ETV Bharat / city

ಮೂರು ಸಾವಿರ ಮಠದ ಆಸ್ತಿ ಮಾರಾಟ ವಿವಾದ.. ಲಿಂಬಿಕಾಯಿ ಅವರಿಗೆ ದಿಂಗಾಲೇಶ್ವರ ಶ್ರೀ ಸವಾಲ್​..

author img

By

Published : Jan 27, 2021, 7:03 PM IST

ಮೂರು ಸಾವಿರ ಮಠದ ಆಸ್ತಿ ವಿವಾದ ಕಾವೇರುತ್ತಿದ್ದು, ಮಠದ ಆಸ್ತಿ ಉಳಿಸಿಕೊಳ್ಳಲು ಆಗದಿದ್ದರೆ 36 ವರ್ಷದಿಂದ ತೊಟ್ಟಿರುವ ಕಾವಿ ಕಳಚಿ ಹಾಕುತ್ತೇನೆಂದು ಮೋಹನ್ ಲಿಂಬಿಕಾಯಿಗೆ ದಿಂಗಾಲೇಶ್ವರ ಶ್ರೀ ಸವಾಲ್ ಹಾಕಿದ್ದಾರೆ.

dingaleshwar swamiji outrage against mohan limbekayi
ಬಾಲೇಹೊಸೂರು ಮಠದ ಶ್ರೀ ಸುದ್ದಿಗೋಷ್ಟಿ

ಹುಬ್ಬಳ್ಳಿ : ಮೂರು ಸಾವಿರ ಮಠದ ಸರ್ವನಾಶಕ್ಕೆ ಉನ್ನತ ಮಟ್ಟದ ಸಮಿತಿ ಸಿದ್ಧವಾಗಿದೆ. ನಾನು ಈಗ ಮಠದ ಆಸ್ತಿ ಉಳಿಸಬೇಕು ಎಂದು ಹೋರಾಟ ಮಾಡ್ತಿದ್ದೇನೆ, ನಾನು ಉತ್ತರಾಧಿಕಾರಕ್ಕಾಗಿ ಹೋರಾಟ ನಡೆಸಿಲ್ಲ ಎಂದು ಶ್ರೀ ದಿಂಗಾಲೇಶ್ವರ ಸ್ವಾಮೀಜಿ ಹೇಳಿದ್ರು.

ಹುಬ್ಬಳ್ಳಿಯಲ್ಲಿ ವಿವಿಧ ಮಠಗಳ ಎಂಟು ಸ್ವಾಮೀಜಿಗಳ ಜೊತೆಗೆ ಸುದ್ದಿಗೋಷ್ಠಿ ನಡೆಸಿ ಅವರು ಮಾತನಾಡಿದ್ರು. ನಾನು ಮಠದ ಆಸ್ತಿ ಉಳಿಸಲು ಹೋರಾಟ ನಡೆಸಿದಾಗ, ಈ‌ ಮೋಹನ್ ‌ಲಿಂಬಿಕಾಯಿ ಯಾರು ಎಂದು ರಾಜ್ಯದ ಜನರಿಗೆ ಗೊತ್ತೇ ಇರಲಿಲ್ಲ.

ಸಿ ಎಂ ಉದಾಸಿ, ಮೋಹನ ಲಿಂಬಿಕಾಯಿ, ಶಂಕರಣ್ಣ ಮುನವಳ್ಳಿ ಈ ಮೂವರ ಕುತಂತ್ರದಿಂದ ನಾನು ಉತ್ತರಾಧಿಕಾರಿಯಾಗಲು ಹಿನ್ನಡೆಯಾಗಿದೆ ಎಂದು ಸ್ವಾಮೀಜಿ ಆರೋಪಿಸಿದ್ರು. ಮಠದ ಆಸ್ತಿಯನ್ನ ಉಳಿಸಿಕೊಳ್ಳಲು ಆಗದಿದ್ದರೆ 36 ವರ್ಷದಿಂದ ತೊಟ್ಟಿರುವ ಕಾವಿ ಕಳಚಿ ಹಾಕುತ್ತೇನೆಂದು ಮೋಹನ್ ಲಿಂಬಿಕಾಯಿ ಅವರಿಗೆ ದಿಂಗಾಲೇಶ್ವರ ಶ್ರೀ ಸವಾಲ್ ಹಾಕಿದ್ರು.

ಶ್ರೀಮಠದಲ್ಲಿ ಎಷ್ಟು ಅವ್ಯವಹಾರ ಆಗಿದೆ ಎಂಬುದರ ಬಗ್ಗೆ ನನ್ನ ಬಳಿ ದಾಖಲೆಗಳಿವೆ. ಮುಂದಿನ ದಿನಗಳಲ್ಲಿ ಆ ದಾಖಲೆ ಬಿಡುಗಡೆ ಮಾಡುತ್ತೇನೆ. ಬಾಲೇಹೊಸೂರಿನ ಮಠ ಅಭಿವೃದ್ಧಿ ಆಗಿದೆ. ಮೋಹನ ಲಿಂಬಿಕಾಯಿಯನ್ನ ನನ್ನ ಮಠದ ಕಾರಕೂನ ಆಗಿ ಇಟ್ಟುಕೊಳ್ಳುವ ಮಟ್ಟಕ್ಕೆ ಬೆಳೆದಿದೆ ಎಂದ್ರು.

ಮೋಹನ ಲಿಂಬಿಕಾಯಿ ದಿಂಗಾಲೇಶ್ವರ ಶ್ರೀಗಳು ‌ಮೂರು ಸಾವಿರ ಮಠಕ್ಕೆ ‌ಏನೂ ಸಂಬಂಧ ಎಂದು ಕೇಳಿದ್ದಾರೆ. ಇದೇ ಮೋಹನ್ ಲಿಂಬಿಕಾಯಿ ಒಂದು ಕಾಗದದ ಮೇಲೆ ಸಹಿ ಹಾಕಿದ್ದಾರೆ. ಈ ಕಾಗದ ನನಗೂ ಮತ್ತು ಮೂರು ಸಾವಿರ ಮಠಕ್ಕೆ ಸಂಬಂಧ ಏನು ಎಂಬುದು ಹೇಳುತ್ತದೆ ಎಂದ್ರು.

ಮೂರು ಸಾವಿರ ಮಠದ ಆಸ್ತಿಯನ್ನ ಕಾನೂನುಬಾಹಿರವಾಗಿ ಮಾರಾಟ ಮಾಡಿಲ್ಲ ಎಂದು ಲಿಂಬಿಕಾಯಿ ಹೇಳ್ತಾರೆ. ಆಸ್ತಿಯನ್ನ ಕಾನೂನಿನ ಪ್ರಕಾರ ಮಾರಾಟ ಮಾಡುವ ಅಧಿಕಾರವನ್ನ ನಿಮಗೆ ಯಾರು ಕೊಟ್ಟರು. ಈ ಮಠದ ಸ್ಥಿರಾಸ್ತಿಗಳನ್ನ ಮಾರಾಟ ಮಾಡಬಾರದು ಎಂದು ಸುಪ್ರೀಂಕೋರ್ಟ್ ಆದೇಶವಿದೆ.

ಬಾಲೇಹೊಸೂರು ಮಠದ ಶ್ರೀ ಸುದ್ದಿಗೋಷ್ಠಿ..

ಇದಕ್ಕೆ ‌ಈಗಿರುವ ಶ್ರೀಗಳು ಸಹಿ ಹಾಕಿದ್ದಾರೆ‌. ಮೂರು ಸಾವಿರ ಮಠದ ಜೊತೆಗೆ ಹಾನಗಲ್ ಕುಮಾರಸ್ವಾಮಿ ಮಠದವನ್ನ ನಾಶ ಮಾಡಿದ್ದು ಮಾಜಿ ಸಚಿವ ಸಿ ಎಂ ಉದಾಸಿ. ಈ ಉದಾಸಿ ಹಾನಗಲ್ ಮಠವನ್ನ ನಾಶ ಮಾಡಿದ್ದರ ಕುರಿತು ಮುಂದಿನ ದಿನಗಳಲ್ಲಿ ದಾಖಲೆ ಬಿಡುಗಡೆ ಮಾಡುವೆ ಅಂದ್ರು.

ಸದ್ಯದಲ್ಲೇ ಎಲ್ಲಾ ದಾಖಲೆಗಳನ್ನು ‌ಮಠಕ್ಕೆ ತೆಗೆದುಕೊಂಡು ಬಂದೇ ಬರುತ್ತೇನೆ. ಮುನವಳ್ಳಿಯವರು 24 ಎಕರೆಯ ಆಸ್ತಿಯ ಬೆಲೆ 2 ಕೋಟಿ ರೂಪಾಯಿ ಎಂದು ಹೇಳ್ತಾರೆ. ಆದ್ರೆ, ನಾನು 2 ಕೋಟಿ ರೂಪಾಯಿ ಭಿಕ್ಷೆ ಬೇಡಿ ನಿಮಗೆ ಕೊಡ್ತೀನಿ, ಮೂರು ಸಾವಿರ ಮಠದ ಆಸ್ತಿ ಮಠಕ್ಕೆ ಬಿಟ್ಟು ಕೊಡಿ. 2.86 ಕೋಟಿ ರೂಪಾಯಿ ಹಣವನ್ನ ಸ್ಟಾಂಪ್ ಡ್ಯೂಟಿ ‌ಮಾಡಲು ಕಟ್ಟಿದ್ದಾರೆ.

ದಾನಪತ್ರ ನೋಂದಣಿ ಮಾಡಲು ಇಷ್ಟು ಹಣವನ್ನ ಕೊಟ್ಟಿದ್ದಾರೆ. 2 ಕೋಟಿ ರೂಪಾಯಿ ಬೆಲೆ ಬಾಳುವ ಆಸ್ತಿಗೆ 2.86 ಕೋಟಿ ಹಣವನ್ನ ಸ್ಟಾಂಪ್ ಡ್ಯೂಟಿ ಮಾಡಲು ಕಟ್ಟಿದ್ದು ಏಕೆ...?ಶಂಕರಣ್ಣ ಮುನವಳ್ಳಿ ಸುಳ್ಳಿನ ಸಂಘವನ್ನ ಕಟ್ಟಿಕೊಂಡು, ಸುಳ್ಳಿನ ಸಂತೆ ನಡೆಸುತ್ತಿದ್ದಾರೆ. ಮೂರು ಸಾವಿರ ಮಠ ಪೂರ್ಣ ಖಾಲಿಯಾಗಿದೆ. ಬಸವರಾಜ ಹೊರಟ್ಟಿಯವರಿಗೆ ಮಠದ ಬಗ್ಗೆ ಕಾಳಜಿ ಇದ್ದರೆ ಮಠದ ಆಸ್ತಿ ಮಠಕ್ಕೆ ಮರಳಿಸಲು‌ ಮುಂದಾಗಬೇಕು ಎಂದು ಆಗ್ರಹಿಸಿದ್ರು.

ಇದನ್ನೂ ಓದಿ : ಪ್ಲಾಸ್ಟಿಕ್ ಸುಡುವುದರಿಂದಲೇ ದೆಹಲಿ ಮಾಲಿನ್ಯದ ಜತೆಗೆ ಗೋಚರತೆ ಕ್ಷೀಣ : ಮದ್ರಾಸ್ ಐಐಟಿ

ಹುಬ್ಬಳ್ಳಿ : ಮೂರು ಸಾವಿರ ಮಠದ ಸರ್ವನಾಶಕ್ಕೆ ಉನ್ನತ ಮಟ್ಟದ ಸಮಿತಿ ಸಿದ್ಧವಾಗಿದೆ. ನಾನು ಈಗ ಮಠದ ಆಸ್ತಿ ಉಳಿಸಬೇಕು ಎಂದು ಹೋರಾಟ ಮಾಡ್ತಿದ್ದೇನೆ, ನಾನು ಉತ್ತರಾಧಿಕಾರಕ್ಕಾಗಿ ಹೋರಾಟ ನಡೆಸಿಲ್ಲ ಎಂದು ಶ್ರೀ ದಿಂಗಾಲೇಶ್ವರ ಸ್ವಾಮೀಜಿ ಹೇಳಿದ್ರು.

ಹುಬ್ಬಳ್ಳಿಯಲ್ಲಿ ವಿವಿಧ ಮಠಗಳ ಎಂಟು ಸ್ವಾಮೀಜಿಗಳ ಜೊತೆಗೆ ಸುದ್ದಿಗೋಷ್ಠಿ ನಡೆಸಿ ಅವರು ಮಾತನಾಡಿದ್ರು. ನಾನು ಮಠದ ಆಸ್ತಿ ಉಳಿಸಲು ಹೋರಾಟ ನಡೆಸಿದಾಗ, ಈ‌ ಮೋಹನ್ ‌ಲಿಂಬಿಕಾಯಿ ಯಾರು ಎಂದು ರಾಜ್ಯದ ಜನರಿಗೆ ಗೊತ್ತೇ ಇರಲಿಲ್ಲ.

ಸಿ ಎಂ ಉದಾಸಿ, ಮೋಹನ ಲಿಂಬಿಕಾಯಿ, ಶಂಕರಣ್ಣ ಮುನವಳ್ಳಿ ಈ ಮೂವರ ಕುತಂತ್ರದಿಂದ ನಾನು ಉತ್ತರಾಧಿಕಾರಿಯಾಗಲು ಹಿನ್ನಡೆಯಾಗಿದೆ ಎಂದು ಸ್ವಾಮೀಜಿ ಆರೋಪಿಸಿದ್ರು. ಮಠದ ಆಸ್ತಿಯನ್ನ ಉಳಿಸಿಕೊಳ್ಳಲು ಆಗದಿದ್ದರೆ 36 ವರ್ಷದಿಂದ ತೊಟ್ಟಿರುವ ಕಾವಿ ಕಳಚಿ ಹಾಕುತ್ತೇನೆಂದು ಮೋಹನ್ ಲಿಂಬಿಕಾಯಿ ಅವರಿಗೆ ದಿಂಗಾಲೇಶ್ವರ ಶ್ರೀ ಸವಾಲ್ ಹಾಕಿದ್ರು.

ಶ್ರೀಮಠದಲ್ಲಿ ಎಷ್ಟು ಅವ್ಯವಹಾರ ಆಗಿದೆ ಎಂಬುದರ ಬಗ್ಗೆ ನನ್ನ ಬಳಿ ದಾಖಲೆಗಳಿವೆ. ಮುಂದಿನ ದಿನಗಳಲ್ಲಿ ಆ ದಾಖಲೆ ಬಿಡುಗಡೆ ಮಾಡುತ್ತೇನೆ. ಬಾಲೇಹೊಸೂರಿನ ಮಠ ಅಭಿವೃದ್ಧಿ ಆಗಿದೆ. ಮೋಹನ ಲಿಂಬಿಕಾಯಿಯನ್ನ ನನ್ನ ಮಠದ ಕಾರಕೂನ ಆಗಿ ಇಟ್ಟುಕೊಳ್ಳುವ ಮಟ್ಟಕ್ಕೆ ಬೆಳೆದಿದೆ ಎಂದ್ರು.

ಮೋಹನ ಲಿಂಬಿಕಾಯಿ ದಿಂಗಾಲೇಶ್ವರ ಶ್ರೀಗಳು ‌ಮೂರು ಸಾವಿರ ಮಠಕ್ಕೆ ‌ಏನೂ ಸಂಬಂಧ ಎಂದು ಕೇಳಿದ್ದಾರೆ. ಇದೇ ಮೋಹನ್ ಲಿಂಬಿಕಾಯಿ ಒಂದು ಕಾಗದದ ಮೇಲೆ ಸಹಿ ಹಾಕಿದ್ದಾರೆ. ಈ ಕಾಗದ ನನಗೂ ಮತ್ತು ಮೂರು ಸಾವಿರ ಮಠಕ್ಕೆ ಸಂಬಂಧ ಏನು ಎಂಬುದು ಹೇಳುತ್ತದೆ ಎಂದ್ರು.

ಮೂರು ಸಾವಿರ ಮಠದ ಆಸ್ತಿಯನ್ನ ಕಾನೂನುಬಾಹಿರವಾಗಿ ಮಾರಾಟ ಮಾಡಿಲ್ಲ ಎಂದು ಲಿಂಬಿಕಾಯಿ ಹೇಳ್ತಾರೆ. ಆಸ್ತಿಯನ್ನ ಕಾನೂನಿನ ಪ್ರಕಾರ ಮಾರಾಟ ಮಾಡುವ ಅಧಿಕಾರವನ್ನ ನಿಮಗೆ ಯಾರು ಕೊಟ್ಟರು. ಈ ಮಠದ ಸ್ಥಿರಾಸ್ತಿಗಳನ್ನ ಮಾರಾಟ ಮಾಡಬಾರದು ಎಂದು ಸುಪ್ರೀಂಕೋರ್ಟ್ ಆದೇಶವಿದೆ.

ಬಾಲೇಹೊಸೂರು ಮಠದ ಶ್ರೀ ಸುದ್ದಿಗೋಷ್ಠಿ..

ಇದಕ್ಕೆ ‌ಈಗಿರುವ ಶ್ರೀಗಳು ಸಹಿ ಹಾಕಿದ್ದಾರೆ‌. ಮೂರು ಸಾವಿರ ಮಠದ ಜೊತೆಗೆ ಹಾನಗಲ್ ಕುಮಾರಸ್ವಾಮಿ ಮಠದವನ್ನ ನಾಶ ಮಾಡಿದ್ದು ಮಾಜಿ ಸಚಿವ ಸಿ ಎಂ ಉದಾಸಿ. ಈ ಉದಾಸಿ ಹಾನಗಲ್ ಮಠವನ್ನ ನಾಶ ಮಾಡಿದ್ದರ ಕುರಿತು ಮುಂದಿನ ದಿನಗಳಲ್ಲಿ ದಾಖಲೆ ಬಿಡುಗಡೆ ಮಾಡುವೆ ಅಂದ್ರು.

ಸದ್ಯದಲ್ಲೇ ಎಲ್ಲಾ ದಾಖಲೆಗಳನ್ನು ‌ಮಠಕ್ಕೆ ತೆಗೆದುಕೊಂಡು ಬಂದೇ ಬರುತ್ತೇನೆ. ಮುನವಳ್ಳಿಯವರು 24 ಎಕರೆಯ ಆಸ್ತಿಯ ಬೆಲೆ 2 ಕೋಟಿ ರೂಪಾಯಿ ಎಂದು ಹೇಳ್ತಾರೆ. ಆದ್ರೆ, ನಾನು 2 ಕೋಟಿ ರೂಪಾಯಿ ಭಿಕ್ಷೆ ಬೇಡಿ ನಿಮಗೆ ಕೊಡ್ತೀನಿ, ಮೂರು ಸಾವಿರ ಮಠದ ಆಸ್ತಿ ಮಠಕ್ಕೆ ಬಿಟ್ಟು ಕೊಡಿ. 2.86 ಕೋಟಿ ರೂಪಾಯಿ ಹಣವನ್ನ ಸ್ಟಾಂಪ್ ಡ್ಯೂಟಿ ‌ಮಾಡಲು ಕಟ್ಟಿದ್ದಾರೆ.

ದಾನಪತ್ರ ನೋಂದಣಿ ಮಾಡಲು ಇಷ್ಟು ಹಣವನ್ನ ಕೊಟ್ಟಿದ್ದಾರೆ. 2 ಕೋಟಿ ರೂಪಾಯಿ ಬೆಲೆ ಬಾಳುವ ಆಸ್ತಿಗೆ 2.86 ಕೋಟಿ ಹಣವನ್ನ ಸ್ಟಾಂಪ್ ಡ್ಯೂಟಿ ಮಾಡಲು ಕಟ್ಟಿದ್ದು ಏಕೆ...?ಶಂಕರಣ್ಣ ಮುನವಳ್ಳಿ ಸುಳ್ಳಿನ ಸಂಘವನ್ನ ಕಟ್ಟಿಕೊಂಡು, ಸುಳ್ಳಿನ ಸಂತೆ ನಡೆಸುತ್ತಿದ್ದಾರೆ. ಮೂರು ಸಾವಿರ ಮಠ ಪೂರ್ಣ ಖಾಲಿಯಾಗಿದೆ. ಬಸವರಾಜ ಹೊರಟ್ಟಿಯವರಿಗೆ ಮಠದ ಬಗ್ಗೆ ಕಾಳಜಿ ಇದ್ದರೆ ಮಠದ ಆಸ್ತಿ ಮಠಕ್ಕೆ ಮರಳಿಸಲು‌ ಮುಂದಾಗಬೇಕು ಎಂದು ಆಗ್ರಹಿಸಿದ್ರು.

ಇದನ್ನೂ ಓದಿ : ಪ್ಲಾಸ್ಟಿಕ್ ಸುಡುವುದರಿಂದಲೇ ದೆಹಲಿ ಮಾಲಿನ್ಯದ ಜತೆಗೆ ಗೋಚರತೆ ಕ್ಷೀಣ : ಮದ್ರಾಸ್ ಐಐಟಿ

ETV Bharat Logo

Copyright © 2024 Ushodaya Enterprises Pvt. Ltd., All Rights Reserved.