ETV Bharat / city

370ನೇ ವಿಧಿ ರದ್ದುಗೊಳಿಸಿ ಏಳು ದಶಕಗಳ ಪ್ರಮಾದ ಸರಿಪಡಿಸಲಾಗಿದೆ: ಚಕ್ರವರ್ತಿ ಸೂಲಿಬೆಲೆ

author img

By

Published : Sep 25, 2019, 3:52 AM IST

ಆರ್ಟಿಕಲ್ 370 ರದ್ದುಪಡಿಸುವ ಬಗ್ಗೆ ಪಾಕಿಸ್ತಾನ, ಕಾಶ್ಮೀರ ಹಾಗೂ ಕೆಲ ಮಾಧ್ಯಮಗಳ ಪತ್ರಕರ್ತರು ಸವಾಲೆಸೆದಿದ್ದರು. ಆದರೆ ಆರ್ಟಿಕಲ್ ರದ್ದುಪಡಿಸಿದ ಬಳಿಕ ಸವಾಲು ಹಾಕಿದ್ದ ಕಾಂಗ್ರೆಸ್ ಕೂಡಾ ಬೆಂಬಲ ತೋರಿಸಿದೆ. ದೇಶದ ಪ್ರಧಾನಿ‌ ಕೈಗೊಂಡ ನಿರ್ಣಯ ಶ್ಲಾಘನೀಯ ಎಂದು ವಾಗ್ಮಿ ಚಕ್ರವರ್ತಿ ಸೂಲಿಬೆಲೆ ಅಭಿಪ್ರಾಯಪಟ್ಟಿದ್ದಾರೆ.

ಚಕ್ರವರ್ತಿ ಸೂಲಿಬೆಲೆ ಮಾತು

ಮಂಗಳೂರು: 370ನೇ ವಿಧಿಯನ್ನು ತೆಗೆದು ಹಾಕುವ ಮೂಲಕ ಏಳು ದಶಕಗಳ ಹಿಂದೆ ನಡೆದ ಐತಿಹಾಸಿಕ ಪ್ರಮಾದವನ್ನು ಮೋದಿ ಸರ್ಕಾರ ಸರಿಪಡಿಸಿದೆ ಎಂದು ಯುವ ಬ್ರಿಗೇಡ್ ಸಂಸ್ಥಾಪಕ ಚಕ್ರವರ್ತಿ ಸೂಲಿಬೆಲೆ ಹೇಳಿದ್ದಾರೆ.

ಕಡಬದದಲ್ಲಿ ಆಯೋಜಿಸಲಾಗಿದ್ದ 'ಆರಿತು ಕಾಶ್ಮೀರದ ಬೆಂಕಿ' ಎಂಬ ಬಹಿರಂಗ ಸಮಾವೇಶದಲ್ಲಿ ಮಾತನಾಡಿದ ಅವರು, ಆರ್ಟಿಕಲ್ 370 ತೆಗೆಯುವ ಬಗ್ಗೆ ಪಾಕಿಸ್ತಾನ, ಕಾಶ್ಮೀರ, ಕೆಲ ಮಾಧ್ಯಮಗಳ ಪತ್ರಕರ್ತರು ಸೇರಿದಂತೆ ಹಲವರು ಸವಾಲೆಸೆದಿದ್ದರು. ಆದರೆ ಆರ್ಟಿಕಲ್ ರದ್ದುಪಡಿಸಿದ ಬಳಿಕ ಸವಾಲು ಹಾಕಿದ್ದ ಕಾಂಗ್ರೆಸ್ ಕೂಡಾ ಬೆಂಬಲ ತೋರಿಸಿದೆ ಎಂದರು.

ಚಕ್ರವರ್ತಿ ಸೂಲಿಬೆಲೆ

ಒಂದು ರಾಷ್ಟ್ರದ ಸಾರ್ವಭೌಮತೆಯ ಚಿಂತನೆ ಬಂದಾಗ ಇಡೀ ಭಾರತದ ಅಷ್ಟೂ ರಾಜ್ಯ, ಈ ರಾಷ್ಟ್ರದ 130 ಕೋಟಿ ಜನರು ಕಾಶ್ಮೀರದಲ್ಲಿರುವ ಜನರಿಗೆ ಬೆದರಿ ಕುಳಿತುಕೊಳ್ಳುವ ಪರಿಸ್ಥಿತಿ ಇತ್ತು‌. ಈಗ ಬೆದರುವ ಕಾಲ ಹೋಯ್ತು. ‌ಇದೀಗ ಪಾಠ ಕಲಿಸುವ ಕಾಲ. ಪ್ರಧಾನಿ‌ ಮೋದಿ ಕೈಗೊಂಡ ನಿರ್ಣಯ ಶ್ಲಾಘನೀಯ ಎಂದು ಚಕ್ರವರ್ತಿ ಸೂಲಿಬೆಲೆ ಅಭಿಪ್ರಾಯಪಟ್ಟರು.

ಮಂಗಳೂರು: 370ನೇ ವಿಧಿಯನ್ನು ತೆಗೆದು ಹಾಕುವ ಮೂಲಕ ಏಳು ದಶಕಗಳ ಹಿಂದೆ ನಡೆದ ಐತಿಹಾಸಿಕ ಪ್ರಮಾದವನ್ನು ಮೋದಿ ಸರ್ಕಾರ ಸರಿಪಡಿಸಿದೆ ಎಂದು ಯುವ ಬ್ರಿಗೇಡ್ ಸಂಸ್ಥಾಪಕ ಚಕ್ರವರ್ತಿ ಸೂಲಿಬೆಲೆ ಹೇಳಿದ್ದಾರೆ.

ಕಡಬದದಲ್ಲಿ ಆಯೋಜಿಸಲಾಗಿದ್ದ 'ಆರಿತು ಕಾಶ್ಮೀರದ ಬೆಂಕಿ' ಎಂಬ ಬಹಿರಂಗ ಸಮಾವೇಶದಲ್ಲಿ ಮಾತನಾಡಿದ ಅವರು, ಆರ್ಟಿಕಲ್ 370 ತೆಗೆಯುವ ಬಗ್ಗೆ ಪಾಕಿಸ್ತಾನ, ಕಾಶ್ಮೀರ, ಕೆಲ ಮಾಧ್ಯಮಗಳ ಪತ್ರಕರ್ತರು ಸೇರಿದಂತೆ ಹಲವರು ಸವಾಲೆಸೆದಿದ್ದರು. ಆದರೆ ಆರ್ಟಿಕಲ್ ರದ್ದುಪಡಿಸಿದ ಬಳಿಕ ಸವಾಲು ಹಾಕಿದ್ದ ಕಾಂಗ್ರೆಸ್ ಕೂಡಾ ಬೆಂಬಲ ತೋರಿಸಿದೆ ಎಂದರು.

ಚಕ್ರವರ್ತಿ ಸೂಲಿಬೆಲೆ

ಒಂದು ರಾಷ್ಟ್ರದ ಸಾರ್ವಭೌಮತೆಯ ಚಿಂತನೆ ಬಂದಾಗ ಇಡೀ ಭಾರತದ ಅಷ್ಟೂ ರಾಜ್ಯ, ಈ ರಾಷ್ಟ್ರದ 130 ಕೋಟಿ ಜನರು ಕಾಶ್ಮೀರದಲ್ಲಿರುವ ಜನರಿಗೆ ಬೆದರಿ ಕುಳಿತುಕೊಳ್ಳುವ ಪರಿಸ್ಥಿತಿ ಇತ್ತು‌. ಈಗ ಬೆದರುವ ಕಾಲ ಹೋಯ್ತು. ‌ಇದೀಗ ಪಾಠ ಕಲಿಸುವ ಕಾಲ. ಪ್ರಧಾನಿ‌ ಮೋದಿ ಕೈಗೊಂಡ ನಿರ್ಣಯ ಶ್ಲಾಘನೀಯ ಎಂದು ಚಕ್ರವರ್ತಿ ಸೂಲಿಬೆಲೆ ಅಭಿಪ್ರಾಯಪಟ್ಟರು.

Intro:ಮಂಗಳೂರು: ಆರ್ಟಿಕಲ್ 370 ವಿಧಿಯನ್ನು ತೆಗೆದು ಹಾಕುವ ಮೂಲಕ
ಏಳು ದಶಕಗಳ ಹಿಂದೆ ನಡೆದ ಐತಿಹಾಸಿಕ ಪ್ರಮಾದವನ್ನು ಮೋದಿ ಸರಕಾರ ಸರಿಪಡಿಸಿದೆ ಎಂದು ಯುವಬ್ರಿಗೇಡ್ ಸಂಸ್ಥಾಪಕ ಚಕ್ರವರ್ತಿ ಸೂಲಿಬೆಲೆ ಹೇಳಿದ್ದಾರೆ.

ಕಡಬದ ಶ್ರೀ ದುರ್ಗಾಂಬಿಕಾ ಅಮ್ಮನವರ ದೇವಸ್ಥಾನದ ವಠಾರದಲ್ಲಿ ಆಯೋಜಿಸಲಾದ
"ಆರಿತು ಕಾಶ್ಮೀರದ ಬೆಂಕಿ" ಬಹಿರಂಗ ಸಮಾವೇಶದಲ್ಲಿ ಸೂಲಿಬೆಲೆ‌ ಮಾತನಾಡಿದರು.

Body:ಆರ್ಟಿಕಲ್ 370 ತೆಗೆಯುವ ಬಗ್ಗೆ ಪಾಕಿಸ್ತಾನ, ಕಾಶ್ಮೀರ, ಎನ್‌ ಡಿ ಟಿವಿ ಪತ್ರಕರ್ತರು ಸೇರಿದಂತೆ ಹಲವರು ಸವಾಲೆಸೆದಿದ್ದರು. ಆದರೆ ಆರ್ಟಿಕಲ್ ತೆಗೆದ ಬಳಿಕ ಇತರರು ತೋರಿಸಿದ್ದ ಗುಮ್ಮದಂತೆ ಏನೂ ನಡೆದಿಲ್ಲ. ಚಾಲೆಂಜ್ ಹಾಕಿದ್ದ ಕಾಂಗ್ರೆಸ್ ಕೂಡಾ ಮುಚ್ಚಿಕೊಂಡು ಬೆಂಬಲ ತೋರಿಸಿದೆ. ಒಂದು ರಾಷ್ಟ್ರದ ಸಾರ್ವಭೌಮತೆಯ ಚಿಂತನೆ ಬಂದಾಗ ಇಡೀ ಭಾರತದ ಅಷ್ಟೂ ರಾಜ್ಯ, ಈ ರಾಷ್ಟ್ರದ 130 ಕೋಟಿ ಜನರು ಕಾಶ್ಮೀರದ ಲ್ಲಿರುವ ಅಷ್ಟು ಲಕ್ಷ ಜನರಿಗೆ ಬೆದರಿ ಕುಳಿತು ಕೊಳ್ಳುವ ಪರಿಸ್ಥಿತಿ ಇತ್ತು‌. ಬೆದರುವ ಕಾಲ ಹೋಯ್ತು. ‌ಇದೀಗ ಪಾಠ ಕಲಿಸುವ ಕಾಲವೆಂದು ದೇಶದ ಪ್ರಧಾನಿ‌ ಕೈಗೊಂಡ ನಿರ್ಣಯ ಶ್ಲಾಘನೀಯ ಎಂದು ಚಕ್ರವರ್ತಿ ಸೂಲಿಬೆಲೆ ಹೇಳಿದರು.

ಕಾರ್ಯಕ್ರಮದಲ್ಲಿ ನೂರಾರು ಜನರು ಭಾಗಿಯಾಗಿದ್ದರು.

Reporter_Vishwanath PanjimogaruConclusion:
ETV Bharat Logo

Copyright © 2024 Ushodaya Enterprises Pvt. Ltd., All Rights Reserved.