ETV Bharat / city

ನಿಷೇಧದ ನಡುವೆ ಕಾರ ಹುಣ್ಣಿಮೆಯಲ್ಲಿ ಬಂಡಿ ಓಟ: ಜನರ ಚದುರಿಸಲು ಲಾಠಿ ಬೀಸಿದ ಖಾಕಿ

author img

By

Published : Jun 25, 2021, 6:25 AM IST

ಕೋವಿಡ್‌ ನಿಯಮ ಉಲ್ಲಂಘಿಸಿ ಬಂಡಿ ಓಡಿಸುವ ಸ್ಪರ್ಧೆ ಹಾಗೂ ಎತ್ತುಗಳ ಮೆರವಣಿಗೆ ಮಾಡುತ್ತಿದ್ದ ಕೆಲವರಿಗೆ ಪೊಲೀಸರು ಲಾಠಿ ರುಚಿ ತೋರಿಸಿದರು.

Farmers break the covid rules for kara hunnime celebration; Baton charge in kalaburagi district
ನಿಷೇಧದ ನಡುವೆ ಕಾರ ಹುಣ್ಣಿಮೆಯಲ್ಲಿ ಬಂಡಿ ಓಟ: ಜನ ಚದುರಿಸಲು ಲಾಠಿ ಬೀಸಿದ ಖಾಕಿ

ಕಲಬುರಗಿ: ನಿಷೇಧದ ನಡುವೆಯೂ ಕಾರ ಹುಣ್ಣಿಮೆ ಪ್ರಯುಕ್ತ ಬಂಡಿ ಓಡಿಸುವ ಸ್ಪರ್ಧೆಗಾಗಿ ಒಂದೆಡೆ ಸೇರಿದ ಜನರನ್ನು ಚದುರಿಸಲು ಪೊಲೀಸರು ಲಘು ಲಾಠಿಪ್ರಹಾರ ನಡೆಸಿದರು. ಈ ಘಟನೆ ಅಫಜಲಪುರದಲ್ಲಿ ನಡೆಯಿತು.

ಪ್ರತಿವರ್ಷ ಕಾರ ಹುಣ್ಣಿಮೆ ಪ್ರಯುಕ್ತ ಸಂಜೆ ಅಫಜಲಪುರ ಪಟ್ಟಣದ ಲಕ್ಷ್ಮಿ ದೇವಸ್ಥಾನದ ಬಳಿ ಸಾರ್ವಜನಿಕರು ಬಂಡಿ ಓಡಿಸುವ ಸ್ಪರ್ಧೆ ಹಾಗೂ ಎತ್ತುಗಳ ಮೆರವಣಿಗೆ ಮಾಡುತ್ತಾರೆ. ಈ ವರ್ಷ ಕೋವಿಡ್‌ ಹಿನ್ನೆಲೆಯಲ್ಲಿ ಆಚರಣೆಗೆ ನಿಷೇಧ ಹೇರಲಾಗಿತ್ತು. ಆದರೆ ನಿಷೇಧದ ನಡುವೆಯೂ ನಿನ್ನೆ ಜನ ಒಂದೆಡೆ ಸೇರಿ ಬಂಡಿ ಓಡಿಸುವ ಸ್ಪರ್ಧೆ ನಡೆಸಿದರು.

ಈ ಬಗ್ಗೆ ಮಾಹಿತಿ ಪಡೆದ ಪೊಲೀಸರು ಸ್ಥಳಕ್ಕಾಗಮಿಸಿ ಸ್ಪರ್ಧೆ ನಿಲ್ಲಿಸುವಂತೆ ಸೂಚಿಸಿದ್ದಾರೆ. ಆದರೂ ಕೇಳದಿದ್ದಾಗ ಒಂದಿಬ್ಬರಿಗೆ ಲಾಠಿ ರುಚಿ ತೋರಿಸಿ ಜನರ ಗುಂಪನ್ನು ಚದುರಿಸಿದರು.

ಕಲಬುರಗಿ: ನಿಷೇಧದ ನಡುವೆಯೂ ಕಾರ ಹುಣ್ಣಿಮೆ ಪ್ರಯುಕ್ತ ಬಂಡಿ ಓಡಿಸುವ ಸ್ಪರ್ಧೆಗಾಗಿ ಒಂದೆಡೆ ಸೇರಿದ ಜನರನ್ನು ಚದುರಿಸಲು ಪೊಲೀಸರು ಲಘು ಲಾಠಿಪ್ರಹಾರ ನಡೆಸಿದರು. ಈ ಘಟನೆ ಅಫಜಲಪುರದಲ್ಲಿ ನಡೆಯಿತು.

ಪ್ರತಿವರ್ಷ ಕಾರ ಹುಣ್ಣಿಮೆ ಪ್ರಯುಕ್ತ ಸಂಜೆ ಅಫಜಲಪುರ ಪಟ್ಟಣದ ಲಕ್ಷ್ಮಿ ದೇವಸ್ಥಾನದ ಬಳಿ ಸಾರ್ವಜನಿಕರು ಬಂಡಿ ಓಡಿಸುವ ಸ್ಪರ್ಧೆ ಹಾಗೂ ಎತ್ತುಗಳ ಮೆರವಣಿಗೆ ಮಾಡುತ್ತಾರೆ. ಈ ವರ್ಷ ಕೋವಿಡ್‌ ಹಿನ್ನೆಲೆಯಲ್ಲಿ ಆಚರಣೆಗೆ ನಿಷೇಧ ಹೇರಲಾಗಿತ್ತು. ಆದರೆ ನಿಷೇಧದ ನಡುವೆಯೂ ನಿನ್ನೆ ಜನ ಒಂದೆಡೆ ಸೇರಿ ಬಂಡಿ ಓಡಿಸುವ ಸ್ಪರ್ಧೆ ನಡೆಸಿದರು.

ಈ ಬಗ್ಗೆ ಮಾಹಿತಿ ಪಡೆದ ಪೊಲೀಸರು ಸ್ಥಳಕ್ಕಾಗಮಿಸಿ ಸ್ಪರ್ಧೆ ನಿಲ್ಲಿಸುವಂತೆ ಸೂಚಿಸಿದ್ದಾರೆ. ಆದರೂ ಕೇಳದಿದ್ದಾಗ ಒಂದಿಬ್ಬರಿಗೆ ಲಾಠಿ ರುಚಿ ತೋರಿಸಿ ಜನರ ಗುಂಪನ್ನು ಚದುರಿಸಿದರು.

ETV Bharat Logo

Copyright © 2024 Ushodaya Enterprises Pvt. Ltd., All Rights Reserved.