ಧಾರವಾಡ: ಮನೆಯ ಮುಂದೆ ಮಲಗಿದ ವ್ಯಕ್ತಿಯನ್ನು ಕತ್ತು ಸೀಳಿ ಬರ್ಬರವಾಗಿ ಕೊಲೆ ಮಾಡಿರುವ ಘಟನೆ ಜಿಲ್ಲೆಯ ನವಲಗುಂದ ತಾಲುಕಿನ ಮೊರಬ ಗ್ರಾಮದಲ್ಲಿ ನಡೆದಿದೆ.
ರಮೇಶ ಯರಗಣ್ಣನವರ (45) ಕೊಲೆಯಾದ ವ್ಯಕ್ತಿ. ಮೃತರ ಮಾವ ಲಿಂಬಣ್ಣ ಮೂಗನೂರ ಈ ಕೃತ್ಯ ಮಾಡಿರಬಹುದು ಎಂದು ಶಂಕಿಸಲಾಗಿದೆ. ರಮೇಶ ನಿರಂತರವಾಗಿ ಕಿರುಕುಳ ಕೊಡುತ್ತಿದ್ದನಂತೆ. ಆ ಕಿರುಕುಳ ತಾಳದೇ ಹತ್ಯೆ ಮಾಡಿದ್ದಾನೆ ಎಂಬ ಆರೋಪ ಕೇಳಿಬಂದಿದೆ.
ಹರಿತವಾದ ಆಯುಧದಿಂದ ಕುತ್ತಿಗೆ ಸೀಳಿದ ಹಿನ್ನೆಲೆ ರಮೇಶ ಮಲಗಿದ್ದಲ್ಲೇ ಮೃತಪಟ್ಟಿದ್ದಾನೆ. ಸ್ಥಳಕ್ಕೆ ನವಲಗುಂದ ಠಾಣೆ ಪೊಲೀಸರು ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ.
ಇದನ್ನೂ ಓದಿ: ಉಕ್ರೇನ್ ಮೇಲೆ ರಷ್ಯಾ ಬಾಂಬ್ ಹಾಕ್ತಿದ್ರೆ, ರಷ್ಯಾ ಮೇಲೆ ವಿಶ್ವದ ರಾಷ್ಟ್ರಗಳಿಂದ ಆರ್ಥಿಕ ಯುದ್ಧ