ETV Bharat / city

ಸಿದ್ದರಾಮೋತ್ಸವ ಪೂರ್ವಭಾವಿ ಸಭೆಗೆ ಗೈರಾದ ಪ್ರಸಾದ್ ಅಬ್ಬಯ್ಯ ವಿರುದ್ಧ ಜಮೀರ್ ಗರಂ

author img

By

Published : Jul 25, 2022, 9:33 AM IST

Updated : Jul 25, 2022, 1:34 PM IST

ಹುಬ್ಬಳ್ಳಿಯ ಕಚ್ಚಿ ಗಾರ್ಡನ್​ನಲ್ಲಿ ನಡೆದ ಸಿದ್ದರಾಮೋತ್ಸವದ ಪೂರ್ವಭಾವಿ‌ ಸಭೆಯಲ್ಲಿ ಪ್ರಸಾದ್ ಅಬ್ಬಯ್ಯ ವಿರುದ್ಧ ಕಾಂಗ್ರೆಸ್ ಶಾಸಕ ಜಮೀರ್ ಅಹ್ಮದ್ ಖಾನ್ ಅಸಮಾಧಾನ ವ್ಯಕ್ತಪಡಿಸಿದ್ದಾರೆ.

Zameer Ahmed
ಜಮೀರ್ ಅಹ್ಮದ್

ಹುಬ್ಬಳ್ಳಿ: ಸಿದ್ದರಾಮೋತ್ಸವ ಪೂರ್ವಭಾವಿ ಸಭೆಗೆ ಗೈರಾದ ಶಾಸಕ ಪ್ರಸಾದ್ ಅಬ್ಬಯ್ಯ ವಿರುದ್ಧ ಜಮೀರ್ ಅಹ್ಮದ್ ಖಾನ್ ಬಹಿರಂಗವಾಗಿಯೇ ಅಸಮಾಧಾನ ಹೊರ ಹಾಕಿದರು. ಹುಬ್ಬಳ್ಳಿಯ ಕಚ್ಚಿ ಗಾರ್ಡನ್​ನಲ್ಲಿ ನಡೆದ ಸಿದ್ದರಾಮೋತ್ಸವದ ಪೂರ್ವಭಾವಿ‌ ಸಭೆಯ ಭಾಷಣ ವೇಳೆ ಮಾತನಾಡಿದ ಅವರು, ಪ್ರಸಾದ್​ ಅಬ್ಬಯ್ಯ ಮಗನಿಗೆ ಜ್ವರ ಬಂದಿದೆ ಅಂತ ಹೇಳಿ ಸಭೆಗೆ ಬಂದಿಲ್ಲ. ಜ್ವರ ಮಗನಿಗೆ ಬಂದಿದೆಯಾ ಅಥವಾ ಪ್ರಸಾದ್ ಅಬ್ಬಯ್ಯಗೆ ಬಂದಿದೆಯಾ ಎಂದು ಸಭೆಯಲ್ಲಿ ಬಹಿರಂಗವಾಗಿ ಕೇಳಿದರು.

ಅಬ್ಬಯ್ಯ ಯಾವತ್ತಾದರೂ ನಮ್ಮ ಬಳಿಗೆ ಬರಬೇಕು ಅವಾಗ ನಾನು ಮಾತನಾಡುವೆ. ಚುನಾವಣೆ ವೇಳೆ ಜ್ವರ ಬಂದಿದ್ದರೆ ಬರುತ್ತಿದ್ದರೋ ಇಲ್ಲವೋ?, 1 ಲಕ್ಷ ಅಲ್ಪಸಂಖ್ಯಾತರು ಹುಬ್ಬಳ್ಳಿಯಲ್ಲಿ ಇದ್ದಾರೆ, ಅದಕ್ಕೆ ನಾವೆಲ್ಲರೂ ಒಂದಾಗಿ ಇರಬೇಕೆಂದು ಪರೋಕ್ಷವಾಗಿ ಟಾಂಗ್ ನೀಡಿದರು.

ಇದನ್ನೂ ಓದಿ: 'ಇಂದು ಸಿದ್ದರಾಮೋತ್ಸವ, ಶಿವಕುಮಾರೋತ್ಸವ, ನಾಳೆ ಪರಮೇಶ್ವರೋತ್ಸವ': ಸಿ.ಸಿ ಪಾಟೀಲ್ ವ್ಯಂಗ್ಯ

ಹುಬ್ಬಳ್ಳಿ: ಸಿದ್ದರಾಮೋತ್ಸವ ಪೂರ್ವಭಾವಿ ಸಭೆಗೆ ಗೈರಾದ ಶಾಸಕ ಪ್ರಸಾದ್ ಅಬ್ಬಯ್ಯ ವಿರುದ್ಧ ಜಮೀರ್ ಅಹ್ಮದ್ ಖಾನ್ ಬಹಿರಂಗವಾಗಿಯೇ ಅಸಮಾಧಾನ ಹೊರ ಹಾಕಿದರು. ಹುಬ್ಬಳ್ಳಿಯ ಕಚ್ಚಿ ಗಾರ್ಡನ್​ನಲ್ಲಿ ನಡೆದ ಸಿದ್ದರಾಮೋತ್ಸವದ ಪೂರ್ವಭಾವಿ‌ ಸಭೆಯ ಭಾಷಣ ವೇಳೆ ಮಾತನಾಡಿದ ಅವರು, ಪ್ರಸಾದ್​ ಅಬ್ಬಯ್ಯ ಮಗನಿಗೆ ಜ್ವರ ಬಂದಿದೆ ಅಂತ ಹೇಳಿ ಸಭೆಗೆ ಬಂದಿಲ್ಲ. ಜ್ವರ ಮಗನಿಗೆ ಬಂದಿದೆಯಾ ಅಥವಾ ಪ್ರಸಾದ್ ಅಬ್ಬಯ್ಯಗೆ ಬಂದಿದೆಯಾ ಎಂದು ಸಭೆಯಲ್ಲಿ ಬಹಿರಂಗವಾಗಿ ಕೇಳಿದರು.

ಅಬ್ಬಯ್ಯ ಯಾವತ್ತಾದರೂ ನಮ್ಮ ಬಳಿಗೆ ಬರಬೇಕು ಅವಾಗ ನಾನು ಮಾತನಾಡುವೆ. ಚುನಾವಣೆ ವೇಳೆ ಜ್ವರ ಬಂದಿದ್ದರೆ ಬರುತ್ತಿದ್ದರೋ ಇಲ್ಲವೋ?, 1 ಲಕ್ಷ ಅಲ್ಪಸಂಖ್ಯಾತರು ಹುಬ್ಬಳ್ಳಿಯಲ್ಲಿ ಇದ್ದಾರೆ, ಅದಕ್ಕೆ ನಾವೆಲ್ಲರೂ ಒಂದಾಗಿ ಇರಬೇಕೆಂದು ಪರೋಕ್ಷವಾಗಿ ಟಾಂಗ್ ನೀಡಿದರು.

ಇದನ್ನೂ ಓದಿ: 'ಇಂದು ಸಿದ್ದರಾಮೋತ್ಸವ, ಶಿವಕುಮಾರೋತ್ಸವ, ನಾಳೆ ಪರಮೇಶ್ವರೋತ್ಸವ': ಸಿ.ಸಿ ಪಾಟೀಲ್ ವ್ಯಂಗ್ಯ

Last Updated : Jul 25, 2022, 1:34 PM IST
ETV Bharat Logo

Copyright © 2024 Ushodaya Enterprises Pvt. Ltd., All Rights Reserved.