಲ್ಲಿ ತಾನು ತಂದಿದ್ದ ಬ್ಯಾಗನಿಂದ ಬಾಂಬ್​ ತೆಗೆದುಕೊಂಡು ವಿಮಾನ ನಿಲ್ದಾಣಕ್ಕೆ ಬಂದು ಬಾಂಬ್​ ಇಟ್ಟು ತೆರಳಿದ್ದಾನೆ. ಬಳಿಕ ಪೊಲೀಸರ ಕಣ್ಣು ತಪ್ಪಿಸಿಕೊಳ್ಳಲು ಶಿರಸಿ, ಶಿವಮೊಗ್ಗ ನಂತರ ಬೆಂಗಳೂರಿಗೆ ತೆರಳಿ ಅಲ್ಲಿ ಪೊಲೀಸರಿಗೆ ಶರಣಾಗಿದ್ದಾನೆ. ಸಿಸಿಟಿವಿ ದೃಶ್ಯಗಳನ್ನು ನೋಡಿ ಶರಣಾದ ಆರೋಪಿ ಈತನೇ ಎಂದು ಪೊಲೀಸರು ಈತನನ್ನು ದಸ್ತಗಿರಿ ಮಾಡಿದ್ದಾರೆ ಎಂದು ಆಯುಕ್ತರು ತಿಳಿಸಿದರು.

'ಬಿಇ ಮೆಕ್ಯಾನಿಕ್‌, ಎಂಬಿಎ ಪದವೀಧರ'

ಆದಿತ್ಯರಾವ್ ಮೈಸೂರಿನಲ್ಲಿ ಬಿಇ ಮೆಕ್ಯಾನಿಕ್ ಪದವಿ ಹಾಗೂ ಎಂಬಿಎ ಪದವಿ ಪಡೆದಿದ್ದ. ಈತ ಬ್ಯಾಂಕಿಂಗ್ ಹಾಗೂ ಇನ್ಸೂರೆನ್ಸ್ ಕ್ಷೇತ್ರದಲ್ಲಿಯೂ ಕೆಲಸ ಮಾಡಿದ್ದಾನೆ. ಆದ್ರೆ, ಈತ ಸುದೀರ್ಘವಾಗಿ ಎಲ್ಲೂ ಕೆಲಸ ಮಾಡಿಲ್ಲ. ಈತನಿಗೆ ಇಂಡೋರ್‌ನಲ್ಲಿ ಕೆಲಸ ಮಾಡುವ ಆಸಕ್ತಿ ಕಡಿಮೆಯಾಗಿತ್ತು.

ಬೆಂಗಳೂರಿನ ಪ್ರತಿಷ್ಠಿತ ಕಂಪನಿಯಲ್ಲಿ ಕೆಲಸಮಾಡಿ ಬಿಟ್ಟು ನಂತರ ಆಳ್ವಾಸ್ ಕಾಲೇಜಿನಲ್ಲಿ, ಎಸ್‌.ಡಿ.ಎಂ ಕಾಲೇಜು ಉಜಿರೆ, ಮೂಡಬಿದಿರೆ ಎಂಐಟಿ ಕಾಲೇಜಿನಲ್ಲೂ ಕೆಲಸ ಮಾಡುತ್ತಾನೆ. ನಂತರ ಬಾರ್‌ನಲ್ಲಿ ಊಟ, ವಸತಿ ಸಿಗುತ್ತೆ ಅಂತ ಅಲ್ಲೂ ಕೆಲಸ ಮಾಡಿದ್ದಾನೆ. ಅನೇಕ‌ ಹೋಟೆಲ್‌ಗಳಲ್ಲಿ ಕೆಲಸ ಮಾಡಿದ್ದಾಗಿ ಆರೋಪಿ ವಿಚಾರಣೆ ವೇಳೆ ಹೇಳಿರುವುದಾಗಿ ಆಯುಕ್ತರು ತಿಳಿಸಿದ್ರು.

'ಏರ್‌ಪೋರ್ಟ್‌ನಲ್ಲಿ ಕೆಲಸ ಸಿಗದಿದ್ದಕ್ಕೆ Revenge'

ಬೆಂಗಳೂರು ವಿಮಾನ ನಿಲ್ದಾಣದಲ್ಲಿ ಸೆಕ್ಯುರಿಟಿ ಕೆಲಸ ಸಿಗದ ಹಿನ್ನೆಲೆಯಲ್ಲಿ ವಿಮಾನ ಇಲಾಖೆ ಕುರಿತು ಸ್ಟಡಿ ಮಾಡುತ್ತಾನೆ. 2018ರಲ್ಲಿ ಬೆಂಗಳೂರು ವಿಮಾನ ನಿಲ್ದಾಣದ ಅಧಿಕಾರಿಗಳಿಗೆ 2 ಬಾರಿ ಬೆದರಿಕೆ ಕಾಲ್ ಮಾಡಿದ್ದಾನೆ. ನಂತರ ರೈಲ್ವೆ ಇಲಾಖೆಗೂ ಬೆದರಿಕೆ ಕಾಲ್ ಮಾಡಿದ್ದಾನೆ. ಹೀಗೆ ಒಟ್ಟು 3 ಪ್ರಕರಣ ಇವನ ವಿರುದ್ಧ ದಾಖಲು ಆಗಿತ್ತು. ಚಿಕ್ಕಬಳ್ಳಾಪುರ ಜೈಲಿನಲ್ಲಿ 1 ವರ್ಷ ಜೈಲುವಾಸ ಅನುಭವಿಸುತ್ತಾನೆ. ನಂತರ ಜೈಲಿನಿಂದ ಹೊರ ಬಂದು ನಂತರ ವಿಮಾನ ನಿಲ್ದಾಣಕ್ಕೆ ಏನಾದರೂ ಮಾಡಬೇಕು ಅಂತ ವಿವಿಧ ರೀತಿಯಲ್ಲಿ ಆರೋಪಿ ಅಧ್ಯಯನ ಮಾಡುತ್ತಾನೆ ಎಂದರು.

ಮಂಗಳೂರು ವಿಮಾನ‌ ನಿಲ್ದಾಣದಲ್ಲಿ ಬಾಂಬ್ ಇರಿಸಿದ ಮತ್ತು ಇಂಡಿಗೋ ವಿಮಾನದಲ್ಲಿ ಬಾಂಬ್ ಇದೆ ಎಂದು ಹುಸಿ ಕರೆ ಮಾಡಿದ ಹಿನ್ನೆಲೆ ಎರಡು ಗಂಭೀರ ಪ್ರಕರಣವನ್ನು ಈತನ ವಿರುದ್ಧ ದಾಖಲಿಸಿದ್ದೇವೆ. ಇವತ್ತು ವೈದ್ಯಕೀಯ ಪರೀಕ್ಷೆ ಮಾಡಿಸಿ ನ್ಯಾಯಾಲಯಕ್ಕೆ ಹಾಜರುಪಡಿಸುತ್ತೇವೆ. ಟೈಮ್ ಇಟ್ಟು ಸ್ಫೋಟ ಮಾಡುವ ಉದ್ದೇಶ ಹೊಂದಿದ್ದ ಈತ ಒಬ್ಬನೇ ಈ ಕೃತ್ಯ ಎಸಗಿರೋದಾಗಿ ಡಾ. ಪಿ.ಎಸ್. ಹರ್ಷ ಸ್ಪಷ್ಟಪಡಿಸಿದರು.

Intro:ಮಂಗಳೂರು: ಮಂಗಳೂರು ಅಂತರಾಷ್ಟ್ರೀಯ ವಿಮಾನ ನಿಲ್ದಾಣಕ್ಕೆ ಬಾಂಬ್ ಇರಿಸಿದ ಆರೋಪಿ ಆದಿತ್ಯರಾವ್ ಬೆಂಗಳೂರು ವಿಮಾನ ನಿಲ್ದಾಣದಲ್ಲಿ ಸೆಕ್ಯುರಿಟಿ ಕೆಲಸ ಸಿಗದ ಕೋಪದ ಹಿನ್ನೆಲೆಯಲ್ಲಿ ಮಂಗಳೂರು ಏರ್ ಪೋರ್ಟ್ ನಲ್ಲಿ ಬಾಂಬ್ ಇರಿಸಿದ್ದ ಎಂದು ಮಂಗಳೂರು ಪೊಲೀಸ್ ಕಮೀಷನರ್ ಡಾ ಪಿ ಎಸ್ ಹರ್ಷ ತಿಳಿಸಿದ್ದಾರೆ.Body:

ಮಂಗಳೂರಿನಲ್ಲಿ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು ಬೆಂಗಳೂರು ಏರ್ ಪೋರ್ಟ್ ನಲ್ಲಿ ಸೆಕ್ಯುರಿಟಿ ಕೆಲಸ ಪ್ರಯತ್ನಿಸಿದ್ದ.ಅದಕ್ಕೆ ಬೇಕಾದ ಕಾನೂನು ಪತ್ರ ತಯಾರು ಮಾಡಿ ಬೆಂಗಳೂರಿಗೆ ಹೋದಾಗ ಅದು ಕೆಲಸ ಬೇರೆಯವರ ಪಾಲಾಗಿತ್ತು. ಅದಕ್ಕಾಗಿ ಬೆಂಗಳೂರು ಏರ್ ಫೋರ್ಟ್ ಗೆ ಹುಸಿ ಬಾಂಬ್ ಬೆದರಿಕೆ ಕರೆ ಮಾಡಿದ್ದ. ರೈಲ್ವೆ ನಿಲ್ದಾಣಕ್ಕೂ ಹುಸಿ ಬಾಂಬ್ ಬೆದರಿಕೆ ಕರೆ ಮಾಡಿದ. ಈ ಪ್ರಕರಣದಲ್ಲಿ ಬಂಧಿತನಾಗಿದ್ದ ಬಳಿಕ ಮತ್ತಷ್ಟು ಆಕ್ರೋಶಗೊಂಡು ಬಾಂಬ್ ತಯಾರಿಸಿ ಮಂಗಳೂರು ವಿಮಾನ ನಿಲ್ದಾಣ ಸ್ಪೋಟಿಸಲು ಸಂಚು ರೂಪಿಸಿದ ಎಂದು ಅವರು ಹೇಳಿದ್ದಾರೆ.
ಮಂಗಳೂರಿಗೆ ಬಂದ ಬಳಿಕ ಇಂಟರ್ ನೆಟ್ ಶೋಧ ಮಾಡಿ ಬಾಂಬ್ ತಯಾರಿ ಮಾಡುವುದನ್ನು ಅಧ್ಯಯನ ಮಾಡಿ ಬಾಂಬ್ ತಯಾರಿಸಿದ್ದಾನೆ ಎಂದರು.

ಮಂಗಳೂರಿನ ಕುಡ್ಲ ರೆಸ್ಟೋರೆಂಟ್ ನಲ್ಲಿ ಕೆಲಸ ಮಾಡುತ್ತಿರುವಾಗ ಬಾಂಬ್ ತಯಾರಿಗೆ ಬೇಕಾದ ಸಾಮಾಗ್ರಿಗಳನ್ನು ತರಿಸಿ ಆತ ಒಬ್ಬನೆ ಬಾಂಬ್ ತಯಾರಿ ಮಾಡಿದ್ದ. ಬಾಂಬ್ ತಯಾರಿ ಮಾಡಿದ ಬಳಿಕ ಮಂಗಳೂರಿನ ಕುಡ್ಲ ರೆಸ್ಟೋರೆಂಟ್ ನ ಕೆಲಸ ಬಿಟ್ಟು ಕಾರ್ಕಳದ ಹೋಟೆಲ್ ವೊಂದರಲ್ಲಿ ಕೆಲಸಕ್ಕೆ ಸೇರಿ ಅಲ್ಲಿಂದ ಜ. 20 ರಂದು ಮಂಗಳೂರಿಗೆ ಬಸ್ ನಲ್ಲಿ ಬಂದು ಮಂಗಳೂರಿನಿಂದ ಬಜ್ಪೆ ಗೆ ಸಿಟಿ ಬಸ್ ನಲ್ಲಿ ತೆರಳಿದ್ದಾನೆ. ಬಜ್ಪೆ ಕೆಂಜಾರ್ ನಲ್ಲಿ ಬಸ್ ನಲ್ಲಿ ಇಳಿದು ಸೆಲೂನ್ ವೊಂದರಲ್ಲಿ ತನ್ನಲ್ಲಿದ್ದ ದೊಡ್ಡ ಬ್ಯಾಗ್ ನಿಂದ ಬಾಂಬ್ ಇರುವ ಬ್ಯಾಗ್ ತೆಗೆದು ದೊಡ್ಡ ಬ್ಯಾಗ್ ಸೆಲೂನ್ ಹೊರಗೆ ಇರಿಸಿ ಅಲ್ಲಿಂದ ರಿಕ್ಷಾ ದಲ್ಲಿ ವಿಮಾನ ನಿಲ್ದಾಣಕ್ಕೆ ತೆರಳಿ ಬಾಂಬ್ ಇಟ್ಟು ತೆರಳಿದ್ದಾನೆ. ಬಾಂಬ್ ಇಟ್ಟು ತೆರಳಿದ ಆದಿತ್ಯ ರಾವ್ ಶಿರಸಿ ಶಿವಮೊಗ್ಗ ಕಡೆ ಹೋಗಿದ್ದು ಅಲ್ಲಿ ಪೊಲೀಸರು ಹುಡುಕಾಟ ನಡೆಯುತ್ತಿರುವುದನ್ನು ಗಮನಿಸಿ ಶಿವಮೊಗ್ಗದಿಂದ ಬೆಂಗಳೂರು ಬಸ್ ಹತ್ತಿ ಬೆಂಗಳೂರಿನಲ್ಲಿ ಶರಣಾಗಿದ್ದಾನೆ ಎಂದು ತಿಳಿಸಿದ್ದಾರೆ.

ನಮ್ಮ ಬಳಿ ಇದ್ದ ಸಿಸಿ ಟಿವಿ ಪೂಟೇಜ್ ಪೋಟೋ ತಾಳೆ ಹಾಕಿ ನೋಡಿದಾಗ ಬೆಂಗಳೂರಿನಲ್ಲಿ ಶರಣಾದ ಆರೋಪಿ‌ ಈತನೇ ಎಂದು ದಸ್ತಗಿರಿ ಮಾಡಿರುತ್ತೇವೆ. ನಿನ್ನೆ ರಾತ್ರಿ 9 ಗಂಟೆಗೆ ಮಂಗಳೂರಿಗೆ ಕರೆ ತಂದು ಪ್ರಕರಣ ಕುರಿತು ಪ್ರಶ್ನೆ ಮಾಡಿ ತನಿಖೆ ಮಾಡುತ್ತಿದ್ದೇವೆ. ಈತ ಮೂಲತ ಉಡುಪಿಯವನಾಗಿದ್ದು ಈತ 37 ವರ್ಷ ವಯಸ್ಸಿನವನಾಗಿದ್ದಾನೆ. ಮೈಸೂರಿನಲ್ಲಿ ಬಿಇ ಮೆಕಾನಿಕ್ ಪದವಿ, ಹಾಗೂ ಎಂಬಿಎ ಪದವಿ ಪಡೆದಿದ್ದ. ಈತ ಬ್ಯಾಂಕಿಂಗ್ ಹಾಗೂ ಇನ್ಸೂರೆನ್ಸ್ ಕ್ಷೇತ್ರದಲ್ಲಿ ಕೆಲಸ ಮಾಡಿದ್ದಾನೆ.ಸುದೀರ್ಘವಾಗಿ ಎಲ್ಲೂ ಕೆಲಸ ಮಾಡಿಲ್ಲ. ಈತನಿಗೆ ಇಂಡೋರ್ ಕೆಲಸ ಮಾಡುವ ಆಸಕ್ತಿ ಕಡಿಮೆಯಾಗಿತ್ತು.
ಬಳಿಕ ಬೆಂಗಳೂರಿನ ಪೀಣ್ಯದಲ್ಲಿ ಕಂಪನಿಯಲ್ಲಿ ನಂತರ ಪ್ರತಿಷ್ಠಿತ ಕಂಪನಿಗೆ ಮಾಡಿ ಸುಳ್ಳು ದಾಖಲೆ ಸೃಷ್ಟಿಸಿ ಕೆಲಸ ಗಿಟ್ಟಿಸಿ ನಂತರ ಗೊತ್ತಾಗುತ್ತದೆ ಅಂತ ಅಲ್ಲಿಯೂ ಕೆಲಸ ಬಿಟ್ಟಿದ್ದಾನೆ.ವೈಟ್ ಕಾಲರ್ ಜಾರ್ ಸರಿ ಸಿಗಲಿಲ್ಲ ಅಂತ ಬ್ಲೂ ಕಲರ್ ಜಾಬ್ ಹುಡುಕುತ್ತಾನೆ.ನಂತರ ಸೆಕ್ಯುರಿಟಿ ಕೆಲಸ ಮಾಡುತ್ತಾನೆ. ಆಳ್ವಾಸ್ ಕಾಲೇಜಿನಲ್ಲಿ, ಎಸ್ ಡಿ ಎಂ ಕಾಲೇಜು ಉಜಿರೆ, ಮೂಡಬಿದಿರೆ ಎಂಐಟಿ ಕಾಲೇಜಿನಲ್ಲೂ ಕೆಲಸ ಮಾಡುತ್ತಾನೆ.ನಂತರ ಬಾರ್ ನಲ್ಲಿ ಊಟ ವಸತಿ ಸಿಗುತ್ತೆ ಅಂತ ಕೆಲಸ ಮಾಡುತ್ತಾನೆ.ನಂತರ ಅನೇಕ‌ ಹೋಟೆಲ್ ನಲ್ಲಿ ಕೆಲಸ ಮಾಡಿದ್ದಾನೆ ಅಂತ ಹೇಳಿದ್ದಾನೆ ಎಂದರು.

ಬೆಂಗಳೂರು ವಿಮಾನ ನಿಲ್ದಾಣದಲ್ಲಿ ಸೆಕ್ಯುರಿಟಿ ಕೆಲಸ ಸಿಗದ ಹಿನ್ನೆಲೆಯಲ್ಲಿ ನಂತರ ವಿಮಾನ ಇಲಾಖೆ ಕುರಿತು ಸ್ಟಡಿ ಮಾಡುತ್ತಾನೆ. 2018ರಲ್ಲಿ ಬೆಂಗಳೂರು ವಿಮಾನ ನಿಲ್ದಾಣದ ಅಧಿಕಾರಿಗಳಿಗೆ 2 ಬಾರಿ ಬೆದರಿಕೆ ಕಾಲ್ ಮಾಡಿದ್ದಾನೆ.ನಂತರ ರೈಲ್ವೆ ಇಲಾಖೆಗೂ ಬೆದರಿಕೆ ಕಾಲ್ ಮಾಡಿದ್ದಾನೆ. ಹೀಗೆ ಒಟ್ಟು 3 ಪ್ರಕರಣ ಇವನ ವಿರುದ್ಧ ದಾಖಲು ಆಗಿತ್ತು.

ಚಿಕ್ಕ ಬಳ್ಳಾಪುರ ಜೈಲಿನಲ್ಲಿ 1 ವರ್ಷ ಜೈಲು ವಾಸ ಅನುಭವಿಸುತ್ತಾನೆ.ನಂತರ ಜೈಲಿನಿಂದ ಹೊರ ಬಂದು ನಂತರ ವಿಮಾನ ನಿಲ್ದಾಣ ಕ್ಕೆ ಏನಾದರೂ ಮಾಡಬೇಕು ಅಂತ ವಿವಿಧ ರೀತಿಯಲ್ಲಿ ಸ್ಟಡಿ ಮಾಡುತ್ತಾನೆ. ಬಾಂಬ್ ತಯಾರಿಕೆ ಕುರಿತು ಅದ್ಯಯನ ಮಾಡುತ್ತಾನೆ.ಆನ್ ಲೈನ್ ಮೂಲಕ ತರಿಸಿ ಹೇಗೆ ಬಾಂಬ್ ತಯಾರಿ ಮಾಡಬಹುದು ಎಂದು ತಿಳಿದುಕೊಳ್ಳುತ್ತಾನೆ.ಬೇರೆ ವಸ್ತುಗಳನ್ನು ತರಿಸಿ ಬಾಂಬ್ ತಯಾರಿಸುತ್ತಾನೆ ಎಂದು ತಿಳಿಸಿದರು.
ಕುಡ್ಲ ರೆಸ್ಟೋರೆಂಟ್ ನಲ್ಲಿ ವೀಕ್ಲಿ ಆಫ್ ಸಂದರ್ಭದಲ್ಲಿ ಇದೇ ಬಾಂಬ್ ತಯಾರಿಕೆ ಕೆಲಸ ಮಾಡುತ್ತಾನೆ.ಅದಾದ ಮೇಲೆ ಎಲ್ಲ ತಯಾರು ಆದ ನಂತರ ಕೊನೆಯ ಭಾಗ ಜೋಡಿಸದೇ ಅನುಮಾನ ಬರಬಹುದು ಅಂತಕಾರ್ಕಳದಲ್ಲಿ ಹೋಟೆಲ್ ಕೆಲಸಕ್ಕೆ ಸೇರಿಕೊಳ್ಳುತ್ತಾನೆ ಎಂದರು.

ಈತ ಮಂಗಳೂರು ವಿಮಾನ‌ ನಿಲ್ದಾಣದಲ್ಲಿ ಬಾಂಬ್ ಇರಿಸಿದ ಮತ್ತು ಇಂಡಿಗೋ ವಿಮಾನದಲ್ಲಿ ಬಾಂಬ್ ಇದೆ ಎಂದು ಹುಸಿ ಕರೆ ಮಾಡಿದ ಹಿನ್ನೆಲೆಯಲ್ಲಿ
ಎರಡು ಗಂಭೀರ ಪ್ರಕರಣ ದಾಖಲಿಸಿದ್ದೇವೆ.ಇವತ್ತು ವೈದ್ಯಕೀಯ ಪರೀಕ್ಷೆ ಮಾಡಿಸಿ ನ್ಯಾಯಾಲಯಕ್ಕೆ ಹಾಜರು ಪಡಿಸುತ್ತೇವೆ.ಟೈಮ್ ಇಟ್ಟು ಸ್ಪೋಟ ಮಾಡುವ ಉದ್ದೇಶ ಹೊಂದಿದ್ದ.ಈತ ಒಬ್ಬ ವ್ಯಕ್ತಿಯೇ ಮಾಡಿದ್ದಾನೆ ಅಂತ ಇಷ್ಟರ ವರೆಗಿನ ತನಿಖೆಯಲ್ಲಿ ತಿಳಿದು ಬಂದಿದೆ ಎಂದು ಅವರು ಹೇಳಿದ್ದಾರೆ.

ಬೈಟ್- ಡಾ ಪಿ ಎಸ್ ಹರ್ಷ, ಮಂಗಳೂರು ಪೊಲೀಸ್ ಕಮೀಷನರ್Conclusion:
Last Updated : Jan 23, 2020, 1:53 PM IST
ETV Bharat Logo

Copyright © 2025 Ushodaya Enterprises Pvt. Ltd., All Rights Reserved.