ETV Bharat / city

ಅಮಲು ಪದಾರ್ಥ ಸೇವಿಸಿದಕ್ಕೆ ಬೈದ ತಂದೆ.. ಮನೆ ಬಿಟ್ಟುಹೋದ ಮಗ!

ಮಂಗಳೂರಿನಿಂದ ನಾಪತ್ತೆಯಾದ ಮಗ ಸ್ವಂತ ಊರಿಗೂ ಹೋಗದೆ ಇರುವುದರಿಂದ ಆತಂಕಗೊಂಡ ತಂದೆ, ಕದ್ರಿ ಠಾಣೆಯಲ್ಲಿ ನಾಪತ್ತೆ ದೂರು ದಾಖಲಿಸಿದ್ದಾರೆ..

author img

By

Published : Jan 12, 2021, 12:17 PM IST

A youth missing in mangalore
ಅಮಲು ಪದಾರ್ಥ ಸೇವಿಸಿದಕ್ಕೆ ಬೈದ ತಂದೆ..ಮನೆ ಬಿಟ್ಟುಹೋದ ಮಗ

ಮಂಗಳೂರು : ಅಮಲು ಪದಾರ್ಥ ಸೇವಿಸಿ ಬಂದಿದ್ದಕ್ಕೆ ತಂದೆ ಬೈದು ಬುದ್ಧಿವಾದ ಹೇಳಿದ್ದೇ ನೆಪವಾಗಿಸಿಕೊಂಡು ಮಗನೊಬ್ಬ ಮನೆ ಬಿಟ್ಟುಹೋದ ಘಟನೆ ಮಂಗಳೂರಿನಲ್ಲಿ ನಡೆದಿದೆ.

ಪೈಂಟಿಂಗ್ ಕೆಲಸಕ್ಕೆಂದು ಬಂದು ಮಂಗಳೂರಿನ ಕುಂಟಿಕಾನದಲ್ಲಿ ವಾಸವಾಗಿದ್ದ ಮಹಾರಾಷ್ಟ್ರದ ಸತಾರ ಜಿಲ್ಲೆಯ ವಾರುಗಡ್​ನ ಪ್ರಶಾಂತ್ ಗೋಶಾಲಿ (28) ನಾಪತ್ತೆಯಾದ ಯುವಕ. ಈತ ಜನವರಿ 7ರ ರಾತ್ರಿ ಅಮಲು ಪದಾರ್ಥ ಸೇವಿಸಿ ಮನೆಗೆ ಬಂದಿದ್ದ. ಮರುದಿನ ಬೆಳಗ್ಗೆ ಅಮಲು ಪದಾರ್ಥ ಸೇವಿಸಿದ್ದಕ್ಕೆ ಈತನ ತಂದೆ ಬೈದು ಬುದ್ಧಿವಾದ ಹೇಳಿದ್ದರು.

ತಂದೆ ಬೈದ ಹಿನ್ನೆಲೆ ಪ್ರಶಾಂತ್ ಗೋಶಾಲಿ ಮನೆಬಿಟ್ಟು ಹೋಗಿದ್ದಾನೆ. ಮಂಗಳೂರಿನಿಂದ ನಾಪತ್ತೆಯಾದ ಮಗ ಸ್ವಂತ ಊರಿಗೂ ಹೋಗದೆ ಇರುವುದರಿಂದ ಆತಂಕಗೊಂಡ ತಂದೆ, ಕದ್ರಿ ಠಾಣೆಯಲ್ಲಿ ನಾಪತ್ತೆ ದೂರು ದಾಖಲಿಸಿದ್ದಾರೆ.

ಮಂಗಳೂರು : ಅಮಲು ಪದಾರ್ಥ ಸೇವಿಸಿ ಬಂದಿದ್ದಕ್ಕೆ ತಂದೆ ಬೈದು ಬುದ್ಧಿವಾದ ಹೇಳಿದ್ದೇ ನೆಪವಾಗಿಸಿಕೊಂಡು ಮಗನೊಬ್ಬ ಮನೆ ಬಿಟ್ಟುಹೋದ ಘಟನೆ ಮಂಗಳೂರಿನಲ್ಲಿ ನಡೆದಿದೆ.

ಪೈಂಟಿಂಗ್ ಕೆಲಸಕ್ಕೆಂದು ಬಂದು ಮಂಗಳೂರಿನ ಕುಂಟಿಕಾನದಲ್ಲಿ ವಾಸವಾಗಿದ್ದ ಮಹಾರಾಷ್ಟ್ರದ ಸತಾರ ಜಿಲ್ಲೆಯ ವಾರುಗಡ್​ನ ಪ್ರಶಾಂತ್ ಗೋಶಾಲಿ (28) ನಾಪತ್ತೆಯಾದ ಯುವಕ. ಈತ ಜನವರಿ 7ರ ರಾತ್ರಿ ಅಮಲು ಪದಾರ್ಥ ಸೇವಿಸಿ ಮನೆಗೆ ಬಂದಿದ್ದ. ಮರುದಿನ ಬೆಳಗ್ಗೆ ಅಮಲು ಪದಾರ್ಥ ಸೇವಿಸಿದ್ದಕ್ಕೆ ಈತನ ತಂದೆ ಬೈದು ಬುದ್ಧಿವಾದ ಹೇಳಿದ್ದರು.

ತಂದೆ ಬೈದ ಹಿನ್ನೆಲೆ ಪ್ರಶಾಂತ್ ಗೋಶಾಲಿ ಮನೆಬಿಟ್ಟು ಹೋಗಿದ್ದಾನೆ. ಮಂಗಳೂರಿನಿಂದ ನಾಪತ್ತೆಯಾದ ಮಗ ಸ್ವಂತ ಊರಿಗೂ ಹೋಗದೆ ಇರುವುದರಿಂದ ಆತಂಕಗೊಂಡ ತಂದೆ, ಕದ್ರಿ ಠಾಣೆಯಲ್ಲಿ ನಾಪತ್ತೆ ದೂರು ದಾಖಲಿಸಿದ್ದಾರೆ.

ETV Bharat Logo

Copyright © 2024 Ushodaya Enterprises Pvt. Ltd., All Rights Reserved.