ETV Bharat / city

ಮುರುಘಾಮಠದ ಇತಿಹಾಸ ಅರಿಯದವರಿಗೆ ಪೀಠಾಧ್ಯಕ್ಷ ಸ್ಥಾನ: ಶಿವಯೋಗಿ ಸ್ವಾಮೀಜಿ ಆಕ್ಷೇಪ

author img

By

Published : Oct 23, 2019, 1:54 PM IST

ಕಾಂಗ್ರೆಸ್​ನ ರಾಜಕಾರಣಿ ವಿನಯ್​ ಕುಲಕರ್ಣಿ ಮತ್ತು ಅವರ ಸಹಚರರು ಸೇರಿಕೊಂಡು ಒಳಸಂಚು ಮಾಡಿ, ಧಾರವಾಡದ ಮುರುಘಾಮಠಕ್ಕೆ ಇತಿಹಾಸ ಗೊತ್ತಿಲ್ಲದ ಮಲ್ಲಿಕಾರ್ಜುನ ಸ್ವಾಮೀಜಿಯನ್ನು ನೇಮಿಸಿದ್ದಾರೆ ಮಠದ ಮಾಜಿ ಪೀಠಾಧಿಪತಿ ಶಿವಯೋಗಿ ಸ್ವಾಮೀಜಿ ಅಸಮಾಧಾನ ಹೊರಹಾಕಿದ್ದಾರೆ.

ಮುರಾಘಾಮಠಕ್ಕೆ ಕಳ್ಳ,ಸುಳ್ಳ ಸ್ವಾಮೀಜಿಯನ್ನ ನೇಮಕ ಮಾಡಿದ್ದಾರೆ: ಶಿವಯೋಗಿ ಸ್ವಾಮೀಜಿ

ಹುಬ್ಬಳ್ಳಿ: ಕಾಂಗ್ರೆಸ್​ನ ರಾಜಕಾರಣಿ, ಮಾಜಿ ಸಚಿವ ವಿನಯ್​ ಕುಲಕರ್ಣಿ ಮತ್ತು ಅವರ ಸಹಚರರು ಒಳಸಂಚು ಮಾಡಿ, ಧಾರವಾಡದ ಮುರುಘಾಮಠಕ್ಕೆ ಯಾವುದೇ ಇತಿಹಾಸ ತಿಳಿಯದ ಮಲ್ಲಿಕಾರ್ಜುನ ಸ್ವಾಮೀಜಿಯನ್ನು ನೇಮಕ ಮಾಡಿದ್ದಾರೆ ಎಂದು ಮಠದ ಮಾಜಿ ಪೀಠಾಧಿಪತಿ ಶಿವಯೋಗಿ ಸ್ವಾಮೀಜಿ ಹೇಳಿದ್ದಾರೆ.

ಮುರುಘಾಮಠದ ಸ್ವಾಮೀಜಿ ಆಯ್ಕೆಯಲ್ಲಿ ಒಳಸಂಚು: ಶಿವಯೋಗಿ ಸ್ವಾಮೀಜಿ

ನಗರದಲ್ಲಿಂದು ಪತ್ರಿಕಾಗೋಷ್ಟಿಯಲ್ಲಿ ಮಾತನಾಡಿದ ಅವರು, ಮುರುಘಾಮಠಕ್ಕೆ ಮೋಸದ ಹಾದಿಯಲ್ಲಿ ಮಲ್ಲಿಕಾರ್ಜುನ ಸ್ವಾಮೀಜಿಯನ್ನು ನೇಮಿಸಿದ್ದಾರೆ ಎಂದು ಆರೋಪಿಸಿದ್ದಾರೆ. ಮಲ್ಲಿಕಾರ್ಜುನ ಸ್ವಾಮೀಜಿ ಈ ಹಿಂದೆ, ಗದಗದ ಮುಳುಗುಂದ, ಧಾರವಾಡದ ಪಶುಪತಿಹಾಳ ಮಠಗಳಲ್ಲಿ ಮತ್ತು ಕುಂದಗೋಳದ ಗುಡಗೇರಿಯಲ್ಲಿ ಇದ್ದಾಗ ಹಲವಾರು ಅಕ್ರಮ ಚಟುವಟಿಕೆಗಳನ್ನು ಮಾಡಿದ್ದರು. ಅವರಿಗೆ ಭಕ್ತರು ಹಿಡಿಶಾಪ ಹಾಕಿದ್ದಾರೆ. ಆದ್ರೆ ಅಂತವರನ್ನೇ ಮಠಾಧೀಶರನ್ನಾಗಿ ಮಾಡಿರುವುದು ವಿಪರ್ಯಾಸ ಎಂದು ಆತಂಕ ವ್ಯಕ್ತಪಡಿಸಿದರು.

ಇದರಿಂದ ತಮ್ಮ ಸ್ವಾರ್ಥಕ್ಕಾಗಿ ವಿನಯ್​ ಕುಲಕರ್ಣಿ ಅವರ ಸಹಚರರು ಏನೂ ಬೇಕಾದರೂ ಮಾಡಬಹುದು ಎಂದು ಮತ್ತೊಮ್ಮೆ ಸಾಬೀತಾಗಿದೆ. ಕೂಡಲೇ ಇಂತಹ ಸ್ವಾಮೀಜಿಯನ್ನು ಮುರುಘಾಮಠದಿಂದ ಹೊರಕ್ಕೆ ಹಾಕಬೇಕು ಹಾಗೂ ಮುರುಘಾಮಠವು ನನಗೆ ಬೇಕು. ಅಲ್ಲಿಯವರೆಗೂ ನಿರಂತರ ಹೋರಾಟ ನಡೆಸುತ್ತೇನೆ. ಅಲ್ಲದೇ ಶೀಘ್ರದಲ್ಲೇ ಮುರುಘಾಮಠದಲ್ಲೇ ಜೀವಂತ ಸಮಾಧಿ ತೆಗೆದುಕೊಳ್ಳಲು ನಿರ್ಧಾರ ಮಾಡುತ್ತೇನೆ. ನನಗೆ ಹಲವು ರಾಜಕೀಯ ವ್ಯಕ್ತಿಗಳಿಂದ ಜೀವ ಬೆದರಿಕೆ ಬರುತ್ತಿದೆ ಎಂದು ಶಿವಯೋಗಿ ಸ್ವಾಮೀಜಿ ಆರೋಪಿಸಿದರು.

ಹುಬ್ಬಳ್ಳಿ: ಕಾಂಗ್ರೆಸ್​ನ ರಾಜಕಾರಣಿ, ಮಾಜಿ ಸಚಿವ ವಿನಯ್​ ಕುಲಕರ್ಣಿ ಮತ್ತು ಅವರ ಸಹಚರರು ಒಳಸಂಚು ಮಾಡಿ, ಧಾರವಾಡದ ಮುರುಘಾಮಠಕ್ಕೆ ಯಾವುದೇ ಇತಿಹಾಸ ತಿಳಿಯದ ಮಲ್ಲಿಕಾರ್ಜುನ ಸ್ವಾಮೀಜಿಯನ್ನು ನೇಮಕ ಮಾಡಿದ್ದಾರೆ ಎಂದು ಮಠದ ಮಾಜಿ ಪೀಠಾಧಿಪತಿ ಶಿವಯೋಗಿ ಸ್ವಾಮೀಜಿ ಹೇಳಿದ್ದಾರೆ.

ಮುರುಘಾಮಠದ ಸ್ವಾಮೀಜಿ ಆಯ್ಕೆಯಲ್ಲಿ ಒಳಸಂಚು: ಶಿವಯೋಗಿ ಸ್ವಾಮೀಜಿ

ನಗರದಲ್ಲಿಂದು ಪತ್ರಿಕಾಗೋಷ್ಟಿಯಲ್ಲಿ ಮಾತನಾಡಿದ ಅವರು, ಮುರುಘಾಮಠಕ್ಕೆ ಮೋಸದ ಹಾದಿಯಲ್ಲಿ ಮಲ್ಲಿಕಾರ್ಜುನ ಸ್ವಾಮೀಜಿಯನ್ನು ನೇಮಿಸಿದ್ದಾರೆ ಎಂದು ಆರೋಪಿಸಿದ್ದಾರೆ. ಮಲ್ಲಿಕಾರ್ಜುನ ಸ್ವಾಮೀಜಿ ಈ ಹಿಂದೆ, ಗದಗದ ಮುಳುಗುಂದ, ಧಾರವಾಡದ ಪಶುಪತಿಹಾಳ ಮಠಗಳಲ್ಲಿ ಮತ್ತು ಕುಂದಗೋಳದ ಗುಡಗೇರಿಯಲ್ಲಿ ಇದ್ದಾಗ ಹಲವಾರು ಅಕ್ರಮ ಚಟುವಟಿಕೆಗಳನ್ನು ಮಾಡಿದ್ದರು. ಅವರಿಗೆ ಭಕ್ತರು ಹಿಡಿಶಾಪ ಹಾಕಿದ್ದಾರೆ. ಆದ್ರೆ ಅಂತವರನ್ನೇ ಮಠಾಧೀಶರನ್ನಾಗಿ ಮಾಡಿರುವುದು ವಿಪರ್ಯಾಸ ಎಂದು ಆತಂಕ ವ್ಯಕ್ತಪಡಿಸಿದರು.

ಇದರಿಂದ ತಮ್ಮ ಸ್ವಾರ್ಥಕ್ಕಾಗಿ ವಿನಯ್​ ಕುಲಕರ್ಣಿ ಅವರ ಸಹಚರರು ಏನೂ ಬೇಕಾದರೂ ಮಾಡಬಹುದು ಎಂದು ಮತ್ತೊಮ್ಮೆ ಸಾಬೀತಾಗಿದೆ. ಕೂಡಲೇ ಇಂತಹ ಸ್ವಾಮೀಜಿಯನ್ನು ಮುರುಘಾಮಠದಿಂದ ಹೊರಕ್ಕೆ ಹಾಕಬೇಕು ಹಾಗೂ ಮುರುಘಾಮಠವು ನನಗೆ ಬೇಕು. ಅಲ್ಲಿಯವರೆಗೂ ನಿರಂತರ ಹೋರಾಟ ನಡೆಸುತ್ತೇನೆ. ಅಲ್ಲದೇ ಶೀಘ್ರದಲ್ಲೇ ಮುರುಘಾಮಠದಲ್ಲೇ ಜೀವಂತ ಸಮಾಧಿ ತೆಗೆದುಕೊಳ್ಳಲು ನಿರ್ಧಾರ ಮಾಡುತ್ತೇನೆ. ನನಗೆ ಹಲವು ರಾಜಕೀಯ ವ್ಯಕ್ತಿಗಳಿಂದ ಜೀವ ಬೆದರಿಕೆ ಬರುತ್ತಿದೆ ಎಂದು ಶಿವಯೋಗಿ ಸ್ವಾಮೀಜಿ ಆರೋಪಿಸಿದರು.

Intro:ಹುಬ್ಬಳಿBody:ಹುಬ್ಬಳ್ಳಿ...

ಕೇಂದ್ರ ಸರಕಾರ ರೇಲ್ವೆ ಇಲಾಖೆಯ ಖಾಸಗೀಕರಣ ಖಂಡಿಸಿ ಪ್ರತಿಭಟನೆ.



ಸ್ಲಗ್:- ಮುರಾಘಾಮಠದ ಮಲ್ಲಿಕಾರ್ಜುನ ಸ್ವಾಮೀಜಿ ಕಳ್ಳ, ಸುಳ್ಳ ಸ್ವಾಮೀಜಿ ಶಿವಯೋಗಿ ಸ್ವಾಮೀಜಿ ಆರೋಪ...

ಹುಬ್ಬಳ್ಳಿ:-ಧಾರವಾಡದ ಮುರಾಘಾಮಠಕ್ಕೆ ನೂತನ ಮಠಾಧೀಶರಾಗಿರುವ ಮಲ್ಲಿಕಾರ್ಜುನ ಸ್ವಾಮೀಜಿ ಮೋಸ, ಕಳ್ಳ, ಸುಳ್ಳ ಸ್ವಾಮೀಜಿ ಆಗಿದ್ದಾರೆ ಹಾಗೂ ರಾಜಕೀಯ ಮುಖಂಡರಿಂದ ಬೆದರಿಕೆ ಬರುತ್ತಿವೆ ಎದು ಶಿವಯೋಗಿ ಸ್ವಾಮೀಜಿ ಗಂಭೀರವಾಗಿ ಆರೋಪಿಸಿದ್ದಾರೆ.ನಗರದಲ್ಲಿಂದು ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ಧಾರವಾಡದ ಮುರಾಘಾಮಠಕ್ಕೆ ಮಠಾಧೀಶರನ್ನಾಗಿ ಕಾಂಗ್ರೆಸ್ ನ ಗೂಂಡಾ ರಾಜಕಾರಣಿ ವಿನಯ ಕುಲಕರ್ಣಿ ಮತ್ತು ಅವರ ಸಹಚರರು ಸೇರಿಕೊಂಡು ಒಳಸಂಚು ಮಾಡಿ ತಮ್ಮವರನ್ನು ಮೋಸದ ಹಾದಿಯಲ್ಲಿ ಮಲ್ಲಿಕಾರ್ಜುನ ಸ್ವಾಮಿಗಳನ್ನು ನೇಮಕ ಮಾಡಿದ್ದಾರೆ. ಈ ಮಲ್ಲಿಕಾರ್ಜುನ ಸ್ವಾಮೀಜಿ ಗಳು ಈ ಹಿಂದೆ ಗದಗದ ಮುಳಗುಂದ, ಧಾರವಾಡದ ಪಶುಪತಿಹಾಳ ಮಠಗಳಲ್ಲಿ ಮತ್ತು ಕುಂದಗೋಳದ ಗುಡಗೇರಿಗಳಲ್ಲಿ ಇದ್ದಾಗ ಹಲವಾರು ಅಕ್ರಮ ಚಟುವಟಿಕೆಗಳನ್ನು ಮಾಡಿದ್ದು, ಇಂತವರ ಮೇಲೆ ಭಕ್ತರು ಹಿಡಿಶಾಪ ಹಾಕಿದ್ದಾರೆ. ಇಂತವರನ್ನು ಕಾಂಗ್ರೆಸ್ ನ ಮಾಜಿ ಶಾಸಕ ವಿನಯ ಕುಲಕರ್ಣಿ ಸುದೀರ್ಘ ಇತಿಹಾಸ ಹೊಂದಿದ್ದ ಮಠಕ್ಕೆ ನೂತನ ಮಠಾಧೀಶರನ್ನಾಗಿ ಮಾಡಿದ್ದಾರೆ ಇದರಿಂದ ತಮ್ಮ ಸ್ವಾರ್ಥಕ್ಕಾಗಿ ವಿನಯ ಕುಲಕರ್ಣಿ ಅವರ ಸಹಚರರು ಏನೂ ಬೇಕಾದರೂ ಮಾಡಬಹುದು ಎಂದು ಮತ್ತೊಮ್ಮೆ ಸಾಬೀತಾಗಿದೆ. ಕೂಡಲೇ ಇಂತಹ ಕಳ್ಳ ಸುಳ್ಳ ಸ್ವಾಮೀಜಿಯನ್ನು ಮುರಾಘಾಮಠದಿಂದ ಹೊರಕ್ಕೆ ಹಾಕಬೇಕು./ಹಾಗೂ ಮುರಘಾ ಮಠವು ನನಗೆ ಬೇಕು ಅಲ್ಲಿಯವರೆಗೂ ನಿರಂತರ ಹೋರಾಟ ಇರುತ್ತೇ. ಅಲ್ಲದೇ ಶೀಘ್ರದಲ್ಲೇ ಮುರಾಘಾಮಠದಲ್ಲೇ ಜೀವಂತ ಸಮಾಧಿ ತೆಗೆದುಕೊಳ್ಳಲು ನಿರ್ಧಾರ ಮಾಡುತ್ತೆನೆ ನನಗೆ ಹಲವಾರು ರಾಜಕೀಯ ಪುರಾರಗಳಿಂದ ಜೀವ ಬೆದರಿಕೆ ಬರುತ್ತವೆ ಎಂದರು.....!

ಬೈಟ್:-ಶಿವಯೋಗಿ ಸ್ವಾಮೀಜಿ ....

____________________________

ಹುಬ್ಬಳ್ಳಿ:- ಸ್ಟ್ರಿಂಜರ

ಯಲ್ಲಪ್ ಕುಂದಗೋಳConclusion:ಯಲ್ಲಪ್ ಕುಂದಗೊಳ
ETV Bharat Logo

Copyright © 2024 Ushodaya Enterprises Pvt. Ltd., All Rights Reserved.