ETV Bharat / city

ಮಲ್ಲಿಕಾರ್ಜುನ ಖರ್ಗೆ, ಪ್ರಿಯಾಂಕ್​ ಖರ್ಗೆಯನ್ನು ಮನೆಗೆ ಕಳಿಸೋದೆ ನಮ್ಮ ಗುರಿ: ಚಿಂಚನಸೂರ್ ಗುಡುಗು - undefined

ಮಲ್ಲಿಕಾರ್ಜುನ್ ಖರ್ಗೆ ಹಾಗೂ ಅವರ ಪುತ್ರ ಪ್ರಿಯಾಂಕ್ ಖರ್ಗೆ ಅವರ ಕುಟುಂಬ ರಾಜಕಾರಣ ಕೊನೆಗೊಳಿಸಿ ಮನೆಗೆ ಕಳಿಸ್ತೀವಿ ಎಂದು ಮಾಜಿ ಸಚಿವ ಬಾಬುರಾವ್ ಚಿಂಚನಸೂರ್ ವಾಗ್ದಾಳಿ ನಡೆಸಿದರು.

ಮಲ್ಲಿಕಾರ್ಜುನ್ ಖರ್ಗೆ ಕುಟುಕಿದ ಬಾಬುರಾವ್ ಚಿಂಚನಸೂರ್
author img

By

Published : Apr 10, 2019, 4:58 AM IST

ಕಲಬುರಗಿ: ಮಲ್ಲಿಕಾರ್ಜುನ್ ಖರ್ಗೆ ಹಾಗೂ ಅವರ ಪುತ್ರ ಪ್ರಿಯಾಂಕ್ ಖರ್ಗೆ ಅವರನ್ನು ಕಲಬುರಗಿ ರಾಜಕೀಯದಿಂದ ದೂರವಿಟ್ಟು, ಮನೆಗೆ ಕಳಿಸೋದೆ ನಮ್ಮ ಗುರಿ ಎಂದು ಮಾಜಿ ಸಚಿವ ಬಾಬುರಾವ್ ಚಿಂಚನಸೂರ್ ಗುಡುಗಿದರು.

ಚಿಂಚೊಳಿ ಪಟ್ಟಣದ ಪೊಲೀಸ್ ಮೈದಾನದಲ್ಲಿ ಬೀದರ್​ ಲೋಕಸಭೆ ಕ್ಷೇತ್ರದ ಬಿಜೆಪಿ ಅಭ್ಯರ್ಥಿ ಭಗವಂತ ಖೂಬಾ ಪರ ಚುನಾವಣೆ ಪ್ರಚಾರ ನಡೆಸಿ ಮಾತನಾಡಿದರು. ಪ್ರಿಯಾಂಕ್ ಖರ್ಗೆ 40 ವರ್ಷಗಳಿಂದ ಕೋಳಿ ಸಮುದಾಯದವರನ್ನು ಬಳಸಿಕೊಂಡು ರಾಜಕೀಯವಾಗಿ ಮೊಸ ಮಾಡಿದ್ದಾರೆ‌. ಹೀಗಾಗಿ ಅವರನ್ನು ಮನೆಗೆ ಕಳಿಸುವುದೇ ನಮ್ಮ ಗುರಿ ಎಂದು ಚಿಂಚನಸೂರ್ ವಾಗ್ದಾಳಿ ಮಾಡಿದರು.

ಮಲ್ಲಿಕಾರ್ಜುನ್ ಖರ್ಗೆ ಕುಟುಕಿದ ಬಾಬುರಾವ್ ಚಿಂಚನಸೂರ್

ಹೈದರಾಬಾದ್​ ಕರ್ನಾಟಕ ಭಾಗದಲ್ಲಿ ಮಾಜಿ ಸಚಿವ ಮಾಲಿಕಯ್ಯ ಗುತ್ತೆದಾರ ಹಾಗೂ ಚಿಂಚನಸೂರು ಜೋಡೆತ್ತುಗಳು. ಡಾ. ಉಮೇಶ ಜಾಧವ ಅವರು ರಾಮ ಇದ್ದಂಗೆ. ನಾವೇ ಖರ್ಗೆ ಜತೆ ಇಲ್ಲ ಅಂದ್ಮೇಲೆ ಖರ್ಗೆ ಕುಟುಂಬ ರಾಜಕಾರಣ ಅಂತ್ಯ ಸಮೀಪವಾಗಿದೆ ಎಂಬರ್ಥ ಎಂದು ಛೇಡಿಸಿದರು.

ರಾಜ್ಯದಲ್ಲಿ ಜೆಡಿಸ್-ಕಾಂಗ್ರೆಸ್ ಮೈತ್ರಿ ಸರ್ಕಾರ ಕೋಮಾ ಸ್ಥಿತಿಯಲ್ಲಿದೆ. ಈ ಮೈತ್ರಿ ಒತ್ತಾಯದ ಮದುವೆಯಂತಿದೆ. ಎರಡು ಪಕ್ಷಗಳ ನಡುವೆ ಕೆಲವೇ ದಿನಗಳಲ್ಲಿ ವಿಚ್ಛೇದನೆ ಆಗುತ್ತೆ. ರಾಜ್ಯದಲ್ಲಿ ಮತ್ತೆ ಬಿ.ಎಸ್. ಯಡಿಯೂರಪ್ಪ ನೇತೃತ್ವದ ಬಿಜೆಪಿ ಸರ್ಕಾರ ಅಸ್ತಿತ್ವಕ್ಕೆ ಬರುವುದು ಗ್ಯಾರಂಟಿ ಎಂದರು.

ಕೋಳಿ ಸಮಾಜವನ್ನು ಪರಿಶಿಷ್ಟ ವರ್ಗದ ಪಟ್ಟಿಗೆ ಸೇರಿಸುತ್ತೇನೆ. ಆನಂತರವೇ ಸಾಯುತ್ತೇನೆ. ಯಮರಾಯ ಬಂದರೂ ಸ್ವಲ್ಪ ತಾಳು, ಕೋಳಿ ಸಮುದಾಯಕ್ಕೆ ಎಸ್​ಟಿ ಮೀಸಲಾತಿ ಕಲ್ಪಿಸಿ ಬರುತ್ತೇವೆ ಎಂದು ಕೇಳಿಕೊಳ್ತೀನಿ ಎಂದು ಹೇಳಿದರು.

ವೇದಿಕೆಯಲ್ಲಿ ಮಧ್ಯಪ್ರದೇಶದ ಮಾಜಿ ಸಿಎಂ ಶಿವರಾಜ್​ಸಿಂಗ್ ಚೌಹಾಣ್​, ಸಂಸದ ಭಗವಂತ ಖೂಬಾ, ಡಾ.ಉಮೇಶ ಜಾಧವ್, ಸುನೀಲ ವಲ್ಯಾಪೂರೆ, ರಾಜಕುಮಾರ್ ಪಾಟಿಲ್ ಸೇರಿದಂತೆ ಹಲವು ನಾಯಕರು ಉಪಸ್ಥಿತರಿದ್ದರು.

ಕಲಬುರಗಿ: ಮಲ್ಲಿಕಾರ್ಜುನ್ ಖರ್ಗೆ ಹಾಗೂ ಅವರ ಪುತ್ರ ಪ್ರಿಯಾಂಕ್ ಖರ್ಗೆ ಅವರನ್ನು ಕಲಬುರಗಿ ರಾಜಕೀಯದಿಂದ ದೂರವಿಟ್ಟು, ಮನೆಗೆ ಕಳಿಸೋದೆ ನಮ್ಮ ಗುರಿ ಎಂದು ಮಾಜಿ ಸಚಿವ ಬಾಬುರಾವ್ ಚಿಂಚನಸೂರ್ ಗುಡುಗಿದರು.

ಚಿಂಚೊಳಿ ಪಟ್ಟಣದ ಪೊಲೀಸ್ ಮೈದಾನದಲ್ಲಿ ಬೀದರ್​ ಲೋಕಸಭೆ ಕ್ಷೇತ್ರದ ಬಿಜೆಪಿ ಅಭ್ಯರ್ಥಿ ಭಗವಂತ ಖೂಬಾ ಪರ ಚುನಾವಣೆ ಪ್ರಚಾರ ನಡೆಸಿ ಮಾತನಾಡಿದರು. ಪ್ರಿಯಾಂಕ್ ಖರ್ಗೆ 40 ವರ್ಷಗಳಿಂದ ಕೋಳಿ ಸಮುದಾಯದವರನ್ನು ಬಳಸಿಕೊಂಡು ರಾಜಕೀಯವಾಗಿ ಮೊಸ ಮಾಡಿದ್ದಾರೆ‌. ಹೀಗಾಗಿ ಅವರನ್ನು ಮನೆಗೆ ಕಳಿಸುವುದೇ ನಮ್ಮ ಗುರಿ ಎಂದು ಚಿಂಚನಸೂರ್ ವಾಗ್ದಾಳಿ ಮಾಡಿದರು.

ಮಲ್ಲಿಕಾರ್ಜುನ್ ಖರ್ಗೆ ಕುಟುಕಿದ ಬಾಬುರಾವ್ ಚಿಂಚನಸೂರ್

ಹೈದರಾಬಾದ್​ ಕರ್ನಾಟಕ ಭಾಗದಲ್ಲಿ ಮಾಜಿ ಸಚಿವ ಮಾಲಿಕಯ್ಯ ಗುತ್ತೆದಾರ ಹಾಗೂ ಚಿಂಚನಸೂರು ಜೋಡೆತ್ತುಗಳು. ಡಾ. ಉಮೇಶ ಜಾಧವ ಅವರು ರಾಮ ಇದ್ದಂಗೆ. ನಾವೇ ಖರ್ಗೆ ಜತೆ ಇಲ್ಲ ಅಂದ್ಮೇಲೆ ಖರ್ಗೆ ಕುಟುಂಬ ರಾಜಕಾರಣ ಅಂತ್ಯ ಸಮೀಪವಾಗಿದೆ ಎಂಬರ್ಥ ಎಂದು ಛೇಡಿಸಿದರು.

ರಾಜ್ಯದಲ್ಲಿ ಜೆಡಿಸ್-ಕಾಂಗ್ರೆಸ್ ಮೈತ್ರಿ ಸರ್ಕಾರ ಕೋಮಾ ಸ್ಥಿತಿಯಲ್ಲಿದೆ. ಈ ಮೈತ್ರಿ ಒತ್ತಾಯದ ಮದುವೆಯಂತಿದೆ. ಎರಡು ಪಕ್ಷಗಳ ನಡುವೆ ಕೆಲವೇ ದಿನಗಳಲ್ಲಿ ವಿಚ್ಛೇದನೆ ಆಗುತ್ತೆ. ರಾಜ್ಯದಲ್ಲಿ ಮತ್ತೆ ಬಿ.ಎಸ್. ಯಡಿಯೂರಪ್ಪ ನೇತೃತ್ವದ ಬಿಜೆಪಿ ಸರ್ಕಾರ ಅಸ್ತಿತ್ವಕ್ಕೆ ಬರುವುದು ಗ್ಯಾರಂಟಿ ಎಂದರು.

ಕೋಳಿ ಸಮಾಜವನ್ನು ಪರಿಶಿಷ್ಟ ವರ್ಗದ ಪಟ್ಟಿಗೆ ಸೇರಿಸುತ್ತೇನೆ. ಆನಂತರವೇ ಸಾಯುತ್ತೇನೆ. ಯಮರಾಯ ಬಂದರೂ ಸ್ವಲ್ಪ ತಾಳು, ಕೋಳಿ ಸಮುದಾಯಕ್ಕೆ ಎಸ್​ಟಿ ಮೀಸಲಾತಿ ಕಲ್ಪಿಸಿ ಬರುತ್ತೇವೆ ಎಂದು ಕೇಳಿಕೊಳ್ತೀನಿ ಎಂದು ಹೇಳಿದರು.

ವೇದಿಕೆಯಲ್ಲಿ ಮಧ್ಯಪ್ರದೇಶದ ಮಾಜಿ ಸಿಎಂ ಶಿವರಾಜ್​ಸಿಂಗ್ ಚೌಹಾಣ್​, ಸಂಸದ ಭಗವಂತ ಖೂಬಾ, ಡಾ.ಉಮೇಶ ಜಾಧವ್, ಸುನೀಲ ವಲ್ಯಾಪೂರೆ, ರಾಜಕುಮಾರ್ ಪಾಟಿಲ್ ಸೇರಿದಂತೆ ಹಲವು ನಾಯಕರು ಉಪಸ್ಥಿತರಿದ್ದರು.

Intro:ಖರ್ಗೆ, ಪ್ರೀಯಾಂಕ ಮನೆಗೆ ಕಳಿಸೊದೆ ನಮ್ಮ ಗುರಿ- ಬಾಬುರಾವ್ ಚಿಂಚನಸೂರ್...!

ಬೀದರ್:
ಮಲ್ಲಿಕಾರ್ಜುನ್ ಖರ್ಗೆ ಪುತ್ರ ಪ್ರೀಯಾಂಕ ಖರ್ಗೆ ಅವರನ್ನು ಕಲ್ಬುರ್ಗಿ ರಾಜಕೀಯದಿಂದ ಮನೆಗೆ ಕಳಿಸೊದೆ ನಮ್ಮ ಗುರಿ ಎಂದು ಮಾಜಿ ಸಚಿವ ಬಾಬುರಾವ್ ಚಿಂಚನಸೂರ್ ಗುಡುಗಿದರು.Body:ಕಲಬುರಗಿ ಜಿಲ್ಲೆ ಚಿಂಚೊಳಿ ಪಟ್ಟಣದ ಪೊಲೀಸ್ ಮೈದಾನದಲ್ಲಿ ಬಿಜೆಪಿ ಅಭ್ಯರ್ಥಿ ಭಗವಂತ ಖೂಬಾ ಪರ ಚುನಾವಣೆ ಪ್ರಚಾರ ಸಮಾವೇಶದಲ್ಲಿ ಮಾತನಾಡಿದ ಅವರು ೪೦ ವರ್ಷಗಳಲ್ಲಿ ಕೋಳಿ ಸಮುದಾಯದವರನ್ನು ಬಳಸಿಕೊಂಡು ರಾಜಕೀಯ ಮಾಡಿ ಮೊಸ ಮಾಡಿದ್ದಾರೆ‌ ಹೀಗಾಗಿ ಅವರನ್ನು ಮನೆಗೆ ಕಳಿಸುವುದೆ ನಮ್ಮ ಗುರಿ ಎಂದು ಚಿಂಚನಸೂರ್ ವಾಗ್ದಾಳಿ ಮಾಡಿದರು.

ಹೈ-ಕ ಭಾಗದಲ್ಲಿ ಮಾಜಿ ಸಚಿವ ಮಾಲಿಕಯ್ಯ ಗುತ್ತೆದಾರ ಹಾಗೂ ಚಿಂಚನಸೂರು ಜೋಡೆತ್ತುಗಳು. ಡಾ. ಉಮೇಶ ಜಾಧವ ರಾಮ ಇದ್ದಂಗೆ ನಾವೆ ಖರ್ಗೆ ಜತೆಯಲ್ಲಿ ಇಲ್ಲ ಅಂದ ಮೇಲೆ ಖರ್ಗೆ ಕುಟುಂಬ ರಾಜಕಾರಣ ಅಂತ್ಯ ಸಮಿಪವಾಗಿದೆ ಎಂಬರ್ಥ ಎಂದರು.

ರಾಜ್ಯದಲ್ಲಿ ಜೆಡಿಸ್-ಕಾಂಗ್ರೆಸ್ ಮೈತ್ರಿ ಸರ್ಕಾರ ಕೋಮಾದಲ್ಲಿದೆ. ಈ ಮೈತ್ರಿ ಒತ್ತಾಯದ ಮದುವೆಯಂತಿದೆ ಕೆಲವೇ ದಿನಗಳಲ್ಲಿ ವಿಚ್ಚೇದನೆ ಆಗುತ್ತೆ ರಾಜ್ಯದಲ್ಲಿ ಮತ್ತೆ ಬಿಜೆಪಿ ನೇತೃತ್ವದ ಬಿ.ಎಸ್ ಯಡಿಯೂರಪ್ಪ ನೇತೃತ್ವದ ಸರ್ಕಾರ ಅಸ್ತಿತ್ವಕ್ಕೆ ಬರುವುದು ಗ್ಯಾರಂಟಿ ಎಂದರು.Conclusion:ಕೋಳಿ ಸಮಾಜಕ್ಕೆ ಎಸ್ಟಿ ಮಾಡುತ್ತೆವೆ. ಎಸ್ಟಿ ಮಾಡಿದ ಮೇಲೆ ಸಾಯುತ್ತೆನೆ. ಯಮರಾಯ ಬಂದನು ಸ್ವಲ್ಪ ತಾಳು ನಾನು ಕೋಳಿ ಸಮುದಾಯಕ್ಕೆ ಎಸ್ ಟಿ ಮೀಸಲಾತಿ ಮಾಡುತ್ತೆನೆ ಎಂದು ಕೇಳಿಕೊಳ್ತಿನಿ ಎಂದು ಕೇಳಕೊಳ್ತಿನಿ ಎಂದರು.

ವೇದಿಕೆಯಲ್ಲಿ ಮಧ್ಯಪ್ರದೇಶದ ಮಾಜಿ ಸಿಎಂ ಶಿವರಾಜಸಿಂಗ್ ಚವ್ಹಾಣ, ಸಂಸದ ಭಗವಂತ ಖೂಬಾ, ಡಾ.ಉಮೇಶ ಜಾಧವ್, ಸುನೀಲ ವಲ್ಯಾಪೂರೆ, ರಾಜಕುಮಾರ್ ಪಾಟಿಲ್ ಸೇರಿದಂತೆ ಹಲವು ನಾಯಕರು ಉಪಸ್ಥಿತರಿದ್ದರು.

For All Latest Updates

TAGGED:

ETV Bharat Logo

Copyright © 2025 Ushodaya Enterprises Pvt. Ltd., All Rights Reserved.