ETV Bharat / city

ಜ. 7ರಂದು ಉಡುಪಿಯಲ್ಲಿ ಪರ್ಯಾಯ.. ಕುಕ್ಕೆ ದೇಗುಲಕ್ಕೆ ಅದಮಾರು ಯತಿಗಳ ಭೇಟಿ..

ಕುಕ್ಕೆ ಸುಬ್ರಹ್ಮಣ್ಯ ದೇವಸ್ಥಾನ ಹಾಗೂ ಶ್ರೀ ಸಂಪುಟ ನರಸಿಂಹ ಸ್ವಾಮಿ ಮಠಕ್ಕೆ ಉಡುಪಿ ಅದಮಾರು ಮಠದ ಕಿರಿಯ ಯತಿಗಳಾದ ಈಶಪ್ರಿಯ ತೀರ್ಥ ಶ್ರೀಗಳು ಇಂದು ಭೇಟಿ ನೀಡಿದ್ದಾರೆ.

author img

By

Published : Jan 1, 2020, 5:16 PM IST

Updated : Jan 1, 2020, 5:32 PM IST

ka_dk_01_swamiji_visit_av_pho_kac10008
ಜ. 07 ರಂದು ಸುಬ್ರಹ್ಮಣ್ಯದಲ್ಲಿ ಪರ್ಯಾಯ, ಕುಕ್ಕೆ ದೇಗುಲಕ್ಕೆ ಭೇಟಿ ನೀಡಿದ ಅದಮಾರು ಯತಿಗಳು

ಸುಬ್ರಹ್ಮಣ್ಯ: ಕುಕ್ಕೆ ಸುಬ್ರಹ್ಮಣ್ಯ ದೇವಸ್ಥಾನ ಹಾಗೂ ಶ್ರೀ ಸಂಪುಟ ನರಸಿಂಹ ಸ್ವಾಮಿ ಮಠಕ್ಕೆ ಉಡುಪಿ ಅದಮಾರು ಮಠದ ಕಿರಿಯ ಯತಿಗಳಾದ ಈಶಪ್ರಿಯ ತೀರ್ಥ ಶ್ರೀಗಳು ಇಂದು ಭೇಟಿ ನೀಡಿದ್ದಾರೆ.

ದೇಗುಲಕ್ಕೆ ಆಗಮಿಸಿದ ಯತಿಗಳನ್ನು ಕಾಶಿಕಟ್ಟೆಯಲ್ಲಿ ಸ್ವಾಗತಿಸಿದ ಬಳಿಕ ಭವ್ಯ ಮೆರವಣಿಗೆಯಲ್ಲಿ ದೇಗುಲಕ್ಕೆ ಕರೆದೊಯ್ಯಲಾಯಿತು. ಶ್ರೀ ಸುಬ್ರಹ್ಮಣ್ಯ ಸ್ವಾಮಿಯ ದರ್ಶನ ಪಡೆದ ಬಳಿಕ ಶ್ರೀಗಳು ಸಂಪುಟ ನರಸಿಂಹ ದೇವರ ದರ್ಶನ ಪಡೆದಿದ್ದಾರೆ. ಮಧ್ಯಾಹ್ನ ಅದಮಾರು ಪೀಠದ ಚತುರ್ಭುಜ ಕಾಳಿಯ ಮರ್ಧನ ಶ್ರೀ ದೇವರಿಗೆ ಪೂಜಾಕೈಂಕರ್ಯ ನೆರವೇರಿಸಿದರು.

ಮಧ್ವಾಚಾರ್ಯರ ಶ್ರೀ ಸಂಪುಟ ನರಸಿಂಹ ಸ್ವಾಮಿ ಶ್ರೀ ಸುಬ್ರಹ್ಮಣ್ಯ ಮಠದ ಮೂಲ ಸಂಪ್ರದಾಯ ಪ್ರಕಾರ ಉಡುಪಿಯಲ್ಲಿ ಪರ್ಯಾಯ ನಡೆಯುವ ಮೊದಲು ಯತಿಗಳಿಗೆ ಭಿಕ್ಷೆ ನೀಡುವುದು ಹಾಗೂ ಪರ್ಯಾಯಕ್ಕೆ ಬೇಕಾದ ಅಕ್ಕಿ, ತೆಂಗಿನಕಾಯಿ, ದವಸ ಧಾನ್ಯಗಳನ್ನು ಕಾಣಿಕೆ ರೂಪದಲ್ಲಿ ಸಮರ್ಪಣೆ ಮಾಡುವುದು ಮೂಲ ಸಂಪ್ರದಾಯ. ಅದರಂತೆ ಶ್ರೀಗಳು ಆಗಮಿಸಿದ್ದಾರೆ ಎನ್ನಲಾಗಿದೆ.

ಈ ಬಾರಿ ಪರ್ಯಾಯವು ಉಡುಪಿಯಲ್ಲಿ ಜನವರಿ 7ರಂದು ನಡೆಯಲಿದೆ. ಈ ಬಾರಿ ಅದಮಾರು ಮಠದ ಶ್ರೀಗಳು ಪರ್ಯಾಯ ನಡೆಸಲಿದ್ದಾರೆ.

ಸುಬ್ರಹ್ಮಣ್ಯ: ಕುಕ್ಕೆ ಸುಬ್ರಹ್ಮಣ್ಯ ದೇವಸ್ಥಾನ ಹಾಗೂ ಶ್ರೀ ಸಂಪುಟ ನರಸಿಂಹ ಸ್ವಾಮಿ ಮಠಕ್ಕೆ ಉಡುಪಿ ಅದಮಾರು ಮಠದ ಕಿರಿಯ ಯತಿಗಳಾದ ಈಶಪ್ರಿಯ ತೀರ್ಥ ಶ್ರೀಗಳು ಇಂದು ಭೇಟಿ ನೀಡಿದ್ದಾರೆ.

ದೇಗುಲಕ್ಕೆ ಆಗಮಿಸಿದ ಯತಿಗಳನ್ನು ಕಾಶಿಕಟ್ಟೆಯಲ್ಲಿ ಸ್ವಾಗತಿಸಿದ ಬಳಿಕ ಭವ್ಯ ಮೆರವಣಿಗೆಯಲ್ಲಿ ದೇಗುಲಕ್ಕೆ ಕರೆದೊಯ್ಯಲಾಯಿತು. ಶ್ರೀ ಸುಬ್ರಹ್ಮಣ್ಯ ಸ್ವಾಮಿಯ ದರ್ಶನ ಪಡೆದ ಬಳಿಕ ಶ್ರೀಗಳು ಸಂಪುಟ ನರಸಿಂಹ ದೇವರ ದರ್ಶನ ಪಡೆದಿದ್ದಾರೆ. ಮಧ್ಯಾಹ್ನ ಅದಮಾರು ಪೀಠದ ಚತುರ್ಭುಜ ಕಾಳಿಯ ಮರ್ಧನ ಶ್ರೀ ದೇವರಿಗೆ ಪೂಜಾಕೈಂಕರ್ಯ ನೆರವೇರಿಸಿದರು.

ಮಧ್ವಾಚಾರ್ಯರ ಶ್ರೀ ಸಂಪುಟ ನರಸಿಂಹ ಸ್ವಾಮಿ ಶ್ರೀ ಸುಬ್ರಹ್ಮಣ್ಯ ಮಠದ ಮೂಲ ಸಂಪ್ರದಾಯ ಪ್ರಕಾರ ಉಡುಪಿಯಲ್ಲಿ ಪರ್ಯಾಯ ನಡೆಯುವ ಮೊದಲು ಯತಿಗಳಿಗೆ ಭಿಕ್ಷೆ ನೀಡುವುದು ಹಾಗೂ ಪರ್ಯಾಯಕ್ಕೆ ಬೇಕಾದ ಅಕ್ಕಿ, ತೆಂಗಿನಕಾಯಿ, ದವಸ ಧಾನ್ಯಗಳನ್ನು ಕಾಣಿಕೆ ರೂಪದಲ್ಲಿ ಸಮರ್ಪಣೆ ಮಾಡುವುದು ಮೂಲ ಸಂಪ್ರದಾಯ. ಅದರಂತೆ ಶ್ರೀಗಳು ಆಗಮಿಸಿದ್ದಾರೆ ಎನ್ನಲಾಗಿದೆ.

ಈ ಬಾರಿ ಪರ್ಯಾಯವು ಉಡುಪಿಯಲ್ಲಿ ಜನವರಿ 7ರಂದು ನಡೆಯಲಿದೆ. ಈ ಬಾರಿ ಅದಮಾರು ಮಠದ ಶ್ರೀಗಳು ಪರ್ಯಾಯ ನಡೆಸಲಿದ್ದಾರೆ.

Intro:ಸುಬ್ರಹ್ಮಣ್ಯ

ಕುಕ್ಕೆ ಸುಬ್ರಹ್ಮಣ್ಯ ದೇವಸ್ಥಾನ ಹಾಗೂ ಇಲ್ಲಿನ ಶ್ರೀ ಸಂಪುಟ ನರಸಿಂಹ ಸ್ವಾಮಿ ಮಠಕ್ಕೆ ಉಡುಪಿ ಅದಮಾರು ಮಠದ ಕಿರಿಯ ಯತಿಗಳಾದ ಈಶಪ್ರಿಯ ತೀರ್ಥ ಶ್ರೀಗಳು ಭೇಟಿ ನೀಡಿದರು.Body:ದೇಗುಲಕ್ಕೆ ಆಗಮಿಸಿದ ಯತಿಗಳನ್ನು ಕಾಶಿಕಟ್ಟೆಯಲ್ಲಿ ಸ್ವಾಗತಿಸಿ ಬಳಿಕ ಭವ್ಯ ಮೆರವಣಿಗೆಯಲ್ಲಿ ದೇಗುಲಕ್ಕೆ ಕರೆದೊಯ್ಯಲಾಯಿತು. ದೇಗುಲದ ಕಾರ್ಯನಿರ್ವಾಹಣಾಧಿಕಾರಿ ರವೀಂದ್ರ ಎಂ.ಎಚ್ ಹಾಗೂ ದೇಗುಲದ ಇತರ ಅಧಿಕಾರಿಗಳು ಯತಿಗಳನ್ನು‌ ಸ್ವಾಗತಿಸಿದರು. ಶ್ರೀ ಸುಬ್ರಹ್ಮಣ್ಯ ಸ್ವಾಮಿಯ ದರ್ಶನ ಪಡೆದ ಬಳಿಕ ಶ್ರೀಗಳು ಶ್ರೀ ಸಂಪುಟ ನರಸಂಹಸ್ವಾಮಿ ಮಠಕ್ಕೆ ತೆರಳಿ ಸಂಪುಟ ನರಸಿಂಹ ದೇವರ ದರ್ಶನ ಪಡೆದರು.
ಮಧ್ಯಾಹ್ನ ಅದಮಾರು ಮಠದ ಪೀಠದ ಚತುರ್ಭುಜ ಕಾಳಿಯ ಮರ್ಧನ ಶ್ರೀ ದೇವರಿಗೆ ಪೂಜಾಕೈಂಕಯ್ಯ ನೆರವೇರಿಸಿದರು.
ಮಾದ್ವಚಾರ್ಯರ ಶ್ರೀ ಸಂಪುಟ ನರಸಿಂಹ ಸ್ವಾಮಿ ಶ್ರೀ ಸುಬ್ರಹ್ಮಣ್ಯ ಮಠದ ಮೂಲ ಸಂಪ್ರದಾಯ ಪ್ರಕಾರ, ಉಡುಪಿಯಲ್ಲಿ ಪರ್ಯಾಯ ನಡೆಯುವ ಮೊದಲು ಅಷ್ಟ ಮಠಗಳ ಯತಿಗಳಿಗೆ ಸೇರಿದಂತೆ ಶ್ರೀ ಸುಬ್ರಹ್ಮಣ್ಯ ಮಠಕ್ಕೆ ಗೌರವ ಪೂರ್ವಕವಾಗಿ ಅಹ್ವಾನ ಮಾಡಿ ಯತಿಗಳಿಗೆ ಭಿಕ್ಷೆ ನೀಡುವುದು ಹಾಗೂ ಪರ್ಯಾಯಕ್ಕೆ ಬೇಕಾದ ಅಕ್ಕಿ, ತೆಂಗಿನಕಾಯಿ, ದವಸ ಧಾನ್ಯಗಳನ್ನು ಹೊರೆಕಾಣಿಕೆ ರೂಪದಲ್ಲಿ ಸಮರ್ಪಣೆ ಮಾಡುವುದು ಮೂಲ ಸಂಪ್ರದಾಯ.ಅದರಂತೆ ಶ್ರೀಗಳು ಆಗಮಿಸಿದ್ದರು.
ಈ ಭಾರಿ ಪರ್ಯಾಯವು ಜನವರಿ 07 ರಂದು ನಡೆಯಲಿದ್ದು ಜ.17 ರಿಂದ ಉಡುಪಿಯಲ್ಲಿ ಪರ್ಯಾಯ ನಡೆಯಲಿದೆ.ಈ ಭಾರಿ ಅದಮಾರು ಮಠದ ಶ್ರೀಗಳು ಪರ್ಯಾಯ ನಡೆಸಲಿದ್ದಾರೆ. ಸುಬ್ರಹ್ಮಣ್ಯ ಸಂಪುಟ ನರಸಿಂಹ ಸ್ವಾಮಿ ಮಠದ ಸ್ವಾಮೀಜಿಗಳಾದ ಶ್ರೀ ವಿದ್ಯಾಪ್ರಸನ್ನ ತೀರ್ಥ ಶ್ರೀ ಪಾದರ ಅಹ್ವಾನದ ಮೇರೆಗೆ ಶ್ರೀಗಳು ಆಗಮಿಸಿದ್ದರು. ಸುಬ್ರಹ್ಮಣ್ಯ ಮಠದ ಶ್ರೀ ವಿದ್ಯಾಪ್ರಸನ್ನ ತೀರ್ಥರು ಉಪಸ್ಥಿತರಿದ್ದು ಪರಸ್ಪರ ಕುಶಾಲೋಪಚಾರಿ ಮಾತುಕತೆ ನಡೆಸಿದರು.

ಈ ಸಂದರ್ಭದಲ್ಲಿ ಸುಬ್ರಹ್ಮಣ್ಯ ಸಂಪುಟ ನರಸಿಂಹ ಮಠದ ಆಡಳಿತಾಧಿಕಾರಿಗಳು, ಸಿಬ್ಬಂದಿಗಳು ಉಪಸ್ಥಿತರಿದ್ದರು.Conclusion:(ವೀಡಿಯೋ ಲಭ್ಯವಾಗಿಲ್ಲ. ಫೋಟೋ ಹಾಕಲಾಗಿದೆ)
Last Updated : Jan 1, 2020, 5:32 PM IST

For All Latest Updates

TAGGED:

ETV Bharat Logo

Copyright © 2024 Ushodaya Enterprises Pvt. Ltd., All Rights Reserved.