ಧಾರವಾಡ : ಸವದತ್ತಿ ರಸ್ತೆ ಬದಿಯ ಪೈಪ್ಲೈನ್ ಒಡೆದು ಭಾರಿ ಪ್ರಮಾಣದ ನೀರು ಪೋಲಾಗಿದೆ. ನೀರು ಎತ್ತರಕ್ಕೆ ಚಿಮ್ಮುತ್ತಿರೋದನ್ನು ಕಂಡು ವಾಹನ ಸವಾರರು ರಸ್ತೆ ದಾಟಲು ಪರದಾಡಬೇಕಾಯಿತು.
ಆದ್ರೆ, ಭಾರಿ ಪ್ರಮಾಣದಲ್ಲಿ ಚಿಮ್ಮುತ್ತಿರುವ ನೀರಿನ ನಡುವೆ ಬಸ್ ಚಲಾಯಿಸಿರುವ ವಿಡಿಯೋ ಇದೀಗ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗುತ್ತಿದೆ. ಕೆಎಸ್ಆರ್ಟಿಸಿ ಬಸ್ ಚಾಲಕ ಎತ್ತರಕ್ಕೆ ಚಿಮ್ಮುತ್ತಿದ್ದ ನೀರಿನಲ್ಲೇ ಸಾಗಿ ಬಂದಿದ್ದು, ಚಾಲಕನ ಧೈರ್ಯಕ್ಕೆ ಸ್ಥಳೀಯರು ಜೈ ಎಂದಿದ್ದಾರೆ.
ಇದನ್ನೂ ಓದಿ: ಉತ್ತರಕನ್ನಡ: ನದಿ ಪಾತ್ರದ ಜನರಿಗೆ ಪರ್ಯಾಯವಾಗಿ ಬೇರೆಡೆ ಮನೆ ಕಟ್ಟಿಕೊಡುವಂತೆ ಶಿರೂರು ಮಂದಿ ಒತ್ತಾಯ
ಈ ದೃಶ್ಯವನ್ನು ಸಾರ್ವಜನಿಕರು ತಮ್ಮ ಮೊಬೈಲ್ನಲ್ಲಿ ಸೆರೆ ಹಿಡಿದಿದ್ದಾರೆ. ಇದೇ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ.
ನಿಮ್ಮ ಸೂಕ್ತ ಸಂಗಾತಿ ಹುಡುಕುತ್ತಿರುವಿರಾ? ಕನ್ನಡ ಮ್ಯಾಟ್ರಿಮೋನಿಯಲ್ಲಿ ನೋಂದಣಿ ಉಚಿತ