ETV Bharat / city

ಬಾಬರಿ ಮಸೀದಿ ಮರುಸೃಷ್ಟಿ ಸಂಬಂಧ ಪ್ರಕರಣ ದಾಖಲಿಸಿದ್ದು ಮೂರ್ಖತನದ ಪರಮಾವಧಿ: ಮುತಾಲಿಕ್​ - ಆರ್​ಎಸ್​ಎಸ್​​ ಮುಖಂಡ ಕಲ್ಲಡ್ಕ ಪ್ರಭಾಕರ್ ಭಟ್

ಬಾಬರಿ ಮಸೀದಿ ಧ್ವಂಸ ಮರುಸೃಷ್ಟಿ ಪ್ರಕರಣಕ್ಕೆ ಸಂಬಂಧಿಸಿದಂತೆ ಆರ್​ಎಸ್​ಎಸ್​​ ಮುಖಂಡ ಕಲ್ಲಡ್ಕ ಪ್ರಭಾಕರ್ ಭಟ್ ಮೇಲೆ ಪಿಎಫ್​​​ಐ ಪ್ರಕರಣ ದಾಖಲಿಸಿದ್ದು ಮೂರ್ಖತನದ ಪರಮಾವಧಿ ಎಂದು ಶ್ರೀರಾಮಸೇನಾ ಮುಖ್ಯಸ್ಥ ಪ್ರಮೋದ ಮುತಾಲಿಕ್ ಹೇಳಿದ್ದಾರೆ.

Shriramasena president pramod mutalik
ಶ್ರೀರಾಮಸೇನಾ ಮುಖ್ಯಸ್ಥ ಪ್ರಮೋದ ಮುತಾಲಿಕ್
author img

By

Published : Dec 17, 2019, 6:10 PM IST

ಧಾರವಾಡ: ಬಾಬರಿ ಮಸೀದಿ ಧ್ವಂಸ ಮರುಸೃಷ್ಟಿ ಪ್ರಕರಣಕ್ಕೆ ಸಂಬಂಧಿಸಿದಂತೆ ಆರ್​ಎಸ್​ಎಸ್​​ ಮುಖಂಡ ಕಲ್ಲಡ್ಕ ಪ್ರಭಾಕರ್ ಭಟ್ ಮೇಲೆ ಪಿಎಫ್​​ಐ ಪ್ರಕರಣ ದಾಖಲಿಸಿದ್ದು ಮೂರ್ಖತನದ ಪರಮಾವಧಿ. ಈ ಮೂಲಕ ಕೋಮುಗಲಭೆಗೆ ಮುಂದಾಗಿದೆ ಎಂದು‌ ಶ್ರೀರಾಮಸೇನಾ ಮುಖ್ಯಸ್ಥ ಪ್ರಮೋದ ಮುತಾಲಿಕ್ ಹೇಳಿದ್ದಾರೆ.

ಸುದ್ದಿಗಾರರೊಂದಿಗೆ ಮಾತನಾಡಿದ‌ ಅವರು, ಇತಿಹಾಸವನ್ನು ಮಕ್ಕಳಿಗೆ ತಿಳಿಸಿ ಹೇಳುವುದರಲ್ಲಿ ತಪ್ಪೇನಿದೆ. ಅದು ಪ್ರಚೋದನೆಗೆ ಕಾರಣ ಅಲ್ಲ. ಬಾಬರ್ ಬಂದು ದೇವಸ್ಥಾನ ಒಡೆದು ಉರುಳಿಸಿರುವುದು ಸತ್ಯವಾದ‌ ಸಂಗತಿ. ನಡೆದ ಸಂಗತಿಗಳ ಕುರಿತು ವಿದ್ಯಾರ್ಥಿಗಳಿಗೆ ತಿಳಿಸುವುದರಲ್ಲಿ ತಪ್ಪಿಲ್ಲ ಎಂದು ಸಮರ್ಥಿಸಿಕೊಂಡಿದ್ದಾರೆ.

ಶ್ರೀರಾಮಸೇನಾ ಮುಖ್ಯಸ್ಥ ಪ್ರಮೋದ ಮುತಾಲಿಕ್

ಪಾಪ್ಯುಲರ್ ಫ್ರಂಟ್ ಆಫ್ ಇಂಡಿಯಾ (ಪಿಎಫ್​​ಐ) ಪ್ರಭಾಕರ್​ ಅವರ ವಿರುದ್ಧ ಪ್ರಕರಣ ದಾಖಲಿಸಿ ಕೋಮು ಪ್ರಚೋದನೆಗೆ ಮುಂದಾಗಿದೆ.‌ ಇದನ್ನು ಸಹಜ ಘಟನೆಯೆಂದು ತೆಗೆದುಕೊಳ್ಳಬೇಕೇ ವಿನಃ ಕೋಮುಭಾವನೆ ತೆಗೆದುಕೊಳ್ಳಬಾರದು. ಸ್ವಾತಂತ್ರ್ಯದ ನಂತರ ಬೇಕಾದಷ್ಟು ಮಂದಿರಗಳನ್ನು ಕಾಶ್ಮೀರದಲ್ಲಿ ಕೆಡವಿದ್ದಾರೆ. ಹಾಗಾದರೆ ಅದು ಪ್ರಚೋದನೆ ಅಲ್ಲವೇ ಎಂದು ಪ್ರಶ್ನಿಸಿದ್ದಾರೆ.

ಆಗಿರುವುದೇನು?

ಬಂಟ್ವಾಳದ ವಿವೇಕಾನಂದ ಶಾಲೆಯೊಂದರಲ್ಲಿ ವಾರ್ಷಿಕೋತ್ಸವದ ನಿಮಿತ್ತವಾಗಿ 1992ರ ಡಿಸೆಂಬರ್ 6ರಂದು (ಬಾಬರಿ ಮಸೀದಿ ಧ್ವಂಸ ಪ್ರಕರಣ) ನಡೆದ ಘಟನೆಯನ್ನು ಮರುಸೃಷ್ಟಿ ಮಾಡಿ ಮಕ್ಕಳು ಅಭಿನಯಿಸಿದರು. ಈ ಶಾಲೆಯ ಮಾಲೀಕರು ಆರ್​ಎಸ್​ಎಸ್​ ಮುಖಂಡ ಕಲ್ಲಡ್ಕ ಪ್ರಭಾಕರ್ ಭಟ್. ಈ ಘಟನೆಯಿಂದಾಗಿ ಮಕ್ಕಳಿಗೆ ಕೋಮು ಪ್ರಚೋದನೆ, ಕೋಮುಗಲಭೆ ಕಾರಣ, ವಿದ್ಯಾರ್ಥಿಗಳಿಗೆ ತಪ್ಪು ತಿಳಿವಳಿಕೆ ನೀಡುವಂತಾಗುತ್ತದೆ ಎಂದು ಪಿಎಫ್​​ಐ ಸಂಘಟನೆ ಪ್ರಭಾಕರ್​ ವಿರುದ್ಧ ಪ್ರಕರಣ ದಾಖಲಿಸಿದೆ.

ಧಾರವಾಡ: ಬಾಬರಿ ಮಸೀದಿ ಧ್ವಂಸ ಮರುಸೃಷ್ಟಿ ಪ್ರಕರಣಕ್ಕೆ ಸಂಬಂಧಿಸಿದಂತೆ ಆರ್​ಎಸ್​ಎಸ್​​ ಮುಖಂಡ ಕಲ್ಲಡ್ಕ ಪ್ರಭಾಕರ್ ಭಟ್ ಮೇಲೆ ಪಿಎಫ್​​ಐ ಪ್ರಕರಣ ದಾಖಲಿಸಿದ್ದು ಮೂರ್ಖತನದ ಪರಮಾವಧಿ. ಈ ಮೂಲಕ ಕೋಮುಗಲಭೆಗೆ ಮುಂದಾಗಿದೆ ಎಂದು‌ ಶ್ರೀರಾಮಸೇನಾ ಮುಖ್ಯಸ್ಥ ಪ್ರಮೋದ ಮುತಾಲಿಕ್ ಹೇಳಿದ್ದಾರೆ.

ಸುದ್ದಿಗಾರರೊಂದಿಗೆ ಮಾತನಾಡಿದ‌ ಅವರು, ಇತಿಹಾಸವನ್ನು ಮಕ್ಕಳಿಗೆ ತಿಳಿಸಿ ಹೇಳುವುದರಲ್ಲಿ ತಪ್ಪೇನಿದೆ. ಅದು ಪ್ರಚೋದನೆಗೆ ಕಾರಣ ಅಲ್ಲ. ಬಾಬರ್ ಬಂದು ದೇವಸ್ಥಾನ ಒಡೆದು ಉರುಳಿಸಿರುವುದು ಸತ್ಯವಾದ‌ ಸಂಗತಿ. ನಡೆದ ಸಂಗತಿಗಳ ಕುರಿತು ವಿದ್ಯಾರ್ಥಿಗಳಿಗೆ ತಿಳಿಸುವುದರಲ್ಲಿ ತಪ್ಪಿಲ್ಲ ಎಂದು ಸಮರ್ಥಿಸಿಕೊಂಡಿದ್ದಾರೆ.

ಶ್ರೀರಾಮಸೇನಾ ಮುಖ್ಯಸ್ಥ ಪ್ರಮೋದ ಮುತಾಲಿಕ್

ಪಾಪ್ಯುಲರ್ ಫ್ರಂಟ್ ಆಫ್ ಇಂಡಿಯಾ (ಪಿಎಫ್​​ಐ) ಪ್ರಭಾಕರ್​ ಅವರ ವಿರುದ್ಧ ಪ್ರಕರಣ ದಾಖಲಿಸಿ ಕೋಮು ಪ್ರಚೋದನೆಗೆ ಮುಂದಾಗಿದೆ.‌ ಇದನ್ನು ಸಹಜ ಘಟನೆಯೆಂದು ತೆಗೆದುಕೊಳ್ಳಬೇಕೇ ವಿನಃ ಕೋಮುಭಾವನೆ ತೆಗೆದುಕೊಳ್ಳಬಾರದು. ಸ್ವಾತಂತ್ರ್ಯದ ನಂತರ ಬೇಕಾದಷ್ಟು ಮಂದಿರಗಳನ್ನು ಕಾಶ್ಮೀರದಲ್ಲಿ ಕೆಡವಿದ್ದಾರೆ. ಹಾಗಾದರೆ ಅದು ಪ್ರಚೋದನೆ ಅಲ್ಲವೇ ಎಂದು ಪ್ರಶ್ನಿಸಿದ್ದಾರೆ.

ಆಗಿರುವುದೇನು?

ಬಂಟ್ವಾಳದ ವಿವೇಕಾನಂದ ಶಾಲೆಯೊಂದರಲ್ಲಿ ವಾರ್ಷಿಕೋತ್ಸವದ ನಿಮಿತ್ತವಾಗಿ 1992ರ ಡಿಸೆಂಬರ್ 6ರಂದು (ಬಾಬರಿ ಮಸೀದಿ ಧ್ವಂಸ ಪ್ರಕರಣ) ನಡೆದ ಘಟನೆಯನ್ನು ಮರುಸೃಷ್ಟಿ ಮಾಡಿ ಮಕ್ಕಳು ಅಭಿನಯಿಸಿದರು. ಈ ಶಾಲೆಯ ಮಾಲೀಕರು ಆರ್​ಎಸ್​ಎಸ್​ ಮುಖಂಡ ಕಲ್ಲಡ್ಕ ಪ್ರಭಾಕರ್ ಭಟ್. ಈ ಘಟನೆಯಿಂದಾಗಿ ಮಕ್ಕಳಿಗೆ ಕೋಮು ಪ್ರಚೋದನೆ, ಕೋಮುಗಲಭೆ ಕಾರಣ, ವಿದ್ಯಾರ್ಥಿಗಳಿಗೆ ತಪ್ಪು ತಿಳಿವಳಿಕೆ ನೀಡುವಂತಾಗುತ್ತದೆ ಎಂದು ಪಿಎಫ್​​ಐ ಸಂಘಟನೆ ಪ್ರಭಾಕರ್​ ವಿರುದ್ಧ ಪ್ರಕರಣ ದಾಖಲಿಸಿದೆ.

Intro:ಧಾರವಾಡ: ಬಾಬ್ರಿ ಮಸಿದಿ ದ್ವಂಸ ಮರುಸೃಷ್ಠಿ ಪ್ರಕರಣ ಪ್ರಭಾಕರ್ ಭಟ್ ಮೇಲೆ ಕೇಸ್ ಹಾಕಿದ್ದು ಮೂರ್ಖತನದ ಪರಮಾವಧಿ. ಕಲ್ಲಡ್ಕ ಪ್ರಬಾಕರ್ ಭಟ್ ಮೇಲೆ ಕೇಸ್ ಹಾಕಿ ಕೋಮು ಗಲಬೆಗೆ ಮುಂದಾಗುತ್ತಿದ್ದಾರೆ ಎಂದು‌ ಧಾರವಾಡದಲ್ಲಿ ಶ್ರೀರಾಮಸೇನಾ ಮುಖ್ಯಸ್ಥ ಪ್ರಮೋದ ಮುತಾಲಿಕ್ ಹೇಳಿದ್ದಾರೆ.

ಧಾರವಾಡದಲ್ಲಿ ‌ಸುದ್ದಿಗಾರರೊಂದಿಗೆ ಮಾತನಾಡಿದ‌ ಅವರು, ಇತಿಹಾಸವನ್ನು ಮಕ್ಕಳಿಗೆ ತಿಳಿಸಿ ಹೇಳುವುದರಲ್ಲಿ ತಪ್ಪೆನಿದೆ. ಅದು ಯಾವುದೇ ರೀತಿಯ ಪ್ರಚೋದನೆಗೆ ಕಾರಣ ಅಲ್ಲ ಬಾಬರ್ ಬಂದು ದೇವಸ್ಥಾನ ಒಡೆದಿರುವದು ಸತ್ಯವಾದ‌ ವಿಷಯ ನಡೆದ ಘಟನೆಯನ್ನು ಮಕ್ಕಳಿಗೆ ವಿದ್ಯಾರ್ಥಿಗಳಿಗೆ ತಿಳಿಸುವುದರಲ್ಲಿ ತಪ್ಪೆನಿದೆ ಎಂದು ಸಮರ್ಥಿಸಿಕೊಂಡಿದ್ದಾರೆ...

ಪಿಎಪ್ಐ ನವರು ಅವರ ಮೇಲೆ ಕೇಸ್ ಹಾಕಿ ಕೋಮುಗಲಭೆಗೆ ಮುಂದಾಗಿದ್ದಾರೆ.‌ ಇದನ್ನು ಸಹಜ ಘಟನೆಯೆಂದು ತೆಗೆದುಕೊಳ್ಳಬೇಕೆ ಹೊರತು ಕೋಮು ಭಾವನೆ ತಗೆದುಕೊಳ್ಳಬಾರದು. ಸ್ವಾತಂತ್ರ್ಯ ದ ನಂತರ ಬೇಕಾದಷ್ಟು ಮಂದಿರಗಳನ್ನು ಕಾಶ್ಮೀರದಲ್ಲಿ ಕೆಡವಿದ್ದಾರೆ, ಹಾಗಾದ್ರೆ ಅದು ಪ್ರಚೋದನೆ ಅಲ್ವಾ ಎಂದು ಪ್ರಶ್ನಿಸಿದ್ದಾರೆ....Body:ಪ್ರಕರಣಗಳನ್ನು ಕೇಸ್ ಹಾಕಿ ಜೀವಂತಿಕೆ ಇಡುವುದು ಸರಿಯಲ್ಲ, ಹಿಂದು ಮುಸ್ಲಿಂ ರಲ್ಲಿ ಬೇಧ ಇದೆ ಎಂದು ತೋರಿಸಿಕೊಟ್ಟಂತಾಗುತ್ತದೆ.‌ ನಿಜವಾಗಿಯೂ ಸತ್ಯ ಘಟನೆಯನ್ನು, ಇತಿಹಾಸವನ್ನು ನಂಬೋದಾದ್ರೆ ಭಾರತೀಯರು ಬಾಬರ್ ನ ವಂಶಜರಲ್ಲ ಇಲ್ಲಿಯ ಮುಸ್ಲಿಂರು ಭಾರತಿಯ ಮುಸ್ಲಿಂರು, ಪಿಎಪ್ಐ ನವರು ಬಾರತಿಯರು ನೀವು ಪ್ರಚೋದನೆ ಕೊಡ್ತಾಯಿರೋದು ಸರಿಯಲ್ಲ ಎಂದು ಧಾರವಾಡದಲ್ಲಿ ಶ್ರೀರಾಮ ಸೇನಾ ಮುಖ್ಯಸ್ಥ ಪ್ರಮೋದ್ ಮುತಾಲಿಕ್ ಹೇಳಿದ್ದಾರೆ...

ಬೈಟ್: ಪ್ರಮೋದ ಮುತಾಲಿಕ, ಶ್ರೀರಾಮಸೇನಾ ಮುಖ್ಯಸ್ಥConclusion:
ETV Bharat Logo

Copyright © 2025 Ushodaya Enterprises Pvt. Ltd., All Rights Reserved.